ರಾಜ್ಯಸಭೆ ಚುನಾವಣೆ ಉಸ್ತುವಾರಿಗೆ 4 ಕೇಂದ್ರ ಸಚಿವರನ್ನು ನೇಮಿಸಿದ ಬಿಜೆಪಿ
ನವದೆಹಲಿ, ಜೂನ್ 1: ಕರ್ನಾಟಕ, ಮಹಾರಾಷ್ಟ್ರ, ಹರಿಯಾಣ ಮತ್ತು ರಾಜಸ್ಥಾನದಲ್ಲಿ ಮುಂಬರುವ ರಾಜ್ಯಸಭಾ ಚುನಾವಣೆಗೆ ಪಕ್ಷದ ಚುನಾವಣಾ ಬಿಡ್ಗಳನ್ನು ಮುನ್ನಡೆಸಲು ಬಿಜೆಪಿ ಬುಧವಾರ ನಾಲ್ಕು ಕೇಂದ್ರ ಸಚಿವರನ್ನು ನೇಮಿಸಿದೆ.
ರಾಜಸ್ಥಾನದ ಚುನಾವಣೆಗೆ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರನ್ನು ನಿಯೋಜಿಸಲಾಗಿದ್ದು, ಮಹಾರಾಷ್ಟ್ರದ ಉಸ್ತುವಾರಿಯಾಗಿ ಕೇಂದ್ರ ರೈಲ್ವೆ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ನೇಮಿಸಲಾಗಿದೆ.
ಕರ್ನಾಟಕದ ರಾಜ್ಯಸಭೆ ಚುನಾವಣೆ ಉಸ್ತುವಾರಿ ಆಗಿ ಪ್ರವಾಸೋದ್ಯಮ ಸಚಿವ ಜಿ. ಕಿಶನ್ ರೆಡ್ಡಿಯವರನ್ನು ನೇಮಿಸಿದ್ದು, ಹರ್ಯಾಣದಲ್ಲಿ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ನಾಮನಿರ್ದೇಶನ ಮಾಡಲಾಗಿದೆ.

ಉಸ್ತುವಾರಿಗಳ ಹೆಸರು ಪ್ರಕಟಿಸಿದ ಬಿಜೆಪಿ; ತ್ರಿಪುರಾದ ಉಸ್ತುವಾರಿಗಳ ಹೆಸರನ್ನು ಸಹ ಬಿಜೆಪಿ ಪ್ರಕಟಿಸಿದೆ. ನವದೆಹಲಿಯಲ್ಲಿ ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ್ದು, "ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯಾ, ಅಸ್ಸಾಂ ಸಚಿವ ಅಶೋಕ್ ಸಿಂಘಾಲ್ ಮತ್ತು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ, ರಾಜಕೀಯ ಕಾರ್ಯದರ್ಶಿ ಜಯಂತ ಮಲ್ಲಬರುವಾ ಅವರು ತ್ರಿಪುರದಿಂದ ಕೇಸರಿ ಪಾಳಯಕ್ಕೆ ರಾಜ್ಯಸಭಾ ಚುನಾವಣೆಯ ನೇತೃತ್ವ ವಹಿಸಲಿದ್ದಾರೆ" ಎಂದರು.
ಸಂಸತ್ತಿನ ಮೇಲ್ಮನೆಯ 57 ಸ್ಥಾನಗಳಿಗೆ ಜೂನ್ 10ರಂದು ಚುನಾವಣೆ ನಡೆಯಲಿದ್ದು, ಅದೇ ದಿನ ಮತ ಎಣಿಕೆ ನಡೆಯಲಿದೆ. ಬಿಜೆಪಿ ಭದ್ರಕೋಟೆಯಾಗಿರುವ ಉತ್ತರ ಪ್ರದೇಶ ಸೇರಿದಂತೆ 15 ರಾಜ್ಯಗಳ ಶಾಸಕರು ತಮ್ಮ ಸಹೋದ್ಯೋಗಿಗಳನ್ನು ರಾಜ್ಯಸಭೆಗೆ ಕಳುಹಿಸಲು ಮುಂದಾಗಿದ್ದಾರೆ.
ಇದುವರೆಗೆ 22 ಹೆಸರುಗಳನ್ನು ಪ್ರಕಟಿಸಿದ ಬಿಜೆಪಿ: ಕರ್ನಾಟಕದಿಂದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಮತ್ತು ಮಹಾರಾಷ್ಟ್ರದಿಂದ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಸೇರಿದಂತೆ ಇತರರನ್ನು ಒಳಗೊಂಡ ಮೊದಲ ಪಟ್ಟಿಯನ್ನು ಬಿಜೆಪಿ ಭಾನುವಾರ ಪ್ರಕಟಿಸಿತ್ತು.
ಒಂದು ದಿನದ ನಂತರ, ತೆಲಂಗಾಣದಿಂದ ಒಬಿಸಿ ಮೋರ್ಚಾ ಮುಖ್ಯಸ್ಥ ಕೆ. ಲಕ್ಷ್ಮಣ್ ಸೇರಿದಂತೆ ನಾಲ್ಕು ಹೆಸರುಗಳನ್ನು ಘೋಷಿಸಿತು. ಮಧ್ಯಪ್ರದೇಶ ಬಿಜೆಪಿ ಉಪಾಧ್ಯಕ್ಷೆ ಸುಮಿತ್ರಾ ವಾಲ್ಮೀಕಿ ಆ ರಾಜ್ಯದಿಂದ ಹೆಸರಿಸಲಾಗಿದ್ದು, ಲೇಹ್ ಸಿಂಗ್ ಸಿರೋಯಾರನ್ನು ಕರ್ನಾಟಕದಿಂದ ನಾಮನಿರ್ದೇಶನ ಮಾಡಲಾಗಿದೆ.












Click it and Unblock the Notifications