ದೂರವಾದ ಪ್ರಿಯಕರನ ಕೊಲ್ಲಲು ಆಕೆ ಸಿದ್ಧಪಡಿಸಿಕೊಂಡಿದ್ದು ನಾಡ ಬಾಂಬ್
ಹರ್ಯಾಣ, ಅಕ್ಟೋಬರ್ 12: ಬಾಂಬ್ ಅಂದರೆ ಭಯೋತ್ಪಾದಕರಷ್ಟೇ ಬಳಸಬೇಕು ಅಂತೇನೂ ಇಲ್ಲ. ಇಲ್ಲೊಂದು ವಿಚಿತ್ರ ಪ್ರಕರಣವಿದೆ. 35 ವರ್ಷದ ಮಹಿಳೆಯೊಬ್ಬಳು ತನ್ನ ಗೆಳೆಯನ ಮೇಲೆ ಬಾಂಬ್ ದಾಳಿ ನಡೆಸುವುದಕ್ಕೆ ಪ್ಲಾನ್ ಮಾಡಿದ್ದಳು. ಇದಕ್ಕಾಗಿ ತನ್ನ ಇನ್ನೊಬ್ಬ ಗೆಳೆಯನ ಸಹಕಾರ-ಸಹಾಯವನ್ನು ಕೇಳಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಆರತಿ-ಆಕೆಯ ಹಳೆ ಗೆಳೆಯ ಪ್ರದೀಪ್ ಬಾಂಬ್ ದಾಳಿ ನಡೆಸಲು ಸ್ಕೆಚ್ ಹಾಕಿದ್ದರು. ಈ ಬಗ್ಗೆ ಗೊತ್ತಾದ ಕೂಡಲೇ ಪೊಲಿಸರು ಇಬ್ಬರನ್ನೂ ಬಂಧಿಸಿದ್ದಾರೆ. ವಿಚಾರಣೆ ವೇಳೆ ಬಾಯಿಬಿಟ್ಟಿರುವ ಈ ಆರೋಪಿಗಳು, ಮೂರು ಬಾಂಬ್ ಸಿದ್ಧಮಾಡಿಕೊಂಡಿದ್ದಿವಿ. ಅದನ್ನು ಗೆಳೆಯರ ಮನೆಯಲ್ಲಿ ಬಚ್ಚಿಟ್ಟಿದ್ವಿ ಎಂದು ಒಪ್ಪಿಕೊಂಡಿದ್ದಾರೆ.[ಆಕೆ ಸತ್ತ ಮೇಲೆ ಗೊತ್ತಾಗಿದ್ದು ಹತ್ತು ವರ್ಷದ ಗೃಹ ಬಂಧನದ ಕ್ರೌರ್ಯ]

ಶಂಷಾಬಾದ್ ಕಾಲೋನಿಯ ಮನೆಯಲ್ಲಿ ಪೊಲೀಸರು ಹುಡುಕಾಟ ನಡೆಸಿದಾಗ ಮೂರು ಬಾಂಬ್ ಪತ್ತೆಯಾಗಿದೆ. ಎಲ್ಲ ನಾಡ ಬಾಂಬುಗಳನ್ನು ನಿಷ್ಕ್ರಿಯಗೊಳಿಸಲಾಗಿದೆ. ಯಾವ ಗೆಳೆಯರ ಮನೆಯಲ್ಲಿ ಈ ಬಾಂಬುಗಳನ್ನು ಬಚ್ಚಿಟ್ಟಿದ್ದರೋ ಅವರಿಗೆ ಈ ಇಬ್ಬರ ಪ್ಲಾನ್ ಬಗ್ಗೆ ಗೊತ್ತಿರಲಿಲ್ಲ ಎಂದು ಪೊಲಿಸರು ತಿಳಿಸಿದ್ದಾರೆ.
