'ನಮೋ ಆ್ಯಪ್' ದತ್ತಾಂಶ ಸೋರಿಕೆಗೆ ರಾಹುಲ್ ಗಾಂಧಿ ಟೀಕೆ
ನವದೆಹಲಿ, ಮಾರ್ಚ್ 26: ಪ್ರಧಾನಿಯವರ ಅಧಿಕೃತ ಆ್ಯಪ್, ನಮೋ ಆ್ಯಪ್ ನಿಂದ ನಡೆದಿದೆ ಎನ್ನಲಾದ ದತ್ತಾಂಶ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ನರೇಂದ್ರ ಮೋದಿಯವರನ್ನು ರಾಹುಲ್ ಗಾಂಧಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಆದರೆ ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿ, ರಾಹುಲ್ ಗಾಂಧಿ ಸುಳ್ಳು ಹೇಳುತ್ತಿದ್ದಾರೆ. ಅನಾಲಿಟಿಕ್ಸ್ ಗಾಗಿ ಮಾತ್ರ ಮಾಹಿತಿಯನ್ನು ಬಳಸಿಕೊಳ್ಳಲಾಗಿದೆ ಅಷ್ಟೆ. ಮೂರನೇ ವ್ಯಕ್ತಿಗೆ ಈ ಅನಾಲಿಟಿಕ್ಸ್ ತಯಾರಿಸಲು ನೀಡಲಾಗಿತ್ತು ಅಷ್ಟೇ ಎಂದಿದೆ.
ಬಳಕೆದಾರರಿಗೆ ಸೂಕ್ತವಾದ ಮಾಹಿತಿಯನ್ನು ನೀಡುವ ಉದ್ದೇಶದಿಂದ ಬಳಕೆದಾರರ ಮಾಹಿತಿಯ ಮೇಲೆ ಅನಾಲಿಟಿಕ್ಸ್ ತಯಾರಿಸಲಾಗಿದೆ ಎಂದಿದೆ.

ಈ ಕುರಿತು ಭಾನುವಾರ ಟ್ಟೀಟ್ ಮಾಡಿದ್ದ ರಾಹುಲ್ ಗಾಂಧಿ, "ಹಾಯ್! ನನ್ನ ಹೆಸರು ನರೇಂದ್ರ ಮೋದಿ. ನಾನು ಭಾರತದ ಪ್ರಧಾನಮಂತ್ರಿ. ನೀವು ನನ್ನ ಅಧಿಕೃತ ಆ್ಯಪ್ ಗೆ ಸೈನ್ ಅಪ್ ಆಗುತ್ತಿದ್ದಂತೆ ನಿಮ್ಮೆಲ್ಲಾ ಮಾಹಿತಿಗಳನ್ನು ನಾನು ಅಮೆರಿಕಾದ ಕಂಪನಿಗಳಲ್ಲಿರುವ ನನ್ನ ಗೆಳೆಯರಿಗೆ ನೀಡುತ್ತೇನೆ," ಎಂದು ಟ್ಟೀಟ್ ಮಾಡಿದ್ದರು.
Hi! My name is Narendra Modi. I am India's Prime Minister. When you sign up for my official App, I give all your data to my friends in American companies.
— Rahul Gandhi (@RahulGandhi) March 25, 2018
Ps. Thanks mainstream media, you're doing a great job of burying this critical story, as always.https://t.co/IZYzkuH1ZH
ಇದಕ್ಕೆ ಬಿಜೆಪಿಯ ಟ್ಟಿಟ್ಟರ್ ಖಾತೆಯಿಂದ ತಕ್ಷಣ ಪ್ರತ್ಯುತ್ತರ ನೀಡಲಾಗಿದೆ. "ಉಳಿದ ಆ್ಯಪ್ ಗಳಿಗಿಂತ ನರೇಂದ್ರ ಮೋದಿ ಆ್ಯಪ್ ವಿಭಿನ್ನವಾಗಿದೆ. ಇದೊಂದು ವಿಶಿಷ್ಟ ಆ್ಯಪ್. ಯಾವುದೇ ಪರ್ಮಿಷನ್ ಮತ್ತು ಬಳಕೆದಾರರ ಮಾಹಿತಿ ನೀಡದೆ 'ಗೆಸ್ಟ್ ಮೋಡ್' ನಲ್ಲಿಯೂ ಬಳಸಬಹುದು. ಅಗತ್ಯವಿರುವ ಅನುಮತಿಗಳನ್ನು ಸಂದರ್ಭೋಚಿತ ಮತ್ತು ನಿರ್ದಿಷ್ಟ ಕಾರಣಕ್ಕೆ ಮಾತ್ರ ಕೇಳಲಾಗುತ್ತದೆ. ರಾಹುಲ್ ನ ಸುಳ್ಳುಗಳಿಗೆ ವಿರುದ್ಧವಾಗಿ, ಗೂಗಲ್ ಅನಾಲಿಟಿಕ್ಸ್ ನಂತೆಯೇ ಮೂರನೇ ವ್ಯಕ್ತಿಯ ಸೇವೆಗಳನ್ನು ಡೇಟಾ ವಿಶ್ಲೇಷಣೆಗಾಗಿ ಬಳಸಲಾಗುತ್ತಿದೆ. ಬಳಕೆದಾರರಿಗೆ ಹೆಚ್ಚು ಸೂಕ್ತವಾದ ವಿಷಯವನ್ನು ಒದಗಿಸುವುದಕ್ಕಾಗಿ ಮಾಹಿತಿಗಳ ವಿಶ್ಲೇಷಣೆ ಮಾಡಲಾಗುತ್ತದೆ ಎಂದು ಹೇಳಿದೆ.
Contrary to Rahul’s lies, fact is that data is being used for only analytics using third party service, similar to Google Analytics. Analytics on the user data is done for offering users the most contextual content.
— BJP (@BJP4India) March 25, 2018
"ಈ ರೀತಿ ಮಾಡುವುದರಿಂದ ಬಳಕೆದಾರರು ಆ್ಯಪ್ ನಲ್ಲಿ ಅತ್ಯುತ್ತಮ ಅನುಭವವನ್ನು ಪಡೆಯುತ್ತಾರೆ. ತನ್ನ ಭಾಷೆಯಲ್ಲಿ ಮತ್ತು ಆಸಕ್ತಿಕರವಾದ ವಿಷಯಗಳನ್ನು ಪಡೆಯಲು ಬಳಕೆದಾರರಿಗೆ ಸಹಾಯವಾಗುತ್ತದೆ. ಕೃಷಿ ಸಂಬಂಧಿತ ಮಾಹಿತಿಯನ್ನು ನೋಡುವ ವ್ಯಕ್ತಿಯು ಕೃಷಿ ಸಂಬಂಧಿತ ವಿಷಯವನ್ನು ಸುಲಭವಾಗಿ ಪಡೆಯಬಹುದು," ಎಂದು ಬಿಜೆಪಿಯ ಟ್ಟಿಟರ್ ಖಾತೆ ಮೂಲಕ ಸ್ಪಷ್ಟನೆ ನೀಡಲಾಗಿದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಇದೇ ವೇಳೆ ಬಿಜೆಪಿ ರಾಹುಲ್ ಗಾಂಧಿ ಬಗ್ಗೆ ವ್ಯಂಗ್ಯವಾಡಿದ್ದು, "ರಾಹುಲ್ ಗಾಂಧಿ ಈ ದಿನಗಳಲ್ಲಿ ಭವ್ಯ ರೂಪದಲ್ಲಿದ್ದಾರೆ. ಎಮ್ಆರ್ ಐ ಮತ್ತು ಎನ್ ಸಿಸಿಯ ನಂತರ, ಇವರು ತಂತ್ರಜ್ಞಾನದ ಬಗೆಗಿನ ತಮ್ಮ ಅತ್ಯುತ್ತಮ ಜ್ಞಾನವನ್ನು ಬಹಿರಂಗಪಡಿಸಿದ್ದಾರೆ. ಕೇಂಬ್ರಿಜ್ ಅನಾಲಿಟಿಕಾ ಹಗರಣ ಹೊರಬಿದ್ದ ನಂತರ ಜನರ ಗಮನವನ್ನು ಬೇರೆಡೆಗೆ ತಿರುಗಿಸಲು ಅವರು ದಿನನಿತ್ಯ ಯತ್ನಿಸುತ್ತಿದ್ದಾರೆ," ಎಂದು ಬಿಜೆಪಿ ಟೀಕಿಸಿದೆ.
ಜತೆಗೆ ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿಗೆ ತಂತ್ರಜ್ಞಾನದ ಬಗ್ಗೆ ಎಳ್ಳಷ್ಟೂ ಜ್ಞಾನ ಇಲ್ಲ ಎಂದು ಬಿಜೆಪಿ ಕಿಡಿಕಾರಿದೆ.












Click it and Unblock the Notifications