ಕೇರಳವನ್ನು ಸೊಮಾಲಿಯಾಗೆ ಹೋಲಿಸಿದ ಮೋದಿ: ಮುಗಿಬಿದ್ರು ಮಲ್ಲೂಸ್
ಕಳೆದ ಭಾನುವಾರ (ಮೇ 8) ಕೇರಳದ ತಿರುವನಂತಪುರದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಕೇರಳವನ್ನು ಸೊಮಾಲಿಯಾಗೆ ಹೋಲಿಸಿದ ಪ್ರಧಾನಿ ನರೇಂದ್ರ ಮೋದಿ ವಿರುದ್ದ ಕೇರಳಿಗರು ಸಾಮಾಜಿಕ ತಾಣ ಟ್ವಿಟ್ಟರ್ ನಲ್ಲಿ ಮುಗಿಬಿದ್ದಿದ್ದಾರೆ.
#PoMoneModi ಎಂಬ (ಹೋಗೋ ಮಗನೇ ಮೋದಿ ಎಂದು ಅರ್ಥ ಬರುವ) ಹ್ಯಾಷ್ ಟ್ಯಾಗ್ ಬಳಸಿ ಕೇರಳಿಗರು ಟ್ವಿಟ್ಟರ್ ನಲ್ಲಿ ಸಾವಿರಾರು ಪ್ರಶ್ನೆಗಳ ಸುರಿಮಳೆಗೈಯುತ್ತಿದ್ದು, ಇದು ಚುನಾವಣೆಯ ಹೊಸ್ತಿಲಲ್ಲಿ ಬಿಜೆಪಿಗೆ ಹೊಸ ತಲೆನೋವಾಗಿ ಪರಿಣಮಿಸಿದೆ. (ಕೇರಳ ಚುನಾವಣಾಪೂರ್ವ ಸಮೀಕ್ಷೆ)
ಈ ಹ್ಯಾಷ್ ಟ್ಯಾಗ್ 2019ರ ಲೋಕಸಭಾ ಚುನಾವಣೆಯವರೆಗೂ ಮೋದಿಗೆ ಗಾಯವಾಗಿ ಪರಿಣಮಿಸಲಿದೆ ಎಂದು ಮಲ್ಲೂಸ್, ಟ್ವಿಟ್ಟರ್ ನಲ್ಲಿ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ. ಪೋ ಮೋನೆ ಮೋದಿ ಟ್ಯಾಗ್ ಟಾಪ್ ಟ್ರೆಂಡಿಂಗ್ ನಲ್ಲಿದೆ.
ಮೂಲಭೂತ ಸೌಕರ್ಯ ಅಭಿವೃದ್ದಿ ವಿಚಾರದಲ್ಲಿ ಕೇರಳ, ಸೊಮಾಲಿಯಾಗಿಂತಲೂ ಹಿಂದಿದೆ. ಕೇರಳದಲ್ಲಿರುವ ಪರಿಶಿಷ್ಟ ಪಂಗಡ ಜನಾಂಗದಲ್ಲಿನ ಮಗುವಿನ ಮರಣ ಪ್ರಮಾಣವು ಸೊಮಾಲಿಯಾಕ್ಕಿಂತಲೂ ಅಧಿಕವಾಗಿದೆ ಎಂದು ಮೋದಿ ಸಾರ್ವಜನಿಕ ಸಭೆಯಲ್ಲಿ ಹೇಳಿದ್ದರು. (ಬಾಬಿಯ ಕಾಮುಕತನ ಬಯಲು)
ಪ್ರಧಾನಿ ಮೋದಿ ಹೇಳಿಕೆಗೆ ತೀವ್ರ ಬೇಸರ ವ್ಯಕ್ತ ಪಡಿಸಿ ಕೇರಳದ ಮುಖ್ಯಮಂತ್ರಿ ಓಮನ್ ಚಾಂಡಿ ಕೂಡಾ ಖಾರವಾದ ಪತ್ರವನ್ನು ಬರೆದಿದ್ದರು. ಕೇರಳಿಗರ ಕೆಲವೊಂದು ಖಾರವಾದ, ವ್ಯಂಗ್ಯ ಟ್ವೀಟ್ ಸಂದೇಶ ಸ್ಲೈಡಿನಲ್ಲಿದೆ.. [ರಾಸಲೀಲೆಗೆ ಪಲ್ಲಂಗವಾದ ಕೇರಳ ಬೋಟ್ ಹೌಸ್]
|
ಕೇರಳ ದೇಶದ ಪ್ರಥಮ ವಿದ್ಯಾವಂತರ ರಾಜ್ಯ
ಕೆಲವರು ಕೇರಳವನ್ನು ಸೊಮಾಲಿಯಾಗೆ ಹೋಲಿಸುವ ಧೈರ್ಯ ತೋರಿ, ಕೇರಳ ದೇಶದ ಮೊದಲ ವಿದ್ಯಾವಂತರ ರಾಜ್ಯ.
|
ಸೊಮಾಲಿಯಾದ ಹುಡುಗ
ಸೊಮಾಲಿಯಾದ ಹುಡುಗ ಅನ್ನಕ್ಕಾಗಿ ಬೇಡುತ್ತಿದ್ದಾನೆಂದು, ಕೇರಳದ ಅಸೆಂಬ್ಲಿ ಚುನಾವಣೆಗೆ ಬಿಜೆಪಿ ಟಿಕೆಟಿನಿಂದ ಸ್ಪರ್ಧಿಸುತ್ತಿರುವ ಶ್ರೀಶಾಂತ್ ಫೋಟೋ ಹಾಕಿ ಟೀಕಿಸಲಾಗಿದೆ.
|
ಇದಕ್ಕಾಗಿಯೇ ಬಿಜೆಪಿ ತಿರಸ್ಕೃತವಾಗಿರುವುದು
ಬಿಜೆಪಿ ಮುಖಂಡರಿಗೆ ಕೇರಳದ ಬಗ್ಗೆ ಕನಿಷ್ಠ ಮಾಹಿತಿಯಿಲ್ಲ, ಅದಕ್ಕಾಗಿಯೇ ಇಲ್ಲಿ ಬಿಜೆಪಿಗೆ ನೆಲೆಯಿಲ್ಲ.
|
ಅವಮಾನ ನಿಲ್ಲಿಸಿ
ನಿಮ್ಮ ಗುಜರಾತ್ ಮತ್ತು ಕೇರಳದ ಹೋಲಿಕೆ ಇಲ್ಲಿದೆ. ಕೇರಳವನ್ನು ಅವಮಾನಿಸುವುದನ್ನು ನಿಲ್ಲಿಸಿ.

ಸೊಮಾಲಿಯಾದವರಿಗೆ ಸಂತೋಷ
ದೇವರ ನಾಡು ಕೇರಳವನ್ನು ಸೊಮಾಲಿಯಾಗೆ ಪ್ರಧಾನಿ ಹೋಲಿಸಿದ ನಂತರ, ಬಡರಾಷ್ಟ್ರ ಸೊಮಾಲಿಯಾ ಜನತೆಗೆ ಖುಷಿಯಾಗಿರಬೇಕು ಎಂದು ಟ್ವಿಟ್ಟರ್ ನಲ್ಲಿ ಬೇಸರ ವ್ಯಕ್ತ ಪಡಿಸಲಾಗಿದೆ. 'ಪೋ ಮೋನೆ' ಎನ್ನುವುದು ನಟ ಮೋಹನ್ ಲಾಲ್ ಅಭಿನಯದ ನರಸಿಂಹಂ ಎಂಬ ಸಿನಿಮಾದ ಜನಪ್ರಿಯ ಡೈಲಾಗ್.
-
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು












Click it and Unblock the Notifications