ಗದ್ದರ್ ಸಾವಿನ ಸುದ್ದಿ ನಡುವೆ ಪತ್ರಕರ್ತ ಹೃದಯಾಘಾತಕ್ಕೆ ಬಲಿ
ಹೈದರಾಬಾದ್: ಅತ್ತ ಗದ್ದರ್ ಮೃತಪಟ್ಟಿರುವ ಸುದ್ದಿ ಎಲ್ಲರನ್ನೂ ನೋವಿಗೆ ದೂಡಿದ್ದರೆ, ಇತ್ತ ಮತ್ತೊಂದು ಆಘಾತಕಾರಿ ಸುದ್ದಿ ಸಂಚಲನ ಸೃಷ್ಟಿಸಿದೆ. ಕ್ರಾಂತಿಕಾರಿ ಕವಿ ಗದ್ದರ್ರ ಅಂತಿಮ ಯಾತ್ರೆ ವೇಳೆ ಪತ್ರಕರ್ತ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ ಎನ್ನಲಾಗಿದೆ. ಹೀಗೆ ಒಂದು ಸಾವಿನ ದುಖಃದಲ್ಲಿ ಇರುವಾಗ ತೆಲಂಗಾಣಕ್ಕೆ ಮತ್ತೊಂದು ಆಘಾತ ಎದುರಾಗಿದೆ.
ಉರ್ದು ಮ್ಯಾಗಜಿನ್ ಸಿಯಾಸತ್ ವ್ಯವಸ್ಥಾಪಕ ಸಂಪಾದಕ ಝಹೀರುದ್ದೀನ್ ಅಲಿ ಖಾನ್ ಈ ದುರಂತದಲ್ಲಿ ಜೀವ ಬಿಟ್ಟಿದ್ದಾರೆ. 60 ವರ್ಷ ವಯಸ್ಸಿನ ಸಂಪಾದಕ ಹೃದಯಾಘಾತಕ್ಕೆ ಬಲಿಯಾಗಿರುವ ಸುದ್ದಿ ಇದೀಗ ಸಂಚಲನ ಸೃಷ್ಟಿ ಮಾಡಿದೆ. ಅಂತಿಮ ಯಾತ್ರೆ ಸಂದರ್ಭ ಝಹೀರುದ್ದೀನ್ ಅಲಿ ಖಾನ್ ಅವರಿಗೆ ಹೃದಯಾಘಾತ ಆಗಿದೆ. ಈ ವೇಳೆ ಸ್ಥಳದಲ್ಲಿ ಇದ್ದ ಕೆಲವರು ಓಡಿ ಬಂದು ಝಹೀರುದ್ದೀನ್ ಅವರ ನೆರವಿಗೆ ಮುಂದಾಗಿದ್ದಾರೆ. ಆದರೆ ವಿಧಿ ಆಟವೇ ಬೇರೆಯಾಗಿತ್ತು. ಎಲ್ಲರೂ ಪರದಾಡಿದರೂ ಝಹೀರುದ್ದೀನ್ ಅಲಿ ಖಾನ್ ಅವರ ಜೀವ ಉಳಿಸಲು ಸಾಧ್ಯವಾಗಲೇ ಇಲ್ಲ.

ಮಾರ್ಗ ಮಧ್ಯವೇ ಹೋಗಿತ್ತು ಜೀವ
ಹೌದು, ತೆಲಂಗಾಣ ರಾಜಧಾನಿ ಹೈದರಾಬಾದ್ನ ಭೂದೇವಿನಗರದಲ್ಲಿರುವ ಮಹಾಬೋಧಿ ವಿದ್ಯಾಲಯದಲ್ಲಿ ಇಂದು ಸಕಲ ಸರ್ಕಾರಿ ಗೌರವದೊಂದಿಗೆ ಗದ್ದರ್ ಅಂತ್ಯಸಂಸ್ಕಾರ ನಡೆದಿತ್ತು. ಈ ಸಂದರ್ಭದಲ್ಲಿ ಅಲ್ಲೇ ಇದ್ದ ಝಹೀರುದ್ದೀನ್ ಅಲಿ ಖಾನ್ ಅವರಿಗೆ ತೀವ್ರವಾಗಿ ಎದೆ ನೋವು ಕಾಣಿಸಿಕೊಂಡಿದೆ. ಝಹೀರುದ್ದೀನ್ ಅವರಿಗೆ ಹೃದಯಾಘಾತ ಆಗಿದೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಹೈದರಾಬಾದ್ನ ಖಾಸಗಿ ಆಸ್ಪತ್ರೆಯೊಂದಕ್ಕೆ ಕರೆದೊಯ್ಯಲಾಗಿತ್ತು. ಆದರೆ ಅಷ್ಟರಲ್ಲಾಗಲೇ ಝಹೀರುದ್ದೀನ್ ಅಲಿ ಖಾನ್ ಕೊನೆಯುಸಿರೆಳೆದಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಹಾಗೇ ಹೃದಯಾಘಾತವಾಗಿ ಝಹೀರುದ್ದೀನ್ ಅವರು ಪರದಾಡಿದ ವಿಡಿಯೋ ಕೂಡ ಈಗ ಸಂಚಲನ ಸೃಷ್ಟಿಸಿದೆ.
Zaheeruddin Ali Khan, managing editor of The Siasat Daily, has passed away due to cardiac arrest during poet-activist Gaddar’s funeral procession in Alwal on Monday, August 7. He was nearly 62. @zaheer_siasat @TheSiasatDaily#ZaheeruddinAliKhan pic.twitter.com/XLIz0ItqZb
— Damodar Bayya (@damodarbayya) August 7, 2023
ಹೋರಾಟದಲ್ಲೇ ಜೀವನ ಕಳೆದಿದ್ದ ಗದ್ದರ್
ಗದ್ದರ್ ಎಂದರೆ ತೆಲಂಗಾಣ ಹಾಗೂ ಆಂಧ್ರ ಪ್ರದೇಶದ ಜನರಿಗೆ ಒಂದು ಭಾವನೆ ಇದ್ದಂತೆ. ಏಕೆಂದರೆ 76 ವರ್ಷ ಸಂಘರ್ಷದಲ್ಲಿ ಜನತೆ ಜೊತೆ ನಿಕಟ ಸಂಪರ್ಕ ಹೊಂದಿದ್ದ ಅವರನ್ನು ಇಡೀ ದೇಶ ಕ್ರಾಂತಿಕಾರಿ ಕವಿ ಎಂದೇ ಕರೆಯುತ್ತಿತ್ತು. ತಮ್ಮ ಸಾಹಿತ್ಯದ ಮೂಲಕ ಅವರು ದೇಶ & ವಿದೇಶದಲ್ಲಿ ಕ್ರಾಂತಿಕಾರಿ ಎಂದು ಗುರುತಿಸಿಕೊಂಡರು. ಆದರೆ ಗದ್ದರ್ ದಿಢೀರ್ ನಿಧನ ತೆಲುಗು ರಾಜ್ಯದ ಜನರಿಗೆ ಆಘಾತ ನೀಡಿದೆ. ಗಣ್ಯಾತಿ ಗಣ್ಯರು ಆಗಮಿಸಿ, ಗದ್ದರ್ ಅವರಿಗೆ ಅಂತಿಮ ನಮನ ಸಲ್ಲಿಸಿದ್ದಾರೆ. ಆದರೆ ಇದೇ ಸಂದರ್ಭದಲ್ಲಿ ಪತ್ರಕರ್ತ ಕೂಡ ಉಸಿರು ಚೆಲ್ಲಿರುವುದು ದುರಂತವೇ ಸರಿ.

ಒಟ್ನಲ್ಲಿ ತೆಲಂಗಾಣದ ಜನಕ್ಕೆ ಎರಡೆರಡು ಆಘಾತ ಎದುರಾಗಿದೆ. ಒಂದು ಸಾವಿನ ನೋವು ಮರೆಯಾಗುವ ಮೊದಲೇ ಮತ್ತೊಂದು ಸಾವಿನ ಸುದ್ದಿ ಕೂಡ ಹೊರಬಿದ್ದಿದೆ. ಪತ್ರಕರ್ತ ಝಹೀರುದ್ದೀನ್ ಅಲಿ ಖಾನ್ ನಿಧನಕ್ಕೆ ಗಣ್ಯರು ಸಂತಾಪ ಸೂಚಿಸಿದ್ದಾರೆ. ಹಾಗೇ ದಿಢೀರ್ ನಡೆದಿರುವ ಈ ಘಟನೆ ಝಹೀರುದ್ದೀನ್ ಅವರ ಕುಟುಂಬ ಸದಸ್ಯರಿಗೆ ಆಘಾತ ನೀಡಿದೆ.
