RBI Withdraw ₹2,000 Notes: ರೂ. 500 ಮತ್ತು 1000 ರೂ. ನೋಟಿನ ಮಹತ್ವದ ಮಾಹಿತಿ ನೀಡಿದ ದಾಸ್
ಬೆಂಗಳೂರು, ಜೂನ್ 08: ಇತ್ತೀಚೆಗಷ್ಟೇ 2000 ರೂಪಾಯಿ ಮುಖಬೆಲೆ ನೋಟನ್ನು ಹಿಂಪಡೆದ ನಂತರ ಸಂಗ್ರಹವಾದ ನೋಟುಗಳಲ್ಲಿ ಬಹುತೇಕ ಕರೆನ್ಸಿಗಳು ಠೇವಣಿ ರೂಪದಲ್ಲಿಯೇ ಬಂದಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ನ ಗವರ್ನರ್ ಶಕ್ತಿಕಾಂತ್ ದಾಸ್ ಹೇಳಿದ್ದಾರೆ. ಜೊತೆಗೆ ಅವರು 500 ರೂ. ಮತ್ತು 1000 ರೂ. ನೋಟಿನ ಕುರಿತು ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.
ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ್ ದಾಸ್ ಅವರು ಗುರುವಾರ ನಡೆದ ಸೆಂಟ್ರಲ್ ಬ್ಯಾಂಕಿನ ಎರಡನೇ ಹಣಕಾಸು ನೀತಿ ಸಭೆಯ ಬಳಿಕ ಮಾತನಾಡಿದರು. ಈ ವೇಳೆ 2000 ರೂಪಾಯಿ ಮುಖಬೆಲೆ ನೋಟುಗಳನ್ನು ಹಿಂಪಡೆಯುವ ಬಗ್ಗೆ ಘೋಷಿಸಲಾಗಿದೆ. ಅದರೆ ಯಾವ ಕಾರಣಕ್ಕೂ ಹಾಲಿ ಇರುವ ₹500 ನೋಟುಗಳನ್ನು ತೆಗೆದುಹಾಕುವ ಅಥವಾ ₹1,000 ಮುಖಬೆಲೆಯ ನೋಟುಗಳನ್ನು ಹೊಸದಾಗಿ ಮತ್ತೆ ಮರುಪರಿಚಯಿಸುವ ಉದ್ದೇಶವಿಲ್ಲ ಬ್ಯಾಂಕ್ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದರು.

ಸದ್ಯ ಹಿಂಪಡೆಯಲಾಗಿರುವ ₹2000 ನೋಟುಗಳನ್ನು ಠೇವಣಿ ಮಾಡಲು ಅಥವಾ ವಿನಿಮಯ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಈ ಆದೇಶದ ನಂತರವೇ ಆರ್ಬಿಐ ಕೇಂದ್ರೀಯ ಬ್ಯಾಂಕ್ ಇತ್ತೀಚೆಗೆ ಹೊಂದಿರುವವರು ತಮ್ಮ ₹500 ನೋಟುಗಳನ್ನು ಹಿಂತೆಗೆದುಕೊಳ್ಳುತ್ತದೆ ಮತ್ತು ₹1,000 ಮುಖಬೆಲೆಯ ನೋಟು ಮರುಪರಿಚಯ ಎಂಬ ವಿಚಾರಗಳೆಲ್ಲವು ಊಹಾಪೋಹ ಎಂದು ಹೇಳಿದರು.
ಇದೇ ವೇಳೆ ಸುದ್ದಿಗಾರರ ಕೆಲವು ಪ್ರಶ್ನೆಗಳಿಗೆ ಉತ್ತರಿಸಿದ ಆರ್ಬಿಐ ಗವರ್ನರ್, 2000₹ ನೋಟು ವಾಪಾಸ್ ಆದೇಶ ಬಳಿಕ ₹1.80 ಲಕ್ಷ ಕೋಟಿ ₹2,000 ನೋಟುಗಳು ವಾಪಸಾಗಿವೆ ಎಂದು ಮಾಹಿತಿ ನೀಡಿದರು. ಇನ್ನೂ ಸರಿ ಸುಮಾರು ಅರ್ಧದಷ್ಟು ದೊಡ್ಡ ನೋಟುಗಳು ಹಿಂಪಡೆಯಲಾಗಿದ್ದು, ಇನ್ನೂ ಅರ್ಧದಷ್ಟು ನೋಟುಗಳು ಬರಬೇಕಿದೆ.
ಕೊನೆ ಕ್ಷಣದವರೆಗೆ ಕಾಯಬೇಡಿ ಎಂದು ಗವರ್ನರ್ ಮನವಿ
ದೇಶದ ಜನರು ಸೆಪ್ಟಂಬರ್ 30ವರೆಗೆ ಕೊನೆಯ ಕ್ಷಣದವರೆಗೂ ನೋಟುಗಳನ್ನು ಜಮಾ ಮಾಡಲು ಆತುರಪಡಬೇಡಿ. ಪ್ರತಿ ನಿತ್ಯ ದೊಡ್ಡ ನೋಟುಗಳನ್ನು (20,000 ರೂ.) ಠೇವಣಿ ಮಾಡಲು ಅಥವಾ ವಿನಿಮಯ ಮಾಡಿಕೊಳ್ಳಲು ಬ್ಯಾಂಕ್ ಶಾಖೆಗಳಿಗೆ ಹೋಗಬೇಕು. ಸೆಪ್ಟೆಂಬರ್ ಕೊನೆಯ 10-15 ದಿನಗಳಲ್ಲಿ ಹಣ ವಿನಿಮಯಕ್ಕೆ ಮುಂದಾಗಿ ತೊಂದರೆ ಪಡಬೇಡಿ ಎಂದು ಹೇಳಿದ್ದಾರೆ.

ವಾಪಸ್ ಪಡೆಯಲಾಗುತ್ತಿರುವ ₹2,000 ನೋಟುಗಳಲ್ಲಿ ಸರಿಸುಮಾರು ಶೇ.85 ರಷ್ಟು ಪ್ರಮಾಣ ಬ್ಯಾಂಕ್ಗಳಲ್ಲಿ ಠೇವಣಿ ಇಟ್ಟ ನೋಟಗಳಾಗಿವೆ.
ಇತ್ತೀಚಿನ MPC ಸಭೆಯಲ್ಲಿ, RBI ರೆಪೊ ದರವನ್ನು 6.5% ನಲ್ಲಿ ಯಥಾಸ್ಥಿತಿಯಲ್ಲಿ ಇರಿಸಲು ಘೋಷಣೆ ಮಾಡಲಾಗಿದೆ. ಹಣಕಾಸಿನ ನೀತಿ ನಿಲುವಿನ ಸೌಕರ್ಯಗಳನ್ನು ಹಿಂತೆಗೆದುಕೊಳ್ಳುವುದರ ಮೇಲೆ ಈ ದರ ಕೇಂದ್ರೀಕರಿಸಿದೆ ಎಂದು ಶಕ್ತಿಕಾಂತ್ ದಾಸ್ ಹೇಳಿದರು.
ಚಿಲ್ಲರೆ ಹಣದುಬ್ಬರ ಮುನ್ನೋಟವನ್ನು ಹಿಂದಿನ 5.2% ರಿಂದ 5.1% ಕ್ಕೆ ಇಳಿಸಲಾಗಿದೆ. ಹಣದುಬ್ಬರವು ಶೇಕಡಾ 4ರಷ್ಟು ಗುರಿಯ ಮೇಲೆ ಉಳಿದಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
-
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video












Click it and Unblock the Notifications