ಸಾನಿಯಾ, ಮೊದಲು ನಿಮ್ಮ ದೇಶಪ್ರೇಮ ಸಾಬೀತುಪಡಿಸಿ : ಟ್ವೀಟ್ಸ್
ಬೆಂಗಳೂರು, ಫೆಬ್ರವರಿ 18 : ಪಾಕಿಸ್ತಾನದ ಸೊಸೆ, ಭಾರತದ ಹೆಮ್ಮೆಯ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರು ಪುಲ್ವಾಮಾ ಉಗ್ರರ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದು, ಫೆಬ್ರವರಿ 14 ಭಾರತದ ಪಾಲಿಗೆ ಕರಾಳ ದಿನ ಎಂದಿದ್ದಾರೆ.
ಸಾನಿಯಾ ಅವರು ಈ ಕುರಿತಂತೆ ಭಾನುವಾರದಂದು ಸುದೀರ್ಘವಾದ ಟ್ವೀಟ್ ಮಾಡಿದ್ದಾರೆ. ದಾಳಿಯಲ್ಲಿ ಹುತಾತ್ಮರಾದ ಸೈನಿಕರು ಹಾಗೂ ಅವರ ಕುಟುಂಬದ ಪರವಾಗಿ ನಿಲ್ಲುತ್ತೇನೆ ಎಂದಿದ್ದಾರೆ.
ನಮ್ಮ ದೇಶವನ್ನು ರಕ್ಷಿಸುವ ಯೋಧರು ನಿಜವಾದ ಹೀರೋಗಳು ಎಂದು ಹೇಳಿದಾರೆ. ಇಂಥ ದುರಂತ, ಇಂಥ ದಿನ ಮತ್ತೊಮ್ಮೆ ನೋಡುವ ದಿನ ಬಾರದಿರಲಿ ಎಂದಿದ್ದಾರೆ.
ಪಾಕಿಸ್ತಾನದ ಸೊಸೆಯಾದ್ರೂ, ಭಾರತದ ಪರ ಟೆನಿಸ್ ಆಡುತ್ತಿದ್ದ ಸಾನಿಯ ಮಿರ್ಜಾ ಅವರ ದೇಶಪ್ರೇಮದ ಬಗ್ಗೆ ಅನೇಕ ಬಾರಿ ಟೀಕೆಗಳು ಕೇಳಿ ಬಂದರೂ ಎದೆಗುಂದದೆ ದಿಟ್ಟ ಉತ್ತರ ನೀಡುತ್ತಾ ಬಂದಿದ್ದಾರೆ.
ಪುಲ್ವಾಮಾ ಆತ್ಮಾಹುತಿ ದಾಳಿಗೆ ಅಜರ್ ಅದೇಶ ನೀಡಲು ಏನು ಕಾರಣ?
ಪುಲ್ವಾಮಾ ದಾಳಿ ಬಗ್ಗೆ ಟ್ವೀಟ್ ಮಾಡಿದ ಸಾನಿಯಾರನ್ನು ಮತ್ತೊಮ್ಮೆ ನಿಮ್ಮ ದೇಶ ಪ್ರೇಮವನ್ನು ಸಾಬೀತುಪಡಿಸಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
|
ಸುದೀರ್ಘವಾದ ಟ್ವೀಟ್ ಮಾಡಿದ್ದಾರೆ
ಫೆಬ್ರವರಿ 14 ಭಾರತದ ಪಾಲಿಗೆ ಕರಾಳ ದಿನ ಎಂದಿದ್ದಾರೆ. ಸಾನಿಯಾ ಅವರು ಈ ಕುರಿತಂತೆ ಭಾನುವಾರದಂದು ಸುದೀರ್ಘವಾದ ಟ್ವೀಟ್ ಮಾಡಿದ್ದಾರೆ. ದಾಳಿಯಲ್ಲಿ ಹುತಾತ್ಮರಾದ ಸೈನಿಕರು ಹಾಗೂ ಅವರ ಕುಟುಂಬದ ಪರವಾಗಿ ನಿಲ್ಲುತ್ತೇನೆ ಎಂದಿದ್ದಾರೆ.
