ರೈಲು ಪ್ರಯಾಣಕ್ಕೆ ಹೊರಡುವ ಮುನ್ನ ಇದನ್ನೊಮ್ಮೆ ಓದಿ
ಬೆಂಗಳೂರು, ನ. 18: ಇನ್ನೇನು ಡಿಸೆಂಬರ್ ತಿಂಗಳು ಆರಂಭವಾಗಲಿದೆ. ಪ್ರವಾಸಿ ತಾಣಕ್ಕೆ ತೆರಳುವವರ ಸಂಖ್ಯೆಯೂ ಹೆಚ್ಚಲಿದೆ. ನೀವು ಒಂದಿಲ್ಲೊಂದು ಸಂದರ್ಭ ರೈಲ್ವೆ ಪ್ರಯಾಣ ಮಾಡಲೇಬೇಕಾಗುತ್ತದೆ. ಹಾಗಾದರೆ ಟಿಕೆಟ್ ಬುಕ್ ಮಾಡುವುದು ಹೇಗೆ? ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳು ಯಾವವು? ಎಂಬ ಸಮಗ್ರ ಸಂಗತಿ ಅರಿತುಕೊಳ್ಳಬೇಕಾದ್ದು ಅಷ್ಟೇ ಮುಖ್ಯ.
ರೈಲ್ವೆ ಇಲಾಖೆಯೂ ಸಹ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಜಾಹೀರಾತು ಮತ್ತಿತರ ಮಾಧ್ಯಮಗಳ ಮೂಲಕವೂ ಮಾಹಿತಿ ನೀಡುತ್ತದೆ. ಐಆರ್ ಸಿಟಿಸಿ ಇದಕ್ಕೆ ನೆರವಾಗುತ್ತಿದೆ.[30 ಸೆಕೆಂಡ್ ನಲ್ಲಿ ತತ್ಕಾಲ್ ಟಿಕೆಟ್ ಬುಕ್ಕಿಂಗ್ ಹೇಗೆ?]

ರೈಲ್ವೆ ಪ್ರಯಾಣ ಮತ್ತು ಅನುಸರಿಸಬೇಕಾದ ಕ್ರಮಗಳು
* ಸರತಿ ಸಾಲಿನ ಚಿಂತೆ ಬಿಟ್ಟು ಐಆರ್ ಸಿಟಿಸಿಯಲ್ಲಿ ಟಿಕೆಟ್ ಕಾಯ್ದಿರಿಸಿ
* ನಿಮ್ಮ ಯಾವೂದಾರೂ ವಿಳಾಸ ದಾಖಲಾತಿ ನೀಡುವುದು ಕಡ್ಡಾಯ
* ಇ ಟಿಕೆಟ್ ಗಳ ಖರೀದಿ ಮತ್ತು ಮಾರಾಟ ಅಪರಾಧವಾಗುತ್ತದೆ
* ನಿಮ್ಮ ಟಿಕೆಟ್ ಕ್ಯಾನ್ಸಲ್ ಮಾಡುವ ಹಕ್ಕನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ
* ಅಧಿಕೃತ ಐಆರ್ ಸಿಟಿಸಿಯಲ್ಲಿ ಏಜೆನ್ಸಿಗಳ ಬಳಿಯೇ ಟಿಕೆಟ್ ಖರೀದಿಸಿ
* ನಿಮ್ಮ ಸಂಪರ್ಕ ಸಂಖ್ಯೆ ದಾಖಲಿಸಲು ಮರೆಯಬೇಡಿ
* ಹಣ ಪಾವತಿ ಮಾಡಿದಕ್ಕೆ ದಾಖಲೆಯನ್ನೂ ಪಡೆದುಕೊಳ್ಳಿ
* ಟಿಕೆಟ್ ನ್ನು ಮತ್ತೊಮ್ಮೆ ಪರಿಶೀಲಿಸಿ, ಹೊರಡುವ ಸ್ಥಳ ಮತ್ತು ತಲುಪಬೇಕಾದ ಸ್ಥಳ ಸರಿಯಾಗಿದೆಯೇ ಗಮನಿಸಿಕೊಳ್ಳಿ
* ನಿಮ್ಮ ಸ್ಮಾರ್ಟ್ ಫೋನ್ ಮುಖಾಂತರೂ ಪರಿಶೀಲನೆಗೆ ಅವಕಾಶವಿದೆ.
* ಯಾವುದಾದರೂ ಏಜೆನ್ಸಿ ಹೆಚ್ಚಿನ ಹಣ ಪಡೆಯುತ್ತಿದೆ ಎಂದೆನಿಸಿದರೆ ಹಿಂಜರಿಕೆಯಿಲ್ಲದೆ ದೂರು ನೀಡಿ[[email protected], ಮತ್ತು [email protected] ಗೆ ದೂರು ದಾಖಲಿಸಬಹುದು]
* ನಿಮ್ಮಿಂದ ಹೆಚ್ಚು ಹಣ ಪಡೆದರೆ ಅದನ್ನು ಹಿಂದಿರುಗಿಸಲೇಬೇಕಾಗುತ್ತದೆ.
* ಇಂಥ ಏಜೆನ್ಸಿಗಳನ್ನು ಕಪ್ಪು ಪಟ್ಟಿಗೆ ಸಲ್ಲಿಸಲಾಗುವುದು.[2015ರ ಸಾಲಿನ ರಜಾದಿನಗಳ ಪಟ್ಟಿ]
ಏನು ಮಾಡಬೇಕು? ಏನು ಮಾಡಬಾರದು?
* ಪರಿಸರ ಪ್ರೇಮಿ ಇ-ಟಿಕೆಟ್ ಗೆ ಮೊದಲ ಆದ್ಯತೆಯಿರಲಿ
* ಟಿಕೆಟ್ ಮೇಲೆ ನಿಮ್ ಮೊಬೈಲ್ ಸಂಖ್ಯೆ ನಮೂದಿಸುವಂತೆ ಏಜೆಂಟರಿಗೆ ತಿಳಿಸಿ
* ನೀವು ನೀಡಿದ ಅಟಷ್ಟೂ ಹಣಕ್ಕೆ ರಸೀದಿ ಪಡೆದುಕೊಳ್ಳಿ
* ಟಿಕೆಟ್ ಮಾರಾಟ ಮಾಡಬೇಡಿ, ಮಾರಾಟ ಕಂಡು ಬಂದರೆ ದೂರು ನೀಡಿ
* ಯಾವ ಕಾರಣಕ್ಕೂ ತಪ್ಪು ವಿಳಾಸ ನಮೂದಿಸಬೇಡಿ
ಒಟ್ಟಿನಲ್ಲಿ ರೈಲ್ವೆ ಇಲಾಖೆ ಜನ ಜಾಗೃತಿ ಮೂಡಿಸಲು ಇಂಥ ಪ್ರಕಟಣೆಗಳ ಮೂಲಕ ಮಾಹಿತಿ ನೀಡುತ್ತಿದ್ದು ಜನರ ಭಾಗವಹಿಸುವಿಕೆ ಹೆಚ್ಚಾದರೆ ಕಾರ್ಯಕ್ರಮ ಯಶಸ್ವಿಯಾಗುವುದರಲ್ಲಿ ಅನುಮಾನವಿಲ್ಲ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications