ಪರಿಸರ ರಕ್ಷಣೆಯ ಮಂತ್ರ ಜಪಿಸಿದ ಪ್ರಧಾನಿ ನರೇಂದ್ರ ಮೋದಿ
ನವದೆಹಲಿ, ಮೇ 27: ಕಡಿಮೆ ಗುಣಮಟ್ಟದ ಪ್ಲಾಸ್ಟಿಕ್ ಮತ್ತು ಪಾಲಿಥಿನ್ಗಳನ್ನು ಬಳಕೆ ಮಾಡದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಜನರಿಗೆ ಮನವಿ ಮಾಡಿದರು.
ಇವು ಪರಿಸರ, ವನ್ಯಜೀವಿ ಮತ್ತು ಜನರ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ ಎಂದು ಮೋದಿ ಭಾನುವಾರ ಆಕಾಶವಾಣಿಯ 'ಮನ್ ಕಿ ಬಾತ್' ಭಾಷಣದಲ್ಲಿ ಕಿವಿಮಾತು ಹೇಳಿದರು.
ವಿಶ್ವ ಪರಿಸರ ದಿನವನ್ನು ಗುರಿಯಾಗಿರಿಸಿಕೊಂಡು ಮಾತನಾಡಿದ ಅವರು, ಪರಿಸರ ರಕ್ಷಣೆಯ ಪ್ರಯತ್ನಗಳ ಕುರಿತು ಸಲಹೆಗಳನ್ನು ನೀಡಿದರು. ಮೋದಿ ಅವರ ಭಾಷಣದ ಕೆಲವು ಅಂಶಗಳು ಇಲ್ಲಿವೆ.
ಜೂನ್ 5ರಂದು ವಿಶ್ವ ಪರಿಸರ ದಿನಾಚರಣೆಯನ್ನು ಮಹತ್ವಾಕಾಂಕ್ಷೆಯಿಂದ ಆವರಿಸಬೇಕು. ಇದು ಗಿಡಗಳನ್ನು ನೆಡಲು ಆದ್ಯತೆ ನೀಡಬೇಕಾದ ಗಳಿಗೆ.

ಕೇವಲ ಗಿಡಗಳನ್ನು ನಡೆವುದರಿಂದ ಪ್ರಯೋಜನವಿಲ್ಲ. ಅದು ಬೆಳೆದು ಮರವಾಗುವವರೆಗೂ ಅದರ ಬಗ್ಗೆ ಕಾಳಜಿ ವಹಿಸಿಕೊಳ್ಳಲು ಜನರು ಮುಂದಾಗಬೇಕು.
ಪರಿಸರದ ರಕ್ಷಣೆ ಮತ್ತು ಪ್ರಕೃತಿಯೆಡೆಗಿನ ಸಂವೇದನೆ ಸಹಜವಾಗಿಯೇ ಬರಬೇಕು. ಇತ್ತೀಚೆಗೆ ಸುರಿದ ಬಿರುಗಾಳಿ ಸಹಿತ ಮಳೆ ಅಕಾಲಿಕ. ಜೀವ ಮತ್ತು ಆಸ್ತಿ ಪಾಸ್ತಿ ಹಾನಿಗೆ ಪ್ರತಿಕೂಲ ವಾತಾವರಣ ಕಾರಣವಾಗಿದೆ. ಹವಾಮಾನ ಸನ್ನಿವೇಶದ ಬದಲಾವಣೆಯ ಫಲಿತಾಂಶವಿದು.
ಸುಡುಬಿಸಿಲಿನ ಬೇಸಿಗೆ, ಪ್ರವಾಹ, ಬಿಟ್ಟುಬಿಡದೆ ಸುರಿಯುವ ಮಳೆ ಅಥವಾ ಸಹಿಸಲಾಧ್ಯ ಚಳಿಯನ್ನು ಎದುರಿಸಿದಾಗಲೆಲ್ಲ, ಪ್ರತಿಯೊಬ್ಬರೂ ಹಮಾಮಾನ ವೈಪರೀತ್ಯ ಮತ್ತು ಜಾಗತಿಕ ತಾಪಮಾನದ ಬಗ್ಗೆ ವಿಶ್ಲೇಷಣೆ ಮಾಡುವ ಪರಿಣತರಾಗುತ್ತಾರೆ.
ಆದರೆ, ಕೇವಲ ಮಾತು ಯಾವುದಾದರೂ ಪರಿಹಾರ ನೀಡಬಲ್ಲದೇ? ನಿಸರ್ಗದೆಡೆಗೆ ಸಂವೇದನಾಶೀಲತೆ, ಪ್ರಕೃತಿ ರಕ್ಷಣೆ ನಮ್ಮ ಸ್ವಭಾವದಲ್ಲಿ ಸಹಜವಾಗಿ ಬರಬೇಕು. ಇವು ನಮ್ಮ ಸಂಸ್ಕೃತಿಯೊಳಗೆ ಮಿಳಿತವಾಗಬೇಕು.
ಈ ವರ್ಷ ವಿಶ್ವ ಪರಿಸರ ದಿನಾಚರಣೆಯ ಆತಿಥ್ಯ ವಹಿಸಲು ಭಾರತ ಹೆಮ್ಮೆ ಪಡುತ್ತಿದೆ. ಇದು ದೇಶದ ಮಹತ್ವದ ಸಾಧನೆ. ಹವಾಮಾನ ವೈಪರೀತ್ಯದ ಪರಿಣಾಮಗಳನ್ನು ತಗ್ಗಿಸುವಲ್ಲಿ ಭಾರತದ ಪ್ರಯತ್ನವನ್ನು ಗುರುತಿಸಿ ಈ ಗೌರವ ನೀಡಲಾಗಿದೆ.
ಪ್ರಸಕ್ತ ವರ್ಷದ ಧ್ಯೇಯ ವಾಕ್ಯ 'ಪ್ಲಾಸ್ಟಿಕ್ ಮಾಲಿನ್ಯವನ್ನು ಸೋಲಿಸಿ' ಎಂದು. ಈ ಧ್ಯೇಯವಾಕ್ಯದ ಮಹತ್ವವನ್ನು ಅರ್ಥಮಾಡಿಕೊಂಡು ಕಡಿಮೆ ಗುಣಮಟ್ಟದ ಪ್ಲಾಸ್ಟಿಕ್ ಮತ್ತು ಪಾಲಿಥಿನ್ಅನ್ನು ಬಳಕೆ ಮಾಡದಂತೆ ಮನವಿ ಮಾಡುತ್ತೇನೆ.
ಈ ಪರಿಸರ ದಿನಾಚರಣೆಯ ದಿನದಂದು ನಮ್ಮ ಗ್ರಹವನ್ನು ಸ್ವಚ್ಛ ಮತ್ತು ಹಸಿರುಮಯಗೊಳಿಸಲು ಏನು ಮಾಡಬಹುದು ಎಂಬ ಬಗ್ಗೆ ಯೋಚನೆ ಮಾಡೋಣ. ಯಾವ ಹೊಸ ಪ್ರಯತ್ನಗಳನ್ನು ನಾವು ಮಾಡಬಹುದು ಎಂದು ಆಲೋಚಿಸಿ.
ಯೋಗದ ಅಭ್ಯಾಸವು ಧೈರ್ಯದ ವೃದ್ಧಿಗೆ ನೆರವಾಗುತ್ತದೆ. ಅದು ತಂದೆಯಂತೆ ನಮ್ಮನ್ನು ಯಾವಾಗಲೂ ಕಾಪಾಡುತ್ತದೆ. ತಾಯಿ ಮಗುವಿನೆಡೆಗೆ ತೋರುವ ಕ್ಷಮಾಗುಣ ನಮಗೆ ಯೋಗಾಭ್ಯಾಸದಿಂದ ಬರುತ್ತದೆ. ಮಾನಸಿಕ ನೆಮ್ಮದಿಯೆಂಬುದು ನಮ್ಮ ಕಾಯಂ ಸ್ನೇಹಿತನಾಗುತ್ತಾನೆ.
ಯೋಗದ ಮಹತ್ವವನ್ನು ಅಳವಡಿಸಿಕೊಂಡು, ಆರೋಗ್ಯಕರ, ಸಂತೋಷಕರ ಮತ್ತು ಸೌಹಾರ್ದಯುತ ದೇಶವನ್ನು ಸೃಷ್ಟಿಸಿ.
-
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD












Click it and Unblock the Notifications