Get Updates
Get notified of breaking news, exclusive insights, and must-see stories!

ಶಾಲಾ-ಕಾಲೇಜುಗಳಲ್ಲಿ ಉಚಿತ ಶಿಕ್ಷಣ: ಮಹತ್ವದ ಗ್ಯಾರಂಟಿ ಘೋಷಿಸಿದ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ

ರಾಯ್‌ಪುರ, ಅಕ್ಟೋಬರ್‌ 28: ಛತ್ತೀಸ್‌ಗಢದ ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಉಚಿತ ಶಿಕ್ಷಣ ನೀಡುವುದಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶನಿವಾರ ಭರವಸೆ ನೀಡಿದ್ದಾರೆ.

ಕಂಕೇರ್ ಜಿಲ್ಲೆಯ ಭಾನುಪ್ರತಾಪುರ್ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಭಾಷಣಗಳಲ್ಲಿ ಒಬಿಸಿ (ಇತರ ಹಿಂದುಳಿದ ವರ್ಗ) ಬಗ್ಗೆ ಪ್ರಸ್ತಾಪಿಸುತ್ತಾರೆ. ಆದರೆ, ಅವರು ಜಾತಿ ಗಣತಿಗೆ ಏಕೆ ಹೆದರುತ್ತಾರೆ ಎಂದು ಪ್ರಶ್ನಿಸಿದರು.

ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಲ್ಲಿ ಜಾತಿ ಗಣತಿ ನಡೆಸಲಾಗುವುದು ಎಂಬ ಮಹತ್ವದ ಘೋಷಣೆಯನ್ನೂ ಮಾಡಿದ್ದಾರೆ.

rahul-gandhi-promises-free-education

'ನಾವು ನಿಮಗಾಗಿ ಒಂದು ಪ್ರಮುಖ ಹೆಜ್ಜೆಯನ್ನು ಇಡಲಿದ್ದೇವೆ. ಅದನ್ನು ನಾವು 'ಕೆಜಿ ಟು ಪಿಜಿ' ಎಂದು ಕರೆಯುತ್ತೇವೆ. ಕೆಜಿ (ಅಂಗನವಾಡಿ) ದಿಂದ ಪಿಜಿ (ಸ್ನಾತಕೋತ್ತರ) ವರೆಗೆ ವಿದ್ಯಾರ್ಥಿಗಳಿಗೆ ಸರ್ಕಾರಿ ಸಂಸ್ಥೆಗಳಲ್ಲಿ ಉಚಿತ ಶಿಕ್ಷಣವನ್ನು ಒದಗಿಸಲಾಗುವುದು. ನಾವು ಅಧಿಕಾರಕ್ಕೆ ಮರಳಿ ಬಂದರೆ, ವಿದ್ಯಾರ್ಥಿಗಳು ಒಂದು ಪೈಸೆಯನ್ನೂ ಕೊಡಬೇಕಾಗಿಲ್ಲ' ಎಂದು ರಾಹುಲ್‌ ಹೇಳಿದರು.

ಚುನಾವಣೆಯ ನಂತರ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚಿಸಿದರೆ, ರಾಜೀವ್ ಗಾಂಧಿ ಪ್ರೋತ್ಸಾಹ ಯೋಜನೆಯಡಿ ಟೆಂಡೂ ಲೆಸ್ ಕಲೆಕ್ಟರ್‌ಗಳಿಗೆ ವರ್ಷಕ್ಕೆ ರೂ 4,000 ನೀಡಲಾಗುವುದು ಎಂದು ಗಾಂಧಿ ಭರವಸೆ ನೀಡಿದರು.

ಬುಡಕಟ್ಟು ಜನಾಂಗದ ಪ್ರಾಬಲ್ಯದ ಬಸ್ತಾರ್ ಪ್ರದೇಶದ ಭಾಗವಾಗಿರುವ ಭಾನುಪ್ರತಾಪುರ್ ಕ್ಷೇತ್ರದಲ್ಲಿ ಈ ಪ್ರಮುಖ ಘೋಷಣೆ ಮಾಡಿದರು.

ಜಾತಿ ಗಣತಿ ಕುರಿತು ಮಾತನಾಡಿದ ಅವರು, 'ನರೇಂದ್ರ ಮೋದಿ ಅವರು ತಮ್ಮ ಪ್ರತಿ ಭಾಷಣದಲ್ಲಿ 'ಒಬಿಸಿ' ಪದವನ್ನು ಬಳಸುತ್ತಾರೆ. ಆದರೆ ಅವರು ಜಾತಿ ಗಣತಿಗೆ ಏಕೆ ಹೆದರುತ್ತಾರೆ. ಒಬಿಸಿಗಳನ್ನು ಬಿಜೆಪಿಯವರು ಕೈಬಿಡುತ್ತಿದ್ದಾರೆ. ಎಲ್ಲರೂ ಜಾಗೃತರಾಗಬೇಕು' ಎಂದು ರಾಹುಲ್‌ ಹೇಳಿದರು.

ದೆಹಲಿಯಲ್ಲಿ (ಕೇಂದ್ರದಲ್ಲಿ) ಅಧಿಕಾರಕ್ಕೆ ಬಂದರೆ ಕಾಂಗ್ರೆಸ್ ದೇಶದಲ್ಲಿ ಜಾತಿ ಗಣತಿ ನಡೆಸಲಿದೆ ಎಂದು ಅವರು ಘೋಷಿಸಿದರು.

'ನಾವು ಈಗಾಗಲೇ ಛತ್ತೀಸ್‌ಗಢಕ್ಕೆ ಈ ಭರವಸೆಯನ್ನು ನೀಡಿದ್ದೇವೆ' ಎಂದು ಅವರು ತಿಳಿಸಿದರು.

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿದರ ಅವರು, ದೇಶದ ಎರಡು ಅಥವಾ ಮೂರು ಕೈಗಾರಿಕೋದ್ಯಮಿಗಳ ಲಾಭಕ್ಕಾಗಿ ಮೋದಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ರೈತರು, ದಲಿತರು, ಕಾರ್ಮಿಕರು ಮತ್ತು ಆದಿವಾಸಿಗಳ ಹಿತದೃಷ್ಟಿಯಿಂದ ಕಾಂಗ್ರೆಸ್ ಕೆಲಸ ಮಾಡುತ್ತದೆ ಎಂದರು.

ಕಳೆದ ವಿಧಾನಸಭಾ ಚುನಾವಣೆಗೆ ಮುನ್ನ ಕಾಂಗ್ರೆಸ್ ನೀಡಿದ ಪ್ರಮುಖ ಭರವಸೆಗಳನ್ನು ಛತ್ತೀಸ್‌ಗಢದಲ್ಲಿ ಈಡೇರಿಸಲಾಗಿದೆ ಎಂದು ಅವರು ಪ್ರತಿಪಾದಿಸಿದರು.

ಆದಿವಾಸಿಗಳಿಗೆ 'ಆದಿವಾಸಿ' ಬದಲಿಗೆ 'ವನವಾಸಿ' ಎಂದು ಬಳಸುವುದನ್ನು ರಾಹುಲ್‌ ಆಕ್ಷೇಪಿಸಿದರು. ಬಿಜೆಪಿ ಇದನ್ನು ಬಳಸುತ್ತಿರುವುದು ಆದಿವಾಸಿಗಳಿಗೆ ಮಾಡಿದ ಅವಮಾನವಾಗಿದೆ. ಅವರ ಸಂಸ್ಕೃತಿ, ಇತಿಹಾಸ ಮತ್ತು ಭಾಷೆಯ ಮೇಲಿನ ದಾಳಿಯಾಗಿದೆ ಎಂದು ಆರೋಪ ಮಾಡಿದರು.

ಛತ್ತೀಸ್‌ಗಢ ವಿಧಾನಸಭೆಗೆ ಮೊದಲ ಹಂತದ ಚುನಾವಣೆಯು ನವೆಂಬರ್ 7 ರಂದು ನಡೆಯಲಿದೆ. ಇದು 20 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಎರಡನೇ ಹಂತದ ಚುನಾವಣೆಯು ನವೆಂಬರ್ 17 ರಂದು ನಡೆಯಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+