Get Updates
Get notified of breaking news, exclusive insights, and must-see stories!

ಭಾರತ ವಿಭಜಿಸಿ ಹಲವು ದೇಶ ರಚಿಸುವ ಉದ್ದೇಶ ಹೊಂದಿದ್ದ ಖಲಿಸ್ತಾನಿ ಭಯೋತ್ಪಾದ ಪನ್ನುನ್: ವರದಿ

ಖಲಿಸ್ತಾನಿ ಭಯೋತ್ಪಾದಕ ಗುರುಪತ್‌ವಂತ್ ಸಿಂಗ್ ಪನ್ನುನ್ "ಭಾರತವನ್ನು ವಿಭಜಿಸುವ ಮೂಲಕ ಅನೇಕ ದೇಶಗಳನ್ನು ರಚಿಸಲು ಬಯಸಿದ್ದ" ಎಂದು ಮೂಲಗಳು ತಿಳಿಸಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ. ಕಳೆದ ವಾರವಷ್ಟೆ ಚಂಡೀಗಢ ಮತ್ತು ಅಮೃತಸರದಲ್ಲಿ ಪನ್ನುನ್‌ಗೆ ಸೇರಿದ್ದ ಆಸ್ತಿಯನ್ನು ವಶಕ್ಕೆ ಪಡೆಯಲಾಗಿದೆ.

ರಾಷ್ಟ್ರೀಯ ತನಿಖಾ ಸಂಸ್ಥೆಯ ದಾಖಲೆಗಳ ಪ್ರಕಾರ, ನಿಷೇಧಿತ ಪ್ರತ್ಯೇಕತಾವಾದಿ ಗುಂಪಿನ ಸಿಖ್ಸ್ ಫಾರ್ ಜಸ್ಟಿಸ್‌ನ ಮುಖ್ಯಸ್ಥ ಪನ್ನುನ್, "ಭಾರತದ ಏಕತೆ ಮತ್ತು ಸಮಗ್ರತೆಗೆ ಆಡಿಯೋ ಸಂದೇಶಗಳ ಮೂಲಕ ಸವಾಲು ಹಾಕಿದ್ದು ಮತ್ತು ಕಾಶ್ಮೀರದ ಜನರಿಗೆ ಪ್ರತ್ಯೇಕ ಮುಸ್ಲಿಂ ದೇಶವನ್ನು ರಚಿಸಲು ಬಯಸಿದ್ದ ಎಂದು ಹೇಳಿದೆ.

sources-reveal-khalistani-terrorists

ಪನ್ನುನ್ ಪಂಜಾಬ್ ಮತ್ತು ದೇಶದಾದ್ಯಂತ ಭಯವನ್ನು ಹರಡಲು ಭಯೋತ್ಪಾದಕ ಕೃತ್ಯಗಳನ್ನು ಎಸಗುವಲ್ಲಿ ಮತ್ತು ನಿಯೋಜಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಕ್ಕಾಗಿ 2019 ರಿಂದ ಎನ್‌ಐಎಗೆ ಬೇಕಾಗಿದ್ದಾನೆ. ಪನ್ನುನ್ ನೇತೃತ್ವದ ಸಿಖ್ಸ್ ಫಾರ್ ಜಸ್ಟಿಸ್ "ಸೈಬರ್‌ಸ್ಪೇಸ್ ಅನ್ನು ದುರುಪಯೋಗಪಡಿಸಿಕೊಂಡು ಭಯೋತ್ಪಾದಕ ಚಟುವಟಿಕೆಗಳನ್ನು ಕೈಗೊಳ್ಳಲು ಮತ್ತು ಖಲಿಸ್ತಾನ್ ಸ್ವತಂತ್ರ ರಾಜ್ಯಕ್ಕಾಗಿ ಹೋರಾಡಲು ಯುವಕರನ್ನು ಪ್ರಚೋದಿಸುತ್ತದೆ" ಎಂದು ತನಿಖೆಗಳು ಬಹಿರಂಗಪಡಿಸಿವೆ.

ಭಯೋತ್ಪಾದಕ ಎಂದು ಘೋಷಣೆ

ಜುಲೈ 2020 ರಲ್ಲಿ ಕೇಂದ್ರ ಗೃಹ ಸಚಿವಾಲಯವು ಪನ್ನುನ್‌ನನ್ನು ಭಯೋತ್ಪಾದಕ ಎಂದು ಘೋಷಿಸಿತು ಆದರೆ ಸಾಕಷ್ಟು ಮಾಹಿತಿಯನ್ನು ಉಲ್ಲೇಖಿಸಿ ರೆಡ್ ಕಾರ್ನರ್ ನೋಟಿಸ್ ನೀಡುವಂತೆ ಭಾರತ ಸರ್ಕಾರದ ಮನವಿಯನ್ನು ಇಂಟರ್‌ಪೋಲ್ ಎರಡು ಬಾರಿ ತಿರಸ್ಕರಿಸಿತು.

ಇತ್ತೀಚೆಗೆ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆಯ ಕುರಿತು ಭಾರತ ಮತ್ತು ಕೆನಡಾ ನಡುವಿನ ಬೃಹತ್ ರಾಜತಾಂತ್ರಿಕ ಕಲಹದ ಮಧ್ಯೆ ಪನ್ನುನ್ ಕೆನಡಾದಲ್ಲಿ ಹಿರಿಯ ಭಾರತೀಯ ರಾಜತಾಂತ್ರಿಕರು ಮತ್ತು ಸರ್ಕಾರಿ ಅಧಿಕಾರಿಗಳಿಗೆ ಬೆದರಿಕೆ ಹಾಕಿದ್ದ. ಕೆನಡಾದ ಪ್ರಜೆಯಾಗಿದ್ದ ನಿಜ್ಜರ್‌ನನ್ನು ಭಾರತ ಸರ್ಕಾರದ "ಏಜೆಂಟರು" ಕೊಂದಿದ್ದಾರೆ ಎಂದು ಆರೋಪಿಸಿ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಅಂತಾರಾಷ್ಟ್ರೀಯ ಹೋರಾಟವನ್ನು ಆರಂಭಿಸಿದ್ದಾರೆ.

ಯಾರು ಈ ಗುರುಪತ್ವಂತ್ ಸಿಂಗ್ ಪನ್ನುನ್?

ಪನ್ನುನ್ ಕಳೆದ ವರ್ಷ ಹಿಮಾಚಲ ಪ್ರದೇಶ ಅಸೆಂಬ್ಲಿಯ ಗೋಡೆಗಳ ಮೇಲೆ 'ಖಾಲಿಸ್ತಾನ್' ಬ್ಯಾನರ್ ಮತ್ತು ಗೀಚುಬರಹ ಕಾಣಿಸಿಕೊಂಡ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾನೆ. 1947 ರಲ್ಲಿ ಭಾರತ ವಿಭಜನೆಯ ಸಮಯದಲ್ಲಿ ಅವರ ಕುಟುಂಬ ಪಾಕಿಸ್ತಾನದ ಖಾನ್ಕೋಟ್ ಎಂಬ ಹಳ್ಳಿಯಿಂದ ಅಮೃತಸರಕ್ಕೆ ಬಂದಿದೆ.

ಗುರುಪತ್ವಂತ್ ಪನ್ನುನ್ ಅವರ ಪೋಷಕರು ಸಾವನ್ನಪ್ಪಿದ್ದು ಮತ್ತು ಅವರ ಸಹೋದರ ಮಗ್ವಂತ್ ಸಿಂಗ್ ವಿದೇಶದಲ್ಲಿ ವಾಸಿಸುತ್ತಿದ್ದಾರೆ. ಅವರು ಪಂಜಾಬ್ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದಿದ್ದಾರೆ.

ಭದ್ರತಾ ಏಜೆನ್ಸಿಗಳ ಪ್ರಕಾರ, ಪನ್ನುನ್ ವಿರುದ್ಧ ಒಟ್ಟು 16 ಪ್ರಕರಣಗಳಿವೆ. ಪಂಜಾಬ್, ದೆಹಲಿ ಮತ್ತು ಹಿಮಾಚಲ ಪ್ರದೇಶ, ಹಾಗೆಯೇ ಹರಿಯಾಣ ಮತ್ತು ಉತ್ತರಾಖಂಡದಲ್ಲಿ ಪ್ರಕರಣಗಳು ದಾಖಲಾಗಿವೆ.

ಕಳೆದ ವಾರ ಎನ್‌ಐಎ ಚಂಡೀಗಢದಲ್ಲಿ ಪನ್ನುನ್ ಅವರ ಮನೆ ಮತ್ತು ಅಮೃತಸರದಲ್ಲಿ ಕೃಷಿ ಭೂಮಿಯನ್ನು ವಶಪಡಿಸಿಕೊಂಡಿತು. ಪನ್ನುನ್ ಈಗ ಈ ಆಸ್ತಿಗಳಿಗೆ ಎಲ್ಲಾ ಹಕ್ಕುಗಳನ್ನು ಕಳೆದುಕೊಂಡಿದ್ದಾನೆ, ಅದು ಈಗ ಭಾರತ ಸರ್ಕಾರದ ಒಡೆತನದಲ್ಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+