ಕಳ್ಳತನ ಪ್ರಕರಣ: ಕೋರ್ಟ್ಗೆ ಕೇಂದ್ರ ಬಿಜೆಪಿ ಸಚಿವ ಶರಣಾಗತಿ
ಕೋಲ್ಕತ್ತಾ, ಜನವರಿ 10: 2009ರಲ್ಲಿ ಅಲಿಪುರ್ದೌರ್ನ ಎರಡು ಆಭರಣ ಮಳಿಗೆಗಳಲ್ಲಿ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಪಶ್ಚಿಮ ಬಂಗಾಳದ ಅಲಿಪುರ್ದವಾರ್ ಜಿಲ್ಲೆಯ ನ್ಯಾಯಾಲಯಕ್ಕೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿಸಿತ್ ಪ್ರಮಾಣಿಕ್ ಅವರು ಮಂಗಳವಾರ ಶರಣಾಗಿದ್ದಾರೆ.
ಕಳೆದ ವರ್ಷ 2022 ನವೆಂಬರ್ನಲ್ಲಿ ಅಲಿಪುರ್ದೂರ್ ಜಿಲ್ಲಾ ಮೂರನೇ ನ್ಯಾಯಾಲಯವು ಈ ಸಂಬಂಧ ಕೂಚ್ ಬೆಹಾರ್ನ ಬಿಜೆಪಿ ಸಂಸದ ಪ್ರಮಾಣಿಕ್ ವಿರುದ್ಧ ಬಂಧನ ವಾರಂಟ್ ಹೊರಡಿಸಿತ್ತು. ಅದರಂತೆ ಪ್ರಮಾಣಿಕ್ ಜಾಮೀನು ಅರ್ಜಿಯೊಂದಿಗೆ ಕಲ್ಕತ್ತಾ ಹೈಕೋರ್ಟ್ಗೆ ಮೊರೆ ಹೋಗಿದ್ದರು.
ಈ ವಿಷಯವನ್ನು ವಿವರವಾಗಿ ಆಲಿಸಿದ ಕಲ್ಕತ್ತಾ ಹೈಕೋರ್ಟ್, ಜನವರಿ 12ರೊಳಗೆ ಅಲಿಪುರ್ದೂರ್ ಜಿಲ್ಲೆಯ ಮೂರನೇ ನ್ಯಾಯಾಲಯಕ್ಕೆ ಭೌತಿಕವಾಗಿ ಹಾಜರಾಗುವಂತೆ ಕೇಂದ್ರ ಸಚಿವರಿಗೆ ಸೂಚಿಸಿತ್ತು. ಹೈಕೋರ್ಟ್ ಆದೇಶದಂತೆ ಪ್ರಾಮಾಣಿಕ್ ಅವರು ಜಿಲ್ಲಾ ನ್ಯಾಯಾಲಯಕ್ಕೆ ಶರಣಾದರು. ಅವರು ಸುಮಾರು 45 ನಿಮಿಷಗಳ ಕಾಲ ನ್ಯಾಯಾಲಯದಲ್ಲಿ ಇದ್ದರು. ಕಲ್ಕತ್ತಾ ಹೈಕೋರ್ಟ್ ಆದೇಶದ ಪ್ರಕಾರ ಈ ಪ್ರಕರಣದ ಮುಂದಿನ ವಿಚಾರಣೆಗೆ ಅವರು ನ್ಯಾಯಾಲಯದಲ್ಲಿ ದೈಹಿಕವಾಗಿ ಹಾಜರಾಗಬೇಕಾಗಿಲ್ಲ ಮತ್ತು ಬದಲಿಗೆ ಅವರ ವಕೀಲರಿಂದ ಪ್ರತಿನಿಧಿಸಬೇಕಾಗುತ್ತದೆ ಎಂದು ತಿಳಿಸಲಾಗಿದೆ.

ನ್ಯಾಯಾಲಯದಿಂದ ಹೊರಬಂದ ಅವರು, ಪ್ರಸ್ತುತ ರಾಜ್ಯ ಸರ್ಕಾರದಿಂದ ರಾಜ್ಯದಲ್ಲಿ ಪ್ರತಿಪಕ್ಷ ನಾಯಕರನ್ನು ನಿರಂತರವಾಗಿ ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸಲಾಗುತ್ತಿದೆ. ಇದು ನನ್ನನ್ನು ಬಂಧಿಸುವ ರಾಜಕೀಯ ಷಡ್ಯಂತ್ರ ಎಂದು ತಿಳಿಸಿದ್ದಾರೆ. ಆರಂಭದಲ್ಲಿ ಈ ವಿಷಯವನ್ನು ಉತ್ತರ 24 ಪರಗಣ ಜಿಲ್ಲೆಯ ಬರಾಸತ್ನಲ್ಲಿ ನ್ಯಾಯಾಲಯವು ವಿಚಾರಣೆ ನಡೆಸಿತ್ತ. ಆದರೆ ನಂತರ ಈ ಪ್ರಕರಣ ಅಲಿಪುರ್ದೂರ್ ನ್ಯಾಯಾಂಗ ಮೂರನೇ ನ್ಯಾಯಾಲಯದ ಮುಂದೆ ಬಂದಿತು.

ಸಚಿವ ಪ್ರಮಾಣಿಕ್ 2019ರಲ್ಲಿ ಸಂಸದರಾದ ನಂತರ ಪ್ರಕರಣವನ್ನು ಬರಾಸತ್ನಲ್ಲಿರುವ ಸಂಸದ/ಶಾಸಕರ ವಿಶೇಷ ನ್ಯಾಯಾಲಯಕ್ಕೆ ವರ್ಗಾಯಿಸಲಾಯಿತು. ಬಳಿಕ ಕಲ್ಕತ್ತಾ ಹೈಕೋರ್ಟ್ನ ನಿರ್ದೇಶನದ ನಂತರ ಮತ್ತೊಮ್ಮೆ ಪ್ರಕರಣವನ್ನು ಅಲಿಪುರ್ದೂರ್ ನ್ಯಾಯಾಂಗಕ್ಕೆ ವರ್ಗಾಯಿಸಲಾಯಿತು. ಪ್ರಮಾಣಿಕ್ ಅವರು 2021 ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಕೂಚ್ ಬೆಹಾರ್ ಜಿಲ್ಲೆಯ ದಿನ್ಹತಾ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾದವರು. ಅಲ್ಲಿ ಬಿಜೆಪಿ ಸೋತಿದ್ದರಿಂದ, ಪ್ರಮಾಣಿಕ್ ತಮ್ಮ ಲೋಕಸಭಾ ಸ್ಥಾನವನ್ನು ಉಳಿಸಿಕೊಳ್ಳಲು ನಿರ್ಧರಿಸಿ ವಿಧಾನಸಭೆಗೆ ರಾಜೀನಾಮೆ ನೀಡಿದರು.












Click it and Unblock the Notifications