ಲಾಲೂಗೆ ಜೈಲು : ವ್ಯಂಗ್ಯ, ಹಾಸ್ಯ, ಭರಪೂರ ವಿಡಂಬನೆ
ರಾಂಚಿ, ಜನವರಿ 06: ಹಲವು ದಿನಗಳಿಂದ ಸತತ ಮುಂದೂಡಲ್ಪಡುತ್ತಿದ್ದ ಮೇವು ಹಗರಣದ ಆರೋಪಿಗಳ ಶಿಕ್ಷೆಯ ಪ್ರಮಾಣ ಪ್ರಕಟಣೆ ಇಂದು ಹೊರಬಿದ್ದಿದೆ. ಆರ್ ಜೆಡಿ ನಾಯಕ, ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಅವರಿಗೆ 3.5 ವರ್ಷ ಜೈಲು ಶಿಕ್ಷೆ ಮತ್ತು 5 ವರ್ಷ ದಂಡ ವಿಧಿಸಿ ರಾಂಚಿಯ ವಿಶೇಷ ಸಿಬಿಐ ನ್ಯಾಯಾಲಯ ಆದೇಶ ಹೊರಡಿಸುತ್ತಿದ್ದಂತೆಯೇ ಇತ್ತ ಟ್ವಿಟ್ಟರ್ ನಲ್ಲಿ ಹಲವರು ವ್ಯಂಗ್ಯೋಕ್ತಿಯ ಮಳೆ ಸುರಿಸುತ್ತಿದ್ದಾರೆ.
ಹಲವರು ತೀರ್ಪನ್ನು ಸ್ವಾಗತಿಸಿದ್ದರೆ ಕೆಲವರು, ಕೇವಲ ಮೇವು ಹಗರಣ ಮಾತ್ರವಲ್ಲ, ಈ ದೇಶದಲ್ಲಿ ನಡೆದ ಎಲ್ಲಾ ಹಗರಣಗಳ ಕುರಿತೂ ನ್ಯಾಯಾಲಯ ಹೀಗೇ ತೀರ್ಪು ನೀಡಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ.
ರಾಂಚಿ ನ್ಯಾಯಾಲಯದಿಂದ ಲಾಲೂ ಜಾಮೀನು ಪಡೆಯಲೂ ಸಾಧ್ಯವಾಗದ ಕಾರಣ ಅವರು ಜಾಮೀನಿಗೆ ಹೈಕೋರ್ಟ್ ಮೊರೆಹೋಗಬೇಕಾದ ಸಂಕಷ್ಟದಲ್ಲಿದ್ದಾರೆ. ಒಟ್ಟಿನಲ್ಲಿ ಉಪ್ಪು ತಿಂದವನು ನೀರು ಕುಡಿಯುತ್ತಾನೋ ಬಿಡುತ್ತಾನೋ, ಮೇವು ತಿಂದವರಂತೂ ಜೈಲಿನಲ್ಲಿ ರಾಗಿ ಬೀಸೋದು ಅನಿವಾರ್ಯವಾದಂತಾಗಿದೆ!
|
ಈ ಲೆಕ್ಕವನ್ನು ದನಗಳೂ ಇಷ್ಟಪಡೋಲ್ಲ!
ಸೋ... 1997ರಲ್ಲಿ 985 ಕೋಟಿ ರೂ. = 2018 ರಲ್ಲಿ 5 ಲಕ್ಷ ರೂ.+3.5 ವರ್ಷ ಜೈಲು!
ಬಹುಶಃ ತಮ್ಮ ಮೇವಿನ ಬಗ್ಗೆ ಈ ಲೆಕ್ಕವನ್ನು ಸ್ವತಃ ದನಗಳೂ ಒಪ್ಪಿಕೊಳ್ಳೋಲ್ಲ ಎಂದು ಸಿರ್ಫ್ ತುಮಾರಿ ಎಂಬ ಖಾತೆಯಿಂದ ಟ್ವೀಟ್ ಮಾಡಲಾಗಿದೆ.
|
ಮಾಡಿದ್ದುಣ್ಣೋ ಮಾರಾಯ!
'ಕರ್ಮ ಯಾವಾಗಲೂ ನಮ್ಮನ್ನು ಅನುಸರಿಸುತ್ತದೆ.. ಅದಕ್ಕೆಂದೇ ಹೇಳೋದು ಒಳ್ಳೆಯ ಕೆಲಸ ಮಾಡಿ ಅಂತ' ಎಂದಿದ್ದಾರೆ ಚೇತನ್ ಎಂ.ಆರ್.
|
ನಮ್ಮ ನ್ಯಾಯಾಂಗ ವ್ಯವಸ್ಥೆ ಮೇಲೆ ನಂಬಿಕೆಯಿಲ್ಲ!
ಲಾಲೂ ಪ್ರಸಾದ್ ಅವರಿಗೆ ಇಷ್ಟು ಕಡಿಮೆ ವರ್ಷ ಶಿಕ್ಷೆ ಸಾಕೇ? ಸಾವಿರಾರು ಕೋಟಿ ರೂ. ಹಣದ ಕತೆಯೇನು? ಅದನ್ನು ಯಾರು ಹಿಂದಿರುಗಿಸುತ್ತಾರೆ? 25 ವರ್ಷದ ನಂತರ ಇಂಥ ತೀರ್ಪು ನೀಡಿದ್ದೇಕೆ? ನಮ್ಮ ನ್ಯಾಯಾಂಗ ವ್ಯವಸ್ಥೆ ಮೇಲೆ ನಂಬಿಕೆ ಇಲ್ಲ ಎನ್ನುತ್ತಾರೆ ಅಭಯ್ ಸುರ್ಪುಕರ್
|
ಅವರ ಆಸ್ತಿಯನ್ನೆಲ್ಲ ಜಫ್ತಿಮಾಡಿ!
ಇದು ಅತ್ಯಂತ ಕನಿಷ್ಠ ಶಿಕ್ಷೆ. ಅವರ ಮಾಡಿದ ನೂರಾರು ಕೋಟಿ ರೂ. ಮೋಸಕ್ಕೆ ಇಷ್ಟು ಕಡಿಮೆ ಶಿಕ್ಷೆ ಸಾಕೆ? ಮೊದಲು ಅವರ ಎಲ್ಲಾ ಆಸ್ತಿಯನ್ನೂ ಜಫ್ತಿಮಾಡಿ. ಇದು ನ್ಯಾಯಾಂಗದ ವಿಡಂಬನೆ. ಇದು ನ್ಯಾಯವಲ್ಲ.ಸಾಮಾನ್ಯ ಜನರಿಗೆ ನ್ಯಾಯಾಂಗದ ಬಗ್ಗೆ ವಿಶ್ವಾಸ ಹೇಗುಳಿಯುತ್ತದೆ?
|
ರಾಂಚಿ ಜೈಲು ಐಷಾರಾಮಿಯಾಗಿದೆ!
ರಾಂಚಿ ಜೈಲು ಐಷಾರಾಮಿಯಾಗಿದೆ. ಯಾರಿಗೆ ಗೊತ್ತು ಮುಂದೊಮ್ಮೆ ತಾವೇ ಅಲ್ಲಿರಬೇಕಾಗುತ್ತದೆ ಎಂದು ಲಾಲೂ ಪ್ರಸಾದೇ ಅದನ್ನು ಐಷಾರಾಮಿಯಾಗಿ ಮಾಡಿಸಿರಬೇಕು ಎಂದು ಮೊಟಕಿದ್ದಾರೆ ಖುಷ್ಬೂ
|
ಇದು ಲಾಲೂ ಪ್ರಸಾದ್ ಗೆಲುವು!
