ಅಮಾಯಕ ಆದಿವಾಸಿಯ ಹತ್ಯೆ, ಸೆಲ್ಫಿ ಮತ್ತು ಸಾಮಾಜಿಕ ಮಾಧ್ಯಮ!
ಪಾಲಕ್ಕಾಡ್, ಫೆಬ್ರವರಿ 23: ಬುಡಕಟ್ಟು ಯುವಕನೊಬ್ಬ ಕಳ್ಳತನ ಮಾಡಿದ್ದಾನೆಂದು ಆತನನ್ನು ಜನರೆಲ್ಲ ಸೇರಿ ಹೊಡೆದು ಸಾಯಿಸಿದ ಘಟನೆ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಚರ್ಚೆ ನಡೆಯತ್ತಿದೆ.
ಮಧು(27) ಎಂಬ ಬುಡಕಟ್ಟು ಸಮುದಾಯದ ಯುವಕ ಮಾನಸಿಕ ಅಸ್ವಸ್ಥನಾಗಿದ್ದು, ಕೆಲ ದಿನಗಳ ಹಿಂದೆ ಕೇರಳದ ಪಾಲಕ್ಕಾಡಿನ ಅಟ್ಟಪಾಡಿಯಲ್ಲಿ ಕಳ್ಳತನ ಮಾಡಿದ್ದಾನೆಂದು ಆರೋಪಿಸಿ, ಹದಿನೈದಕ್ಕೂ ಹೆಚ್ಚು ಜನರು ಸೇರಿ ಆತನನ್ನು ಕಟ್ಟಿ ಹಾಕಿದ್ದರು.
ನಂತರ ಆತನಿಗೆ ಚಿತ್ರಹಿಂಸೆ ನೀಡಿ, ಹೊಡೆದು ಸಾಯಿಸಿದ್ದ ಘಟನೆ ನಿನ್ನೆ(ಫೆ.22) ನಡೆದಿದೆ. ಆತನನ್ನು ಕಟ್ಟಿಹಾಕಿದ್ದ ಸಮಯದಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡು, ವಿಕೃತ ಆನಂದ ಪಟ್ಟಿದ್ದರು. ಹೀಗೆ ಕ್ಲಿಕ್ಕಿಸಿಕೊಂಡ ಸೆಲ್ಫಿ ಇದೀಗ ವೈರಲ್ ಆಗಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
|
ಹೋರಾಟಗಾರರೆಲ್ಲ ಎಲ್ಲಿ?
ಕೇರಳದಲ್ಲಿ ನಡೆದ ಬುಡಕಟ್ಟು ವ್ಯಕ್ತಿಯ ಹತ್ಯೆ ಅಕ್ಷಮ್ಯ. ಸೆಲ್ಫಿ ಕ್ಲಿಕ್ಕಿಸಿಕೊಂಡ ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದೆ. ಆದರೆ ಮಾಧ್ಯಮಗಳು ಈ ಬಗ್ಗೆ ಹೆಚ್ಚು ಚರ್ಚೆ ನಡೆಸುತ್ತಿಲ್ಲ! ಹೋರಾಟಗಾರರೆಲ್ಲ ಮೌನವಾಗಿದ್ದಾರಲ್ಲ... ಯಾಕೆ? ಎಂದು ಪ್ರಶ್ನಿಸಿದ್ದಾರೆ ಆನಂದ ರಂಗನಾಥನ್.
|
ತುಂಬಾ ಬೇಸರವಾಗುತ್ತಿದೆ...
ಕೇರಳದಲ್ಲಿ 27 ವರ್ಷದ ಯುವಕನನ್ನು ಕೊಂದ ಸುದ್ದಿ ಕೇಳಿ ತುಂಬಾ ಬೇಸರವಾಯ್ತು. ಆತನನ್ನು ಕಟ್ಟಿಹಾಕಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದರು ಎಂಬುದೂ ಅಷ್ಟೇ ಬೇಸರದ ಸಂಗತಿ. ಕೇರಳದ ಹಿಂಸೆಯ ರಾಜಕೀಯಕ್ಕೆ ಇದೊಂದು ಸಾಕ್ಷಿ ಎಂದಿದ್ದಾರೆ ರಾಜೀವ್ ಚಂದ್ರಶೇಖರ್.
|
ಅವಾರ್ಡ್ ವಾಪ್ಸಿಯವರೆಲ್ಲ ಎಲ್ಲಿ?
ಹಸಿವಿನಿಂದ ಬಳಲುತ್ತಿದ್ದ ಓರ್ವ ಬುಡಕಟ್ಟು ವ್ಯಕ್ತಿಯನ್ನು ಕೇರಳದಲ್ಲಿ ಸಾಯಿಸಲಾಗಿದೆ. ಈಗ ಅವಾರ್ಡ್ ವಾಪ್ಸಿ ಗುಂಪು ಎಲ್ಲಿದೆ? ನಿಮಗೆ ಮಾತ್ರ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ ಎಂಬಂತೆ ಮಾತನಾಡುತ್ತಿದ್ದಿರಲ್ಲ! ಇದೀಗ ನಿಮ್ಮದೇ ಕಮ್ಯುನಿಸ್ಟ್ ನೆಲದಲ್ಲಿ ಇಂಥ ಘಟನೆ ನಡೆದಿದೆ. ಇಂಥವರಿಗಾಗಿ ದನಿ ಎತ್ತುವುದಕ್ಕೆ ಶುರಾಡಿ ನೋಡೋಣ ಎಂದು ಸವಾಲೆಸೆದಿದ್ದಾರೆ ಗಿರೀಶ್ ಆಳ್ವಾ.
|
ನಿಜಕ್ಕೂ ನಾಚಿಕೆಗೇಡು!
ಆಹಾರವಿಲ್ಲದೆ, ಹಸಿವಿನಿಂದ ಕಂಗೆಟ್ಟಿದ್ದ ಮಧು ಎಂಬ ಬುಡಕಟ್ಟು ವ್ಯಕ್ತಿಯನ್ನು ಕೊಂದ ಘಟನೆ ಕೇಳಿ ನೋವಾಯಿತು. ಇದು ನಿಜಕ್ಕೂ ನಾಚಿಕೆಗೇಡು. ಕಮ್ಯುನಿಸಂ ಎಂಬುದು ಮಾನವೀಯತೆಯನ್ನು ಸೋಲಿಸುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ ಡಾ.ಸಂಧ್ಯಾ ಪಟೇಲ್.
|
ನಾವು ಅವರಿಂದ ಎಲ್ಲವನ್ನೂ ಕಿತ್ತುಕೊಂಡಿದ್ದೇವೆ!
ನಾವು ಬುಡಕಟ್ಟು ಜನರಿಂದ ಎಲ್ಲವನ್ನೂ ಕಿತ್ತುಕೊಂಡಿದ್ದೇವೆ. ಅವರ ಜಮೀನು, ಅನ್ನ. ಆದರೂ ನಮ್ಮ ದುರಾಸೆಗೆ ನಾವವರ ಮೇಲೆ ದಬ್ಬಾಳಿಕೆ ನಡೆಸುತ್ತೇವೆ. ಅವರು ಊಟವಿಲ್ಲದೆ ಕಳ್ಳತನ ಮಾಡಿದರೆ ನಾವವರನ್ನು ಸಾಯಿಸುತ್ತೇವೆ! ಅಧಿಕಾರ ಇರುವವರಿಗೆ ಇದು ಅರ್ಥವಾಗುವುದಿಲ್ಲ. ಕರುಣೆ ಮತ್ತು ಮಾನವೀಯತೆ ನಮ್ಮಿಂದ ದೂರವಾಗಿದೆ! ಮಧು ಆತ್ಮಕ್ಕೆ ಶಾಂತಿ ಸಿಗಲಿ ಎಂದಿದ್ದಾರೆ ರಂಗ್ನಾರೊಕ್!
|
ದೇವರ ರಾಜ್ಯ ಬದಲಾಗಿದೆ...
ಕಮ್ಯುನಿಸ್ಟರ ನೆಲದಲ್ಲಿ ಗೂಂಡಾಗಳು ಬುಡಕಟ್ಟು ಸಮುದಾಯದ ಅಸಾಯಕ ವ್ಯಕ್ತಿಗೆ ಹಿಂಸೆ ನೀಡಿ, ಸೆಲ್ಫಿ ಕ್ಲಿಕ್ಕಿಸಿಕೊಂಡು, ಸಾಯಿಸಿದ್ದಾರೆ. ದೇವರ ರಾಜ್ಯದಿಂದ ಕೇರಳ ಪಿಎಫ್ ಐ ಗಳ ರಾಜ್ಯವಾಗಿ, ಲವ್ ಜಿಹಾದ್ ರಾಜ್ಯವಾಗಿ, ರಕ್ತಪೀಪಾಸುಗಳ ರಾಜ್ಯವಾಗಿ, ಪ್ರಾಣಿಗಳ ರಾಜ್ಯವಾಗಿ ಬದಲಾಗಿದೆ ಎಂದಿದ್ದಾರೆ ರಿತು ರಾಥೋರ್.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications