Stock Market: ಷೇರು ಮಾರುಕಟ್ಟೆಯಲ್ಲಿ ‘ರಕ್ತಪಾತ’: ಅಯ್ಯಯ್ಯೋ ಅಂತಿದ್ದಾರೆ ಜನ!
ಷೇರು ಮಾರುಕಟ್ಟೆಯಲ್ಲಿ ಇವತ್ತು ದೊಡ್ಡ ಸಂಚಲನ ಸೃಷ್ಟಿಯಾಗಿತ್ತು, ನೋಡ ನೋಡುತ್ತಾ ಇವತ್ತು ಬೆಳಗ್ಗೆಯೇ ದೊಡ್ಡ ಮಟ್ಟದ ಕುಸಿತಕ್ಕೆ ಕಾರಣವಾದ 'ಷೇರುಪೇಟೆ' ಸೂಚ್ಯಂಕಗಳು ಹೂಡಿಕೆದಾರರ ಎದೆಯಲ್ಲಿ ನಡುಕ ತರಿಸಿತ್ತು. ಅಲ್ಲದೆ ಲಕ್ಷಾಂತರ ಕೋಟಿ ರೂಪಾಯಿ ನಷ್ಟ ಮಾಡಿಕೊಂಡು ನರಳಾಡಿರುವ ಇನ್ವೆಸ್ಟರ್ಗಳಿಗೆ, ಮತ್ತೊಂದು ಆತಂಕಕಾರಿ ಸುದ್ದಿ ಹೊರಗೆ ಬಿದ್ದಂತಾಗಿದೆ!
ಹೌದು, ಇಂದು ಬೆಳಗ್ಗೆಯೇ ಷೇರು ಮಾರುಕಟ್ಟೆಯಲ್ಲಿ 'ರಕ್ತಪಾತ' ಶುರುವಾಗಿತ್ತು. ಬೆಳಗ್ಗೆಯೇ ಷೇರುಪೇಟೆ ತನ್ನ ವಹಿವಾಟು ಆರಂಭ ಮಾಡಿದ ತಕ್ಷಣ ಎಲ್ಲವೂ ಅಲ್ಲೋಲ ಕಲ್ಲೋಲ ಎದ್ದು ಎಲ್ಲೆಲ್ಲೂ ಸಂಚಲನ ಸೃಷ್ಟಿ ಮಾಡಿತ್ತು. ನಿಫ್ಟಿ ತನ್ನ ಸಪೋರ್ಟ್ ಲೆವೆಲ್ ಬ್ರೇಕ್ ಮಾಡಿದ್ದು 23,900 ಅಂಕದ ಕೆಳಗೆ ವಹಿವಾಟು ನಡೆಸಲು ಆರಂಭ ಮಾಡಿತ್ತು, ಇದೇ ಕಾರಣಕ್ಕೆ ತಕ್ಷಣ ಸೆನ್ಸೆಕ್ಸ್ ಕೂಡ 1,150 ಅಂಕ ಕುಸಿತ ಕಂಡು ಲಕ್ಷಾಂತರ ಕೋಟಿ ರೂಪಾಯಿ ಹೂಡಿಕೆದಾರರ ಹಣ ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತೆ ಆಗಿತ್ತು.

ಯಾವೆಲ್ಲಾ ಷೇರುಗಳಿಗೆ ಆಘಾತ?
ಅಂದಹಾಗೆ ಇದೀಗ 'ಷೇರುಪೇಟೆ' ಕುಸಿತಕ್ಕೆ ಹಲವು ಕಾರಣಗಳನ್ನ ನೀಡಲಾಗುತ್ತಿದ್ದು, ಹೀಗೆ ಇದ್ದಾಗಲೇ ವಿದೇಶಿ ಹೂಡಿಕೆದಾರರು ತಮ್ಮ ಹೂಡಿಕೆಯ ಹಣವನ್ನು ಭಾರತದ ಮಾರುಕಟ್ಟೆ ಮೂಲಕ ವಾಪಸ್ ಪಡೆಯುತ್ತಿರುವ ಹಿನ್ನೆಲೆ ದೊಡ್ಡ ಮಟ್ಟದ ಕುಸಿತ ಆಗುತ್ತಿದೆ ಎನ್ನಲಾಗಿದೆ. ವಿದೇಶಿ ಹೂಡಿಕೆದಾರರು ದೊಡ್ಡ ಮಟ್ಟದಲ್ಲಿ ಇರುವ ಉದ್ಯಮ ವಲಯಗಳು ಇದೀಗ ಭಾರಿ ಹಿನ್ನಡೆ ಕಾಣುತ್ತಿವೆ.
ಬಹುತೇಕ ಎಲ್ಲಾ ವಲಯದ ಷೇರುಗಳು ಕೂಡ ಇಂದು ಮಕಾಡೆ ಮಲಗಿದ್ದು, ವಿದೇಶದಿಂದ ಹೂಡಿಕೆ ಮಾಡುತ್ತಿರುವ ಹೂಡಿಕೆದಾರರು ತಮ್ಮ ಹೂಡಿಕೆ ಪಾಲನ್ನು ಹಿಂದಕ್ಕೆ ತೆಗೆದುಕೊಂಡು ಆಘಾತ ನೀಡಿದ್ದಾರೆ. ಷೇರುಪೇಟೆ ಬಹುಪಾಲು ವಿದೇಶಿ ಹೂಡಿಕೆದಾರರ ಮೇಲೆ ನಿಂತಿರುತ್ತೆ ಎಂಬ ಮಾತು ಇದೆ, ಹೀಗಿದ್ದಾಗ ವಿದೇಶ ಹೂಡಿಕೆದಾರರು ಅಮೆರಿಕ ಅಧ್ಯಕ್ಷೀಯ ಚುನಾವಣೆ ಫಲಿತಾಂಶದ ನಂತರ ತಮ್ಮ ನಿರ್ಧಾರ ಬದಲಾಯಿಸುತ್ತಿದ್ದು ಷೇರು ಮಾರುಕಟ್ಟೆ ತಲ್ಲಣಕ್ಕೆ ಕಾರಣವಾಗಿದೆ ಎನ್ನಲಾಗಿದೆ.
ಸೆನ್ಸೆಕ್ಸ್ 79,255 ಅಂಕಗಳ...
ಇತ್ತೀಚಿನ ಮಾಹಿತಿ ಪ್ರಕಾರ, 241 ಅಂಕ ಕಳೆದುಕೊಂಡು ನಿಫ್ಟಿ-50 ಸದ್ಯಕ್ಕೆ 23,955 ಅಂಕದ ಸುತ್ತಮುತ್ತ ವಹಿವಾಟು ನಡೆಸುತ್ತಿದೆ. ಹಾಗೇ ಸೆನ್ಸೆಕ್ಸ್ ಹತ್ತಿರ ಹತ್ತಿರ 950 ಅಂಕ ಕಳೆದುಕೊಂಡು ಈಗ 79,255 ಅಂಕಗಳ ಸುತ್ತಮುತ್ತ ವಹಿವಾಟು ನಡೆಸುತ್ತಿದೆ. ಇನ್ನುಳಿದಂತೆ ಬ್ಯಾಂಕ್ ನಿಫ್ಟಿ ಒಟ್ಟು 500ಕ್ಕೂ ಹೆಚ್ಚು ಅಂಕ ಕಳೆದುಕೊಂಡು 51,600ರ ಆಸುಪಾಸಿನಲ್ಲಿ ಉಳಿದೆ.
ಹೀಗಾಗಿ ಫಿನ್ ನಿಫ್ಟಿ & ಮಿಡ್ಕ್ಯಾಪ್ ನಿಫ್ಟಿ ಸೂಚ್ಯಂಕಗಳು ಕೂಡ ನಷ್ಟದಲ್ಲೇ ಈಗ ವಹಿವಾಟು ಮುಂದುವರಿಸಿವೆ. ಬೆಳಗ್ಗೆ ಕುಸಿತ ಕಂಡ ಅಂಕಗಳಿಂದ ಷೇರುಪೇಟೆ ಸೂಚ್ಯಂಕಗಳು, ಒಂದಷ್ಟು ಚೇತರಿಕೆ ಕಂಡಿದ್ದರೂ ಹೂಡಿಕೆದಾರರಿಗೆ ಭಯ ಕಾಡುತ್ತಿದೆ. ಮುಂದಿನ ಹಂತಗಳಲ್ಲಿ ಇದು ಮತ್ತಷ್ಟು ಇಳಿಕೆ ಕಾಣುತ್ತಾ? ಅಥವಾ ಚೇತರಿಕೆ ಕಾಣುತ್ತಾ ಅಂತಾ ಕಾದು ನೋಡಬೇಕಿದೆ.
-
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ












Click it and Unblock the Notifications