ಭಾರತದಲ್ಲಿ ಕೊರೊನಾ ದಿಕ್ಕು ಬದಲಿಸಿದ 'ಐದು' ಮಹಾನಗರಗಳು
ದೆಹಲಿ, ಜೂನ್ 13: ಭಾರತದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 3 ಲಕ್ಷ ದಾಟಿದೆ. ನಿನ್ನೆ ಒಂದೇ ದಿನ ದೇಶದಲ್ಲಿ 11,458 ಪ್ರಕರಣಗಳು ದಾಖಲಾಗಿದೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 3,08,993ಕ್ಕೆ ಏರಿಕೆಯಾಗಿದೆ.
Recommended Video
ಅಮೆರಿಕ, ಬ್ರೆಜಿಲ್, ರಷ್ಯಾ ನಂತರ ಜಗತ್ತಿನಲ್ಲಿ ಅತಿ ಹೆಚ್ಚು ಕೊವಿಡ್ ಸೋಂಕು ಹೊಂದಿರುವ ನಾಲ್ಕನೇ ರಾಷ್ಟ್ರ ಭಾರತ ಎನಿಸಿಕೊಂಡಿದೆ. ಮಹಾರಾಷ್ಟ್ರದಲ್ಲಿ ಒಂದು ಲಕ್ಷಕ್ಕೂ ಅಧಿಕ ಸೋಂಕು ವರದಿಯಾಗಿದೆ. ದೇಶದ ಶೇಕಡಾ 41ರಷ್ಟು ಕೇಸ್ಗಳು ಮಹಾರಾಷ್ಟ್ರ ಮತ್ತು ತಮಿಳುನಾಡು ರಾಜ್ಯಗಳಿಂದಲೇ ವರದಿಯಾಗಿದೆ.
ಇನ್ನು ದೆಹಲಿ ಮತ್ತು ಗುಜರಾತ್ನಲ್ಲಿ 20 ಸಾವಿರಕ್ಕೂ ಹೆಚ್ಚ ಕೇಸ್ಗಳು ವರದಿಯಾಗಿದೆ. ಹಾಗ್ನೋಡಿದ್ರೆ, ದೇಶದ ಐದು ನಗರಗಳಲ್ಲಿ ಮಾತ್ರ ಕೊರೊನಾ ಅಟ್ಟಹಾಸ ಮಾಡಿದೆ. ಈ ಐದು ನಗರಗಳಿಂದಲೇ ದೇಶದ 50ರಷ್ಟು ಸೋಂಕು ಪತ್ತೆಯಾಗಿದೆ. ಒಂದು ಹಂತಕ್ಕೆ ದೇಶದಲ್ಲಿ ನಿಯಂತ್ರಣದಲ್ಲಿ ಕೊರೊನಾ ವೈರಸ್ ದಿಕ್ಕು ಬದಲಿಸಿದ್ದೇ ಆ ಐದು ನಗರಗಳು. ಅಷ್ಟಕ್ಕೂ, ಆ ಐದು ರಾಜ್ಯಗಳು ಯಾವುದು? ಯಾವ ರಾಜ್ಯದಲ್ಲಿ ಎಷ್ಟು ಕೇಸ್ ದಾಖಲಾಗಿದೆ. ಮುಂದೆ ಓದಿ....

ದೇಶಕ್ಕೆ ಬಹುದೊಡ್ಡ ಕಂಟಕ ಮುಂಬೈ
ಮಹಾರಾಷ್ಟ್ರದಲ್ಲಿ 1,01,141 ಜನರಿಗೆ ಕೊರೊನಾ ಸೋಂಕು ತಗುಲಿದ್ದರೆ, ಅದರಲ್ಲಿ ಶೇಕಡಾ 50ರಷ್ಟು ಕೇಸ್ ಮುಂಬೈಗೆ ಸೇರಿದ್ದು. ಮುಂಬೈನಲ್ಲಿ ಒಟ್ಟು 55,451 ಜನರಿಗೆ ಮಹಾಮಾರಿ ವಕ್ಕರಿಸಿದೆ. ಭಾರತದ ಪಾಲಿಗೆ ಮುಂಬೈ ನಂಬರ್ ವನ್ ಕೊರೊನಾ ಹಾಟ್ಸ್ಪಾಟ್ ನಗರವಾಗಿದೆ. ಇದುವರೆಗೂ 2044 ಮಂದಿ ಮುಂಬೈನಲ್ಲಿ ಸಾವನ್ನಪ್ಪಿದ್ದಾರೆ. ಈಜಿಫ್ಟ್, ನೆದರ್ಲಂಡ್, ಸ್ವಿಡೇನ್, ಯುಎಇ ದೇಶಗಳಿಗಿಂತ ಮುಂಬೈನಲ್ಲಿ ಹೆಚ್ಚು ಕೇಸ್ ದಾಖಲಾಗಿದೆ.

ಮುಂಬೈನ ಅವಳಿ ನಗರ ಪುಣೆ-ಥಾಣೆ
ಮಹಾರಾಷ್ಟ್ರದಲ್ಲಿ ಮುಂಬೈ ಮಾತ್ರವಲ್ಲ ಪುಣೆ ಮತ್ತು ಥಾಣೆ ನಗರಗಳಲ್ಲಿಯೂ ಕೊರೊನಾ ರಣಕೇಕೆ ಹಾಕಿದೆ. ಪುಣೆ ನಗರದಲ್ಲಿ ಒಟ್ಟು 11,281 ಮಂದಿಗೆ ಸೋಂಕು ತಗುಲಿದ್ದರೆ, ಥಾಣೆಯಲ್ಲಿ 16,443 ಕೊರೊನಾ ವೈರಸ್ಗೆ ತುತ್ತಾಗಿದ್ದಾರೆ. ಈ ಪೈಕಿ ಮಹಾರಾಷ್ಟ್ರದಲ್ಲೇ ಮೂರು ನಗರಗಳು ಕೊವಿಡ್ ಹಾಟ್ಸ್ಪಾಟ್ ಆಗಿವೆ.

