ಹೋಗಿ, ಕೆಲಸ ಮುಗಿಸಿ, ವಾಪಸ್ ಬನ್ನಿ: ತಲೆ ಎಣಿಸ್ತಾ ನಿಲ್ಲಬೇಕಿಲ್ಲ...
ಬೆಂಗಳೂರು, ಅಕ್ಟೋಬರ್ 9: ಅವರು ಹೋದರು, ನಾಶಪಡಿಸಿದರು ಮತ್ತು ವಾಪಸ್ ಬಂದರು. ವಿಶೇಷ ಪಡೆಯ ಸರ್ಜಿಕಲ್ ಸ್ಟ್ರೈಕ್ ನ ಭಾರತೀಯ ಸೇನೆ ಸಾರಾಂಶದ ರೀತಿ ಹೇಳುವುದು ಹೀಗೆ.
ಗುರಿಯನ್ನು ನಿಶ್ಚಯಿಸಿಕೊಂಡ ಮೇಲೆ, ಗಡಿನಿಯಂತ್ರಣ ರೇಖೆಯನ್ನು ದಾಟಿ ಆ ಗುರಿಯನ್ನು ಮುಗಿಸುವುದಷ್ಟೇ ಯೋಜನೆ. ಯಾವುದೇ ಭಯೋತ್ಪಾದಕರನ್ನು ಹಿಡಿದು ತರುವ ಅಗತ್ಯ ಇಲ್ಲ ಅಂತ ಅಧಿಕಾರಿಗಳು ಸ್ಪಷ್ಟವಾಗಿ ಹೇಳಿದ್ದರು.
ಐದು ಕಿಲೋಮೀಟರ್ ಫಾಸಲೆಯೊಳಗಿರುವ ಉಗ್ರರ ನೆಲೆಗಳನ್ನು ತಲುಪುವುದು ಸುಲಭದ ಸಂಗತಿಯಾಗಿರಲಿಲ್ಲ. ಅದಕ್ಕಾಗಿಯೇ ಸೇನೆ ಥರ್ಮಲ್ ಇಮೇಜರ್ಸ್ ನ ಬಳಸಿತ್ತು. ಜತೆಗೆ ಒಂದೇ ಒಂದು ತಪ್ಪಾಗದ ರೀತಿಯಲ್ಲಿ ಯೋಜನೆ ಸಿದ್ಧಗೊಂಡಾಗಿತ್ತು. ಕಾರ್ಯಾಚರಣೆ ಕ್ಷಿಪ್ರವಾಗಿರಬೇಕು. ಅಂದುಕೊಂಡ ಸಮಯಕ್ಕೆ ಮುಗಿಯಬೇಕು. ಒಂದು ಕ್ಷಣ ಕೂಡ ವ್ಯರ್ಥವಾಗಬಾರದು ಎಂಬ ಸೂಚನೆಯಿತ್ತು.[ಸರ್ಜಿಕಲ್ ಸ್ಟ್ರೈಕ್ ನಡೆದಿದ್ದು ನಿಜ : ಪಾಕ್ ಅಧಿಕಾರಿ]

ಗುರಿಯಾಗಿ ಇರಿಸಿಕೊಂಡಿದ್ದು ಏಳು ನೆಲೆಗಳನ್ನು. ಈ ಎಲ್ಲವೂ ಐದು ಕಿಲೋಮೀಟರ್ ವ್ಯಾಪ್ತಿಯಲ್ಲಿದ್ದವು. ಗುಂಪುಗಳಾಗಿ ಬೇರ್ಪಡೆಯಾದ ತಂಡಗಳು ಏಕಕಾಲಕ್ಕೆ ದಾಳಿ ಮಾಡಿದವು. ಪ್ರತಿ ತಂಡಕ್ಕೆ ಉಗ್ರರ ನೆಲೆ ನಾಶ ಮಾಡುವುದಕ್ಕೆ ಬೇಕಾಗಿದ್ದು ಹದಿನೈದು ನಿಮಿಷಕ್ಕಿಂತ ಕಡಿಮೆ ಕಾಲ. ಲಿಪಾ, ಖೆಲ್, ಭಿಂಬರ್, ಅತ್ಮುಖಂ ಮತ್ತ ತತ್ತಾಪಾನಿಯಲ್ಲಿ ಇದ್ದ ನೆಲೆಗಳು ಛಿದ್ರವಾದವು.
