27 ಪತ್ರಕರ್ತರಿಗೆ ರಾಮ್ ನಾಥ್ ಗೋಯೆಂಕಾ ಪ್ರಶಸ್ತಿ ಪ್ರಕಟ
ಪತ್ರಿಕೋದ್ಯಮದಲ್ಲಿನ ಸಾಧನೆಗಾಗಿ ನೀಡುವ ರಾಮ್ ನಾಥ್ ಗೋಯೆಂಕಾ ಪ್ರಶಸ್ತಿಯನ್ನು ಗುರುವಾರ ಘೋಷಿಸಲಾಗಿದೆ. ಈ ಬಾರಿ 12ನೇ ಆವೃತ್ತಿಯಾಗಿದ್ದು, 27 ಪತ್ರಕರ್ತರು ಪ್ರಶಸಿಗೆ ಭಾಜನರಾಗಿದ್ದಾರೆ. 2016ನೇ ಸಾಲಿನಲ್ಲಿ ಅತ್ಯುತ್ತಮ ಕೆಲಸ ಮಾಡಿದ ಪತ್ರಕರ್ತರಿಗೆ ಈ ಪ್ರಶಸ್ತಿ ಘೋಷಿಸಲಾಗಿದೆ.
ಪ್ರಶಸ್ತಿಯು ತಲಾ ಒಂದು ಲಕ್ಷ ನಗದು, ಟ್ರೋಫಿಯನ್ನು ಒಳಗೊಂಡಿದೆ. ಪತ್ರಿಕೋದ್ಯಮದಲ್ಲಿ ತೋರಿದ ಧೈರ್ಯ, ಬದ್ಧತೆ ಹಾಗೂ ನೀಡಿದ ಕೊಡುಗೆಯನ್ನು ಈ ಪ್ರಶಸ್ತಿಗಾಗಿ ಪರಿಗಣಿಸಲಾಗುತ್ತದೆ.
ಪ್ರಶಸ್ತಿ ವಿಜೇತರ ಪಟ್ಟಿ ಹೀಗಿದೆ:
ಜಮ್ಮು ಕಾಶ್ಮೀರ ಹಾಗೂ ಈಶಾನ್ಯದಿಂದ ವರದಿಗಾರಿಕೆ: ಅಭಿಷೇಕ್ ಸಹಾ, ಹಿಂದೂಸ್ತಾನ್ ಟೈಮ್ಸ್
ಹಿಂದಿ: ರಾಹುಲ್ ಕೊಟಿಯಾಲ್, ಸತ್ಯಾಗ್ರಹ್.ಸ್ಕ್ರಾಲ್.ಇನ್
ಪ್ರಾದೇಶಿಕ ಭಾಷೆ: ರೇಷ್ಮಾ ಸಂಜೀವ್ ಶಿವದೇಕರ್, ಲೋಕ್ ಸತ್ತಾ
ಪರಿಸರ ಪತ್ರಿಕೋದ್ಯಮ: ಜಿಮ್ಮಿ ಫಿಲಿಪ್, ದೀಪಿಕಾ ಡೈಲಿ
ಅನ್ ಕವರ್ ಇಂಡಿಯಾ ಇನ್ ವಿಸಿಬಲ್: ಎಸ್.ವಿ.ರಾಜೇಶ್, ಮಲಯಾಳ ಮನೋರಮಾ
ಹಿರಿಯ ಪತ್ರಕರ್ತ ಕೆ ಸತ್ಯನಾರಾಯಣಗೆ ಹರ್ಮನ್ ಮೊಗ್ಲಿಂಗ್ ಪ್ರಶಸ್ತಿ
ವಾಣಿಜ್ಯ ಹಾಗೂ ಆರ್ಥಿಕ ಪತ್ರಿಕೋದ್ಯಮ: ಉತ್ಕರ್ಷ್ ಆನಂದ್, ದ ಇಂಡಿಯನ್ ಎಕ್ಸ್ ಪ್ರೆಸ್
ರಾಜಕೀಯ ವರದಿಗಾರಿಕೆ: ಮುಜಮಿಲ್ ಜಲೀಲ್, ದ ಇಂಡಿಯನ್ ಎಕ್ಸ್ ಪ್ರೆಸ್
ಕ್ರೀಡಾ ಪತ್ರಿಕೋದ್ಯಮ: ಕೈಸರ್ ಮೊಹಮ್ಮದ್ ಅಲಿ, ಔಟ್ ಲುಕ್
ಕ್ರೀಡಾ ವರದಿಗಾರಿಕೆ: ಶುಭಜಿತ್ ರಾಯ್, ದ ಇಂಡಿಯನ್ ಎಕ್ಸ್ ಪ್ರೆಸ್
ತನಿಖಾ ವರದಿಗಾರಿಕೆ: ರಿತು ಸರಿನ್, ಪಿವಿ ಅಯ್ಯರ್ ಮತ್ತು ಜೆ ಮಜುಂದಾರ್, ದ ಇಂಡಿಯನ್ ಎಕ್ಸ್ ಪ್ರೆಸ್
ನುಡಿ ಚಿತ್ರ: ಸಂಗೀತಾ ಬರುವಾ ಪಿಶರೊತಿ, ದ ವೈರ್
ಭಾರತದ ಬಗ್ಗೆ ವರದಿ ಮಾಡುವ ವಿದೇಶಿ ಪ್ರತಿನಿಧಿ: ಎಲೆನ್ ಬಾರಿ, ದ ನ್ಯೂಯಾರ್ಕ್ ಟೈಮ್ಸ್
ಅಭಿಪ್ರಾಯ ಮತ್ತು ವ್ಯಾಖ್ಯಾನ ಬರಹ: ತಮಲ್ ಬಂಡೋಪಾಧ್ಯಾಯ, ಮಿಂಟ್
ನಾಗರಿಕ ಪತ್ರಿಕೋದ್ಯಮ: ಚೈತನ್ಯ ಮರ್ಪಕ್ ವರ್, ಮುಂಬೈ ಮಿರರ್
ಫೋಟೋ ಜರ್ನಲಿಸಮ್: ವಸೀಮ್ ಅಂದ್ರಾಬಿ, ಹಿಂದೂಸ್ತಾನ್ ಟೈಮ್ಸ್
ಪ್ರಸಾರ
ಜಮ್ಮು ಕಾಶ್ಮೀರ ಹಾಗೂ ಈಶಾನ್ಯದಿಂದ ವರದಿಗಾರಿಕೆ: ಮೌಮಿತಾ ಸೆನ್, ಇಂಡಿಯಾ ಟುಡೆ
ಹಿಂದಿ: ರವೀಶ್ ಕುಮಾರ್, ಎನ್ ಡಿಟಿವಿ ಇಂಡಿಯಾ
ಪ್ರಾದೇಶಿಕ ಭಾಷೆ: ದಿನೇಶ್ ಅಕುಲಾ, ಟಿವಿ 5 ನ್ಯೂಸ್
ಪರಿಸರ ಪತ್ರಿಕೋದ್ಯಮ: ಯಾರಿಗೂ ಇಲ್ಲ
ಅನ್ ಕವರ್ ಇಂಡಿಯಾ ಇನ್ ವಿಸಿಬಲ್: ಮನೋಗ್ಯ ಲೋಯಿವಾಲ, ಟಿವಿ ಟುಡೇ
ವಾಣಿಜ್ಯ ಹಾಗೂ ಆರ್ಥಿಕ ಪತ್ರಿಕೋದ್ಯಮ: ಹರ್ಷದಾ ಸಾವಂತ್, ಸಿಎನ್ ಬಿಸಿ ಆವಾಜ್
ರಾಜಕೀಯ ವರದಿಗಾರಿಕೆ: ಆಶಿಷ್ ಸಿಂಗ್, ನ್ಯೂಸ್ ಎಕ್ಸ್
ಕ್ರೀಡಾ ಪತ್ರಿಕೋದ್ಯಮ: ಬಿಪಾಷಾ ಮುಖರ್ಜಿ, ಟಿವಿ ಟುಡೇ
ಕ್ರೀಡಾ ವರದಿಗಾರಿಕೆ: ಆಶಿಷ್ ಸಿನ್ಹಾ, ಇಂಡಿಯಾ ನ್ಯೂಸ್
ತನಿಖಾ ವರದಿಗಾರಿಕೆ: ಶ್ರೀನಿವಾಸನ್ ಜೈನ್, ಎನ್ ಡಿಟಿವಿ 24X7