ಕಳ್ಳರ ಹಿಡಿದ ಮಿತ್ತಲ್ ಸಾಹಸದ ಬಗ್ಗೆ ತಿಳಿಯಲೇಬೇಕು
ಅಹಮದಾಬಾದ್, ಆ.09 : ಮಿತ್ತಲ್ ಪಟಾಡಿಯಾ ಎಂಬ ಪ್ರಚಂಡ ಪುಟಾಣಿ ಬಗ್ಗೆ ನೀವು ತಿಳಿದುಕೊಳ್ಳಲೇ ಬೇಕು. ಮನಗೆ ನುಗ್ಗಿದ ಕಳ್ಳರ ಜೊತೆ ಸೆಣಸಾಡಿ ಅವರನ್ನು ಪೊಲೀಸರಿಗೆ ಹಿಡಿದು ಕೊಟ್ಟ ಧೀರೆ ಈಕೆ.
ಅಹಮದಾಬಾದ್ ನ ಸುಭಾಷ್ ಚೌಕದ ನಿವಾಸಿ ಮಿತ್ತಲ್ ಪಟಾಡಿಯಾ. ನವೆಂಬರ್ 3, 2010ರಂದು ಮಿತ್ತಲ್ ಶಾಲೆಯಿಂದ ಮನೆಗೆ ಆಗಮಿಸಿ ಕೆಲವು ಸಮಯ ಕಳೆದಿತ್ತು. ಅಡುಗೆ ಕೋಣೆಯಲ್ಲಿದ್ದ ಅವಳಿಗೆ ಮನೆಯ ಕಾಲಿಂಗ್ ಬಿಲ್ ಶಬ್ದ ಕೇಳಿಸಿತು. ಮಿತ್ತಲ್ ಸಾಕು ತಾಯಿ ಕವಿತಾ ಬಾಗಿಲು ತೆರೆದರು.

ಕೆಲವು ಕ್ಷಣಗಳಲ್ಲಿ ನೀರು ತರುವಂತೆ ತಾಯಿ ಮಿತ್ತಲ್ ಗೆ ಸೂಚಿಸಿದರು. ನೀರು ತೆಗೆದುಕೊಂಡು ಹೋದ ಮಿತ್ತಲ್ ಬಂದವರಲ್ಲಿ ಒಬ್ಬ ಆಟೋ ಡ್ರೈವರ್ ತನಗೆ ಪರಿಚಯದವನು ಎಂಬುದನ್ನು ಪತ್ತೆ ಮಾಡಿದಳು. ಕೆಲವೇ ಕ್ಷಣಗಳಲ್ಲಿ ಮಿತ್ತಲ್ ತಾಯಿಯ ಮೇಲೆ ಹಲ್ಲೆ ನಡೆಸಿದ ಮೂವರು, ಆಕೆಯ ಕುತ್ತಿಗೆಗೆ ಚಾಕು ಹಿಡಿದು ಹಣ, ಆಭರಣ ನೀಡುವಂತೆ ಬೆದರಿಸಿದರು.
ಕಳ್ಳರಿಂದ ತಾಯಿಯನ್ನು ಬಿಡಿಸಲು ಮಿತ್ತಲ್ ಹೋರಾಟ ಆರಂಭಿಸಿದಳು. ಆ ಸಮಯದಲ್ಲಿ ಆಕೆಗೆ ಚಾಕುವಿನಿಂದ ಇರಿದ ಗಾಯಗಳಾದವು. ಆದರೂ ಕಳ್ಳನ ಕೂದಲನ್ನು ಹಿಡಿದೆಳೆದ ಮಿತ್ತಲ್ ಬಾಗಿಲು ತೆರೆಯಲು ಪ್ರಯತ್ನಿಸಿದಳು. ಕೆಲವು ನಿಮಿಷಗಳ ಸೆಣಸಾಟದ ಬಳಿಕ ಅದರಲ್ಲಿ ಯಶಸ್ವಿಯೂ ಆದಳು.
ಮನೆಯ ಬಾಗಿಲು ತೆರೆಯುತ್ತಿದ್ದಂತೆ ಅಮ್ಮ, ಮಗಳ ಚೀರಾಟ ಕೇಳಿ ಸ್ಥಲೀಯರು ಓಡಿ ಬಂದರು. ತಪ್ಪಿಸಿಕೊಳ್ಳಲು ಪ್ರಯತ್ನ ನಡೆಸಿದ ಮೂವರನ್ನು ಹಿಡಿದು, ಬಡಿದು ಪೊಲೀಸರಿಗೆ ಒಪ್ಪಿಸಿದಳು. ಮಿತ್ತಲ್ ಧೈರ್ಯ, ಶೌರ್ಯವನ್ನು ಶ್ಲಾಘಿಸಿದರು.
ಕಳ್ಳರ ಜೊತೆ ಹೋರಾಡುವಾಗ ಮಿತ್ತಲ್ ಗೆ ಭಾರೀ ಗಾಯಗಳಾಗಿದ್ದವು. ಅವಳನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತು. ಅವಳ ದೇಹಕ್ಕೆ ಸುಮಾರು ಮುನ್ನೂರು ಹೊಲಿಗೆ ಹಾಕಲಾಯಿತು. ಮಿತ್ತಲ್ ಸಾಹಸಕ್ಕೆ ಕೇಂದ್ರ ಸರ್ಕಾರ 2012ನೇ ಸಾಲಿನ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಿದೆ.
-
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ












Click it and Unblock the Notifications