ಸ್ಯಾಮ್ ಸಂಗ್ ಕಂಪನಿ ಬಾಸ್ ಲೀ ಬಂಧನ
ಲೀ ವಿರುದ್ಧ ಭಾರತೀಯ ಕಾಲಮಾನ ಶುಕ್ರವಾರ ಬೆಳಗಿನ ಜಾವದ ಹೊತ್ತಿಗೆ ಬಂಧನದ ಆದೇಶ ನೀಡಿದ ದಕ್ಷಿಣ ಕೊರಿಯಾದ ನ್ಯಾಯಾಲಯ
ಸಿಯೋಲ್, ಫೆಬ್ರವರಿ 17: ಜಗದ್ವಿಖ್ಯಾತ ಇಲೆಕ್ಟ್ರಾನಿಕ್ಸ್ ಪರಿಕರಗಳ ಉತ್ಪನ್ನ ಸಂಸ್ಥೆ ಸ್ಯಾಮ್ ಸಂಗ್ ಕಂಪನಿಯ ಮುಖ್ಯಸ್ಥ ಜೇ ವೈ. ಲೀ ಅವರನ್ನು ಬಂಧಿಸಲಾಗಿದೆ. ಭ್ರಷ್ಟಾಚಾರ ಹಾಗೂ ಹಲವಾರು ಹಗರಣಗಳ ಆರೋಪ ಎದುರಿಸಿದ್ದ ಅವರ ವಿರುದ್ಧ ದಕ್ಷಿಣ ಕೊರಿಯಾ ಸರ್ಕಾರ ತನಿಖೆಗೆ ಆದೇಶಿಸಿತ್ತು.
ತನಿಖಾ ವರದಿಯು ನ್ಯಾಯಾಲಯದಲ್ಲಿ ಮಂಡನೆಯಾಗಿ ವರ್ಷಗಟ್ಟಲೆ ವಾದ-ವಿವಾದಗಳು ನಡೆದು, ಗುರುವಾರ ಮಧ್ಯರಾತ್ರಿ (ಭಾರತೀಯ ಕಾಲಮಾನದ ಪ್ರಕಾರ ಶುಕ್ರವಾರ ಬೆಳಗಿನ ಜಾವ 5:30ಕ್ಕೆ) ಲೀ ಬಂಧನಕ್ಕೆ ತೀರ್ಪು ಹೊರಬಿದ್ದ ಹಿನ್ನೆಲೆಯಲ್ಲಿ ಅವರ ಬಂಧನವಾಗಿದೆ. ಸದ್ಯಕ್ಕೀಗ ಅವರನ್ನು ಸಿಯೋಲ್ ಡಿಟೆನ್ಷನ್ ಸೆಂಟರ್ ನಲ್ಲಿ ಬಂಧಿಯಾಗಿರಿಸಲಾಗಿದೆ.

ದೈತ್ಯ ಕಂಪನಿಯಾದ ಸ್ಯಾಮ್ ಸಂಗ್
48 ವರ್ಷದ ಲೀ, ದಕ್ಷಿಣ ಕೊರಿಯಾದ ಅತಿ ಶ್ರೀಮಂತ ಉದ್ಯಮಿಯ ವಂಶಸ್ಥ. ಲೀ ಅವರು ಸ್ಯಾಮ್ ಸಂಗ್ ಕಂಪನಿಯ ಬಾಸ್ ಆಗಿದ್ದಂತೆ ಅವರ ಕುಟುಂಬದ ಅನೇಕ ಸದಸ್ಯರು ಸ್ಯಾಮ್ ಸಂಗ್ ಅಂಗ ಸಂಸ್ಥೆಗಳೆನಿಸಿಕೊಂಡ ಹಲವಾರು ಕಂಪನಿಗಳ ಮುಖ್ಯಸ್ಥರಾಗಿದ್ದಾರೆ.

ಜಿಡಿಪಿಗೆ ಕಾಣಿಕೆ ಸಲ್ಲಿಸುತ್ತಿದ್ದ ವಂಶ!
ದೇಶದ ಒಟ್ಟಾರೆ ಉತ್ಪನ್ನದಲ್ಲಿ ಶೇ. 17ರಷ್ಟು ಈ ಕುಟುಂಬದ ಕಂಪನಿಗಳ ಪಾಲು ಇತ್ತೆಂದರೆ, ಆ ದೇಶದ ಸರ್ಕಾರದ ಮೇಲೆ ಆ ಕುಟುಂಬದ ಪ್ರಭಾವ ಎಷ್ಟಿರಬಹುದೆಂದು ಯಾರಾದರೂ ಊಹಿಸಬಹುದು.

ಕೋಟ್ಯಂತರ ಮೊತ್ತದ ಹಗರಣ
ದೇಶದ ಜಿಡಿಪಿಗೆ ತಮ್ಮ ಕಂಪನಿಗಳ ಸಮೂಹದ ಕಾಣಿಕೆಯೂ ಇರುವುದರನ್ನು ಗಮನಿಸಿದ ನಂತರ, ಇದರ ದುರುಪಯೋಗಪಡೆದುಕೊಂಡ ಲೀ ಹಾಗೂ ಅವರ ಸಂಬಂಧಿಗಳು ಸರ್ಕಾರದ ಮಟ್ಟದಲ್ಲಿ ಕೆಲವಾರು ಲಾಭಿಗಳನ್ನು ಮಾಡಿ ಕೋಟ್ಯಾಂತರ ಮೊತ್ತದ ಹಲವಾರು ಹಗರಣಗಳನ್ನು ನಡೆಸಿದ್ದಾರೆಂಬ ಆರೋಪವಿದೆ.

ಸರ್ಕಾರವೇ ಅವರ ಅಡಿಯಾಳಾಗಿತ್ತಾ?
ಲೀ ಅವರ ಶ್ರೀಮಂತ ಕುಟುಂಬದ ಇತರ ಸದಸ್ಯರೂ ಸ್ಯಾಮ್ ಸಂಗ್ ನಂಥದ್ದೇ ಹಲವಾರು ಕಂಪನಿಗಳನ್ನು ನಡೆಸುತ್ತಿದ್ದು ಹಲವಾರು ಲಾಬಿಗಳನ್ನು ಮಾಡಿ ತಮ್ಮ ಕಂಪನಿಗಳಿಗೆ ಕೋಟ್ಯಾಂತರ ಮೊತ್ತದ ಯೋಜನೆಗಳನ್ನು, ಸವಲತ್ತುಗಳನ್ನು ಬಾಚಿಕೊಂಡಿದ್ದಾರೆ ಎಂಬ ಆರೋಪಗಳಿದ್ದವು.

ಎಲ್ಲಾ ಅವ್ಯವಹಾರಗಳಿಗೆ ಅಡಿಪಾಯ ಅವರೇ?
ಸರ್ಕಾರದ ಮಟ್ಟದಲ್ಲಿ ಆಗಿರುವ ಎಲ್ಲಾ ಆರ್ಥಿಕ ಅವ್ಯವಹಾರಗಳಿಗೂ ಮೂಲ ಆಧಾರವೇ ಲೀ ಆಗಿದ್ದು, ಅವರ ಅಡಿಯಲ್ಲೇ ಎಲ್ಲಾ ಅವ್ಯವಹಾರಗಳಾಗಿರುವುದು ತನಿಖೆಯಿಂದ ದೃಢಪಟ್ಟಿದೆ. ಹಾಗಾಗಿ, ಅವರ ಬಂಧನವಾಗಿದೆ.
-
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ -
By-Election: ದಾವಣಗೆರೆ ದಕ್ಷಿಣದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ನಿಶ್ಚಿತ; ಬಸವರಾಜ ಬೊಮ್ಮಾಯಿ ವಿಶ್ವಾಸ -
ಆರ್ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ಕೇವಲ 42 ಎಸೆತಗಳಲ್ಲಿ 94 ರನ್ ಸಿಡಿಸಿದ ಅಭಿಷೇಕ್ ಶರ್ಮಾ: ಭಾರೀ ವೈರಲ್












Click it and Unblock the Notifications