2023ರ ಕೊನೆಯ ಮನ್ ಕೀ ಬಾತ್; ಮೋದಿ ಹೇಳಿದ ವಿಚಾರಗಳು
ಬೆಂಗಳೂರು, ಡಿಸೆಂಬರ್ 31; ಭಾರತದ ಪ್ರಧಾನಿ ನರೇಂದ್ರ ಮೋದಿ ಮನ್ ಕೀ ಬಾತ್ ತಿಂಗಳ ರೇಡಿಯೊ ಕಾರ್ಯಕ್ರಮದ ಮೂಲಕ ದೇಶವನ್ನು ಉದ್ದೇಶಿಸಿ ಮಾತನಾಡಿದರು. ಇದು ಮನ್ ಕೀ ಬಾತ್ನ 108 ಸಂಚಿಕೆ ಕಾರ್ಯಕ್ರಮವಾಗಿತ್ತು. 2023ರ ಕೊನೆಯ ದಿನದ ಕಾರ್ಯಕ್ರಮದಲ್ಲಿ ಮೋದಿ ಹೊಸ ವರ್ಷದ ಶುಭಾಶಯಗಳನ್ನು ಕೋರಿದರು.
ನನ್ನ ಪ್ರೀತಿಯ ದೇಶವಾಸಿಗಳೇ. ನಮಸ್ಕಾರ ಎಂದು ಮಾತು ಆರಂಭಿಸಿದ ಮೋದಿ, ಮನ್ ಕೀ ಬಾತ್ ಎಂದರೆ ನಿಮ್ಮನ್ನು ಭೇಟಿಯಾಗಲು ಒಂದು ಮಂಗಳಕರ ಅವಕಾಶ. ನಮಗೆ 108 ಸಂಖ್ಯೆಯ ಪ್ರಾಮುಖ್ಯತೆ ಮತ್ತು ಅದರ ಪವಿತ್ರತೆಯು ಆಳವಾದ ಅಧ್ಯಯನದ ವಿಷಯವಾಗಿದೆ. ಜಪಮಾಲೆಯಲ್ಲಿ 108 ಮಣಿಗಳು, 108 ಬಾರಿ ಪಠಣ, 108 ದೈವಿಕ ಸ್ಥಳಗಳು, ದೇವಾಲಯಗಳಲ್ಲಿ 108 ಮೆಟ್ಟಿಲುಗಳು, 108 ಗಂಟೆಗಳು, ಈ ಸಂಖ್ಯೆ 108 ಅಪಾರ ನಂಬಿಕೆಗೆ ಸಂಬಂಧಿಸಿದೆ ಎಂದು 108ನೇ ಸಂಚಿಕೆಯನ್ನು ನರೇಂದ್ರ ಮೋದಿ ಆರಂಭಿಸಿದರು.

ನಾಳೆಯ ಸೂರ್ಯೋದಯವು 2024ರ ಮೊದಲ ಸೂರ್ಯೋದಯವಾಗುವುದು ಎಂತಹ ಸಂತೋಷದಾಯಕ ಕಾಕತಾಳೀಯವಾಗಿದೆ. ನಾವು 2024ನೇ ವರ್ಷವನ್ನು ಪ್ರವೇಶಿಸಿದ್ದೇವೆ. 2024ಕ್ಕೆ ನಿಮ್ಮೆಲ್ಲರಿಗೂ ಶುಭಾಶಯಗಳು ಎಂದರು.
ಮೋದಿ ಮಾತಿನ ಮುಖ್ಯಾಂಶಗಳು
* 140 ಕೋಟಿ ಭಾರತೀಯರ ಬಲದಿಂದಾಗಿ ಈ ವರ್ಷ ನಮ್ಮ ದೇಶ ಹಲವು ವಿಶೇಷ ಸಾಧನೆಗಳನ್ನು ಮಾಡಿದೆ. ವರ್ಷಗಟ್ಟಲೆ ಕಾಯುತ್ತಿದ್ದ 'ನಾರಿ ಶಕ್ತಿ ವಂದನ ಕಾಯ್ದೆ' ಈ ವರ್ಷವೇ ಜಾರಿಗೆ ಬಂದಿದೆ.
* ಅನೇಕ ಜನರು ಚಂದ್ರಯಾನ-3ರ ಯಶಸ್ಸಿಗೆ ಸಂಬಂಧಿಸಿದಂತೆ ನನಗೆ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ. ನನ್ನಂತೆ ನೀವೂ ಸಹ ನಮ್ಮ ವಿಜ್ಞಾನಿಗಳು ