ಭಾರತ ವಿರೋಧಿ ಕೆಲಸ ಮಾಡುತ್ತಿದೆಯಾ ಅಮೆರಿಕ?
ಭಾರತದ ವಿಚಾರದಲ್ಲಿ ಅಮೆರಿಕ ಇತ್ತೀಚೆಗೆ ಪದೇ ಪದೇ ಕಾಲು ಕೆರೆದುಕೊಂಡು, ಕಿರಿಕಿರಿ ಕಿರಿಕ್ ಮಾಡುತ್ತಿದೆ ಅನ್ನೋ ಆರೋಪ ಇದೆ. ಈ ಪೈಕಿ 2024ರ ಲೋಕಸಭೆ ಚುನಾವಣೆಯ ಸಮಯದಲ್ಲಿ ಅಮೆರಿಕ ಈ ರೀತಿ ಕುತಂತ್ರ ಹೆಚ್ಚು ಮಾಡುತ್ತಿದೆ ಎಂಬ ಗಂಭೀರ ಆರೋಪ ಮಾಡಿದೆ ರಷ್ಯಾ. ಈ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಈಗ ಕಿಚ್ಚು ಹೊತ್ತಿಕೊಂಡಿದೆ. ಅಸಲಿಗೆ ರಷ್ಯಾ ಈಗ ಅಮೆರಿಕ ವಿರುದ್ಧ ಮತ್ತು ಭಾರತದ ಪರ ನೀಡಿರುವ ಹೇಳಿಕೆಯಾದ್ರು ಏನು? ಬನ್ನಿ ತಿಳಿಯೋಣ.
ರಷ್ಯಾ & ಅಮೆರಿಕ ನಡುವೆ ಭರ್ಜರಿ ತಿಕ್ಕಾಟ ನಡೆಯುತ್ತಿದೆ ಕೆಲ ರಾಷ್ಟ್ರಗಳು ರಷ್ಯಾ ಹಿಂದೆ ನಿಂತರೆ, ಇನ್ನೂ ಕೆಲ ದೇಶಗಳು ಅಮೆರಿಕದ ಬೆನ್ನಿಗೆ ನಿಂತಿವೆ. ಈ ಮೂಲಕ ಜಗತ್ತು ಈಗ ಎರಡು ಓಳಾಗಿ ಹೋಗುತ್ತಿದೆ. ಇದೇ ಸಮಯದಲ್ಲಿ ಭಾರತ ಮತ್ತು ಅಮೆರಿಕ ನಡುವೆಯೂ ಮುಸುಕಿನ ಗುದ್ದಾಟ ನಡೆಯುತ್ತಲೇ ಇದೆ. ಈ ನಡುವೆ ಕೂಡ, ಎರಡೂ ದೇಶಗಳ ಸಂಬಂಧ ಉತ್ತಮವಾಗಿ ಇದೆ. ಇಷ್ಟಾದರೂ ಅಮೆರಿಕ ಬೇಕು ಅಂತಾ ಭಾರತದ ಆಂತರಿಕ ವಿಚಾರದಲ್ಲಿ ಕೈಹಾಕುತ್ತಿದೆ ಎಂದು ರಷ್ಯಾ ಈಗ ಗಂಭೀರ ಆರೋಪ ಮಾಡುತ್ತಿದೆ.

ಅಮೆರಿಕಗೆ ಪೆಟ್ಟು ಕೊಟ್ಟ ರಷ್ಯಾ?
ಶ್ವೇತಭವನ ಅಂದ್ರೆ ಅಮೆರಿಕ ಅಧ್ಯಕ್ಷರ ಅಧಿಕೃತ ಗೃಹ ಕಚೇರಿ ಭಾರತದಲ್ಲಿ ನಡೆಯುತ್ತಿರುವ 2024ರ ಲೋಕಸಭೆ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡುತ್ತಿದೆ. ಭಾರತದಲ್ಲಿ ನಡೆಯುತ್ತಿರುವ ಚುನಾವಣೆಯ ಸಂಕೀರ್ಣಗೊಳಿಸಲು ಪ್ರಯತ್ನ ಮಾಡುತ್ತಿದೆ. ಈ ಮೂಲಕ ಅಮೆರಿಕ ಭಾರತದ ಆಂತರಿಕ ರಾಜಕೀಯ ಪರಿಸ್ಥಿತಿಯನ್ನ ಅಲುಗಾಡಿಸಲು ಯತ್ನಿಸುತ್ತಿದೆ. ಈ ಮೂಲಕ ಅಮೆರಿಕ ಭಾರತದ ಆಂತರಿಕ ವ್ಯವಹಾರದಲ್ಲಿ ಮಧ್ಯ ಪ್ರವೇಶ ಮಾಡಿದಂತೆ ಆಗಿದೆ ಎಂದು ರಷ್ಯಾ ಇದೀಗ ಆರೋಪ ಮಾಡಿದೆ. ಹೀಗಾಗಿ ಅಂತಾರಾಷ್ಟ್ರೀಯ ವಲಯದಲ್ಲಿ ಭಾರಿ ಚರ್ಚೆ ಶುರುವಾಗಿದೆ. ಇದರ ಜೊತೆಗೆ ಖಲಿಸ್ತಾನಿಗಳ ವಿಚಾರ ಕೂಡ ಪ್ರಸ್ತಾಪ ಮಾಡಿದೆ ರಷ್ಯಾ.
ಭಾರತದ ವಿರುದ್ದ ಅಮೆರಿಕ ಕುತಂತ್ರ?
ಇನ್ನು ಖಾಲಿಸ್ತಾನಿ ಪ್ರತ್ಯೇಕತಾವಾದಿ ಗುರುಪತ್ವಂತ್ ಸಿಂಗ್ ಪನ್ನೂನ್ ಹತ್ಯೆ ಯತ್ನದ ಸಂಚಲ್ಲಿ, ಭಾರತ ಮೂಲದವರು ಭಾಗಿ ಆಗಿದ್ದಾರೆ ಎಂಬುದಕ್ಕೆ ಅಮೆರಿಕ ಯಾವುದೇ ಪುರಾವೆ ನೀಡಿಲ್ಲ. ಆದರೂ ಭಾರತದ ವಿರುದ್ಧ ಈ ರೀತಿಯಾಗಿ ತಲೆ & ಬುಡ ಇಲ್ಲದ ಆರೋಪ ಮಾಡುತ್ತಿದೆ. ಇದನ್ನು ಒಪ್ಪಲು ಸಾಧ್ಯವೇ ಇಲ್ಲ, ಅಮೆರಿಕದ ಈ ನಡೆ ಖಂಡನಾರ್ಹ ಎಂದಿದೆ ರಷ್ಯಾ.

ಮತ್ತೊಂದು ಕಡೆ ರಷ್ಯಾ & ಭಾರತದ ಸಂಬಂಧ ಮತ್ತಷ್ಟು ಗಟ್ಟಿಯಾಗುತ್ತಿದೆ. ಉಕ್ರೇನ್ & ರಷ್ಯಾ ನಡುವೆ ಯುದ್ಧ ನಡೆಯುತ್ತಿರುವ ಸಮಯದಲ್ಲಿ ಭಾರತ ಇದೀಗ ರಷ್ಯಾ ಪರವಾಗಿದೆ. ನೇರವಾಗಿ ರಷ್ಯಾ ಪರವಾಗಿದ್ದೇವೆ ಎಂಬ ವಿಚಾರವನ್ನು ಭಾರತ ಸಮರ್ಥನೆ ಮಾಡಿಕೊಳ್ಳದೆ ಇದ್ದರೂ, ಪರೋಕ್ಷವಾಗಿ ಅಮೆರಿಕಗೆ ಈ ಬಗ್ಗೆ ಸೂಚನೆ ನೀಡುತ್ತಿದೆ ಭಾರತ. ಇತಿಹಾಸದ ಪುಟಗಳ ತೆರೆದು ನೋಡಿದರೆ ರಷ್ಯಾ ಜೊತೆಗಿನ ಭಾರತದ ಸಂಬಂಧ ವರ್ಷದಿಂದ ವರ್ಷಕ್ಕೆ ಮತ್ತಷ್ಟು ಗಟ್ಟಿಯಾಗುತ್ತಿದೆ.
-
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು












Click it and Unblock the Notifications