ಹಿಮ ಕುಸಿತಕ್ಕೆ 6 ಸೈನಿಕರ ದಾರುಣ ಅಂತ್ಯ
ಜಮ್ಮು ಮತ್ತು ಕಾಶ್ಮೀರದ ಗೂರೆಜ್ ಪ್ರದೇಶದಲ್ಲಿ ಎರಡು ಸೇನಾ ಕ್ಯಾಂಪುಗಳ ಮೇಲೆ ಹಿಮ ಕುಸಿತ ಸಂಭವಿಸಿದ್ದು, 6 ಜನ ಸಾವನ್ನಪ್ಪಿದ್ದಾರೆ.
ಬೆಂಗಳೂರು, ಜನವರಿ 26: ಜಮ್ಮು ಮತ್ತು ಕಾಶ್ಮೀರದ ಗೂರೆಜ್ ಪ್ರದೇಶದಲ್ಲಿ ಹಿಮ ಕುಸಿದು 6 ಸೈನಿಕರು ಸಾವನ್ನಪ್ಪಿದ್ದಾರೆ. ನಿನ್ನೆ ರಾತ್ರಿ ಇಲ್ಲಿನ ಎರಡು ಬೇರೆ ಬೇರೆ ಸೇನಾ ಕ್ಯಾಂಪ್ ಮೇಲೆ ಹಿಮದ ಗಡ್ಡೆ ಕುಸಿದು ಬಿದ್ದಿತ್ತು.
ಹಿಮ ಕುಸಿದ ಸುದ್ದಿ ಬರುತ್ತಿದ್ದಂತೆ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿತ್ತು. ಆದರೆ ಹವಮಾನ ವೈಪರೀತ್ಯ ಮತ್ತು ವಿಪರೀತ ಹಿಮಪಾತದಿಂದ ರಕ್ಷಣಾ ಕಾರ್ಯಾಚರಣೆಗೆ ನಿಧಾನವಾಗಿತ್ತು. ಇಂದು ಸೈನಿಕರು ಸ್ಥಳ ತಲುಪುವ ವೇಳೆ 6 ಜನ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಗಂಡೆರ್ಬಾಲ್ ಜಿಲ್ಲೆಯ ಸೊನಮಾರ್ಗ್ ಪ್ರದೇಶದಲ್ಲಿ ನಿನ್ನೆ ರಕ್ಷಣಾ ಕಾರ್ಯಾಚರಣೆ ವೇಳೆ 7 ಸೈನಿಕರು ಜೀವಂತ ಸಿಕ್ಕಿದ್ದರು. ಹಿಮ ಕುಸಿತಕ್ಕೆ ನಿನ್ನೆಯೇ ಓರ್ವ ಮೇಜರ್ ಸಾವನ್ನಪ್ಪಿದ್ದರೆ 4 ಜನ ಗಾಯಗೊಂಡಿದ್ದರು. ಜೀವಂತ ಸಿಕ್ಕವರಿಗೆ ನಂತರ ಚಿಕಿತ್ಸೆ ಕೊಡಿಸಲಾಗಿತ್ತು. ಇನ್ನು ಮೇಜರ್ ಅಮಿತ್ ಮತ್ತು ಇತರ ನಾಲ್ವರು ಹಿಮದ ಅಡಿಯಲ್ಲೇ ನಿನ್ನೆಯಿಂದ ಸಿಲುಕಿಕೊಂಡಿದ್ದರು. ಇವರಲ್ಲಿ ಈಗಾಗಲೆ 4 ಮೃತ ದೇಹಗಳನ್ನು ಹಿಮದ ಅಡಿಯಿಂದ ಹೊರತೆಗೆಯಲಾಗಿದೆ ಎಂದು ಹೇಳಲಾಗುತ್ತಿದೆ.
ಮತ್ತೊಂದು ಘಟನೆಯಲ್ಲಿ ಕ್ಯಾಂಪ್ ನತ್ತ ತೆರಳಿದ್ದ ಗಸ್ತು ಪಡೆಯ ಮೇಲೆ ಹಿಮ ಕುಸಿದಿದ್ದು ಅವರೆಲ್ಲಾ ನಿನ್ನೆಯಿಂದ ನಾಪತ್ತೆಯಾಗಿದ್ದಾರೆ. ಇವರಿಗಾಗಿ ಸೇನೆ ಹುಡುಕಾಟ ನಡೆಸುತ್ತಿದೆ.
ಕಳೆದ ಎರಡು ದಿನದಲ್ಲಿ ಜಮ್ಮು ಮತ್ತು ಕಾಶ್ಮಿರದಾದ್ಯಂತ ಹಲವು ಭಾಗಗಳಲ್ಲಿ ಹಿಮ ಕುಸಿತವಾದ ವರದಿಗಳು ಬಂದಿವೆ. ಬಂಡೀಪೊರ್ ಜಿಲ್ಲೆಯ ಮನೆಯೊಂದು ಹಿಮದಲ್ಲಿ ಮುಳುಗಿದ ಪರಿಣಾಮ ಒಂದೇ ಮನೆಯ ನಾಲ್ವರು ಅಸುನೀಗಿದ್ದಾರೆ.
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications