ಅಖಿಲೇಶ್ ರಿಟರ್ನ್ಸ್ ಹೀಗೊಂದು ವಿಡಿಯೋ ಭವಿಷ್ಯ
ಚುನಾವಣೆಯಲ್ಲಿ ಯಾರು ಗೆಲ್ಲಲಿದ್ದಾರೆ ಎಂಬ ಭವಿಷ್ಯವನ್ನು ಸಮೀಕ್ಷೆ ಮೂಲಕ ತಿಳಿಸುವುದು ಹಳೆ ಕಥೆಯಾಯ್ತು. ಈಗ ಅಣಕು ವಿಡಿಯೋ ಮೂಲಕ ಉತ್ತರಪ್ರದೇಶದ ಚುನಾವಣೆ ಭವಿಷ್ಯ ತೋರಿಸಲಾಗಿದೆ. ಏನಿದೆ ವಿಡಿಯೋದಲ್ಲಿ ನೋಡಿ...
ಲಕ್ನೋ, ಫೆಬ್ರವರಿ 17: ಚುನಾವಣೆಯಲ್ಲಿ ಯಾರು ಗೆಲ್ಲಲಿದ್ದಾರೆ ಎಂಬ ಭವಿಷ್ಯವನ್ನು ಸಮೀಕ್ಷೆ ಮೂಲಕ ತಿಳಿಸುವುದು ಹಳೆ ಕಥೆಯಾಯ್ತು. ಈಗ ಅಣಕು ವಿಡಿಯೋ ಮೂಲಕ ಉತ್ತರಪ್ರದೇಶದ ಚುನಾವಣೆ ಭವಿಷ್ಯ ತೋರಿಸಲಾಗಿದೆ. ಅಖಿಲೇಶ್ ಯಾದವ್ ಅವರು ಸಿಎಂ ಆಗಿ ಮತ್ತೆ ಅಧಿಕಾರವಹಿಸಿಕೊಳ್ಳಲಿದ್ದಾರೆ ಎಂದು ವಿಡಿಯೋದಲ್ಲಿ ತೋರಿಸಲಾಗಿದೆ.
ಹರೀಶ್ ರಾವತ್ ಅವರನ್ನು ಬಾಹುಬಲಿಯಂತೆ ಬಿಂಬಿಸಿ ತೋರಿಸಲಾಗಿದ್ದ ವಿಡಿಯೋ ಸಕತ್ ಕ್ಲಿಕ್ ಆಗಿತ್ತು. ಈಗ ಅಖಿಲೇಶ್ ಯಾದವ್ ಅವರು ಶಾರುಖ್ ಖಾನ್ ಅವರ ಡಾನ್ ರಿಟರ್ನ್ಸ್ ಶೈಲಿಯಲ್ಲಿ ಡೈಲಾಗ್ ಹೊಡೆಯುವುದನ್ನು ನೋಡಿ ಅವರ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.[ಎಬಿಪಿ ಸಮೀಕ್ಷೆ: ಉತ್ತರಪ್ರದೇಶಕ್ಕೆ ಅಖಿಲೇಶ್ ಸೂಕ್ತ ಸಿಎಂ]

ಈ ಹಿಂದೆ ರಯೀಸ್ ಪಾತ್ರದಲ್ಲಿ ಅಖಿಲೇಶ್ ರನ್ನು ಚಿತ್ರಿಸಿದ್ದ ಅನಿಮೇಟರ್ ಫೈಜಾನ್ ಸಿದ್ದಿಕಿ ಅವರು ಈಗ ಅಖಿಲೇಶ್ ಗೆ ಡಾನ್ ಲುಕ್ ಕೊಟ್ಟಿದ್ದಾರೆ. [ಟೈಮ್ಸ್ ನೌ ಸಮೀಕ್ಷೆ: ಉತ್ತರಪ್ರದೇಶದಲ್ಲಿ ಬಿಜೆಪಿಗೆ ಅಲ್ಪ ಬಹುಮತ]
ಅಖಿಲೇಶ್ ರಿಟರ್ನ್ಸ್ ಎಂಬ ಈ ಅಣಕು ವಿಡಿಯೋದಲ್ಲಿ ಪಂಚಿಂಗ್ ಡೈಲಾಗ್ ಗಳಿವೆ. ಎಲ್ಲಾ ಪ್ರಶ್ನೆಗಳಿಗೂ ಮಾರ್ಚ್ 11 ರಂದು ಉತ್ತರ ಸಿಗಲಿದೆ ಎಂದು ಕೊನೆಯಲ್ಲಿ ಹೇಳಲಾಗಿದೆ.[ಸಮೀಕ್ಷೆ: ಜಾತಿ ಲೆಕ್ಕಾಚಾರದಲ್ಲಿ ಯಾರು ಮುಂದೆ?]
ಅಖಿಲೇಶ್ ರಿಟರ್ನ್ಸ್ ವಿಡಿಯೋ ನೋಡಿ:
ಅಪನಗದೀಕರಣದ ಬಗ್ಗೆ ಕೂಡಾ ಈ ವಿಡಿಯೋದಲ್ಲಿ ಕಾಮೆಂಟ್ ಮಾಡಲಾಗಿದೆ. ಮೋದಿ, ಅರುಣ್ ಜೇಟ್ಲಿ ನಡುವೆ ಡೈಲಾಗ್ ಇದೆ. ಕೊನೆಗೆ ವಿಮಾನದಿಂದ ಮೋದಿ ಅವರನ್ನು ಅಖಿಲೇಶ್ ಅವರು ಕೈಬಿಟ್ಟು ಕೆಳಗೆ ಬೀಳಿಸುತ್ತಾರೆ. ಒಂದು ನಿಮಿಷ 55 ಸೆಕೆಂಡು ಇರುವ ಈ ವಿಡಿಯೋ ಪ್ರಕಾರ ಉತ್ತರರಪ್ರದೇಶದ ಚುನಾವಣೆಯನ್ನು ಅಖಿಲೇಶ್ ಗೆಲ್ಲಲಿದ್ದಾರಂತೆ. (ಒನ್ಇಂಡಿಯಾ ಸುದ್ದಿ)
-
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Karnataka Weather: ಇಂದು ರಾಜ್ಯದ ಹಲವೆಡೆ ಗುಡುಗು ಸಹಿತ ಅಕಾಲಿಕ ಮಳೆ, ಬೆಂಗಳೂರಿನಲ್ಲಿ ಹೇಗಿರಲಿದೆ ವಾತಾವರಣ? -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
Udaan Yatri Cafe: ಏರ್ಪೋರ್ಟ್ನಲ್ಲಿ ದುಬಾರಿ ಊಟಕ್ಕೆ ಬ್ರೇಕ್: 17 ಕಡೆ ಉಡಾನ್ ಕೆಫೆ ಆರಂಭ












Click it and Unblock the Notifications