ಶಬರಿಮಲೆ ದೇವಸ್ಥಾನದ ವಿವಾದ: ಕಾನೂನು ಹೋರಾಟದ ಟೈಮ್ಲೈನ್
ನವದೆಹಲಿ, ಸೆಪ್ಟೆಂಬರ್ 28: ಕೇರಳದ ಶಬರಿಮಲೆ ದೇವಸ್ಥಾನದ ಒಳಗೆ ಎಲ್ಲ ವಯೋಮಾನದ ಮಹಿಳೆಯರಿಗೂ ಮುಕ್ತ ಪ್ರವೇಶಕ್ಕೆ ಅನುಮತಿ ನೀಡುವಂತೆ ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ.
ಋತುಮತಿಯಾದ ಮಹಿಳೆಯರಿಗೆ ದೇವಸ್ಥಾನದ ಆವರಣದ ಒಳಗೆ ಪ್ರವೇಶ ನೀಡದೆ ಇರುವುದು ಸುಮಾರು 800 ವರ್ಷಗಳಿಂದ ಪಾಲಿಸಿಕೊಂಡು ಬಂದಿರುವ ಆಚರಣೆ. ಮಹಿಳೆಯರಿಗೆ ಪ್ರವೇಶ ನೀಡಿದರೆ ದೇವಸ್ಥಾನದ ಪಾವಿತ್ರ್ಯಕ್ಕೆ ಧಕ್ಕೆಯಾಗುತ್ತದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಪ್ರತಿಪಾದಿಸಿತ್ತು.
ಶಬರಿಮಲೆ ತೀರ್ಪು LIVE: ಸುಪ್ರೀಂನಿಂದ ಮತ್ತೊಂದು ಐತಿಹಾಸಿಕ ತೀರ್ಪು
ಆದರೆ, ಪುರುಷರಷ್ಟೇ ಮಹಿಳೆಯರೂ ಸಮಾನರು. ಅವರಿಗೂ ಧಾರ್ಮಿಕ ಸ್ವಾತಂತ್ರ್ಯದ ಹಕ್ಕಿದೆ. ಆಡಳಿತ ಮಂಡಳಿ ಹೇರಿರುವ ನಿರ್ಬಂಧವನ್ನು ಅತ್ಯಗತ್ಯ ಧಾರ್ಮಿಕ ನಿಯಮ ಎಂದು ಪರಿಗಣಿಸಲು ಸಾಧ್ಯವಿಲ್ಲ. ಪೂಜಿಸುವ ಹಕ್ಕು ಎಲ್ಲರಿಗೂ ಇದೆ. ಅವರನ್ನು ದೇವಸ್ಥಾನದಿಂದ ಹೊರಗಿಟ್ಟಿರುವುದು ಸಂವಿಧಾನದ ತತ್ವಗಳನ್ನು ಗಾಳಿಗೆ ತೂರಿದಂತೆ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.
ಈ ವಿವಾದಕ್ಕೆ ಸಂಬಂಧಿಸಿದಂತೆ ಮಹತ್ವದ ತೀರ್ಪು ಶುಕ್ರವಾರ ಪ್ರಕಟವಾಗಿದ್ದರೂ, ಅನೇಕ ವರ್ಷಗಳಿಂದ ಈ ವಿವಾದ ನ್ಯಾಯಾಲಯದ ಅಂಗಳದಲ್ಲಿ ವಿಚಾರಣೆಗೆ ಒಳಪಡದೆ ನನೆಗುದಿಗೆ ಬಿದ್ದಿತ್ತು. ಈ ಪ್ರಕರಣದ ಕಾನೂನು ಹೋರಾಟದ ಹಾದಿ ಹೀಗಿದೆ.
ಶಬರಿಮಲೆ ತೀರ್ಪನ್ನು ಮಹಿಳಾ ನ್ಯಾಯಮೂರ್ತಿ ಇಂದು ಅವರೇ ವಿರೋಧಿಸಿದ್ದೇಕೆ?
1991
ಶಬರಿಮಲೆ
ದೇವಸ್ಥಾನದಲ್ಲಿ
ನಿರ್ದಿಷ್ಟ
ವಯೋಮಾನದ
ಮಹಿಳೆಯರಿಗೆ
ವಿಧಿಸಿರುವ
ನಿರ್ಬಂಧವನ್ನು
ಕೇರಳ
ಹೈಕೋರ್ಟ್
ಎತ್ತಿಹಿಡಿಯಿತು.
ಇಬ್ಬರು ನ್ಯಾಯಮೂರ್ತಿಗಳ ನ್ಯಾಯಪೀಠ, ದೇವಸ್ಥಾನದ ಮಂಡಳಿಯ ನಿಯಮವು ಸಂವಿಧಾನ ಅಥವಾ 1965ರ ಕೇರಳ ಕಾನೂನನ್ನು ಉಲ್ಲಂಘಿಸುವುದಿಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿತು.
ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಅನುಮತಿ, ಈ ದೇಗುಲಗಳ ಕಥೆ ಏನು?
2006
ನಿರ್ಬಂಧದ
ನಡುವೆಯೂ
ದೇವಸ್ಥಾನವನ್ನು
ಮಹಿಳೆಯೊಬ್ಬರು
ಪ್ರವೇಶಿಸಿದ್ದ
ಸಂಕೇತ
ಕಾಣಿಸುತ್ತಿದೆ
ಎಂದು
ಖ್ಯಾತ
ಜೋತಿಷಿಯೊಬ್ಬರು
ಹೇಳಿಕೆ
ನೀಡಿದ್ದರು.
2006
ಜೋತಿಷಿಯ
ಹೇಳಿಕೆ
ಬೆನ್ನಲ್ಲೇ
ನಟಿ,
ಹಾಲಿ
ಸಚಿವೆ
ಜಯಮಾಲಾ
ಅವರು,
ತಾವು
28
ವರ್ಷದವರಿದ್ದಾಗ
1987ರಲ್ಲಿ
ಸಿನಿಮಾ
ಚಿತ್ರೀಕರಣ
ಸಂದರ್ಭದಲ್ಲಿ
ದೇವಸ್ಥಾನದ
ಒಳಗೆ
ಪ್ರವೇಶಿಸಿದ್ದಲ್ಲದೆ
ಮೂರ್ತಿಯನ್ನು
ಸ್ಪರ್ಶಿಸಿದ್ದಾಗಿ
ಹೇಳಿದ್ದರು.
ದೇವಸ್ಥಾನದ
ಅರ್ಚಕ
ಅನುಮತಿ
ಪಡೆದೇ
ಈ
ಕ್ರಮ
ಅನುಸರಿಸಿದ್ದಾಗಿ
ತಿಳಿಸಿದ್ದರು.
2006
ಈ
ವಿವಾದವು
ತೀವ್ರಗೊಂಡಿದ್ದರಿಂದ
ಕೇರಳ
ಸರ್ಕಾರ
ಅಪರಾಧ
ದಳದ
ಮೂಲಕ
ಘಟನೆಯನ್ನು
ವಿಚಾರಣೆಗೆ
ಒಳಪಡಿಸಿತು.
ಬಳಿಕ
ಈ
ಪ್ರಕರಣವನ್ನು
ಕೈಬಿಡಲಾಯಿತು.
2008
ಶಬರಿಮಲೆ
ದೇವಸ್ಥಾನಕ್ಕೆ
ಮಹಿಳೆಯರಿಗೆ
ನಿರ್ಬಂಧ
ವಿಧಿಸಿರುವುದನ್ನು
ಪ್ರಶ್ನಿಸಿ
ಸಲ್ಲಿಸಲಾದ
ಸಾರ್ವಜನಿಕ
ಹಿತಾಸಕ್ತಿ
ಅರ್ಜಿಯನ್ನು
ಬೆಂಬಲಿಸಿ
ಕೇರಳದ
ಎಲ್ಡಿಎಫ್
ಸರ್ಕಾರ
ಅಫಿಡವಿಟ್
ಸಲ್ಲಿಸಿತು.
2016
ಮಹಿಳೆಯರಿಗೆ
ವಿಧಿಸಿರುವ
ನಿಷೇಧ
ಸಾಂವಿಧಾನಿಕ
ಹಕ್ಕುಗಳ
ಉಲ್ಲಂಘನೆ
ಎಂದು
ಆರೋಪಿಸಿ
ಸುಪ್ರೀಂಕೋರ್ಟ್ಗೆ
ದಿ
ಇಂಡಿಯಾ
ಯಂಗ್
ಲಾಯರ್ಸ್
ಅಸೋಸಿಯೇಷನ್
ಸಾರ್ವಜನಿಕ
ಹಿತಾಸಕ್ತಿ
ಅರ್ಜಿಯನ್ನು
ಸಲ್ಲಿಸಿತು.
ನವೆಂಬರ್
2016
ಎಲ್ಲ
ವಯೋಮಾನದ
ಮಹಿಳೆಯರಿಗೂ
ಪ್ರವೇಶ
ಕಲ್ಪಿಸುವುದರ
ಪರವಾಗಿ
ಎಲ್ಡಿಎಫ್
ಸರ್ಕಾರ
ಅಫಿಡವಿಟ್
ಸಲ್ಲಿಸಿತು.
ಜುಲೈ,
2018
ಪಿಐಎಲ್
ವಿಚಾರಣೆ
ನಡೆಸಿದ
ಸುಪ್ರೀಂಕೋರ್ಟ್
ಮುಖ್ಯ
ನ್ಯಾಯಮೂರ್ತಿ
ದೀಪಕ್
ಮಿಶ್ರಾ
ನೇತೃತ್ವದ
ಪೀಠ,
ನಿರ್ದಿಷ್ಟ
ವಯೋಮಾನದ
ಮಹಿಳೆಯರಿಗೆ
ಪ್ರವೇಶ
ನಿರಾಕರಿಸುವ
ದೇವಸ್ಥಾನದ
ಆಡಳಿತದ
ನಿರ್ಧಾರದ
ವಿರುದ್ಧ
ಪ್ರಶ್ನಿಸಿದರು.
ಬಳಿಕ
ಅರ್ಜಿಯ
ಅಂತಿಮ
ತೀರ್ಪನ್ನು
ಕಾಯ್ದಿರಿಸಲಾಯಿತು.
ಸೆಪ್ಟೆಂಬರ್,
2018
ದೇವಸ್ಥಾನದ
ಆವರಣದ
ಒಳಗೆ
ಮಹಿಳೆಯರ
ಪ್ರವೇಶ
ನಿಷೇಧಿಸುವ
ಆಚರಣೆಯನ್ನು
ತೆರವುಗೊಳಿಸಿದ
ಸುಪ್ರೀಂಕೋರ್ಟ್
ತ್ರಿಸದಸ್ಯ
ಪೀಠ,
ಯಾವುದೇ
ವಯೋಮಾನದ
ಮಹಿಳೆಯರು
ಶಬರಿಮಲೆ
ದೇವಸ್ಥಾನವನ್ನು
ಪ್ರವೇಶಿಸಲು
ಅರ್ಹರು
ಎಂದು
ತೀರ್ಪು
ನೀಡಿತು.
ನವೆಂಬರ್ 2019
ನವೆಂಬರ್ 14 ರಂದು ಸುಪ್ರೀಂ ಕೋರ್ಟ್ ತೀರ್ಪನ್ನು ಮರುಪರಿಶೀಲಿಸುವಂತೆ ಸಲ್ಲಿಸಲಾಗಿದ್ದ ಸುಮಾರು 56 ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಾಲಯ, ಈ ಪ್ರಕರಣವನ್ನು ವಿಸ್ತೃತ ಪೀಠಕ್ಕೆ ವರ್ಗಾವಣೆ ಮಾಡುವಂತೆ ಆದೇಸಿತು. ಏಳು ನ್ಯಾಯಮೂರ್ತಿಗಳ ವಿಸ್ತೃತ ಪೀಠ ಈ ಪ್ರಕರಣದ ವಿಚಾರಣೆ ನಡೆಸಲಿದೆ.