ಕುಸ್ತಿಪಟುಗಳ ಪ್ರತಿಭಟನೆ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ಓಡಿ ಹೋದ ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ, ಕಾಂಗ್ರೆಸ್ ವ್ಯಂಗ್ಯ
ಮಂಗಳವಾರ ಹರಿದ್ವಾರಕ್ಕೆ ತಮ್ಮ ಪದಕಗಳನ್ನು ಮುಳುಗಿಸಲು ಹೋದ ಪ್ರತಿಭಟನಾ ನಿರತ ಕುಸ್ತಿಪಟುಗಳ ವಿಷಯದ ಬಗ್ಗೆ ಪ್ರತಿಕ್ರಿಯಿಸಲು ಕೇಳಿದಾಗ ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ ಓಡಿಹೋಗಿರುವ ವಿಡಿಯೋ ವೈರಲ್ ಆಗಿದೆ. ಮೀನಾಕ್ಷಿ ಲೇಖಿ ಅವರ ಈ ರೀತಿಯ ನಡೆಗೆ ಕಾಂಗ್ರೆಸ್ 'ತೀಕ್ಷ್ಣ ಪ್ರತಿಕ್ರಿಯೆ' ಎಂದು ವ್ಯಂಗ್ಯವಾಡಿದೆ.
ಸುದ್ದಿಗಾರರು ಕೇಳುವ ಪ್ರಶ್ನೆಗೆ ಉತ್ತರಿಸದೆ ಸಚಿವೆ ಮೀನಾಕ್ಷಿ 'ಚಲೋ, ಚಲೋ, ಚಲೋ' ಎಂದು ತಮ್ಮ ಕಾರಿನತ್ತ ಓಡಿದ್ದಾರೆ. "ಪ್ರತಿಭಟಿಸುವ ಕುಸ್ತಿಪಟುಗಳ ಬಗ್ಗೆ ನೀವು ಏನು ಹೇಳುತ್ತೀರಿ?" ಎಂದು ಅವರನ್ನು ವರದಿಗಾರ್ತಿಯೊಬ್ಬರು ಕೇಳುತ್ತಾರೆ. ಆದರೆ ಅದಕ್ಕೆ ಉತ್ತರಿಸದೆ ಮೀನಾಕ್ಷಿ ಅವರು ಓಡಿ ಹೋಗುವುದು ಕಂಡು ಬಂದಿದೆ. ಅವರನ್ನು ಹಿಂಬಾಲಿ ಸುದ್ದಿಗಾರಳೂ ಓಡಿದಾಗ, 'ಕಾನೂನು ಪ್ರಕ್ರಿಯೆ ನಡೆಯುತ್ತದೆ' ಎಂದು ಮೀನಾಕ್ಷಿ ಲೇಖಿ ಹೇಳಿದ್ದಾರೆ.

ಈ ವಿಡಿಯೋವನ್ನು ಹಂಚಿಕೊಂಡ ಕಾಂಗ್ರೆಸ್, 'ಮಹಿಳಾ ಕುಸ್ತಿಪಟುಗಳ ವಿಚಾರವಾಗಿ ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ' ಎಂದು ಲೇವಡಿ ಮಾಡಿದೆ.
ಬಿಜೆಪಿ ಸಂಸದ ಮತ್ತು ಭಾರತೀಯ ಕುಸ್ತಿ ಫೆಡರೇಶನ್ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಬಂಧಿಸುವಂತೆ ಒತ್ತಾಯಿಸಿ ಕುಸ್ತಿಪಟುಗಳು ದೆಹಲಿಯಲ್ಲಿ ಒಂದು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಮಂಗಳವಾರ ಕುಸ್ತಿಪಟುಗಳು ತಮ್ಮ ಪ್ರತಿಭಟನೆಯನ್ನು ಹೆಚ್ಚಿಸುವ ಮೂಲಕ ತಮ್ಮ ಪದಕಗಳನ್ನು ಗಂಗಾದಲ್ಲಿ ಮುಳುಗಿಸಲು ನಿರ್ಧರಿಸಿದರು. ಈ ವೇಳೆ ರೈತ ಮುಖಂಡ ನರೇಶ್ ಟಿಕಾಯತ್ ಅವರನ್ನು ತಡೆದರು. ಪ್ರತಿಭಟನಾಕಾರರಿಗೆ ಪದಕಗಳನ್ನು ಗಂಗಾ ನದಿಗೆ ಬಿಡದಂತೆ ತಡೆದರು. ಜೊತೆಗೆ ಅವರ ಬೇಡಿಕೆಯನ್ನು ಈಡೇರಿಸಲು ಐದು ದಿನಗಳ ಕಾಲಾವಕಾಶ ಕೋರಿದರು.
ದೆಹಲಿ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ, ಮುಂದೆ ಹೋಗುತ್ತಿದ್ದಂತೆ ನೋಡಿ ಏನಾಗುತ್ತದೆ ಎಂದು ಬ್ರಿಜ್ ಭೂಷಣ್ ಮಂಗಳವಾರ ಹೇಳಿದ್ದಾರೆ. ಅವರ ದೂರುಗಳ ನಂತರ ಎಫ್ಐಆರ್ಗಳನ್ನು ದಾಖಲಿಸಲಾಗಿದೆ. ಈಗ ನಾವು ಏನು ಮಾಡೋಣ? ಇಂದು ಅವರು ಗಂಗಾ ನದಿಯಲ್ಲಿ ಪದಕಗಳನ್ನು ಮುಳುಗಿಸಲು ಹೋದರು, ಆದರೆ ಅವರು ಗಂಗಾ ನದಿಗೆ ಬದಲಿಗೆ, ಅವರು ಟಿಕೈತ್ಗೆ ಪದಕಗಳನ್ನು ನೀಡಿದರು. ಇದು ಅವರ ನಿಲುವು. ನನ್ನ ಅವಧಿ ಮುಗಿದಿದೆ. ನಾನು ತಪ್ಪಿತಸ್ಥನೆಂದು ಕಂಡುಬಂದರೆ, ನನ್ನನ್ನು ಬಂಧಿಸಲಾಗುವುದು. ಸಾಬೀತಾಗುವವರೆಗೂ ಕಾಯುವುದರಲ್ಲಿ ಅವರಿಗೆ ಏನು ಸಮಸ್ಯೆ'' ಎಂದು ಬ್ರಿಜ್ ಭೂಷಣ್ ಕೇಳಿದರು.

ಕುಸ್ತಿಪಟುಗಳ ಪ್ರತಿಭಟನೆ: ಇತ್ತೀಚಿನ ಬೆಳವಣಿಗೆಗಳು ಇಲ್ಲಿವೆ
1. ಭಾನುವಾರದಂದು ಕುಸ್ತಿಪಟುಗಳು ಹೊಸ ಸಂಸತ್ತಿನ ಕಟ್ಟಡಕ್ಕೆ ಮೆರವಣಿಗೆ ಹೊರಟು ಪ್ರತಿಭಟಿಸಿದರು, ಈ ವೇಳೆ ಅವರನ್ನು ತಡೆದು ಅವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಇದನ್ನು ಪ್ರತಿಭಟನಾಕಾರರು ಖಂಡಿಸಿದ್ದಾರೆ.
2. ವಿಶ್ವ ಸಂಸ್ಥೆಯು ಚುನಾವಣಾ ಗಡುವು ವಿಫಲವಾದಲ್ಲಿ ಭಾರತದ ಕುಸ್ತಿ ಫೆಡರೇಶನ್ ಅನ್ನು ಅಮಾನತುಗೊಳಿಸಬಹುದು ಎಂದು ಹೇಳಿದೆ. ಹೀಗಾದರೆ ಅಥ್ಲೀಟ್ಗಳು ತಟಸ್ಥ ಧ್ವಜದಡಿ ಸ್ಪರ್ಧಿಸಬೇಕಾಗಬಹುದು ಎಂದು ಅದು ಹೇಳಿದೆ.
3. ಭಾರತ ಕ್ರಿಕೆಟ್ನ ಮಾಜಿ ನಾಯಕ ಅನಿಲ್ ಕುಂಬ್ಳೆ ಮಂಗಳವಾರ ಪ್ರತಿಭಟನಾ ನಿರತ ಕುಸ್ತಿಪಟುಗಳಿಗೆ ಬೆಂಬಲವನ್ನು ನೀಡಿದರು: "ಮೇ 28 ರಂದು ನಮ್ಮ ಕುಸ್ತಿಪಟುಗಳನ್ನು ಮ್ಯಾನ್ಹ್ಯಾಂಡ್ ಎಂಬ ಹೇಳಿಕೆಯ ಬಗ್ಗೆ ಕೇಳಿ ಬೇಸರವಾಯಿತು. ಸರಿಯಾದ ಮಾತುಕತೆಯ ಮೂಲಕ ಯಾವುದೇ ಸಮಸ್ಯೆಯನ್ನು ಪರಿಹರಿಸಬಹುದು. ಬೇಗ ನಿರ್ಣಯಕ್ಕಾಗಿ ಆಶಿಸುತ್ತೇನೆ" ಎಂದು ಅವರು ಹೇಳಿದ್ದಾರೆ.
4. ಕುಸ್ತಿಪಟುಗಳು ತಮ್ಮ ಪದಕಗಳನ್ನು ಗಂಗಾ ನದಿಯಲ್ಲಿ ಮುಳುಗಿಸುವುದನ್ನು ನಿಲ್ಲಿಸಿದ ನರೇಶ್ ಟಿಕಾಯತ್ ಅವರು ಈ ವಿಷಯದ ಬಗ್ಗೆ ಸಭೆ ನಡೆಯಲಿದೆ ಎಂದು ಹೇಳಿದರು.
5. ಕುಸ್ತಿಪಟುಗಳನ್ನು ಬೆಂಬಲಿಸಿ ಜೂನ್ 1 ರಂದು ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿದೆ.












Click it and Unblock the Notifications