ಇಂದು ಮತ್ತು ನಾಳೆ ಪರ್ಸೀಡ್ ಉಲ್ಕಾಪಾತ: ಆಕಾಶದ ಈ ವಿಸ್ಮಯ ವೀಕ್ಷಣೆ ಹೇಗೆ?
ಸದಾ ವಿಸ್ಮಯಕಾರಿ ಸಂಗತಿಗಳನ್ನು ತೋರಿಸುವ ಆಕಾಶ, ಮತ್ತೊಂದು ಅಪರೂಪದ ವಿದ್ಯಮಾನವನ್ನು ಪ್ರದರ್ಶಿಸಲಿದೆ. ಕಳೆದ ತಿಂಗಳು ನಮ್ಮ ಸೌರ ವ್ಯವಸ್ಥೆಯಲ್ಲಿ ನಿಯೋವೈಸ್ ಧೂಮಕೇತು ಕಂಡು ಖಗೋಳಪ್ರಿಯರು ರೋಮಾಂಚನಗೊಂಡಿದ್ದರು. ಆಕಾಶದ ವಿವಿಧ ನಕ್ಷತ್ರ, ಧೂಮಕೇತು, ಕಾಯಗಳ ಕುರಿತು ಆಸಕ್ತಿಯುಳ್ಳವರಿಗೆ ಮತ್ತೊಂದು ಖುಷಿಯ ಸಂಗತಿ ದೊರಕಿದೆ.
ಮೋಡದ ನಡುವೆಯೂ ಆಕಾಶದ ಬೆರಗು ಉಲ್ಕಾಪಾತದ ಅದ್ಭುತ ನೋಟವನ್ನು ಕಣ್ತುಂಬಿಕೊಳ್ಳುವ ಅವಕಾಶ ಬಂದಿದೆ. ಇದು ಈ ವರ್ಷದ ಅತ್ಯಂತ ಪ್ರಕಾಶಮಾನ ಉಲ್ಕಾಪಾತವಾಗಿದ್ದು, ಭಾರತದಲ್ಲಿಯೂ ಗೋಚರಿಸಲಿದೆ. ಆದರೆ ಭಾರತದ ಎಲ್ಲ ಭಾಗಗಳಲ್ಲಿಯೂ ಇದು ಕಾಣಿಸಲಿದೆ ಎನ್ನುವಂತಿಲ್ಲ. ಕೆಲವು ಪ್ರದೇಶಗಳಲ್ಲಿ ಅರ್ಧಚಂದ್ರನ ಬೆಳಕು ಹಾಗೂ ಇನ್ನುಕೆಲವೆಡೆ ಮುಂಗಾರು ಮೋಡಗಳು ಈ ವಿಹಂಗಮ ದೃಶ್ಯವನ್ನು ಸವಿಯಲು ಅಡ್ಡಿಪಡಿಸುವ ಸಾಧ್ಯತೆ ಇದೆ. ಮುಂದೆ ಓದಿ...

ರಾಶಿ ರಾಶಿ ಉಲ್ಕೆಗಳು
ಪೆರ್ಸೀಡ್ ಉಲ್ಕಾಪಾತವು ಮಂಗಳವಾರ ಮತ್ತು ಬುಧವಾರ ಎರಡೂ ದಿನ ಕಾಣಿಸಲಿದೆ. ಸ್ವಿಫ್ಟ್-ಟಟ್ಲ್ ಧೂಮಕೇತುವಿನಿಂದ ದೃಷ್ಟಿಯಾದ ಅವಶೇಷಗಳಿಂದಾಗಿ ಈ ಉಲ್ಕಾಪಾತ ಉಂಟಾಗುತ್ತಿದೆ. ಗಂಟೆಗೆ 60 ಉಲ್ಕೆಗಳು ಬೀಳಲಿದ್ದು, ನಂತರ ಅದು 16-20 ಉಲ್ಕೆಗಳಿಗೆ ಇಳಿಯಲಿದೆ. ಚಂದ್ರನ ಬೆಳಕಿನ ಪ್ರಕಾಶ ಈ ರಮಣೀಯ ಸನ್ನಿವೇಶ ವೀಕ್ಷಣೆಗೆ ಅಡ್ಡಿಯಾದರೂ, ಪ್ರತಿ ಎರಡು ನಿಮಿಷಕ್ಕೊಮ್ಮೆ ಒಂದು ಉಲ್ಕೆ ಸಿಡಿಯುವಂತೆ ಕಾಣಿಸಲಿದೆ.

ಭಾರತದಲ್ಲಿ ವೀಕ್ಷಣೆ ಹೇಗೆ?
ಪರ್ಸೀಡ್ ಉಲ್ಕಾಪಾತವು ಮಂಗಳವಾರ (ಆಗಸ್ಟ್ 11) ಅಧಿಕವಾಗಿದ್ದರೂ ಬುಧವಾರವೂ ರಾತ್ರಿ ಗೋಚರಿಸಲಿದೆ. ಕೆಲವು ದೇಶಗಳಲ್ಲಿ ಗುರುವಾರ ಕೂಡ ಕಾಣಿಸಲಿದೆ. ಆದರೆ ಭಾರತದಲ್ಲಿ ಮಂಗಳವಾರ ಮತ್ತು ಬುಧವಾರ ಕಾಣಿಸಲಿದೆ. ರಾತ್ರಿ 2 ಗಂಟೆಯಿಂದ ನಸುಕಿನವರೆಗೂ ಉಲ್ಕಾಪಾತದ ದರ್ಶನ ಹೆಚ್ಚಾಗಿರಲಿದೆ.

ಬರಿಗಣ್ಣಿನಿಂದ ನೋಡಬಹುದು
ಅಂದಹಾಗೆ, ಉಲ್ಕಾಪಾತದ ಈ ಆಕರ್ಷಕ ಅನುಭವ ಪಡೆದುಕೊಳ್ಳಲು ಯಾವುದೇ ಸಲಕರಣೆಗಳ ಅಗತ್ಯವಿಲ್ಲ. ಬರಿಗಣ್ಣಿನಿಂದ ನೋಡಬಹುದಾಗಿದೆ. ಆದರೆ ಅದಕ್ಕೆ ಮಾಲಿನ್ಯ, ಅಧಿಕ ಬೆಳಕು ಇಲ್ಲದ ಜಾಗವನ್ನು ನೋವು ನೋಡಿಕೊಳ್ಳಬೇಕು, ಮೋಡವಿಲ್ಲದಿದ್ದರೆ ಯಾವ ಸಾಧನವಿಲ್ಲದೆ ಬರಿಗಣ್ಣಿನಿಂದ ನೋಡಲು ಸಾಧ್ಯ.

ನೇರ ಪ್ರಸಾರವೂ ಇದೆ
ಒಂದು ವೇಳೆ ದಟ್ಟ ಮೋಡ ಆವರಿಸಿರುವ ಕಾರಣ ನೇರವಾಗಿ ಆಕಾಶ ದಿಟ್ಟಿಸಿ ಉಲ್ಕಾಪಾತದ ಸುಂದರ ದೃಶ್ಯ ತುಂಬಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದರೆ ಕೂಡ ನಿರಾಶೆ ಬೇಡ. ಉಲ್ಕಾಪಾತ ವೀಕ್ಷಣೆಗೆಂದೇ ನಾಸಾ ಫೇಸ್ಬುಕ್ನಲ್ಲಿ ಲೈವ್ ವಿಡಿಯೋ ಪ್ರಸಾರ ಮಾಡಲಿದ್ದು, ಅದರಲ್ಲಿಯೂ ನೋಡಬಹುದು.
-
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ












Click it and Unblock the Notifications