ಅರವಿಂದ್ ಸುಬ್ರಮಣಿಯನ್ ಜಿಡಿಪಿ ಅಕ್ಷೇಪಕ್ಕೆ ಪಿಎಂ ಸಲಹೆಗಾರರಿಂದಲೇ ಉತ್ತರ
ನವದೆಹಲಿ, ಜೂನ್ 12: ಮಾಜಿ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಮಣಿಯನ್ ಅವರು ಭಾರತದ ಜಿಡಿಪಿ ಉತ್ಪ್ರೇಕ್ಷೆಯಿಂದ ಕೂಡಿದೆ ಎಂಬ ಬಗ್ಗೆ 'ಖಾತ್ರಿಯಿಂದ ಇಲ್ಲ' ಎಂದಿದ್ದಾರೆ. ಆದರೂ ಅವರು ತಮ್ಮ ಸಂಶೋಧನಾ ವರದಿಯಲ್ಲಿ ಹೇಳಿರುವ ವಿಚಾರ ಪ್ರತಿ ಅಂಶಗಳ ಬಗ್ಗೆ ಸ್ಪಷ್ಟನೆ ನೀಡುತ್ತೇವೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆರ್ಥಿಕ ಸಲಹೆಗಾರರು ಹೇಳಿದ್ದಾರೆ.
ಅರವಿಂದ್ ಸುಬ್ರಮಣಿಯನ್ ರ ಸಂಶೋಧನಾ ವರದಿಯಲ್ಲಿ ಏನಿದೆ ಎಂಬ ಬಗ್ಗೆ ಕೂಲಂಕಷವಾದ ಅಧ್ಯಯನ ಮಾಡುತ್ತೇವೆ. ಶೈಕ್ಷಣಿಕವಾಗಿ ಚರ್ಚೆ ಆಗಬೇಕಾದ ವಿಚಾರ ಇದು. ಭಾರತದ ದತ್ತಾಂಶ ವ್ಯವಸ್ಥೆಯ ಗುಣಮಟ್ಟ ಹಾಗೂ ಸ್ವತಂತ್ರದ ಬಗ್ಗೆ ಪ್ರಶ್ನೆ ಇದಾಗಿದೆ. ಇದರ ಬಗ್ಗೆ ಸಲ್ಲದ ಕೌತುಕ ತರಬಾರದು ಎಂದಿದ್ದಾರೆ.
ಅರವಿಂದ್ ಸುಬ್ರಮಣಿಯನ್ ಇಂಡಿಯನ್ ಎಕ್ಸ್ ಪ್ರೆಸ್ ಗೆ ಬರೆದ ಲೇಖನದಲ್ಲಿ, 2011 ಮತ್ತು 2017ರ ಅವಧಿ, ಅಂದರೆ UPA2 ಹಾಗೂ NDA1ರ ಅಧಿಕಾರಾವಧಿಯಲ್ಲಿ ವಾಸ್ತವವಾಗಿ ದೇಶದ ಪ್ರಗತಿ ದರ (ಜಿಡಿಪಿ) 4.5 ಪರ್ಸೆಂಟ್ ಗೆ ಸಮೀಪ ಇತ್ತು. ಅದು 7 ಪರ್ಸೆಂಟ್ ಇರಲಿಲ್ಲ ಎಂದಿದ್ದರು.

ಸ್ವತಂತ್ರವಾದ ಟಾಸ್ಕ್ ಫೋರ್ಸ್ ಮೂಲಕ ಜಿಡಿಪಿಯನ್ನು ಅಂದಾಜು ಮಾಡಿಸಬೇಕು. ಅದರಲ್ಲಿ ರಾಷ್ಟ್ರೀಯ ಹಾಅಗೂ ಅಂತರರಾಷ್ಟ್ರೀಯ ತಜ್ಞರು, ಸಾಂಖ್ಯಿಕ ತಜ್ಞರು, ನೀತಿ ನಿರೂಪಕರು ಇರಬೇಕು ಎಂದು ಅವರು ಹೇಳಿದ್ದರು.
ಈಗ ಅರವಿಂದ್ ಸುಬ್ರಮಣಿಯನ್ ಅವರು ಹೇಳುತ್ತಿರುವುದೆಲ್ಲ ಖಂಡಿತಾ ಸಮಸ್ಯೆಗಳೇ. ಆದರೆ ಇವುಗಳನ್ನೆಲ್ಲ ಅವರು ಮುಖ್ಯ ಆರ್ಥಿಕ ಸಲಹೆಗಾರರಾಗಿ ಇರುವಾಗಲೇ ಹೇಳಬೇಕಿತ್ತು. ಇನ್ನು ಅವರೇ ತಿಳಿಸಿರುವ ಹಾಗೆ ಭಾರತದ ಪ್ರಗತಿ ದರದ ಅಂಕಿಯನ್ನು ಅರ್ಥ ಮಾಡಿಕೊಳ್ಳಲು ಸಮಯ ತೆಗೆದುಕೊಂಡಿದ್ದಾರೆ ಮತ್ತು ಈಗಲೂ ಆ ಬಗ್ಗೆ ಖಾತ್ರಿ ಇಲ್ಲ ಎಂದು ಪ್ರಧಾನಿ ಮೋದಿ ಅವರ ಆರ್ಥಿಕ ಸಲಹೆಗಾರರ ಸಮಿತಿಯ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಇನ್ನು ಮಂಗಳವಾರ ಸಂಜೆ ಸಾಂಖ್ಯಿಕ ಇಲಾಖೆ ಸಚಿವಾಲಯವು ಈ ಬಗ್ಗೆ ಹೇಳಿಕೆ ನೀಡಿ, ದೇಶದ ಅಭಿವೃದ್ಧಿ ದರವು ಈಗಾಗಲೇ ಒಪ್ಪಿತವಾದ ನಿಯಮ, ಪದ್ಧತಿ ಹಾಗೂ ಲಭ್ಯವಿರುವ ದತ್ತಾಂಶದ ಮೇಲೆ ಅಂದಾಜು ಮಾಡಿರುವಂಥದ್ದು ಎಂದು ಹೇಳಿದೆ.
-
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು -
ಟಿ20 ವಿಶ್ವಕಪ್ 2026 ಭಾರತದ ಮುಡಿಗೆ: ಬಾಲ ಮುದುರಿಕೊಂಡ 'ಸೈಲೆಂಟ್' ಸ್ಯಾಂಟ್ನರ್












Click it and Unblock the Notifications