200 ಪ್ರಯಾಣಿಕ ರೈಲುಗಳಿಗೆ ಆನ್ಲೈನ್ ಟಿಕೆಟ್ ಬುಕ್ಕಿಂಗ್ ಶುರು
ನವದೆಹಲಿ, ಮೇ 21: ''ಲಾಕ್ಡೌನ್ ಹಂತ ಹಂತವಾಗಿ ಸಡಿಲಗೊಳಿಸಲಾಗುತ್ತಿದ್ದು, ಜೂನ್ 1 ರಿಂದ ದೇಶದೆಲ್ಲೆಡೆ ಸುಮಾರು 200 ಪ್ರಯಾಣಿಕ ರೈಲುಗಳು ಸಂಚಾರ ಆರಂಭಿಸಲಿವೆ'' ಎಂದು ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರು ಮಂಗಳವಾರ(ಮೇ 19) ತಿಳಿಸಿದ್ದು ನೆನಪಿರಬಹುದು. ಈ 200 ನಾನ್ ಎಸಿ ರೈಲುಗಳು ಪ್ರತಿದಿನ ಸಂಚರಿಸಲಿದ್ದು, ಈ ರೈಲಿಗಳಿಗೆ ಮೇ 21ರ ಬೆಳಗ್ಗೆ 10 ಗಂಟೆಯಿಂದ ಆನ್ ಲೈನ್ ಟಿಕೆಟ್ ಬುಕ್ಕಿಂಗ್ ಆರಂಭಗೊಂಡಿದೆ.
Recommended Video
ಲಾಕ್ ಡೌನ್ 4.0 ಜಾರಿಯಲ್ಲಿರುವಾಗಲೇ ಶ್ರಮಿಕ್ ರೈಲು ಮತ್ತು ವಿಶೇಷ ರೈಲುಗಳ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಆದರೆ, ಪ್ರಯಾಣಿಕರ ರೈಲು ಸಂಚಾರ ಪೂರ್ಣಪ್ರಮಾಣದಲ್ಲಿ ಇನ್ನೂ ಸಂಚಾರ ಆರಂಭಿಸಿಲ್ಲ. ಹಂತ ಹಂತವಾಗಿ ಜನ್ ಶತಾಬ್ದಿ, ಸಂಪರ್ಕ್ ಕ್ರಾಂತಿ, ಡುರೊಂಟೋ ಎಕ್ಸ್ ಪ್ರೆಸ್ ಗಳು ಹಳಿಗಿಳಿಯಲಿವೆ. 200 ರೈಲುಗಳ ಪಟ್ಟಿಯನ್ನು ಟ್ವೀಟ್ ಮಾಡಲಾಗಿದೆ.

ರಿಸರ್ವ್ಡ್ ಟಿಕೆಟ್ ಪಡೆಯಿರಿ: ಜನರಲ್ ಕೋಚ್ ಗಳಲ್ಲೂ ಕೂಡಾ ರಿಸರ್ವ್ಡ್ ಸೀಟ್ ಪಡೆಯುವುದು ಮುಖ್ಯವಾಗಿದೆ. ಈ ರೈಲುಗಳಲ್ಲಿ ಅನ್ ರಿಸರ್ವ್ಡ್ ಕೋಚ್ ಗಳಿರುವುದಿಲ್ಲ. ಐಆರ್ ಸಿಟಿಸಿ ವೆಬ್ ತಾಣ ಅಥವಾ ಮೊಬೈಲ್ ಅಪ್ಲಿಕೇಷನ್ ಮೂಲಕ ಆನ್ ಲೈನ್ ಇ ಟಿಕೆಟ್ ಪಡೆದುಕೊಳ್ಳಬೇಕು. ರೈಲು ನಿಲ್ದಾಣದಲ್ಲಿ ಟಿಕೆಟ್ ನೀಡಲಾಗುವುದಿಲ್ಲ ಎಂದು ರೈಲ್ವೆ ಇಲಾಖೆ ಸ್ಪಷ್ಟಪಡಿಸಿದೆ. ನಾನ್ ರಿಸರ್ವ್ಡ್ ಟಿಕೆಟ್, ಪ್ರಯಾಣದ ವೇಳೆ ಟಿಕೆಟ್ ನೀಡಲಾಗುವುದಿಲ್ಲ, ತತ್ಕಾಲ್, ಪ್ರೀಮಿಯಂ ಟಿಕೆಟ್ ಬುಕ್ಕಿಂಗ್ ಕೂಡಾ ಸಾಧ್ಯವಿಲ್ಲ. ಎಲ್ಲಾ ಪ್ರಯಾಣಿಕರಿಗೂ ಆರೋಗ್ಯ ಸೇತು ಅಪ್ಲಿಕೇಷನ್, ಮಾಸ್ಕ್ ಕಡ್ಡಾಯವಾಗಿದೆ.

ಜೂನ್ 01 ರಿಂದ ಎಸಿ ಅಲ್ಲದೆ, ನಾನ್- ಎಸಿ, ದ್ವಿತೀಯ ದರ್ಜೆಯ 200 ರೈಲುಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು. ಶ್ರಮಿಕ ರೈಲುಗಳು ಎಂದಿನಂತೆ ವಲಸೆ ಕಾರ್ಮಿಕರನ್ನು ನಿಗದಿತ ತಾಣಕ್ಕೆ ಸೇರಿಸುತ್ತಿವೆ. ಮೇ 1ರಿಂದ ಇಲ್ಲಿ ತನಕ 1595 ಶ್ರಮಿಕ ವಿಶೇಷ ರೈಲುಗಳು ಸಂಚರಿಸಿದ್ದು, 21 ಲಕ್ಷ ವಲಸಿಗರನ್ನು ಅವರ ಊರಿಗೆ ತಲುಪಿಸಿದೆ.

-
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ












Click it and Unblock the Notifications