|
ನಾವು ಭಯೋತ್ಪಾದನೆ ವಿರುದ್ಧ ಇದ್ದೇವೆ
ನಾವು ಭಯೋತ್ಪಾದನೆ ವಿರುದ್ಧ ಇದ್ದೇವೆ. ಯಾರು ಅದನ್ನು ಹರಡುತ್ತರೋ ಅವರ ವಿರುದ್ಧವಾಗಿ ಇರುತ್ತೇವೆ ಎಂದು ತಿಳಿಸಿದ್ದಾರೆ. ಯಾವ ವ್ಯಕ್ತಿ ತಮ್ಮ ಮನಸ್ಸಿನಲ್ಲಿ ಭಯೋತ್ಪಾದನೆಯನ್ನು ವಿರೋಧಿಸುತ್ತಾನೆಯೋ, ಆತನಿಲ್ಲದಿದ್ದರೆ, ಅದೇ ಸಮಸ್ಯೆಯಾಗುತ್ತದೆ ಎಂದು ಟೀಕಾಕಾರರಿಗೆ ಸಾನಿಯಾ ಉತ್ತರ ನೀಡಿದ್ದಾರೆ.

ನಾನು ಶಾಂತಿಗಾಗಿ ಪ್ರಾರ್ಥಿಸುತ್ತೇನೆ
ನಾನು ಶಾಂತಿಗಾಗಿ ಪ್ರಾರ್ಥಿಸುತ್ತೇನೆ. ಬದಲಾಗಿ ನೀವು ಹೆಚ್ಚು ದ್ವೇಷ ಹರಡುತ್ತಿದ್ದೀರಿ. ಇತರರನ್ನು ಟ್ರೋಲ್ ಮಾಡಿ ನೀವು ಏನನ್ನು ಸಾಧಿಸುವುದಿಲ್ಲ. ಒಂದು ಕಡೆ ಕುಳಿತು ಜನರನ್ನು ಜಡ್ಜ್ ಮಾಡುವ ಬದಲಿಗೆ ದೇಶಕ್ಕೆ ಸೇವೆ ಸಲ್ಲಿಸಿ, ಆಗ ಭಯೋತ್ಪಾದನೆಗೆ ಎಲ್ಲಿಯ ಜಾಗವಿರುವುದಿಲ್ಲ ಎಂದಿದ್ದಾರೆ.
|
ಪಾಕಿಸ್ತಾನದ ಹೆಸರು ಬಳಸದೆ ಲೇಖನ
ಸಾನಿಮಾ ಮೇಡಂ, ಭಯೋತ್ಪಾದನೆ ಕುರಿತಂತೆ ದೊಡ್ಡ ಲೇಖನ ಬರೆದಿದ್ದೀರಿ ಆದರೆ, ಪಾಕಿಸ್ತಾನದ ಹೆಸರು ಎಲ್ಲೂ ಬಳಸದೆ ಚಾಣಾಕ್ಷತನ ಮೆರೆದಿದ್ದೀರಿ ಎಂದು ಸಾರ್ವಜನಿಕರೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಸಾರ್ವಜನಿಕವಾಗಿ ದಾಳಿಯನ್ನು ಖಂಡಿಸುವುದಾಗಲಿ, ಸಾಮಾಜಿಕ ಜಾಲತಾಣದಲ್ಲಾಗಲಿ ಹಾಗೂ ಕಟ್ಟಡ ಮೇಲ್ಛಾವಣಿಗೆ ಹೋಗಿ ನಾನು ಭಯೋತ್ಪಾದನೆ ವಿರುದ್ಧ ಎಂದು ಕಿರುಚುವುದು ನನಗೂ ಅವಶ್ಯವಿಲ್ಲ. ಎಂದು ಸೆಲೆಬ್ರಿಟಿಗಳು ಎಲ್ಲಾ ವಿಷಯಕ್ಕೂ ಪ್ರತಿಕ್ರಿಯಿಸಬೇಕು ಎಂಬ ಕೂಗಿಗೆ ಉತ್ತರಿಸಿದ್ದಾರೆ.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications