ಇಂದು ವಿಶ್ವ ಹೆಡ್ ಇಂಜ್ಯುರಿ ಡೇ: ನಿಮ್ಮ ತಲೆ, ನಿಮ್ಮ ಹೊಣೆ!
ಬೆಂಗಳೂರು, ಮಾರ್ಚ್ 20: ಅಪಘಾತ ಪ್ರಕರಣಗಳಂತೂ ದಿನ ದಿನವೂ ವರದಿಯಾಗುತ್ತಲೇ ಇರುತ್ತದೆ. ಸಂಚಾರಿ ನಿಯಮಗಳನ್ನು ಪಾಲಿಸುವಂತೆ ಪರಿ ಪರಿಯಾಗಿ ಕೇಳಿಕೊಂಡರೂ ಅದರ ಉಲ್ಲಂಘನೆಯಾಗುತ್ತಲೇ ಇರುತ್ತದೆ. ಅಪಘಾತಗಳು ಸಂಭವಿಸಿದಾಗ ದೇಹದ ಯಾವುದೇ ಭಾಗಕ್ಕೆ ಗಾಯವಾದರೂ ಅದಕ್ಕೆ ಸೂಕ್ತ ಚಿಕಿತ್ಸೆ ನೀಡಬಹುದು. ಆದರೆ ತಲೆಗೆ ಏಟುಬಿದ್ದರೆ ಮನುಷ್ಯ ಬದುಕುವುದು ಕಷ್ಟ. ಇಡೀ ದೇಹದ ಕ್ರಿಯೆಯನ್ನೂ ಮೆದುಳಿನಲ್ಲಿರುವ ನರಗಳು ನಿಯಂತ್ರಿಸುವುದರಿಂದ ಅಲ್ಲಿ ಏಟು ಬಿದ್ದರೆ ಇಡೀ ದೇಹವೂ ನಿಶ್ಚಲವಾಗುತ್ತದೆ.
ಕೇವಲ ಅಪಘಾತ ಪ್ರಕರಣಗಳಲ್ಲಿ ಎಂದಷ್ಟೇ ಅಲ್ಲ, ಇನ್ನಿತರ ಸಂದರ್ಭಗಳಲ್ಲೂ ತಲೆಗೆ ಏಟು ಬಿದ್ದರೆ ತಕ್ಷಣವೇ ವೈದ್ಯರನ್ನೊಮ್ಮೆ ಕಾಣುವುದು ಸೂಕ್ತ. ಆದರೆ ಹಲವರಿಗೆ ಈ ಬಗ್ಗೆ ಅರಿವಿಲ್ಲ. ಆದ್ದರಿಂದಲೇ ಈ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಪ್ರತಿವರ್ಷ ಮಾರ್ಚ್ 20 ಅನ್ನು ವಿಶ್ವ ಹೆಡ್ ಇಂಜ್ಯುರಿ ಡೇ(World Head Injury Awareness Day)ಯನ್ನಾಗಿ ಆಚರಿಸಲಾಗುತ್ತದೆ.
Today is world head injury awareness day.
— R Hithendra, IPS. (@AddlCPTraffic) March 19, 2018
Please pay attention to safety of the head on all occasions.
Best wishes to all organisations who have planned programs on this day.
ಅಪಘಾತದ ಸಂದರ್ಭದಲ್ಲಿ ತಲೆಗೆ ಅಪಘಾತವಾಗದಂತೆ ತಪ್ಪಿಸಲು ಹೆಲ್ಮೇಟ್ ಧರಿಸುವುದನ್ನು ಈಗಾಗಲೇ ಹಲವೆಡೆ ಕಡ್ಡಾಯಗೊಳಿಸಲಾಗಿದೆ. ವಿಶ್ವ ಹೆಡ್ ಇಂಜ್ಯೂರಿ ಡೆ ಸಲುವಾಗಿ ಟ್ವೀಟ್ ಮಾಡಿರುವ ಬೆಂಗಳೂರು ನಗರ ಟ್ರಾಫಿಕ್ ವಿಭಾಗದ ಹೆಚ್ಚುವರಿ ಆಯುಕ್ತ ಆರ್.ಹಿತೇಂದ್ರ "ಇಂದು ವಿಶ್ವ ಹೆಡ್ ಇಂಜ್ಯೂರಿ ಡೆ. ತಲೆಯ ಕಾಳಜಿಗೆ ಹೆಚ್ಚಿನ ಗಮನ ನೀಡಿ" ಎಂದಿದ್ದಾರೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಪ್ರತಿವರ್ಷ ಶೇ.5 ರಷ್ಟು ಜನ ಅಪಘಾತ ಪ್ರಕರಣಗಳಿಂದಾಗಿ ಮೆದುಳಿನ ಗಾಯಕ್ಕೆ ತುತ್ತಾಗುತ್ತಾರೆ ಎಂದು ವರದಿಯೊಂದು ಹೇಳುತ್ತದೆ. ಅದಕ್ಕೆಂದೇ ಕಾರು ಚಲಾಯಿಸುವಾಗ ಸೀಟ್ ಬೆಲ್ಟ್ ಅನ್ನು, ದ್ವಿಚಕ್ರ ವಾಹನ ಚಲಾಯಿಸುವಾಗ ಹೆಲ್ಮೇಟ್ ಅನ್ನೂ ಮರೆಯದೇ ಬಳಸಿ ಎಂಬುದು ಕಾಳಜಿಯ ನುಡಿ.
-
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್












Click it and Unblock the Notifications