ಜೋಕನ್ನೆಲ್ಲ ಕೇಳಿ ನವಿಲುಗಳು ಅಳಲು ಪ್ರಾರಂಭಿಸಿದರೆ!
ಬೆಂಗಳೂರು, ಜೂನ್ 01 : ರಾಷ್ಟ್ರಪಕ್ಷಿ ನವಿಲಿಗೆ ಮಾನವನಂತೆ ವ್ಯವಹರಿಸಲು ಸಾಧ್ಯವಾಗುತ್ತಿದ್ದರೆ, ತಮ್ಮನ್ನು ಅಪಹಾಸ್ಯದ ಸರಕನ್ನಾಗಿ ಮಾಡಿ ಅವಮಾನಕ್ಕೀಡು ಮಾಡಿರುವ ವ್ಯಕ್ತಿಯ ಮೇಲೆ, ತಮ್ಮ ಮೈಲೇರಿರುವ ಬಣ್ಣಗಳಿಗಿಂತ ಹೆಚ್ಚು ಕೋಟಿ ರುಪಾಯಿಗೆ ಮಾನನಷ್ಟ ಮೊಕದ್ದಮೆ ಹೂಡುತ್ತಿದ್ದವೇನೋ?
ಮಳೆಯ ಸಿಂಚನವಾದಾಗಲೆಲ್ಲ ಸಾವಿರ ಕಣ್ಣುಗಳಿರುವ ಗರಿಗಳನ್ನು ಹರಡಿಕೊಂಡು ತನ್ನಷ್ಟಕ್ಕೆ ತಾನು ನಲಿಯುವ, ನೋಟದಿಂದಲೇ ನೋಡುಗರಿಗೆ ಅನಿರ್ವಚನೀಯ ಆನಂದ ಕೊಡುವ, ತನ್ನ ನಡಿಗೆಯಿಂದ ಮಯೂರಿ ಎಂದು ಹೆಸರು ಪಡೆದಿರುವ ನವಿಲು ತನ್ನ ಜೀವಮಾನದಲ್ಲಿ ಇಷ್ಟು ಅಪಹಾಸ್ಯಕ್ಕೆ ಈಡಾಗಿರಲಿಲ್ಲ.
"ನವಿಲುಗಳು ಆಜನ್ಮ ಬ್ರಹ್ಮಚಾರಿ, ಗಂಡು ಹೆಣ್ಣು ನವಿಲುಗಳು ಎಂದೂ ಕೂಡಿಕೊಳ್ಳುವುದಿಲ್ಲ. ಗಂಡು ಸುರಿಸುವ ಕಣ್ಣೀರಿನಿಂದಲೇ ಹೆಣ್ಣು ಬಸಿರಾಗುತ್ತದೆ" ಎಂಬಿತ್ಯಾದಿ ಅಸಂಬದ್ಧ ಮಾತುಗಳಿಂದ ನಿಜಕ್ಕೂ ನವಿಲುಗಳ ಮಾನನಷ್ಟವಾಗಿದೆ. ಸಾಮಾಜಿಕ ತಾಣದಲ್ಲಿ ಅನಗತ್ಯವಾಗಿ ಹಾಸ್ಯದ ಸರಕಾಗಿವೆ. [ಗೋವಿನ ಬಗ್ಗೆ ನಿಮಗೆ ತಿಳಿಯದ ರೋಚಕ ಸಂಗತಿಗಳು]
ನವಿಲುಗಳು ಸುರಿಸುವ ಕಣ್ಣೀರಿನ ಬಗ್ಗೆ ತಥ್ಯಮಿಥ್ಯಗಳೇನೇ ಇರಲಿ, ಮಳೆ ಸುರಿದಾಗ ಗಂಡು ನವಿಲು ಗರಿಗೆದರಿದಾಗ ಮಿಲನ ಮಹೋತ್ಸವವನ್ನು ಆಚರಿಸುತ್ತವೋ ಬಿಡುತ್ತವೋ, ಶ್ರೀಕೃಷ್ಣ ಪಾವಿತ್ರ್ಯತೆಯ ಸಂಕೇತವಾಗಿ ತನ್ನ ನವಿಲುಗರಿಯನ್ನು ಇಟ್ಟುಕೊಂಡಿದ್ದಾನೋ ಇಲ್ಲವೋ... ವಿನಾಕಾರಣ ನವಿಲುಗಳು ಕಣ್ಣೀರು ಸುರಿಸುವಂತಾಗಿದೆ.
ಇದಕ್ಕೆಲ್ಲ ಕಾರಣವಾಗಿದ್ದು, ಮಹೇಂದ್ರ ಸಿಂಗ್ ಶರ್ಮಾ ಎಂಬ ರಾಜಸ್ತಾನ ಹೈಕೋರ್ಟಿನ ನ್ಯಾಯಮೂರ್ತಿಗಳು ತಮ್ಮ ಜ್ಞಾನವನ್ನು ಮಾಧ್ಯಮದವರೆದಿರುವ ಹರಿಯಬಿಟ್ಟಿರುವುದರಿಂದ. ನವಿಲುಗಳು ಒಂದನ್ನೊಂದು ಕೂಡುವುದಿಲ್ಲ, ಗಂಡು ನವಿಲಿನ ಕಣ್ಣೀರೇ, ಹೆಣ್ಣು ನವಿಲಿಗೆ ವೀರ್ಯ ಎಂಬ ಮಾತನ್ನು ಒಪ್ಪುತ್ತೀರಾ? ಟ್ವಿಟ್ಟಿಗರು ಹೇಗೆ ಪ್ರತಿಕ್ರಿಯಿಸುತ್ತಿದ್ದಾರೆ ಎಂಬುದನ್ನು ಮುಂದೆ ಓದಿರಿ. [ಹೇ... ನವಿಲೇ... ಹೆಣ್ಣವಿಲೇ...]

ನವಿಲುಗಳ ಪ್ರೇಮ ಸಂಭಾಷಣೆ
ಗಂಡು ನವಿಲು : ಬಾರೇ ನನ್ ರಾಣಿ ಕಾಮಕೇಳಿಯಾಡೋಣ.
ಹೆಣ್ಣು ನವಿಲು : ಹೊಗಲೋ, ನಾವಿಬ್ರೂ ಸ್ನೇಹಿತರಾಗೇ ಇರೋಣ.
ಪ್ರೇಮಪರಿತ್ಯಕ್ತ ಗಂಡು ನವಿಲು ನಿರಾಶೆಯಿಂದ ಕಣ್ಣೀರುಗರೆಯಲು ಪ್ರಾರಂಭಿಸುತ್ತದೆ, ಆ ಕಣ್ಣೀರಿನಿಂದ ಹೆಣ್ಣು ನವಿಲು ಗರ್ಭಿಣಿಯಾಗುತ್ತದೆ.

ನವಿಲು ಜಾನ್ಸನ್ ಬೇಬಿ ಶಾಂಪೂ ಬಳಸಿದರೆ?
ಒಂದು ವೇಳೆ ಗಂಡು ನವಿಲು ಜಾನ್ಸನ್ ಬೇಬಿ ಶಾಂಪೂವನ್ನು ಬಳಸಿದರೆ ಅದು ನಪುಂಸಕವಾಗಿಬಿಡುತ್ತದೆ, ಬ್ರಹ್ಮಚಾರಿಯಾಗಿದ್ದರೂ ಮಕ್ಕಳನ್ನು ಮಾಡಲು ಸಾಧ್ಯವಾಗುವುದಿಲ್ಲ. ಏಕೆಂದರೆ, ಜಾನ್ಸನ್ ಬೇಬಿ ಶಾಂಪೂ ಮೇಲೆ 'ನೊ ಮೋರ್ ಟಿಯರ್ಸ್' ಅಂತ ಬರೆದಿದೆ

ನವಿಲು ರಾಷ್ಟ್ರಪಕ್ಷಿಯಾಗಿದ್ದು ಹೇಗೆ?
ಹೆಸರಿನಲ್ಲಿ 'ಕಾಕ್' ಎಂದು ಇದ್ದರೂ ಸ್ವಯಂ ನಿಯಂತ್ರಣದಿಂದಾಗಿ ತನ್ನ ಜೀವನಪರ್ಯಂತ ಬ್ರಹ್ಮಚಾರಿಯಾಗಿದ್ದರಿಂದಲೇ ನವಿಲನ್ನು ರಾಷ್ಟ್ರಪಕ್ಷಿಯನ್ನಾಗಿ ಘೋಷಿಸಲಾಗಿದೆ! ಹೇಗಿದೆ ವಾದ?

ನಾನು ಮಳೆಯಲ್ಲಿ ಏಕೆ ಅಡ್ಡಾಡುತ್ತೇನೆಂದರೆ!
ನವಿಲಿನ ನೋವಿನ ಸ್ವಗತ : ನಾನು ಯಾವಾಗಲೂ ಮಳೆಯಲ್ಲಿಯೇ ಅಡ್ಡಾಡಲು ಬಯಸುತ್ತೇನೆ. ಏಕೆಂದರೆ, ಮಳೆ ಸುರಿಯುತ್ತಿದ್ದಾಗ ನಾನು ಲೈಂಗಿಕ ಕ್ರಿಯೆ ನಡೆಸುತ್ತಿದ್ದೇನೆಂದು ಯಾರಿಗೂ ಗೊತ್ತಾಗುವುದಿಲ್ಲ!

ಇಂಥ ಜೋಕುಗಳನ್ನಾಡುವುದನ್ನು ನಿಲ್ಲಿಸಿ
ನವಿಲಿನ ಲೈಂಗಿಕತೆಯ ಬಗ್ಗೆ ಅಸಂಬದ್ಧ ಮಾತುಗಳನ್ನು, ಜೋಕುಗಳನ್ನು ಆಡುವುದನ್ನು ತಕ್ಷಣ ಕೂಡ ನಿಲ್ಲಿಸಿ. ಇದನ್ನೆಲ್ಲ ಕೇಳಿ ನವಿಲುಗಳೆಲ್ಲ ಅಳಲು ಪ್ರಾರಂಭಿಸಿದರೆ ನವಿಲುಗಳ ಸಂಖ್ಯೆ ದೇಶದ ಜನಸಂಖ್ಯೆಯನ್ನು ಮೀರಿಸಿಬಿಡುತ್ತದೆ!
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications