ಸ್ಯಾಮ್ ಸಂಗ್ ಕಂಪನಿ ಬಾಸ್ ಲೀ ಬಂಧನ
ಲೀ ವಿರುದ್ಧ ಭಾರತೀಯ ಕಾಲಮಾನ ಶುಕ್ರವಾರ ಬೆಳಗಿನ ಜಾವದ ಹೊತ್ತಿಗೆ ಬಂಧನದ ಆದೇಶ ನೀಡಿದ ದಕ್ಷಿಣ ಕೊರಿಯಾದ ನ್ಯಾಯಾಲಯ
ಸಿಯೋಲ್, ಫೆಬ್ರವರಿ 17: ಜಗದ್ವಿಖ್ಯಾತ ಇಲೆಕ್ಟ್ರಾನಿಕ್ಸ್ ಪರಿಕರಗಳ ಉತ್ಪನ್ನ ಸಂಸ್ಥೆ ಸ್ಯಾಮ್ ಸಂಗ್ ಕಂಪನಿಯ ಮುಖ್ಯಸ್ಥ ಜೇ ವೈ. ಲೀ ಅವರನ್ನು ಬಂಧಿಸಲಾಗಿದೆ. ಭ್ರಷ್ಟಾಚಾರ ಹಾಗೂ ಹಲವಾರು ಹಗರಣಗಳ ಆರೋಪ ಎದುರಿಸಿದ್ದ ಅವರ ವಿರುದ್ಧ ದಕ್ಷಿಣ ಕೊರಿಯಾ ಸರ್ಕಾರ ತನಿಖೆಗೆ ಆದೇಶಿಸಿತ್ತು.
ತನಿಖಾ ವರದಿಯು ನ್ಯಾಯಾಲಯದಲ್ಲಿ ಮಂಡನೆಯಾಗಿ ವರ್ಷಗಟ್ಟಲೆ ವಾದ-ವಿವಾದಗಳು ನಡೆದು, ಗುರುವಾರ ಮಧ್ಯರಾತ್ರಿ (ಭಾರತೀಯ ಕಾಲಮಾನದ ಪ್ರಕಾರ ಶುಕ್ರವಾರ ಬೆಳಗಿನ ಜಾವ 5:30ಕ್ಕೆ) ಲೀ ಬಂಧನಕ್ಕೆ ತೀರ್ಪು ಹೊರಬಿದ್ದ ಹಿನ್ನೆಲೆಯಲ್ಲಿ ಅವರ ಬಂಧನವಾಗಿದೆ. ಸದ್ಯಕ್ಕೀಗ ಅವರನ್ನು ಸಿಯೋಲ್ ಡಿಟೆನ್ಷನ್ ಸೆಂಟರ್ ನಲ್ಲಿ ಬಂಧಿಯಾಗಿರಿಸಲಾಗಿದೆ.

ದೈತ್ಯ ಕಂಪನಿಯಾದ ಸ್ಯಾಮ್ ಸಂಗ್
48 ವರ್ಷದ ಲೀ, ದಕ್ಷಿಣ ಕೊರಿಯಾದ ಅತಿ ಶ್ರೀಮಂತ ಉದ್ಯಮಿಯ ವಂಶಸ್ಥ. ಲೀ ಅವರು ಸ್ಯಾಮ್ ಸಂಗ್ ಕಂಪನಿಯ ಬಾಸ್ ಆಗಿದ್ದಂತೆ ಅವರ ಕುಟುಂಬದ ಅನೇಕ ಸದಸ್ಯರು ಸ್ಯಾಮ್ ಸಂಗ್ ಅಂಗ ಸಂಸ್ಥೆಗಳೆನಿಸಿಕೊಂಡ ಹಲವಾರು ಕಂಪನಿಗಳ ಮುಖ್ಯಸ್ಥರಾಗಿದ್ದಾರೆ.

ಜಿಡಿಪಿಗೆ ಕಾಣಿಕೆ ಸಲ್ಲಿಸುತ್ತಿದ್ದ ವಂಶ!
ದೇಶದ ಒಟ್ಟಾರೆ ಉತ್ಪನ್ನದಲ್ಲಿ ಶೇ. 17ರಷ್ಟು ಈ ಕುಟುಂಬದ ಕಂಪನಿಗಳ ಪಾಲು ಇತ್ತೆಂದರೆ, ಆ ದೇಶದ ಸರ್ಕಾರದ ಮೇಲೆ ಆ ಕುಟುಂಬದ ಪ್ರಭಾವ ಎಷ್ಟಿರಬಹುದೆಂದು ಯಾರಾದರೂ ಊಹಿಸಬಹುದು.

ಕೋಟ್ಯಂತರ ಮೊತ್ತದ ಹಗರಣ
ದೇಶದ ಜಿಡಿಪಿಗೆ ತಮ್ಮ ಕಂಪನಿಗಳ ಸಮೂಹದ ಕಾಣಿಕೆಯೂ ಇರುವುದರನ್ನು ಗಮನಿಸಿದ ನಂತರ, ಇದರ ದುರುಪಯೋಗಪಡೆದುಕೊಂಡ ಲೀ ಹಾಗೂ ಅವರ ಸಂಬಂಧಿಗಳು ಸರ್ಕಾರದ ಮಟ್ಟದಲ್ಲಿ ಕೆಲವಾರು ಲಾಭಿಗಳನ್ನು ಮಾಡಿ ಕೋಟ್ಯಾಂತರ ಮೊತ್ತದ ಹಲವಾರು ಹಗರಣಗಳನ್ನು ನಡೆಸಿದ್ದಾರೆಂಬ ಆರೋಪವಿದೆ.

ಸರ್ಕಾರವೇ ಅವರ ಅಡಿಯಾಳಾಗಿತ್ತಾ?
ಲೀ ಅವರ ಶ್ರೀಮಂತ ಕುಟುಂಬದ ಇತರ ಸದಸ್ಯರೂ ಸ್ಯಾಮ್ ಸಂಗ್ ನಂಥದ್ದೇ ಹಲವಾರು ಕಂಪನಿಗಳನ್ನು ನಡೆಸುತ್ತಿದ್ದು ಹಲವಾರು ಲಾಬಿಗಳನ್ನು ಮಾಡಿ ತಮ್ಮ ಕಂಪನಿಗಳಿಗೆ ಕೋಟ್ಯಾಂತರ ಮೊತ್ತದ ಯೋಜನೆಗಳನ್ನು, ಸವಲತ್ತುಗಳನ್ನು ಬಾಚಿಕೊಂಡಿದ್ದಾರೆ ಎಂಬ ಆರೋಪಗಳಿದ್ದವು.

ಎಲ್ಲಾ ಅವ್ಯವಹಾರಗಳಿಗೆ ಅಡಿಪಾಯ ಅವರೇ?
ಸರ್ಕಾರದ ಮಟ್ಟದಲ್ಲಿ ಆಗಿರುವ ಎಲ್ಲಾ ಆರ್ಥಿಕ ಅವ್ಯವಹಾರಗಳಿಗೂ ಮೂಲ ಆಧಾರವೇ ಲೀ ಆಗಿದ್ದು, ಅವರ ಅಡಿಯಲ್ಲೇ ಎಲ್ಲಾ ಅವ್ಯವಹಾರಗಳಾಗಿರುವುದು ತನಿಖೆಯಿಂದ ದೃಢಪಟ್ಟಿದೆ. ಹಾಗಾಗಿ, ಅವರ ಬಂಧನವಾಗಿದೆ.
-
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ -
Summer Specail Train: ಮೈಸೂರಿನಿಂದ ಇಲ್ಲಿಗೆ ವಿಶೇಷ ಎಕ್ಸ್ಪ್ರೆಸ್ ರೈಲು, 3 ರಾಜ್ಯಗಳಿಗೆ ಅನುಕೂಲ -
April 12 Horoscope: 12 ರಾಶಿಗಳಿಗೆ ಇಂದು ಹಣ-ಪ್ರೇಮದಲ್ಲಿ ಅದೃಷ್ಟ ಯಾರಿಗೆ? ಸಂಪೂರ್ಣ ವಿವರ -
IPL 2026: ಗಿಲ್ ಮತ್ತು ಬಟ್ಲರ್ ಸ್ಫೋಟಕ ಬ್ಯಾಟಿಂಗ್, ಎಲ್ಎಸ್ಜಿ ಮಣಿಸಿದ ಗುಜರಾತ್ ಟೈಟಾನ್ಸ್ -
Asha Bhosle: ಭಾರತೀಯ ಸಿನಿಮಾ ರಂಗದ ಖ್ಯಾತ ಗಾಯಕಿ ಆಶಾ ಭೋಸ್ಲೆ ಇನ್ನಿಲ್ಲ, ಸಂಗೀತ ರಾಣಿ ಎಂದೇ ಖ್ಯಾತಿ -
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ -
Vijay: ನಟ, ರಾಜಕಾರಣಿ ವಿಜಯ್ ಮಹತ್ವದ ಟ್ವೀಟ್ - ಅಪ್ರಬುದ್ಧ ರಾಜಕಾರಣಿ ಎಂದ ಡಿ.ಕೆ ಶಿವಕುಮಾರ್ Tamil Nadu Assembly Election -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್ -
Transfer: ಕರ್ನಾಟಕ ಶಿಕ್ಷಕರಿಗೆ ಸಿಹಿ ಸುದ್ದಿ: ವರ್ಗಾವಣೆ ನಿಯಮಗಳಲ್ಲಿ ಮಹತ್ವ ಬದಲಾವಣೆ, ಯಾರು ಅರ್ಹರು?












Click it and Unblock the Notifications