ಚೆನ್ನೈನಲ್ಲಿ ಕೊರೊನಾ ರಣಕೇಕೆ
ದಕ್ಷಿಣ ಭಾರತ ರಾಜ್ಯಗಳ ಪೈಕಿ ತಮಿಳುನಾಡಿನಲ್ಲಿ ಕೊರೊನಾ ರುದ್ರನರ್ತನ ಮಾಡಿದೆ. ರಾಜ್ಯದಲ್ಲಿ 40 ಸಾವಿರಕ್ಕೂ ಹೆಚ್ಚು ಜನರಿಗೆ ಕೊರೊನಾ ಅಂಟಿಕೊಂಡಿದೆ. ಚೆನ್ನೈ ಮಹಾನಗರದಲ್ಲಿ ಮಾತ್ರ 28924 ಮಂದಿಗೆ ಕೊವಿಡ್ ದೃಢವಾಗಿದೆ. ತಮಿಳುನಾಡಿನ ಒಟ್ಟು ಪ್ರಕರಣಗಳಲ್ಲಿ ಶೇಕಡಾ 70 ರಷ್ಟು ಕೇಸ್ ಚೆನ್ನೈನಲ್ಲಿ ವರದಿಯಾಗಿದೆ.

ಡೇಂಜರ್ಜೋನ್ನಲ್ಲಿ ಅಹಮದಬಾದ್
ಮುಂಬೈ, ಚೆನ್ನೈ ನಗರಗಳಂತೆ ಗುಜರಾತ್ನ ಅಹಮದಬಾದ್ನಲ್ಲಿ ಕೊರೊನಾ ಅಟ್ಟಹಾಸ ಮೆರೆದಿದೆ. ಗುಜರಾತ್ನಲ್ಲಿ ಒಟ್ಟು 22,527 ಮಂದಿಗೆ ಕೊರೊನಾ ತಗುಲಿದೆ. ಅದರಲ್ಲಿ 15,962 ಜನರು ಅಹಮದಬಾದ್ಗೆ ಸೇರಿದವರು. ಗುಜರಾತ್ನಲ್ಲಿ ಒಟ್ಟು 1416 ಜನರು ಪ್ರಾಣ ಕಳೆದುಕೊಂಡಿದ್ದರೆ, ಅದರಲ್ಲಿ 1139 ಮಂದಿ ಅಹಮದಬಾದ್ ಮೂಲವದರು.

ರಾಷ್ಟ್ರರಾಜಧಾನಿಯನ್ನ ಮರೆಯುವಂತಿಲ್ಲ
ದೇಶದ ಐದು ಕೊರೊನಾ ಹಾಟ್ಸ್ಪಾಟ್ ನಗರಗಳ ಜೊತೆ ರಾಷ್ಟ್ರ ರಾಜಧಾನಿ ದೆಹಲಿ ಕೊಡುಗೆ ಮರೆಯುವಂತಿಲ್ಲ. ಭೂ ವಿಸ್ತೀರ್ಣದಲ್ಲಿ ಚಿಕ್ಕದಾಗಿದ್ದರೂ ಕೊರೊನಾ ಕೇಸ್ಗಳ ಪಟ್ಟಿಯಲ್ಲಿ ಟಾಪ್ನಲ್ಲಿದೆ. ದೆಹಲಿಯಲ್ಲಿ ಈವರೆಗೂ 36824 ಮಂದಿಗೆ ಕೊವಿಡ್ ಸೋಂಕು ತಗುಲಿದೆ. 1214 ಜನರು ಪ್ರಾಣ ಕಳೆದುಕೊಂಡಿದ್ದಾರೆ.
-
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Weekly Horoscope March 16-22: ಈ ಯುಗಾದಿಗೆ ಯಾವ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ? ಇಲ್ಲಿದೆ ಈ ವಾರದ ನಿಮ್ಮ ರಾಶಿ ಫಲ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
PUC ವಿದ್ಯಾರ್ಥಿಗಳ ಗಮನಕ್ಕೆ: ದ್ವಿತೀಯ ಪಿಯುಸಿ ಫಲಿತಾಂಶ ಸುಧಾರಣೆಗೆ ಇನ್ಮುಂದೆ 2 ವರ್ಷ ಮಾತ್ರ ಅವಕಾಶ -
National Highway: ಕರ್ನಾಟಕದ ನಾಲ್ಕು ಪ್ರಮುಖ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡ ನಿತಿನ್ ಗಡ್ಕರಿ -
Gold Rate: ಬೆಂಗಳೂರಿನಲ್ಲಿ ಇಳಿಕೆಯಾಯ್ತು ಚಿನ್ನ-ಬೆಳ್ಳಿ ಬೆಲೆ; ಇಲ್ಲಿದೆ ದರ ಪಟ್ಟಿ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ -
BCCI: ಕರ್ನಾಟಕದ ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್, ರೋಜರ್ ಬಿನ್ನಿಗೆ ಬಿಸಿಸಿಐ ಅತ್ಯುನ್ನತ ಪ್ರಶಸ್ತಿ












Click it and Unblock the Notifications