ಸೈನ್ಯಕ್ಕೆ ಮತ್ತಷ್ಟು ಶಕ್ತಿ ತುಂಬಲಿರುವ ಬೆಂಗಳೂರ ಕ್ಷಿಪಣಿ
ಬೆಂಗಳೂರು, ಅ. 16: ಬೆಂಗಳೂರಿನಲ್ಲಿಯೇ ಸಂಪೂರ್ಣವಾಗಿ ತಯಾರಾದ ಕ್ಷಿಪಣಿ ಪರೀಕ್ಷಾರ್ಥ ಹಾರಾಟಕ್ಕೆ ಸಿದ್ಧವಾಗಿದೆ. ನಿರ್ಭಯ್ ಹೆಸರಿನ ಕ್ವಿಪಣಿ ಪರೀಕ್ಷೆಗೆ ಸಿದ್ಧವಾಗಿದ್ದು ಭಾರತದ ಸೈನಿಕ ಶಕ್ತಿ ಮತ್ತಷ್ಟು ಹೆಚ್ಚಲಿದೆ. ಒರಿಸ್ಸಾದ ಚಂಡಿಪುರದ ಕೇಂದ್ರದಿಂದ ಪರೀಕ್ಷಾರ್ಥ ಹಾರಾಟ ನಡೆಯಲಿದೆ.
ಅಕ್ಟೋಬರ್ 17 ರಂದು ಕ್ಷಿಪಣಿ ಪರೀಕ್ಷಾರ್ಥ ಹಾರಾಟ ನಡೆಸಲಿದೆ. ಈ ಮೊದಲು ನಿರ್ಭಯ್ ಕ್ಷಿಪಣಿಯನ್ನು ಮಾರ್ಚ್ 12, 2013ರಂದು ತಾಂತ್ರಿಕ ಪರೀಕ್ಷೆ ಮಾಡಲಾಗಿತ್ತು. ಸುಮಾರು ಎಂಟು ನೂರರಿಂದ ಸಾವಿರ ಕಿಮೀ ಸಾಮರ್ಥ್ಯದ ಕ್ಷಿಪಣಿ ಬೆಂಗಳೂರಿನ ಸಿ.ವಿ.ರಾಮನ್ ನಗರದ ರಕ್ಷಣಾ ಇಲಾಖೆ ಘಟಕದಲ್ಲಿ ತಯಾರಾಗಿರುವುದು ವಿಶೇಷ.[ಚಿತ್ರಗಳಲ್ಲಿː ಕಣ್ಮನ ಸೆಳೆದ ಸೈನಿಕರ ತಾಲೀಮು]

ಅಲ್ಲದೇ ಕ್ಷಿಪಣಿ ಹಾರಾಟ ಸಂದರ್ಭ ಚಂಡಿಪುರದಲ್ಲಿ ಮ್ಯಾರಾಥಾನ್ ಓಟವನ್ನು ಆಯೋಜಿಸಲಾಗಿದೆ ಎಂದು ಪ್ಲೈಟ್ ಅಥೋರೈಜೇಶನ್ ಬೋರ್ಡ್(ಎಫ್ಎಬಿ) ತಿಳಿಸಿದೆ.
ಕ್ಷಿಪಣಿಯನ್ನು ಬೆಳಗ್ಗೆ ಸರಿಯಾಗಿ 10 ಗಂಟೆಗೆ ಹಾರಿಸಲಾಗುವುದು. ವಾತಾವರಣದ ಪರಿಸ್ಥಿತಿ ನೋಡಿಕೊಂಡು ಸಮಯದಲ್ಲಿ ಕೊಂಚ ಬದಲಾವಣೆಯಾಗಬಹುದು ಎಂದು ಕ್ಷಿಪಣಿ ತಂತ್ರಜ್ಞಾನದ ಹಿರಿಯ ಅಧಿಕಾರಿಯೊಬ್ಬರು ಒನ್ ಇಂಡಿಯಾಗೆ ತಿಳಿಸಿದ್ದಾರೆ.[ವಿಮಾನ ಅಪಘಾತ; ಪೃಥ್ವಿ ಪರೀಕ್ಷೆ ವಿಫಲ]

ಸಾಮಾನ್ಯವಾಗಿ ಭಾರತದ ಕ್ಷಿಪಣಿಗಳು ಹೈದ್ರಾಬಾದ್ ನ ಡಿಆರ್ ಡಿಒ ಘಟಕದಲ್ಲಿ ತಯಾರಾಗುತ್ತಿದ್ದವು. ಆದರೆ 'ನಿರ್ಭಯ್' ನನ್ನು ಬೆಂಗಳೂರಿನಲ್ಲಿ ತಯಾರು ಮಾಡಲಾಗಿದೆ.ರಕ್ಷಣಾ ಇಲಾಖೆ ಇದೆ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಕ್ಷಿಪಣಿ ತಯಾರಿಕೆಗೆ ಅವಕಾಶ ನೀಡಲಾಗಿದೆ. ಇದು ಭಾರತದ ಸೈನ್ಯಕ್ಕೆ ಮತ್ತಷ್ಟು ಶಕ್ತಿ ತುಂಬಲಿದೆ. ಮೂನ್ನೂರು ಕಿಮೀ ಹಾರಾಟ ನಡೆಸಿ ಮತ್ತೆ ಕೇಂದ್ರಕ್ಕೆ ಹಿಂದಿರುಗಲಿದೆ ಎಂದು ಡಿಆರ್ಡಿಒ ನಿರ್ದೇಶಕ ಡಾ.ಕೆ. ತಮಿಳ್ ಮಣಿ ತಿಳಿಸಿದ್ದಾರೆ.
ಉಳಿದ ಕ್ಷಿಪಣಿಗಳಿಗೆ ಹೋಲಿಸಿದರೆ ಇದು ಅತ್ಯಂತ ಹಗುರವಾಗಿದೆ. ಅತ್ಯಂತ ನಾಜೂಕಾಗಿ ಸಿದ್ಧಮಾಡಲಾಗಿದ್ದು ಹಾರಾಟದ ನಂತರ ದೇಶಕ್ಕೆ ಇದರ ಶಕ್ತಿಯ ಪರಿಚಯವಾಗಲಿದೆ. ಯಾವ ಕಡೆ ಬೇಕಾದರೂ ಸುಲಭವಾಗಿ ತಿರುಗುವ, ಆಕಾಶದಲ್ಲಿ ಎಂಥ ಕಸರತ್ತಿಗೂ ಒಳಗಾಗುವ ಶಕ್ತಿ ಹೊಂದಿದೆ ಎಂದು ತಿಳಿಸಿದ್ದಾರೆ.

ನಿರ್ಭಯ್ ಕಿರು ಪರಿಚಯ
ಹೆಸರು: ನಿರ್ಭಯ್
ಶಕ್ತಿ: 800 ರಿಂದ 1000 ಕಿಮೀ ಹಾರಾಟ
ಅಗಲ: 6 ಮೀಟರ್
ತೂಕ: 1,500 ಕೆಜಿ
ವೇಗ: 0.7 ಮ್ಯಾಕ್
ವೆಚ್ಚ: ಒಂದು ಕ್ಷಿಪಣಿಗೆ 10 ಕೋಟಿ
ತಯಾರಿಕೆ: ಎಡಿಇ ಕೇಂದ್ರ ಬೆಂಗಳೂರು
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications