Weather: ನಕಲಿ ಸೈಕ್ಲೋನ್ 'ಶಕ್ತಿ' ಭೀತಿ: ಚಂಡಮಾರುತ & ಬಿರುಗಾಳಿ ವ್ಯತ್ಯಾಸ ತಿಳಿಸಿದ IMD
ಬೆಂಗಳೂರು, ಮೇ 20: ದೇಶದ ವಿವಿಧ ರಾಜ್ಯಗಳಲ್ಲಿ ಹವಾಮಾನದಲ್ಲಿ ಬದಲಾವಣೆ ಆಗಿದೆ. ಬೇಸಿಗೆ ಮಧ್ಯ ವಿಪರೀತ ಮಳೆ ಆಗುತ್ತಿದೆ. ಕರ್ನಾಟಕದಲ್ಲಂತೂ ಗುಡಗು ಮಿಂಚು ಸಹಿತ ವ್ಯಾಪಕ ಮಳೆ ಮುಂದುವರಿದಿದೆ. ತೆಲಂಗಾಣ, ಕೇರಳ, ಆಂಧ್ರ ಪ್ರದೇಶ ಸೇರಿದಂತೆ ವಿವಿಧೆಡೆ ಭಾರೀ ಮಳೆ ಆಗುತ್ತಿದ್ದು, ಇದಕ್ಕೆ 'ಶಕ್ತಿ' ಚಂಡಮಾರುತ ಕಾರಣ ಎಂದು ಹೇಳಲಾಗುತ್ತಿದೆ. ಆದರೆ ಹವಾಮಾನ ತಜ್ಞರುಇದನ್ನು ನಿರಾಕರಿಸಿದ್ದಾರೆ. ಸಮುದ್ರ ಭಾಗದಲ್ಲಿ ಚಂಡಮಾರುತ ಎದ್ದಿದೆಯೇ?, ಭಾರೀ ಮಳೆಗೆ ಕಾರಣವೇನು? ಎಂಬುದರ ಬಗ್ಗೆ ಹವಾಮಾನ ಇಲಾಖೆ (IMD) ಸ್ಪಷ್ಟನೆ ನೀಡಿದೆ.
'ಶಕ್ತಿ' ಸೈಕ್ಲೋನ್ ಉಂಟಾಗಿದೆ ಎಂಬುದು ತಪ್ಪು ಮಾಹಿತಿಯಾಗಿದೆ. ಈ ಕುರಿತು ಐಎಂಡಿ ಮಹತ್ವದ ಸ್ಪಷ್ಟೀಕರಣ ಜೊತೆಗೆ ವೈಪರೀತ್ಯಗಳ ಕುರಿತು ತಿಳಿಸಿದೆ. ಮಳೆ ಬೀಳುವ ಪ್ರದೇಶಗಳಲ್ಲಿ ಸಾರ್ವಜನಿಕರು ಶಾಂತವಾಗಿರಬೇಕು. ಚಂಡಮಾರುತ ಪ್ರಸರಣ ಮತ್ತು ಸ್ಪಷ್ಟ ಚಂಡಮಾರುತ ಮಧ್ಯ ಸಾಕಷ್ಟು ವ್ಯತ್ಯಾಸವಿದೆ. ಈ ಹವಾಮಾನ ಬಗ್ಗೆ ತಪ್ಪಾಗಿ ಹೇಳಿಕೊಳ್ಳಲಾಗುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಶಕ್ತಿ ಸೈಕ್ಲೋನ್ ಎಫೆಕ್ಟ್, ಹಾನಿ ಕುರಿತು ಮಾಹಿತಿ ಹರಡಲಾಗುತ್ತದೆ. ಯಾವೊಂದು ಸೈಕ್ಲೋನ್ ಇಲ್ಲ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

ಹವಾಮಾನ ಬೆಳಣಿಕಗೆ ತೀವ್ರತೆ ಕುರಿತು, ಅದರ ಪ್ರಭಾವ ಕುರಿತು ತಪ್ಪು ವ್ಯಾಖ್ಯಾನ ಮಾಡಲಾಗುತ್ತಿದೆ. 'ಸೈಕ್ಲೋನಿಕ್' ಎಂಬುದನ್ನೇ ಅನೇಕರು ಚಂಡಮಾರುತ ಎಂದು ಅರ್ಥೈಸಿಕೊಳ್ಳುತ್ತಾರೆ. ಸೈಕ್ಲೋನಿಕ್ ಅಂದರೆ ಅದು ಚಂಡಮಾರುತ ಅಲ್ಲ ಎಂದು ಕೋಲ್ಕತ್ತಾದ ಪ್ರಾದೇಶಿಕ ಹವಾಮಾನ ಕೇಂದ್ರದ ಮುಖ್ಯಸ್ಥ ಹಬೀಬುರ್ ರೆಹಮಾನ್ ಬಿಸ್ವಾಸ್ ತಿಳಿಸಿದ್ದಾರೆ.
ಚಂಡಮಾರುತ ಪ್ರಸರಣ ಬೇರೆ, ಚಂಡಮಾರುತ ಬೇರೆಯಾಗಿದೆ. ಸಮುದ್ರ ಮೇಲ್ಭಾಗದ ಒಂದೆಡೆ ಗಾಳಿ ಜಮೆ ಆಗುವ ವಿದ್ಯಮಾನವನ್ನು ಸೈಕ್ಲೋನಿಕ್ ವಿದ್ಯಮಾನ ಎನ್ನಲಾಗುತ್ತದೆ. ಇಲ್ಲಿ ಗಾಳಿಯು ನೆಲದಿಂದ 1.5 ಕಿಮೀ ನಿಂದ 7.6 ಕಿಮೀ ಎತ್ತರದಲ್ಲಿರುತ್ತದೆ. ಇದು ಸೈಕ್ಲೋನಿಕ್ ಪ್ರಸರಣವಾಗಿದೆ. ಒಂದೆಡೆ ಮಾರುತಗಳು ಜಮೆ ಆಗುತ್ತವೆ. ಇದು ಚಂಡಮಾರುತ ಸೃಷ್ಟಿಗೆ ಕಾರಣವಾಗುವುದು ಅನುಮಾನ ಎನ್ನಲಾಗಿದೆ.

ಸಮುದ್ರ ಮೇಲ್ಮೈನಲ್ಲಿ ಕಡಿಮೆ-ಒತ್ತಡದ ವ್ಯವಸ್ಥೆ ಇದಾಗಿದೆ. ಕಡಿಮೆ ಒತ್ತಡವು ಚಂಡಮಾರುತ ಎನ್ನಲಾಗುವುದಿಲ್ಲ. ಇಲ್ಲಿ ಸಹ ಬಲವಾದ ಗಾಳಿ ಬೀಸುತ್ತಿರುತ್ತದೆ. ಇದು ವಾಯುಭಾರ ಕುಸಿತಕ್ಕೆ ಕಾರಣವಾಗಬಹುದು. ಗಾಳಿಯ ಪ್ರಸರಣ ಅಷ್ಟಾಗಿ ಹಾನಿ ಮಾಡುವುದಿಲ್ಲ. ಆದರೆ ಚಂಡಮಾರುತ ಸಾಕಷ್ಟು ಹಾನಿ ಮಾಡುವ ವೈಪರೀತ್ಯವಾಗಿದೆ. ಈ ಕುರಿತು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿಲ್ಲ. ಚಂಡಮಾರುತ ಪ್ರಸರಣ ಎಂದಷ್ಟೆ ಹೇಳಿದೆ ಹೊರತು ಎಲ್ಲಿಯೂ ಶಕ್ತಿ ಸೈಕ್ಲೋನ್ ಸೃಷ್ಟಿಯಾಗಿದೆ ಎಂದು ಖಚಿತಪಡಿಸಿಲ್ಲ.
ಒಂದು ವೇಳೆ ಚಂಡಮಾರುತ ಸೃಷ್ಟಿ ಆಗಿದ್ದೇ ಆದರೆ ಅದನ್ನು ಐಎಂಡಿ ತನ್ನ ಬುಲಿಟೆನ್ನಲ್ಲಿ ತಿಳಿಸುತ್ತದೆ. ಆದರೆ ಈವರೆಗೆ ಆ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಬದಲಾಗಿ ಸಾಮಾಜಿಕ ಮಾಧ್ಯಮದಲ್ಲಿ ಮಾತ್ರವೇ ಶಕ್ತಿ ಸೈಕೋನ್ ಹೆಸರಿನಲ್ಲಿ ಮಳೆ ಬರುತ್ತದೆ ಎಂಬ ವಿಷಯಗಳು ಹರಿದಾಡುತ್ತಿವೆ.
ವೈಪರೀತ್ಯದ ಬದಲಾವಣೆಗಳು
ಸಮುದ್ರ ಮೇಲ್ಮೈನಲ್ಲಿ ಯಾವಾಗಲೂ ಸಣ್ಣ ಪ್ರಮಾಣದಲ್ಲಿ ಸ್ಟ್ರಫ್, ಸುಳಿಗಾಳಿ ಇದ್ದೆ ಇರುತ್ತದೆ. ಅದರ ಗಾಳಿ ತೀವ್ರ ಹೆಚ್ಚಾಗಿ, ಒಂದೆಡೆ ಮಾರುತಗಳು ಜಮಾಯಿಸಿದರೆ, ವೈಪರೀಪತ್ಯ ಸ್ಪಷ್ಟವಾಗುತ್ತದೆ. ಅದೇ ಮುಂದೆ ಸೈಕ್ಲೋನಿಕ್ ಪ್ರಸರಣವಾಗಿ ಬದಲಾಗುತ್ತದೆ. ಅದು ಮತ್ತಷ್ಟು ತೀವ್ರಗೊಂಡರೆ, ವಾಯುಭಾರ ಕುಸಿತವಾಗುತ್ತದೆ. ಅದರ ಪ್ರಭಾವವು ಭೂಮಿ ಮೇಲ್ಮೈ ಮೇಲೆ ಆಗುತ್ತದೆ. ಮಳೆ ಹೆಚ್ಚಾಗುತ್ತದೆ. ನಂತರ ಅದು ಚಂಡಮಾರುತವಾಗಿ ಬದಲಾಗಲೂಬಹುದು.
-
Rain: ಕರ್ನಾಟಕದ ಕಾಶ್ಮೀರವಾದ ಮಾಚಾಪುರ: ಜೆಸಿಬಿ ಮೂಲಕ ಆಲಿಕಲ್ಲು ತೆರವು, ಕಂಗಾಲಾದ ಅನ್ನದಾತ -
IPL 2026: ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ಹೇಳೋದೇನು? -
Viral Video: 11 ವರ್ಷದ ಬಾಲಕನಿಂದ ಯಶಸ್ವಿ ವಿಮಾನ ಲ್ಯಾಂಡಿಂಗ್; ನೆಟ್ಟಿಗರ ಮನಗೆದ್ದ ಈ ಪುಟ್ಟ ಪೋರ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Rain: ಕರ್ನಾಟಕದ ಕಾಶ್ಮೀರವಾದ ಮಾಚಾಪುರ: ಜೆಸಿಬಿ ಮೂಲಕ ಆಲಿಕಲ್ಲು ತೆರವು, ಕಂಗಾಲಾದ ಅನ್ನದಾತ











Click it and Unblock the Notifications