ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೂಢನಂಬಿಕೆಯ ಪರಮಾವಧಿ ಅಂದರೆ ಇದೇನಾ?

By Madhusoodhan
|
Google Oneindia Kannada News

ಜಲಂಧರ್, ಜೂನ್, 14: ಇದನ್ನು ಮೂಢನಂಬಿಕೆಯ ಪರಮಾವಧಿ ಎಂದರೂ ತಪ್ಪಿಲ್ಲ. ಗಂಭೀರ ಗಾಯಗೊಂಡ ಆರು ವರ್ಷದ ಹುಡುಗನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ ಚಿಕಿತ್ಸೆ ಕೊಡುವುದೇ ಬೇಡ ಎಂದು ತಂದೆ-ತಾಯಿಯೇ ಹೇಳುತ್ತಿದ್ದಾರೆ.

ಕೆಂಡ ಹಾಯುವಾಗ ತಂದೆಯ ಹೆಗಲ ಮೇಲೆ ಇದ್ದ ಮಗ ಆಯತಪ್ಪಿ ಕೆಳಕ್ಕೆ ಬಿದ್ದಿದ್ದಾನೆ. ಉರಿಯುತ್ತಿರುವ ಕೆಂಡದ ಮೇಲೆ ಬಿದ್ದ ಆರು ವರ್ಷದ ಕಾರ್ತಿಕ್ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾನೆ. [ಉಡ್ತಾ ಪಂಜಾಬ್‌ಗೆ ಒಂದೇ ಕತ್ತರಿ ಸಾಕೆಂದ ಮುಂಬೈ ಹೈಕೋರ್ಟ್]

punjab

ಪಂಜಾಬ್ ನ ಜಲಂಧರ್ ಮಾ ಮಾರಿಯಮ್ಮಾ ಹಬ್ಬದಲ್ಲಿ ಸಂಪ್ರದಾಯದಂತೆ ಕೆಂಡ ಹಾಯುವ ವೇಳೆ ದುರ್ಘಟನೆ ಸಂಭವಿಸಿದೆ. ದೇವರ ಕಾರ್ಯದ ವೇಳೆ ಅವಘಡವಾಗಿದೆ, ದೇವರೇ ಬಂದು ಮಗುವನ್ನು ರಕ್ಷಣೆ ಮಾಡುತ್ತಾನೆ. ಮಗುವನ್ನು ಆಸ್ಪತ್ರೆಗೆ ಸೇರಿವುದೇ ಬೇಡ ಎಂದು ತಂದೆ-ತಾಯಿ ಪಟ್ಟು ಹಿಡಿದು ಕುಳಿತುಕೊಂಡಿದ್ದರು. ಆದರೆ ಸೇರಿದ್ದ ಜನರು ಮಗುವನ್ನು ರಕ್ಷಿಸಿ ಆಸ್ಪತ್ರೆಗೆ ಸೇರಿಸಿದ್ದಾರೆ.[ತುಮಕೂರು : ಕೊಂಡ ಹಾಯುವ ವೇಳೆ 30 ಜನರಿಗೆ ಗಾಯ]

ಕಳೆದ ಮಾರ್ಚ್ ತಿಂಗಳಿನಲ್ಲಿ ಕೆಂಡ ಹಾಯುವ ವೇಳೆ ಆಯ ತಪ್ಪಿ ಬಿದ್ದ ಯುವಕನನ್ನು ರಕ್ಷಣೆ ಮಾಡಲು ಹೋಗಿ 30ಕ್ಕೂ ಅಧಿಕ ಮಂದಿ ಗಾಯಗೊಂಡ ಘಟನೆ ತುಮಕೂರಿನಲ್ಲಿ ನಡೆದಿತ್ತು. ತುಮಕೂರು ತಾಲೂಕಿನ ಹೆತ್ತೇನಹಳ್ಳಿ ಗ್ರಾಮದ ಗ್ರಾಮ ದೇವತೆ ಜಾತ್ರೆಯ ವೇಳೆ ಈ ದುರ್ಘಟನೆ ನಡೆದಿತ್ತು.

English summary
A six-year-old boy was rushed to hospital with serious burn injuries after his father dropped him on hot coals during a ritual in Jalandhar., Punjab. The father was walking barefoot with his son Kartik in his arms on the red-hot embers when he lost his balance and fell during the Maa Maariamma Mela event.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X