ಮೂಢನಂಬಿಕೆಯ ಪರಮಾವಧಿ ಅಂದರೆ ಇದೇನಾ?
ಜಲಂಧರ್, ಜೂನ್, 14: ಇದನ್ನು ಮೂಢನಂಬಿಕೆಯ ಪರಮಾವಧಿ ಎಂದರೂ ತಪ್ಪಿಲ್ಲ. ಗಂಭೀರ ಗಾಯಗೊಂಡ ಆರು ವರ್ಷದ ಹುಡುಗನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ ಚಿಕಿತ್ಸೆ ಕೊಡುವುದೇ ಬೇಡ ಎಂದು ತಂದೆ-ತಾಯಿಯೇ ಹೇಳುತ್ತಿದ್ದಾರೆ.
ಕೆಂಡ ಹಾಯುವಾಗ ತಂದೆಯ ಹೆಗಲ ಮೇಲೆ ಇದ್ದ ಮಗ ಆಯತಪ್ಪಿ ಕೆಳಕ್ಕೆ ಬಿದ್ದಿದ್ದಾನೆ. ಉರಿಯುತ್ತಿರುವ ಕೆಂಡದ ಮೇಲೆ ಬಿದ್ದ ಆರು ವರ್ಷದ ಕಾರ್ತಿಕ್ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾನೆ. [ಉಡ್ತಾ ಪಂಜಾಬ್ಗೆ ಒಂದೇ ಕತ್ತರಿ ಸಾಕೆಂದ ಮುಂಬೈ ಹೈಕೋರ್ಟ್]
ಪಂಜಾಬ್ ನ ಜಲಂಧರ್ ಮಾ ಮಾರಿಯಮ್ಮಾ ಹಬ್ಬದಲ್ಲಿ ಸಂಪ್ರದಾಯದಂತೆ ಕೆಂಡ ಹಾಯುವ ವೇಳೆ ದುರ್ಘಟನೆ ಸಂಭವಿಸಿದೆ. ದೇವರ ಕಾರ್ಯದ ವೇಳೆ ಅವಘಡವಾಗಿದೆ, ದೇವರೇ ಬಂದು ಮಗುವನ್ನು ರಕ್ಷಣೆ ಮಾಡುತ್ತಾನೆ. ಮಗುವನ್ನು ಆಸ್ಪತ್ರೆಗೆ ಸೇರಿವುದೇ ಬೇಡ ಎಂದು ತಂದೆ-ತಾಯಿ ಪಟ್ಟು ಹಿಡಿದು ಕುಳಿತುಕೊಂಡಿದ್ದರು. ಆದರೆ ಸೇರಿದ್ದ ಜನರು ಮಗುವನ್ನು ರಕ್ಷಿಸಿ ಆಸ್ಪತ್ರೆಗೆ ಸೇರಿಸಿದ್ದಾರೆ.[ತುಮಕೂರು : ಕೊಂಡ ಹಾಯುವ ವೇಳೆ 30 ಜನರಿಗೆ ಗಾಯ]
ಕಳೆದ ಮಾರ್ಚ್ ತಿಂಗಳಿನಲ್ಲಿ ಕೆಂಡ ಹಾಯುವ ವೇಳೆ ಆಯ ತಪ್ಪಿ ಬಿದ್ದ ಯುವಕನನ್ನು ರಕ್ಷಣೆ ಮಾಡಲು ಹೋಗಿ 30ಕ್ಕೂ ಅಧಿಕ ಮಂದಿ ಗಾಯಗೊಂಡ ಘಟನೆ ತುಮಕೂರಿನಲ್ಲಿ ನಡೆದಿತ್ತು. ತುಮಕೂರು ತಾಲೂಕಿನ ಹೆತ್ತೇನಹಳ್ಳಿ ಗ್ರಾಮದ ಗ್ರಾಮ ದೇವತೆ ಜಾತ್ರೆಯ ವೇಳೆ ಈ ದುರ್ಘಟನೆ ನಡೆದಿತ್ತು.