ವಿಚಾರಣೆ ವೇಳೆ ತನ್ನ ವೈರತ್ವದ ಬಗ್ಗೆ ಆರತಿ ಬಾಯಿಬಿಟ್ಟಿದ್ದಾಳೆ. ಆಕೆ ತನ್ನ ಹಳೆ ಪ್ರಿಯತಮನ ವಿರುದ್ಧ ದ್ವೇಷ ತೀರಿಸಿಕೊಳ್ಳಲು ಹವಣಿಸಿದ್ದಳು. ಈಕೆಯ ಜತೆಗೆ ಇರುವುದಕ್ಕೋಸ್ಕರ ತನ್ನ ಹೆಂಡತಿ-ಮಕ್ಕಳನ್ನು ಆತ ಬಿಟ್ಟಿದ್ದ. ಆರು ವರ್ಷಗಳು ಜತೆಗಿದ್ದು, ಅ ನಂತರ ತನ್ನ ಹೆಂಡತಿ-ಮಕ್ಕಳ ಜತೆಗೆ ಇರುವುದಕ್ಕೆ ನಿರ್ಧರಿಸಿದ್ದ. ಆ ಕಾರಣಕ್ಕೆ ಬಾಂಬ್ ಹಾಕಿ, ಆತನನ್ನು ಕೊಲ್ಲಲು ಯೋಚಿಸಿದ್ದರು.[ಮಂಡ್ಯದಲ್ಲಿ ಅಣ್ಣನಿಂದ ಸಹೋದರಿಯ ಪ್ರಿಯತಮ ಕೊಲೆ]
ಪತ್ರಿಕೆಯೊಂದರ ವರದಿ ಪ್ರಕಾರ ಆರತಿ ಹಾಗೂ ಪ್ರದೀಪ್ ಸೇರಿ ಅಕ್ಟೋಬರ್ 3ರಂದು ಮತ್ತೊಬ್ಬನನ್ನು ಕೊಂದಿದ್ದಾರೆ. ಆತನ ಹೆಸರು ಬಾಬು ಲಾಲ್. ಆರತಿಯ ಪ್ರಿಯಕರ ಹಾಗೂ ಆತನ ಹೆಂಡತಿ ಮತ್ತೆ ಒಂದಾಗಲು ಬಾಬು ಲಾಲ್ ನೇ ಕಾರಣ ಎಂಬ ಸಿಟ್ಟಿತ್ತು. ಆ ಕಾರಣಕ್ಕೆ ಕತ್ತು ಸೀಳಿ ಆತನನ್ನು ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೂರು ಬಾಂಬುಗಳನ್ನು ಒಟ್ಟು ಮಾಡುವುದಕ್ಕೆ ಅವರಿಗೆ ವಸ್ತುಗಳು ಎಲ್ಲಿ ದೊರೆತವು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಪ್ರದೀಪ್ ನ ಸ್ನೇಹಿತನೊಬ್ಬ ಪರವಾನಗಿ ಹೊಂದಿರುವ ಪಟಾಕಿ ತಯಾರಕ ಎಂಬುದು ಗೊತ್ತಾಗಿದೆ. ನಾಡ ಬಾಂಬ್ ಹೇಗೆ ಮಾಡುವುದು ಎಂದು ಪ್ರದೀಪ್ ಕಲಿತಿದ್ದಾನೆ. ಆದರೆ ಬಾಂಬ್ ತಯಾರಿಕೆಗೆ ವಸ್ತುಗಳು ಹೇಗೆ ದೊರೆತವು ಎಂದು ಗೊತ್ತಾಗಿಲ್ಲ.
-
Hotel Gas Bill: ಊಟದ ನಂತರ ಹೋಟೆಲ್ ಬಿಲ್ ನೋಡಿ ದಂಗಾದ ಗ್ರಾಹಕ: ₹1,110 ಬಿಲ್ ಜೊತೆ ₹100 'ಗ್ಯಾಸ್ ಚಾರ್ಜ್'!: ಭಾರೀ ವೈರಲ್ -
Rain Alert: ಕರ್ನಾಟಕದ ಈ 9 ಜಿಲ್ಲೆಗಳಿಗೆ ಮುಂದಿನ 2 ದಿನ ವ್ಯಾಪಕ ಆಲಿಕಲ್ಲು ಮಳೆ ಎಚ್ಚರಿಕೆ -
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
ರಾಮಚಂದ್ರ ರಾವ್ ಪ್ರಕರಣ: 'ಎಐ' ಅಲ್ಲ ಅಸಲಿ ವಿಡಿಯೋ; ಎಫ್ಎಸ್ಎಲ್ ವರದಿಯಲ್ಲಿ ಬಯಲಾಯ್ತು ಸತ್ಯ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Anil Kumble: ವಿರಾಟ್ ಕೊಹ್ಲಿ-ಬೆಂಗಳೂರು ನಡುವಿನ ಅವಿನಾಭಾವ ಸಂಬಂಧದ ಬಗ್ಗೆ ಕನ್ನಡಿಗ ಅನಿಲ್ ಕುಂಬ್ಳೆ ಮನದಾಳದ ಮಾತು -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
March 19 Horoscope: ಈ ರಾಶಿಯವರಿಗೆ ಶುಭಸುದ್ದಿ, ಇತರರಿಗೆ ಎಚ್ಚರಿಕೆ












Click it and Unblock the Notifications