66 ಸಾವಿರ ರುಪಾಯಿ ತಿಂದು ತೇಗಿದ ಮೇಕೆ ಜತೆಗೆ ಊರ ಮಂದಿಯ ಸೆಲ್ಫಿ
ಲಖನೌ, ಜೂನ್ 7: ಉತ್ತರಪ್ರದೇಶದ ಕನೌಜ್ ನ ಸಿಲೌಪುರ್ ಗ್ರಾಮದ ಸರ್ವೇಶ್ ಕುಮಾರ್ ಪಾಲ್ ಗೆ ಈಗ ಉಭಯ ಸಂಕಟ. ತಾನು ಪ್ರೀತಿಯಿಂದ ಸಾಕಿದ ಮೇಕೆಯೊಂದು ಅರವತ್ತಾರು ಸಾವಿರ ರುಪಾಯಿ ಲುಕ್ಸಾನು ಮಾಡಿದೆ. ಆ ಮೇಕೆಯ ಪೇಪರ್ ತಿನ್ನುವ ಪ್ರೀತಿ ತಂದ ಸಂಕಟ ಇದು.
ನೀವು ಅದೇನು ತೊಂದರೆ ತಂದಿದೆ ಎಂಬುದನ್ನು ಈಗಾಗಲೇ ಊಹಿಸಿದ್ದೀರಿ ಅಂತಾದರೆ ಬೆನ್ನು ತಟ್ಟಿಕೊಳ್ಳಿ. ಈ ಮೇಕೆ ಸರ್ವೇಶ್ ಕುಮಾರ್ ರ ಅರವತ್ತಾರು ಸಾವಿರ ರುಪಾಯಿಯನ್ನು ತಿಂದು ಮುಗಿಸಿದೆ. ಇಂಥ ಘನಂದಾರಿ ಕೆಲಸ ಮಾಡಿದ ಮೇಕೆ ಜತೆಗೆ ಸೆಲ್ಫಿ ತೆಗೆಸಿಕೊಳ್ಳುವುದಕ್ಕೆ ಅಕ್ಕಪಕ್ಕದ ಗ್ರಾಮದವರು ಸಹ ಸರ್ವೇಶ್ ಮನೆಗೆ ಬರುತ್ತಿದ್ದಾರೆ.[ಅಪರೂಪದ ಕೆಂಪು ಪಾಂಡಾ ರಕ್ಷಿಸಿದವರಿಗೊಂದು ನಮಸ್ಕಾರ...]

ಸರ್ವೇಶ್ ತಮ್ಮ ಪ್ಯಾಂಟಿನ ಜೇಬಿನಲ್ಲಿಟ್ಟಿದ್ದ ಅರವತ್ತಾರು ಸಾವಿರ ರುಪಾಯಿಯನ್ನು ಈ ಮೇಕೆ ಮಟ್ಟಸವಾಗಿ ಮೆಲುಕು ಹಾಕಿದೆ. ಪಾಪ ತಮ್ಮ ಪಾಡಿಗೆ ಸ್ನಾನಕ್ಕೆ ಹೋಗಿದ್ದ ಸರ್ವೇಶ್ ವಾಪಸ್ ಬರುವ ಹೊತ್ತಿಗೆ ಇನ್ನೇನು ಕೊನೆ ನೋಟು ಅದರ ಬಾಯಿಯಲ್ಲಿ ಇದ್ದದ್ದನ್ನು ಗಮನಿಸಿ ಹೌಹಾರಿದ್ದಾರೆ.
ತಕ್ಷಣ ಎಚ್ಚೆತ್ತುಕೊಂಡಿದ್ದಾರೆ. ಆದರೆ ಏನೂ ಪ್ರಯೋಜನವಾಗಿಲ್ಲ. ಕೇವಲ ಎರಡು ನೋಟುಗಳನ್ನು ಮಾತ್ರ ಉಳಿಸಿಕೊಳ್ಳುವುದಕ್ಕೆ ಸಾಧ್ಯವಾಗಿದೆ. ಅಷ್ಟರೊಳಗೆ ಈ ಕಾಗದ ಪ್ರೇಮಿ ಮೇಕೆ ಎಲ್ಲ ನೋಟುಗಳನ್ನು ಸ್ವಾಹ ಮಾಡಿದೆ. ಇನ್ನು ಮೇಕೆ ಬಾಯಿಂದ ಕಸಿದ ಎರಡು ನೋಟುಗಳು ಸಹ ಯಾವುದಕ್ಕೂ ಉಪಯೋಗಕ್ಕೆ ಬಾರದ ಸ್ಥಿತಿಯಲ್ಲಿವೆ.[ಮೃತಪಟ್ಟ ಕರುವಿನ ಮುಂದೆ ನಿಂತು ಆ ಆಕಳು ಮಾಡಿದ್ದೇನು?]
ಎಲ್ಲ ನೋಟುಗಳು ಎರಡು ಸಾವಿರ ರುಪಾಯಿ ಮುಖಬೆಲೆಯದ್ದಾಗಿದ್ದವು. ಮನೆ ನಿರ್ಮಾಣಕ್ಕೆ ಇಟ್ಟಿಗೆ ಖರೀದಿಸುವುದಕ್ಕೆ ಅಂತ ಆ ಹಣವನ್ನು ಇಟ್ಟುಕೊಂಡಿದ್ದರು ಸರ್ವೇಶ್.
"ನಾನು ಸ್ನಾನಕ್ಕೆ ಹೋಗಿದ್ದೆ. ಹಣವನ್ನು ಪ್ಯಾಂಟ್ ಜೇಬಿನಲ್ಲಿಟ್ಟಿದ್ದೆ. ಕಾಗದ ತಿನ್ನುವುದನ್ನು ಬಲೇ ಇಷ್ಟಪಡುವ ಮೇಕೆ ಈ ಸಂದರ್ಭದಲ್ಲಿ ಎಲ್ಲ ತಿಂದಿತ್ತು. ಏನು ಮಾಡ್ತೀರಿ, ಅದು ನನ್ನ ಮಗು ಇದ್ದಂತೆ" ಎಂದಿದ್ದಾರೆ ಸರ್ವೇಶ್. ಎರಡು ನೋಟುಗಳು ಅದರ ಎಂಜಿಲಿನಲ್ಲಿ ತೋಯ್ದು ಹೋಗಿತ್ತು. ಉಪಯೋಗಕ್ಕೆ ಬಾರದ ಸ್ಥಿತಿಯಲ್ಲಿತ್ತು ಎಂದಿದ್ದಾರೆ ಆತ.
ಇದೀಗ ಈ ಸುದ್ದಿ ಹರಡಿ, ಅಕ್ಕಪಕ್ಕದ ಹಳ್ಳಿಯಿಂದ ಈ ಮೇಕೆಯನ್ನು ನೋಡುವುದಕ್ಕೆ ಬರುತ್ತಿದ್ದಾರೆ. ಅದರ ಜತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ. ಜತೆಗೆ ತಲೆಗೊಂದು ಸಲಹೆ ಒಗಾಯಿಸುತ್ತಿದ್ದಾರೆ. ಅದಕ್ಕೆ ವಾಂತಿ ಮಾಡಿಸಿ, ನೋಟು ವಾಪಸ್ ಬರಬಹುದು ಅನ್ನೋದರಿಂದ ಹಿಡಿದು, ದರಿದ್ರದ್ದು ಮಾರಿಹಾಕಿ ಅದನ್ನು ಅನ್ನೋವರೆಗೆ ಸಲಹೆಗಳು ಬರುತ್ತಿವೆ.[ದೊರೆಗಂತೂ ಮನಸಿಲ್ಲ, ನಾವೂ ಹೃದಯ ಕಳ್ಕೊಂಡರೆ ಗೋವು ಬದ್ಕೋದು ಹೇಗೆ]
ಇನ್ನೂ ವಿಪರೀತ ಅನ್ನೋ ಮಟ್ಟಕ್ಕೆ ಒಬ್ಬ ಪುಣ್ಯಾತ್ಮ, ಹಣ ತಿನ್ನುವ ಅಪರಾಧ ಮಾಡಿದ ಮೇಕೆಯನ್ನ ಪೊಲೀಸರಿಗೆ ಕೊಡಿ ಅಂತ ಕೂಡ ಸಲಹೆ ನೀಡಿದ್ದಾನೆ. ನಮ್ಮ ದುರದೃಷ್ಟಕ್ಕೆ ಅದಕ್ಕೇನು ಮಾಡೋಣ? ಅವು ನಮ್ಮ ಮಕ್ಕಳಿದ್ದ ಹಾಗೆ. ಅವುಗಳ ಮೇಲೆ ಅಷ್ಟು ಕ್ರೂರಿಗಳಾಗಲು ಸಾಧ್ಯವಿಲ್ಲ ಅಂದಿದ್ದಾರೆ ಸರ್ವೇಶ್ ದಂಪತಿ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications