ಸ್ಯಾಮ್ಸಂಗ್ಗೆ ರಾಜೀನಾಮೆ- ಮೋದಿ ಸರ್ಕಾರದಲ್ಲಿ ಕೆಲಸ!
ಅಹಮದಾಬಾದ್, ಜೂನ್.2: ಸ್ಯಾಮ್ಸಂಗ್ನ ಸಂಶೋಧನಾ ವಿಭಾಗದ ಉಪ ಮುಖ್ಯಸ್ಥ, ಗುಜರಾತ್ನ ಮೂಲದ ಪ್ರಣವ್ ಮಿಸ್ತ್ರಿ, ಅಮೆರಿಕದ ಸಿಲಿಕಾನ್ ವ್ಯಾಲಿಯ ಕೋಟ್ಯಾಂತರ ರೂಪಾಯಿ ಸಂಬಳ ಬಿಟ್ಟು ನರೇಂದ್ರ ಮೋದಿಯವರ ಜೊತೆ ಕೆಲಸ ಮಾಡಲು ಉತ್ಸುಕರಾಗಿದ್ದಾರೆ.
ಮೋದಿ ಬೆಂಬಲಿಗರಾಗಿರುವ ಪ್ರಣವ್ ನನ್ನ ಲ್ಯಾಬ್ ಕೆಲಸಕ್ಕೆ ಗುಡ್ಬೈ ಹೇಳಿ ಮರಳಿ ಭಾರತಕ್ಕೆ ಬಂದು ಮೋದಿಯವರ ಜೊತೆ ಕೈ ಜೋಡಿಸಲು ನಾನು ಸಿದ್ದ ಎಂದು ಹೇಳಿದ್ದಾರೆ.
ಪ್ರಣವ್ ಅವರು 2011ರಲ್ಲಿ ಗುಜರಾತ್ನ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಮೋದಿಯವರನ್ನು ಭೇಟಿಯಾಗಿದ್ದರು. ಆ ಸಂದರ್ಭದಲ್ಲಿ ಪ್ರಣವ್ ಅವರು ಸಿಕ್ಸ್ತ್ ಸೆನ್ಸ್ ತಂತ್ರಜ್ಞಾನವನ್ನು ಪವರ್ ಪಾಯಿಂಟ್ ಮೂಲಕ ಮೋದಿಯವರಿಗೆ ವಿವರಿಸಿದ್ದರು. ಈ ತಂತ್ರಜ್ಞಾನಕ್ಕೆ ಮೋದಿಯವರು ಮೆಚ್ಚುಗೆ ಸೂಚಿಸಿದ್ದರು.
ಸ್ಯಾಮ್ಸಂಗ್ ಗೇರ್ ಯೋಜನೆ ನಂತರ ಒಂದು ಹೊಸ ಕಂಪೆನಿ ಸ್ಥಾಪಿಸಲು ಪ್ರಣವ್ ಚಿಂತಿಸಿದ್ದರು. ಆದರೆ ದುಡ್ಡು ಮಾಡಿ ಶ್ರೀಮಂತರಾಗದೇ ಭಾರತಕ್ಕೆ ಬಂದು ಜನಸಾಮಾನ್ಯರಿಗೆ ನೆರವಾಗುವ ಸಾಮಾನ್ಯ ಯೋಜನೆಗಳಿಗೆ ಕೆಲಸ ಮಾಡಲು ಮುಂದಾಗುತ್ತಿದ್ದೇನೆ ಎಂದು ಹೇಳಿದ್ದಾರೆ.[ಈತ ಮೋದಿ ಕಚೇರಿಯ ಪ್ರಮುಖ ಅಧಿಕಾರಿ]

ನವೆಂಬರ್ 2013ರಲ್ಲಿ ಫೇಸ್ಬುಕ್ನಲ್ಲಿ "ಭವ್ಯ ಭಾರತದ ನಿರ್ಮಾಣಕ್ಕೆ ಮೋದಿಯವರಿಗೆ ಬಹಿರಂಗವಾಗಿ ಬೆಂಬಲ ನೀಡಬೇಕಾ'' ಎಂದು ಪ್ರಣವ್ ಪ್ರಶ್ನಿಸಿದ್ದರು.
ಮೋದಿಯವರು ಪ್ರಮಾಣ ವಚನ ಸ್ವೀಕರಿಸಿದ ದಿನ '' ಇಂದಿನಿಂದ ಭಾರತದಲ್ಲಿ ಹೊಸ ಬದಲಾವಣೆ ಆಗಲಿದೆ. ವಂಶಪಾರಂಪರೆಯ ರಾಜಕಾರಣದಿಂದ ಭಾರತ ಮುಕ್ತವಾದ ದಿನ" ಎಂದು ಮೋದಿಯವರನ್ನು ಬೆಂಬಲಿಸಿ ಟ್ವೀಟ್ ಮಾಡಿದ್ದರು.
ಪ್ರಧಾನಿ ಮೋದಿ ಮತ್ತು ಪ್ರಣವ್ ಮಿಸ್ತ್ರಿ ಭೇಟಿಗೆ ಇನ್ನೂ ಅಧಿಕೃತ ದಿನ ನಿಗದಿಯಾಗಿಲ್ಲ. ಜೂನ್ ತಿಂಗಳಿನಲ್ಲಿ ನರೇಂದ್ರ ಮೋದಿ ಮತ್ತು ಪ್ರಣವ್ ಮಿಸ್ತ್ರಿ ಭೇಟಿಯಾಗುವ ಸಾಧ್ಯತೆಯಿದೆ. ಮಾಹಿತಿಗಳ ಪ್ರಕಾರ ಸರ್ಕಾರದ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯದ ಸಲಹೆಗಾರರಾಗಿ ಅವರು ನೇಮಕವಾಗುವ ಸಾಧ್ಯತೆಯಿದೆ.
ಪ್ರಣವ್ ಮಿಸ್ತ್ರಿ:
ಸ್ಯಾಮ್ಸಂಗ್ ಕಂಪನಿಯ ಸಂಶೋಧನಾ ವಿಭಾಗದಲ್ಲಿರುವ ಪ್ರಣವ್ ಮಿಸ್ತ್ರಿ ಅವರು ಬಾಂಬೆ ಐಐಟಿಯ ಹಳೇವಿದ್ಯಾರ್ಥಿ. ಸ್ಯಾಮ್ಸಂಗ್ನ ಥಿಂಕ್ ಟ್ಯಾಂಕ್ ವಿಭಾಗ ಮುಖ್ಯಸ್ಥರಾಗಿದ್ದಾರೆ. ವೇರಬಲ್ ಕಂಪ್ಯೂಟಿಂಗ್, ಅಗ್ಮೆಂಟೆಡ್ ರಿಯಾಲಿಟಿ, ಗೆಶ್ಚರ್ ತಂತ್ರಜ್ಞಾನ, ರೊಬೊಟಿಕ್ಸ್ ಕ್ಷೇತ್ರದಲ್ಲಿ ಸಂಶೋಧನೆ ನಡೆಸಿದ್ದಾರೆ.ವಿಶ್ವ ಆರ್ಥಿಕ ವೇದಿಕೆಯವರು 2013ರಲ್ಲಿ ಪ್ರಣವ್ ಮಿಸ್ತ್ರಿ 'ಯಂಗ್ ಗ್ಲೋಬಲ್ ಲೀಡರ್ ' ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಸ್ಯಾಮ್ಸಂಗ್ ವೇರಬಲ್ ಸಾಧನ ಗೆಲಾಕ್ಸಿ ಗೇರ್ ಕೈಗಡಿಯಾರವನ್ನು ರೂಪಿಸಿದ ಕೀರ್ತಿ ಇವರದು.
Today is a new beginning. A day when India gets freedom from dynasty politics. A day of hope and dreams. Jai hind. @narendramodi
— Pranav Mistry (@pranavmistry) May 26, 2014 Discussion about - India, technology, life and storytelling over dinner tonight with friends, @shekharkapur and @poonacha_bm :)
— Pranav Mistry (@pranavmistry) May 26, 2014 -
Gold Rate: ಆಭರಣ ಪ್ರಿಯರ ಗಮನಕ್ಕೆ; ಮಾರುಕಟ್ಟೆಯಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ ಗೊತ್ತಾ? ಇಲ್ಲಿದೆ ಮಾಹಿತಿ -
ಮಕ್ಕಳನ್ನ ಫ್ಯಾಕ್ಟರಿಯಂತೆ ಹೆರುತ್ತಾರೆ, ಪೋಷಿಸುವ ತಾಕತ್ತಿದ್ರೆ ಮಾತ್ರ ಮಕ್ಕಳು ಮಾಡ್ಕೊಳ್ಳಿ: ನಟಿ ವರಲಕ್ಷ್ಮಿ ಶರತ್ಕುಮಾರ್ -
Viral Video: ಶಾಲಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರ ಟವಲ್ ಡ್ಯಾನ್ಸ್: ಚರ್ಚೆ ಹುಟ್ಟುಹಾಕಿದ ವೈರಲ್ ವಿಡಿಯೋ -
Viral Video: ಪೋಷಕರಿಗೆ ಹೊಸ ಕಾರು ಗಿಫ್ಟ್ ಮಾಡಿದ ಹೆಣ್ಣುಮಕ್ಕಳು, ನೆಟ್ಟಿಗರ ಹೃದಯ ಗೆದ್ದ ಈ ವಿಡಿಯೋ -
Anushka Shetty Marriage: ಬೆಂಗಳೂರಿನ ಖ್ಯಾತ ಉದ್ಯಮಿ ಜೊತೆ ನಟಿ ಅನುಷ್ಕಾ ಶೆಟ್ಟಿ ಮದುವೆ, ಈ ವರ್ಷದಲ್ಲೇ ಮುಹೂರ್ತ: ವರದಿ -
1 ರೂಪಾಯಿಗೆ 1 ಲೀಟರ್ ಹಾಲು: ಫ್ಲಿಪ್ಕಾರ್ಟ್ ವಿರುದ್ಧ ಸಿಡಿದೆದ್ದ ಡಿ.ಕೆ. ಸುರೇಶ್; ಪ್ರಧಾನಿ ಮೋದಿಗೆ ದೂರು -
ಬಿಜೆಪಿಯಿಂದ ನಟ ವಿಜಯ್ಗೆ ಡಿಸಿಎಂ ಹುದ್ದೆ, 80 ಸೀಟುಗಳ ಆಫರ್; ತಮಿಳುನಾಡು ಚುನಾವಣೆಗೆ ಹೊಸ ಮೈತ್ರಿ ಲೆಕ್ಕಾಚಾರ -
Karnataka Weather: ಸಿಲಿಕಾನ್ ಸಿಟಿಯಲ್ಲಿ ಹೆಚ್ಚಿದ ತಾಪಮಾನ; ಕರಾವಳಿ, ಮಲೆನಾಡಿನಲ್ಲಿ ಇಂದು ಮಳೆಯಾಗುವ ಸಾಧ್ಯತೆ -
LPG New Rule: ಎಲ್ಪಿಜಿ ಹೊಸ ನಿಯಮ: ಪಿಎನ್ಜಿ ಸಂಪರ್ಕ ಇದ್ದರೆ ಇನ್ನು ಮುಂದೆ ಸಿಲಿಂಡರ್ ಸಿಗಲ್ಲ -
Government Employees: ಪಶ್ಚಿಮ ಬಂಗಾಳ ಸರ್ಕಾರಿ ನೌಕರರಿಗೆ ಸಿಎಂ ಮಮತಾ ಬ್ಯಾನರ್ಜಿ ಬಂಪರ್ ಕೊಡುಗೆ -
ರಾಜ್ಯದಲ್ಲಿ ಕಮರ್ಷಿಯಲ್ ಉದ್ದೇಶಕ್ಕೆ ಗೃಹಬಳಕೆ LPG ಸಿಲಿಂಡರ್ ಬಳಸಿದವರ ಮೇಲೆ ಅಧಿಕಾರಿಗಳ ಖಡಕ್ ದಾಳಿ -
ಬೆಂಗಳೂರು 2ನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ vs ಹೊಸೂರು ಏರ್ಪೋರ್ಟ್: ಯೋಜನೆ ಯಾವ ಹಂತದಲ್ಲಿದೆ












Click it and Unblock the Notifications