ಗುರಿ ಪೂರ್ತಿ ಅದ ತಕ್ಷಣವೇ ವಾಪಸ್ ಬನ್ನಿ ಎಂಬ ಸೂಚನೆ ಇತ್ತು ವಿಶೇಷ ಪಡೆಗೆ. ಅದ್ದರಿಂದ ದಾಳಿ ವೇಳೆ ಎಷ್ಟು ಉಗ್ರರನ್ನು ಕೊಲ್ಲಲಾಯಿತು ಎಂಬ ಬಗ್ಗೆ ನಿಖರತೆ ಇಲ್ಲ. ಇನ್ನು ಮಾಧ್ಯಮಗಳಲ್ಲಿ ಬಂದ ಸಂಖ್ಯೆ ಅಂದಾಜಿನದು ಅಷ್ಟೇ. ಪ್ರತಿ ನೆಲೆಯಲ್ಲಿ ತಲಾ ಐವರು ಉಗ್ರರು ಇರಬಹುದು. ಇದು ನಮಗೆ ಸಿಕ್ಕ ಅಂದಾಜಿನ ಲೆಕ್ಕ ಎಂದು ಅಧಿಕಾರಿಗಳು ಕೂಡ ಹೇಳಿದ್ದಾರೆ.[ಸರ್ಜಿಕಲ್ ಸ್ಟ್ರೈಕ್ ಬರೀ ಕಥೆ, ಸುಳ್ಳಿನ ಅಂತೆ..ಕಂತೆ: ಕಾಂಗ್ರೆಸ್ ಮುಖಂಡ]
ಉರಿ ಉಗ್ರರ ದಾಳಿಯಲ್ಲಿ ಭಾರತೀಯ ಸೈನಿಕರು 19 ಮಂದಿ ಹುತಾತ್ಮರಾಗಿದ್ದಾರೆ. ಅದು ವಿಶೇಷ ಪಡೆಯ ಮನಸಿನಲ್ಲಿದ್ದ ವಿಷಯ. ಅದಕ್ಕೆ ಪ್ರತೀಕಾರ ಹೇಳಬೇಕು. ಈ ವಿಚಾರದಲ್ಲಿ ಭಾವನಾತ್ಮಕರಾಗಬಾರದು. ಗುರಿ ಪೂರ್ತಿ ಮಾಡಬೇಕಷ್ಟೇ. ಇಷ್ಟೇ ಆಲೋಚನೆ ಇದ್ದದ್ದು. ನಮಗೆ ಯಾರಿಗೂ ಗಾಯ ಕೂಡ ಆಗಲ್ಲ. ಈ ಕಾರ್ಯಾಚರಣೆ ಯಶಸ್ವಿಯಾಗುತ್ತೆ-ಇದು ಆ ಪಡೆ ಹೇಳಿದ ಮಾತು. ಅದರಂತೆಯೇ ನಡೆಯಿತು.
ಇಡೀ ಕಾರ್ಯಾಚರಣೆ ಮುಗಿದ ಬಳಿಕ ದೆಹಲಿಯ ಸೌತ್ ಬ್ಲಾಕ್ ನಲ್ಲಿರುವ ವಾರ್ ರೂಮ್ ಗೆ ವಿಶೇಷ ಪಡೆ ತಲುಪಿಸಿದ ಸಂದೇಶ ಏನು ಗೊತ್ತಾ? "ಗುರಿ ಪೂರ್ತಿಯಾಗಿದೆ: ಒಂದು ತರಚು ಗಾಯ ಕೂಡ ಆಗದೆ ವಾಪಸ್ ಬಂದಿದ್ದೀವಿ'.
-
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger












Click it and Unblock the Notifications