-
Gold Price Today: ಯುಗಾದಿಗೂ ಮೊದಲೇ ಚಿನ್ನದ ದರದಲ್ಲಿ ಭಾರೀ ಇಳಿಕೆ; ಆಭರಣ ಪ್ರಿಯರಿಗೆ ಇಂದೇ ಹಬ್ಬ -
ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಹಂಚಿಕೆ ಪ್ರಕರಣ: 13,712 ಪುಟಗಳ ಚಾರ್ಜ್ಶೀಟ್ ಸಲ್ಲಿಸಿದ ಎಸ್ಐಟಿ -
Viral Video: 'ಓಂಕಾರ' ಚಿತ್ರದ ಬೀಡಿ ಜಲೈಲೆ ಹಾಡಿಗೆ ಸಖತ್ ಸ್ಟೆಪ್ಸ್ ಹಾಕಿದ ಬ್ರೆಜಿಲ್ ಬೆಡಗಿಯರು -
ಮಗುವನ್ನ ಸಾಕಲು ಹಣ ಬೇಕಾದ್ರೆ ಯಾರ ಜೊತೆ ಬೇಕಿದ್ರೂ ಮಲಗುವೆ: ಬಿಗ್ಬಾಸ್ ಖ್ಯಾತಿಯ ಚಂದ್ರಿಕಾ ದೀಕ್ಷಿತ್ -
Karnataka Weather: ಬೆಂಗಳೂರು ಸೇರಿದಂತೆ ರಾಜ್ಯದ 17 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
ಸಿನಿಮಾ ಕಥೆಗೆ ವಿರುದ್ಧವಾಗಿ ಕುಂಭಮೇಳ ಮೊನಾಲಿಸಾ ಮದುವೆ, 10 ಕೋಟಿ ರೂ. ಸಾಲ ಮಾಡಿದ್ದೇನೆ: ನಿರ್ದೇಶಕ ಸನೋಜ್ ಮಿಶ್ರಾ ಆತಂಕ -
"ಕೆಡಿ" ಸಿನಿಮಾದ ಹಾಡು ಅಶ್ಲೀಲವಾಗಿದ್ರೆ ಕೂಡಲೇ ಎಲ್ಲ ಕಡೆ ತೆರವು ಮಾಡಿ: ಸೆನ್ಸಾರ್ ಮಂಡಳಿಗೆ ಕೇಂದ್ರ ಸರ್ಕಾರ ಸೂಚನೆ -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು -
ಸರಕು ಖಾಲಿಯಾಯ್ತಾ ಪ್ರೇಮ್, ಇಡೀ ದೇಶದ ಮುಂದೆ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದಿರಿ: ಸೆರಗ ಸರ್ಸೆ ಹಾಡಿಗೆ ವಿರೋಧ -
Bengaluru Second Airport: ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ: ದೆಹಲಿಯಲ್ಲಿ ಕೇಂದ್ರ ಸಚಿವರ ಭೇಟಿಯಾದ ಡಿ.ಕೆ.ಶಿವಕುಮಾರ್ -
Nora Fatehi: ಸರ್ಸೆ ನಿನ್ನ ಸೆರಗ ಹಾಡು ವಿವಾದ: ಹೇಳಿದ್ದೊಂದು- ಮಾಡಿದ್ದು ಇನ್ನೊಂದು, ನನ್ನ ನಂಬಿ ಪ್ಲೀಸ್ -
SSLC ವಿದ್ಯಾರ್ಥಿಗಳ ಗಮನಕ್ಕೆ: ಮಾರ್ಚ್ 18ಕ್ಕೆ ಪ್ರಥಮ ಭಾಷೆ ಕನ್ನಡ ಪರೀಕ್ಷೆ; ಪಾಸಾಗಲು ಈ ಪ್ರಮುಖ ಅಂಶಗಳನ್ನು ಗಮನಿಸಿ












Click it and Unblock the Notifications