ಮೊದಲನೇ ಮೇವು ಹಗರಣಕ್ಕೆ 5 ವರ್ಷ ಶಿಕ್ಷೆ 25 ಲಕ್ಷ ದಂಡ. ಎರಡನೆಯದಕ್ಕೆ ಮೂರೂವರೆ ವರ್ಷ ಶಿಕ್ಷೆ, ಐದು ಲಕ್ಷ ದಂಡ. ಇದು ನಿಜಕ್ಕೂ ಲಾಲೂ ಪ್ರಸಾದ್ ಯಾದವ್ ಅವರಿಗೆ ನೈತಿಕ ಗೆಲುವು. ಇದರೊಟ್ಟಿಗೆ ಮತ್ತಷ್ಟು ಮೇವು ಹಗರಣಗಳು ಇನ್ನೂ ನ್ಯಾಯಾಲಯದಲ್ಲೇ ಭದ್ರವಾಗಿವೆ.
-
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
ದೆಹಲಿ ಮೆಟ್ರೋ ಸಂಸ್ಕೃತಿ ಬೆಂಗಳೂರಿಗೂ ಬಂತಾ? ಮೆಟ್ರೋದಲ್ಲಿ ಯುವತಿಯರಿಂದ ನಿಯಮ ಉಲ್ಲಂಘನೆ Video Viral -
Byadgi Red Chilli: ಬ್ಯಾಡಗಿ ಮಾರುಕಟ್ಟೆಗೆ 2.43 ಲಕ್ಷ ಮೆಣಸಿನಕಾಯಿ ಚೀಲ ಆವಕ, ಕ್ವಿಂಟಾಲ್ ದರವೆಷ್ಟಿದೆ? -
CBSE 10ನೇ ತರಗತಿ ಬೋರ್ಡ್ ಪರೀಕ್ಷೆ 2026: ಫಲಿತಾಂಶ ಯಾವಾಗ ಪ್ರಕಟ?, ಕಳೆದ ವರ್ಷಗಳ ಟ್ರೆಂಡ್ ಹೀಗಿದೆ -
Nora Fatehi: ಕನ್ನಡ ಹಾಡಿನಿಂದ ವಿವಾದಕ್ಕೆ ಸಿಲುಕಿರುವ ಬಾಲಿವುಡ್ನ ಡ್ಯಾನ್ಸ್ ಕ್ವೀನ್ ನೋರಾ ಫತೇಹಿ ಅಸಲಿ ಕಥೆ ಇದು -
March 18 Horoscope: ಧನ, ಆರೋಗ್ಯ, ಉದ್ಯೋಗದ ಭವಿಷ್ಯ -
Ugadi Wishes 2026: ಯುಗಾದಿ ಹಬ್ಬದ ಶುಭಾಶಯಗಳು, 35+ ಮೆಸೇಜ್, ಶುಭಾಶಯ ಮತ್ತು ಸ್ಟೇಟಸ್ ಸಾಲುಗಳು ಇಲ್ಲಿವೆ -
Bengaluru Rent: ಬೆಂಗಳೂರಲ್ಲಿ ನಾನ್ವೆಜ್ ಪ್ರಿಯರಿಗೆ ಶಾಕ್: ಮಾಂಸಾಹಾರಿಗಳಿಗೆ ಸಿಗ್ತಿಲ್ಲ ನಗರದಲ್ಲಿ ಬಾಡಿಗೆ ಮನೆ -
Anganwadi Workers: ಅಂಗನವಾಡಿ ಕಾರ್ಯಕರ್ತೆಯರ ವೇತನ ಪರಿಷ್ಕರಣೆ: ಲಕ್ಷ್ಮಿ ಹೆಬ್ಬಾಳ್ಕರ್ ಅಪ್ಡೇಟ್ಸ್ -
Karnataka Rain Alert: ರಾಜ್ಯದ ಹಲವೆಡೆ ಆಲಿಕಲ್ಲು ಮಳೆ, ಮಿನಿ ಕಾಶ್ಮೀರದಂತಾದ ರಸ್ತೆಗಳು; ಇನ್ನೆಷ್ಟು ದಿನ ವರುಣನ ಆರ್ಭಣ?












Click it and Unblock the Notifications