Get Updates
Get notified of breaking news, exclusive insights, and must-see stories!

Tirupati: ಭಕ್ತರು ಬಯಸಿದ ದಿನವೇ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಅವಕಾಶ, ಏನಿದು ಹೊಸ ಸೇವೆ?

ಆಂಧ್ರಪ್ರದೇಶದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ತಿರುಪತಿ ತಿಮ್ಮಪ್ಪನ ಭಕ್ತರಿಗೆ ಭರ್ಜರಿ ಸಿಹಿಸುದ್ದಿಯೊಂದು ಹೊರಬಿದ್ದಿದೆ. ಸದ್ಯ ತಿರುಪತಿ ತಿರುಮಲದಲ್ಲಿ ದೇವರ ದರ್ಶನಕ್ಕೆ ಹರಸಾಹಸ ಪಡುವ ಸ್ಥಿತಿ ಇದೆ. ಒಂದು ತಿಂಗಳ ಹಿಂದೆಯೇ ವಿಶೇಷ ದರ್ಶನಕ್ಕೆ ಟಿಕೆಟ್‌ ಬುಕ್‌ ಮಾಡಿ ಹೋಗುವವರೂ ಇದ್ದಾರೆ. ಕೆಲವರು ಸಾಮಾನ್ಯ ದರ್ಶನಕ್ಕಾಗಿ ದಿನಗಟ್ಟಲೆ ಕಾದು ದೇವರ ದರ್ಶನ ಪಡೆಯುತ್ತಿದ್ದಾರೆ. ಇದೀಗ ಅದೇ ದಿನವೇ ತ್ವರಿತವಾಗಿ ದರ್ಶನಕ್ಕೆ ಅವಕಾಶ ನೀಡುವ ಹೊಸ ಸೇವೆ ಪರಿಚಯಿಸಲು ತಿರುಮಲ ತಿರುಪತಿ ದೇವಸ್ಥಾನಗಳು (ಟಿಟಿಡಿ) ಮುಂದಾಗಿದೆ.

ತಿರುಮಲದಲ್ಲಿರುವ ಶ್ರೀವಾಣಿ ಟ್ರಸ್ಟ್ ಕೌಂಟರ್‌ಗಳಲ್ಲಿ ದಿನಕ್ಕೆ 800 ಟಿಕೆಟ್‌ಗಳು ಮತ್ತು ತಿರುಪತಿ ವಿಮಾನ ನಿಲ್ದಾಣದಲ್ಲಿರುವ ಕೌಂಟರ್‌ಗಳಲ್ಲಿ ವಿಮಾನ ಪ್ರಯಾಣಿಕರಿಗೆ ಮಾತ್ರ 200 ಟಿಕೆಟ್‌ಗಳು ಲಭ್ಯವಿದೆ. ಈ ಸೌಲಭ್ಯವನ್ನು ಪಡೆಯಲು ಬಯಸುವ ಭಕ್ತರು ತಿರುಮಲದಲ್ಲಿರುವ ಶ್ರೀವಾಣಿ ಕರೆಂಟ್ ಬುಕಿಂಗ್ ಕೌಂಟರ್‌ಗಳಿಗೆ ಬೆಳಿಗ್ಗೆ 10 ಗಂಟೆಗೆ ಭೇಟಿ ನೀಡಬಹುದು ಎಂದು ಸೂಚಿಸಲಾಗಿದೆ. ದೇಣಿಗೆ ಮತ್ತು ಟಿಕೆಟ್ ಸಂಗ್ರಹದ ನಂತರ, ಅವರು ಆ ದಿನ ಸಂಜೆ 4:30ರೊಳಗೆ ವೈಕುಂಠಂ ಕ್ಯೂ ಕಾಂಪ್ಲೆಕ್ಸ್‌ನಲ್ಲಿ ದರ್ಶನಕ್ಕೆ ಮುಂದುವರಿಯಬಹುದು.

Tirupati Darshan Update New Service Launched For Same-Day Entry

ಯಾರಿಗೆಲ್ಲ ದರ್ಶನಕ್ಕೆ ಅವಕಾಶ?

ಈ ಮೂಲಕ ತಿರುಮಲದ ವೆಂಕಟೇಶ್ವರ ದೇವಸ್ಥಾನದಲ್ಲಿ ಶ್ರೀವಾಣಿ ಟ್ರಸ್ಟ್ ದಾನಿಗಳಿಗೆ ಅದೇ ದಿನದ ದರ್ಶನಕ್ಕೆ ಅವಕಾಶ ನೀಡುವ ಹೊಸ ಉಪಕ್ರಮವನ್ನು ಪರಿಚಯಿಸಿದೆ. ಶ್ರೀವಾಣಿ ಟ್ರಸ್ಟ್‌ಗೆ ಕೊಡುಗೆ ನೀಡುವ ಭಕ್ತರಿಗೆ ಸುಗಮ ಮತ್ತು ಹೆಚ್ಚು ಅನುಕೂಲಕರ ದರ್ಶನ ಅನುಭವವನ್ನು ಒದಗಿಸುವ ಗುರಿಯನ್ನು ಈ ಕ್ರಮ ಹೊಂದಿದೆ. ಈ ಉಪಕ್ರಮದಡಿಯಲ್ಲಿ ಶ್ರೀವಾಣಿ ಟ್ರಸ್ಟ್‌ಗೆ ₹10,000 ದೇಣಿಗೆ ನೀಡುವ ಮತ್ತು ವಿಐಪಿ ಬ್ರೇಕ್ ದರ್ಶನ ಟಿಕೆಟ್‌ಗಾಗಿ ಹೆಚ್ಚುವರಿಯಾಗಿ ₹500 ಪಾವತಿಸುವ ದಾನಿಗಳು ಅದೇ ದಿನ ಸಂಜೆ 4:30ಕ್ಕೆ ದರ್ಶನದ ಸ್ಲಾಟ್ ಪಡೆಯಬಹುದು.

ಆಗಸ್ಟ್ 1ರಿಂದ ಆಗಸ್ಟ್ 31ರ ನಡುವಿನ ದಿನಾಂಕಗಳಿಗೆ ಈಗಾಗಲೇ ವಿಐಪಿ ಬ್ರೇಕ್ ದರ್ಶನ ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಬುಕ್ ಮಾಡಿರುವ ದಾನಿಗಳು, ದರ್ಶನದ ಸಮಯ ಬೆಳಿಗ್ಗೆ 10 ಗಂಟೆಗೆ ಎನ್ನಲಾಗಿದೆ. ನವೆಂಬರ್ 1ರಿಂದ ಎಲ್ಲ ಶ್ರೀವಾಣಿ ದಾನಿಗಳು ಸಂಜೆ 4:30 ಗಂಟೆಗೆ ಮಾತ್ರ ದರ್ಶನ ಪಡೆಯಬಹುದು. ಈ ಪ್ರಾಯೋಗಿಕ ಉಪಕ್ರಮವು ತಿರುಮಲದಲ್ಲಿ ದರ್ಶನ ಪ್ರಕ್ರಿಯೆಯನ್ನು ಸರಳಗೊಳಿಸುವ ಮತ್ತು ಸುಗಮಗೊಳಿಸುವ ಮೂಲಕ ಶ್ರೀವಾಣಿ ಟ್ರಸ್ಟ್ ದಾನಿಗಳಿಗೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ.

Tirupati Darshan Update New Service Launched For Same-Day Entry

ಟಿಟಿಡಿ ಆಗಸ್ಟ್ 1ರಿಂದ ಪ್ರಾಯೋಗಿಕವಾಗಿ ಈ ಹೊಸ ಉಪಕ್ರಮವನ್ನು ಪರಿಚಯಿಸಿದೆ. ಸುಮಾರು ಆರು ವರ್ಷಗಳ ಹಿಂದೆ ಟಿಟಿಡಿ ಸ್ಥಾಪಿಸಿದ ಶ್ರೀವೆಂಕಟೇಶ್ವರ ಅಲಯಲ ನಿರ್ಮಾಣಂ (ಶ್ರೀವಾಣಿ) ಟ್ರಸ್ಟ್, ಅಭಿವೃದ್ಧಿಯಾಗದ ಪ್ರದೇಶಗಳಲ್ಲಿ ವೆಂಕಟೇಶ್ವರ ದೇವಾಲಯಗಳ ನಿರ್ಮಾಣವನ್ನು ಬೆಂಬಲಿಸುತ್ತದೆ. ಪ್ರಾಚೀನ, ಪುರಾತತ್ತ್ವ ಶಾಸ್ತ್ರದ ಮಹತ್ವವುಳ್ಳ ದೇವಾಲಯಗಳನ್ನು ನವೀಕರಿಸಲು ಮತ್ತು ನಿರ್ವಹಿಸಲು ಇದು ಸಹಾಯ ಮಾಡುತ್ತಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+