ಜಿಎಸ್ ಟಿ ಅಂದರೆ ಗಬ್ಬರ್ ಸಿಂಗ್ ಟ್ಯಾಕ್ಸ್: ರಾಹುಲ್ ಗಾಂಧಿ ವಾಗ್ದಾಳಿ
ಜಿಎಸ್ ಟಿ ಅಂದರೆ ಗಬ್ಬರ್ ಸಿಂಗ್ ಟ್ಯಾಕ್ಸ್ ಎನ್ನುವ ಮೂಲಕ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಗುಜರಾತ್ ವಿಧಾನಸಭಾ ಚುನಾವಣೆಯ ಪ್ರಚಾರ ಕೈಗೊಂಡಿರುವ ರಾಹುಲ್ ಗಾಂಧಿ ಅವರ ಭಾಷಣದ ಮುಖ್ಯಾಂಶಗಳು ಹೀಗಿವೆ.
* ಬಿಜೆಪಿ ಹಾಕಿರುವ ಜಿಎಸ್ ಟಿ ಅಂದರೆ ಅದು ಗಬ್ಬರ್ ಸಿಂಗ್ ಟ್ಯಾಕ್ಸ್.
ಹಿಮಾಚಲ ಪ್ರದೇಶ: ಕಾಂಗ್ರೆಸಿನಿಂದ 40 ತಾರಾ ಪ್ರಚಾರಕರ ಪಟ್ಟಿ ಬಿಡುಗಡೆ
* ಸರಕಾರವು ಜಿಎಸ್ ಟಿಯನ್ನು ಸರಳ ಮಾಡಬೇಕು.
* ಜಿಎಸ್ ಟಿ ಜಾರಿಗೆ ಮುನ್ನ ಅದರ ಪರೀಕ್ಷಾರ್ಥ ಪ್ರಯೋಗ ಆಗಬೇಕು, ಇಲ್ಲದಿದ್ದರೆ ಇದರಿಂದ ನಷ್ಟವಾಗುತ್ತದೆ ಎಂದು ಸರಕಾರಕ್ಕೆ ಹೇಳಿದ್ದೆವು.
* ಕಾಂಗ್ರೆಸ್ ಮೆದುಳಿನಿಂದ ಹುಟ್ಟಿದ ಕೂಸು ಜಿಎಸ್ ಟಿ. ಐದು ಸ್ಲ್ಯಾಬ್ ಬೇಡ ಎಂದು ಬಿಜೆಪಿಗೆ ತಿಳಿಸಿದ್ದೆವು. ಆದರೆ ಜಿಎಸ್ ಟಿ ಜಾರಿ ವಿಚಾರದಲ್ಲಿ ಕೇಂದ್ರ ಸರಕಾರ ಹಠಮಾರಿ ಧೋರಣೆ ತಳೆಯಿತು.
* ಪ್ರಧಾನಿ ನರೇಂದ್ರ ಮೋದಿ ಮನ್ ಕೀ ಬಾತ್ ಮಾಡುತ್ತಾರೆ. ನಾನಿವತ್ತು ಗುಜರಾತ್ ನ ಮನ್ ಕೀ ಬಾತ್ ಹೇಳುತ್ತಿದ್ದೀನಿ.
* ಪ್ರತಿ ಸಲ ನೀವು ಸೆಲ್ಫಿ ತೆಗೆದುಕೊಳ್ತೀರಲ್ಲಾ, ಆಗೆಲ್ಲ ಚೀನಾದ ಯುವಕ/ಯುವತಿ ಕೆಲಸ ಪಡೆಯುತ್ತಾರೆ.
ರಾಹುಲ್ ಗಾಂಧಿ ಟ್ವಿಟ್ಟರ್ ಅಕೌಂಟ್ ಜನಪ್ರಿಯತೆಯ ಸುತ್ತ ಅನುಮಾನದ ಹುತ್ತ?
* ನ್ಯಾನೋ ಉತ್ಪಾದನೆ ಮಾಡುವ ಕಂಪನಿಗೆ ಅವರು ಮೂವತ್ತರಿಂದ ಮೂವತ್ತೈದು ಕೋಟಿ ನೀಡಿದ್ದಾರೆ. ಆ ಮೊತ್ತವೇ ಸಾಕಿತ್ತು, ರೈತರ ಸಾಲ ಮನ್ನಾ ಮಾಡಬಹುದಿತ್ತು.
* ಈ ದೇಶದಲ್ಲಿ ಶ್ರೀಮಂತರ ಸಾಲ ಮನ್ನಾ ಆಗುತ್ತದೆ, ರೈತರು ಕಷ್ಟ ಅನುಭವಿಸುತ್ತಾರೆ.
* ಈ ಸರಕಾರವು ಗುಜರಾತ್ ನ ಜನರ ಧ್ವನಿಯನ್ನು ಅಡಗಿಸುವ ಪ್ರಯತ್ನ ಮಾಡುತ್ತಿದೆ.
* ಗುಜರಾತ್ ಜನರನ್ನು ನೀವು ಖರೀದಿಸಲು ಸಾಧ್ಯವಿಲ್ಲ. ಇಡೀ ಜಗತ್ತಿನ ಹಣವನ್ನೆಲ್ಲ ಒಟ್ಟುಗೂಡಿಸಿಕೊಂಡು ಬಂದರೂ ಅದು ಸಾಧ್ಯವಿಲ್ಲ.
* ಕಳೆದ ಇಪ್ಪತ್ತೆರಡು ವರ್ಷಗಳಿಂದ ಐದಾರು ಕೈಗಾರಿಕೋದ್ಯಮಿಗಳು ಗುಜರಾತ್ ಸರಕಾರವನ್ನು ನಡೆಸುತ್ತಿದ್ದಾರೆ.
* ಈ ಸಲ ಗುಜರಾತ್ ನಲ್ಲಿ ಕಾಂಗ್ರೆಸ್ ಸರಕಾರ ಬರುತ್ತದೆ. ನಾವು ನೂರಿಪ್ಪತ್ತೈದಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯುತ್ತೇವೆ.