ಲಾಲೂಗೆ ಜೈಲು : ವ್ಯಂಗ್ಯ, ಹಾಸ್ಯ, ಭರಪೂರ ವಿಡಂಬನೆ
ರಾಂಚಿ, ಜನವರಿ 06: ಹಲವು ದಿನಗಳಿಂದ ಸತತ ಮುಂದೂಡಲ್ಪಡುತ್ತಿದ್ದ ಮೇವು ಹಗರಣದ ಆರೋಪಿಗಳ ಶಿಕ್ಷೆಯ ಪ್ರಮಾಣ ಪ್ರಕಟಣೆ ಇಂದು ಹೊರಬಿದ್ದಿದೆ. ಆರ್ ಜೆಡಿ ನಾಯಕ, ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಅವರಿಗೆ 3.5 ವರ್ಷ ಜೈಲು ಶಿಕ್ಷೆ ಮತ್ತು 5 ವರ್ಷ ದಂಡ ವಿಧಿಸಿ ರಾಂಚಿಯ ವಿಶೇಷ ಸಿಬಿಐ ನ್ಯಾಯಾಲಯ ಆದೇಶ ಹೊರಡಿಸುತ್ತಿದ್ದಂತೆಯೇ ಇತ್ತ ಟ್ವಿಟ್ಟರ್ ನಲ್ಲಿ ಹಲವರು ವ್ಯಂಗ್ಯೋಕ್ತಿಯ ಮಳೆ ಸುರಿಸುತ್ತಿದ್ದಾರೆ.
ಹಲವರು ತೀರ್ಪನ್ನು ಸ್ವಾಗತಿಸಿದ್ದರೆ ಕೆಲವರು, ಕೇವಲ ಮೇವು ಹಗರಣ ಮಾತ್ರವಲ್ಲ, ಈ ದೇಶದಲ್ಲಿ ನಡೆದ ಎಲ್ಲಾ ಹಗರಣಗಳ ಕುರಿತೂ ನ್ಯಾಯಾಲಯ ಹೀಗೇ ತೀರ್ಪು ನೀಡಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ.
ರಾಂಚಿ ನ್ಯಾಯಾಲಯದಿಂದ ಲಾಲೂ ಜಾಮೀನು ಪಡೆಯಲೂ ಸಾಧ್ಯವಾಗದ ಕಾರಣ ಅವರು ಜಾಮೀನಿಗೆ ಹೈಕೋರ್ಟ್ ಮೊರೆಹೋಗಬೇಕಾದ ಸಂಕಷ್ಟದಲ್ಲಿದ್ದಾರೆ. ಒಟ್ಟಿನಲ್ಲಿ ಉಪ್ಪು ತಿಂದವನು ನೀರು ಕುಡಿಯುತ್ತಾನೋ ಬಿಡುತ್ತಾನೋ, ಮೇವು ತಿಂದವರಂತೂ ಜೈಲಿನಲ್ಲಿ ರಾಗಿ ಬೀಸೋದು ಅನಿವಾರ್ಯವಾದಂತಾಗಿದೆ!
|
ಈ ಲೆಕ್ಕವನ್ನು ದನಗಳೂ ಇಷ್ಟಪಡೋಲ್ಲ!
ಸೋ... 1997ರಲ್ಲಿ 985 ಕೋಟಿ ರೂ. = 2018 ರಲ್ಲಿ 5 ಲಕ್ಷ ರೂ.+3.5 ವರ್ಷ ಜೈಲು!
ಬಹುಶಃ ತಮ್ಮ ಮೇವಿನ ಬಗ್ಗೆ ಈ ಲೆಕ್ಕವನ್ನು ಸ್ವತಃ ದನಗಳೂ ಒಪ್ಪಿಕೊಳ್ಳೋಲ್ಲ ಎಂದು ಸಿರ್ಫ್ ತುಮಾರಿ ಎಂಬ ಖಾತೆಯಿಂದ ಟ್ವೀಟ್ ಮಾಡಲಾಗಿದೆ.
|
ಮಾಡಿದ್ದುಣ್ಣೋ ಮಾರಾಯ!
'ಕರ್ಮ ಯಾವಾಗಲೂ ನಮ್ಮನ್ನು ಅನುಸರಿಸುತ್ತದೆ.. ಅದಕ್ಕೆಂದೇ ಹೇಳೋದು ಒಳ್ಳೆಯ ಕೆಲಸ ಮಾಡಿ ಅಂತ' ಎಂದಿದ್ದಾರೆ ಚೇತನ್ ಎಂ.ಆರ್.
|
ನಮ್ಮ ನ್ಯಾಯಾಂಗ ವ್ಯವಸ್ಥೆ ಮೇಲೆ ನಂಬಿಕೆಯಿಲ್ಲ!
ಲಾಲೂ ಪ್ರಸಾದ್ ಅವರಿಗೆ ಇಷ್ಟು ಕಡಿಮೆ ವರ್ಷ ಶಿಕ್ಷೆ ಸಾಕೇ? ಸಾವಿರಾರು ಕೋಟಿ ರೂ. ಹಣದ ಕತೆಯೇನು? ಅದನ್ನು ಯಾರು ಹಿಂದಿರುಗಿಸುತ್ತಾರೆ? 25 ವರ್ಷದ ನಂತರ ಇಂಥ ತೀರ್ಪು ನೀಡಿದ್ದೇಕೆ? ನಮ್ಮ ನ್ಯಾಯಾಂಗ ವ್ಯವಸ್ಥೆ ಮೇಲೆ ನಂಬಿಕೆ ಇಲ್ಲ ಎನ್ನುತ್ತಾರೆ ಅಭಯ್ ಸುರ್ಪುಕರ್
|
ಅವರ ಆಸ್ತಿಯನ್ನೆಲ್ಲ ಜಫ್ತಿಮಾಡಿ!
ಇದು ಅತ್ಯಂತ ಕನಿಷ್ಠ ಶಿಕ್ಷೆ. ಅವರ ಮಾಡಿದ ನೂರಾರು ಕೋಟಿ ರೂ. ಮೋಸಕ್ಕೆ ಇಷ್ಟು ಕಡಿಮೆ ಶಿಕ್ಷೆ ಸಾಕೆ? ಮೊದಲು ಅವರ ಎಲ್ಲಾ ಆಸ್ತಿಯನ್ನೂ ಜಫ್ತಿಮಾಡಿ. ಇದು ನ್ಯಾಯಾಂಗದ ವಿಡಂಬನೆ. ಇದು ನ್ಯಾಯವಲ್ಲ.ಸಾಮಾನ್ಯ ಜನರಿಗೆ ನ್ಯಾಯಾಂಗದ ಬಗ್ಗೆ ವಿಶ್ವಾಸ ಹೇಗುಳಿಯುತ್ತದೆ?
|
ರಾಂಚಿ ಜೈಲು ಐಷಾರಾಮಿಯಾಗಿದೆ!
ರಾಂಚಿ ಜೈಲು ಐಷಾರಾಮಿಯಾಗಿದೆ. ಯಾರಿಗೆ ಗೊತ್ತು ಮುಂದೊಮ್ಮೆ ತಾವೇ ಅಲ್ಲಿರಬೇಕಾಗುತ್ತದೆ ಎಂದು ಲಾಲೂ ಪ್ರಸಾದೇ ಅದನ್ನು ಐಷಾರಾಮಿಯಾಗಿ ಮಾಡಿಸಿರಬೇಕು ಎಂದು ಮೊಟಕಿದ್ದಾರೆ ಖುಷ್ಬೂ
|
ಇದು ಲಾಲೂ ಪ್ರಸಾದ್ ಗೆಲುವು!
ಮೊದಲನೇ ಮೇವು ಹಗರಣಕ್ಕೆ 5 ವರ್ಷ ಶಿಕ್ಷೆ 25 ಲಕ್ಷ ದಂಡ. ಎರಡನೆಯದಕ್ಕೆ ಮೂರೂವರೆ ವರ್ಷ ಶಿಕ್ಷೆ, ಐದು ಲಕ್ಷ ದಂಡ. ಇದು ನಿಜಕ್ಕೂ ಲಾಲೂ ಪ್ರಸಾದ್ ಯಾದವ್ ಅವರಿಗೆ ನೈತಿಕ ಗೆಲುವು. ಇದರೊಟ್ಟಿಗೆ ಮತ್ತಷ್ಟು ಮೇವು ಹಗರಣಗಳು ಇನ್ನೂ ನ್ಯಾಯಾಲಯದಲ್ಲೇ ಭದ್ರವಾಗಿವೆ.
-
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ












Click it and Unblock the Notifications