ರಣಾಂಗಣವಾದ ಮುನ್ಸಿಪಲ್ ಸಭೆ: ಕುರ್ಚಿ, ಮೇಜು ಬಳಸಿ ಹೊಡೆದಾಟ
ಡಬ್ಲ್ಯುಡಬ್ಲ್ಯುಇ ಕುಸ್ತಿ ಪಂದ್ಯಗಳನ್ನು ಮೀರಿಸುವಂತೆ, ಉತ್ತರ ಪ್ರದೇಶದ ಶಾಮ್ಲಿ ಪುರಸಭೆಯ ಕೆಲವು ಸದಸ್ಯರು ಸಭೆಯಲ್ಲಿ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಜನರು ತಮ್ಮನ್ನು ರಕ್ಷಿಸಿಕೊಳ್ಳಲು ಟೇಬಲ್ ಅನ್ನು ಬಳಸಿದರು, ಮತ್ತು ಒಬ್ಬರು ಕುರ್ಚಿಯ ಮೇಲೆ ಹತ್ತಿ ಇನ್ನೊಬ್ಬ ಸದಸ್ಯರ ಮೇಲೆ ಹಾರಲು ಪ್ರಯತ್ನಿಸಿದರು.
ಶಾಮ್ಲಿ ನಗರಸಭೆಯ ಆಡಳಿತ ಮಂಡಳಿ ಸಭೆಯಲ್ಲಿ ನಗರಸಭೆ ಅಧ್ಯಕ್ಷ ಅರವಿಂದ ಸಂಗಲ್ ಹಾಗೂ ಶಾಸಕ ಪ್ರಸನ್ನ ಚೌಧರಿ ಅವರ ಸಮ್ಮುಖದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ.

ವೀಡಿಯೋದಲ್ಲಿ ಸೆರೆಯಾದ ಜಗಳ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪ್ರತಿಪಕ್ಷಗಳಿಂದಲೂ ಖಂಡನೆ ವ್ಯಕ್ತವಾಗಿದೆ. ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಎಕ್ಸ್ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದು ಆಡಳಿತಾರೂಢ ಭಾರತೀಯ ಜನತಾ ಪಕ್ಷವನ್ನು ನೇರವಾಗಿ ಟೀಕಿಸಿದರು.
In UP's Shamli, two corporators throw punches at each other after an argument during the Nagar Palika board meeting swelled into a full blown brawl. pic.twitter.com/LHi9zCNkUd
— Piyush Rai (@Benarasiyaa) December 28, 2023
ಪಕ್ಷದಲ್ಲಿ ಭಿನ್ನಾಭಿಪ್ರಾಯ
ಈ ಘಟನೆಯು ಸ್ಥಳೀಯ ಆಡಳಿತದ ಸ್ಥಿತಿಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುವುದಲ್ಲದೆ ಆಡಳಿತಾರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ) ಯೊಳಗಿನ ಉದ್ವಿಗ್ನತೆ ಮತ್ತು ಬಿರುಕುಗಳನ್ನು ಎತ್ತಿ ತೋರಿಸುತ್ತದೆ ಎಂದು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಹೇಳಿದರು.
ಯಾವುದೇ ಅಭಿವೃದ್ಧಿ ಕೆಲಸಗಳು ಆಗದೇ ಇದ್ದಾಗ ಪರಿಶೀಲನಾ ಸಭೆಯಲ್ಲಿ ಇನ್ನೇನು ನಡೆಯಬಹುದಿತ್ತು, ಅದಕ್ಕೇ ಶಾಮ್ಲಿಯಲ್ಲಿ ಕೌನ್ಸಿಲರ್ಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಬಿಜೆಪಿ ಆಡಳಿತದ ಪಾಠ: 'ನಿಮ್ಮದೇ ಭದ್ರತೆಯನ್ನು ವ್ಯವಸ್ಥೆ ಮಾಡಿಕೊಂಡು ಪರಿಶೀಲನಾ ಸಭೆಗೆ ಬನ್ನಿ' ಎಂದು ಟೀಕಿಸಿದ್ದಾರೆ.
ಇಂಡಿಯಾ ಟುಡೇ ಪ್ರಕಾರ ಶಾಮ್ಲಿಯಲ್ಲಿ ₹ 4 ಕೋಟಿ ವೆಚ್ಚದ ಅಭಿವೃದ್ಧಿ ಯೋಜನೆಗಳ ಕುರಿತು ಚರ್ಚಿಸಲು ಸಭೆ ನಡೆಸಲಾಯಿತು. ಈ ಸಂದರ್ಭದಲ್ಲಿ ಸದಸ್ಯರ ನಡುವೆ ಮಾತಿನ ಚಕಮಕಿ ಶುರುವಾಗಿದ್ದು, ನಂತರ ಹೊಡೆದಾಟ ಆರಂಭವಾಗಿದೆ.












Click it and Unblock the Notifications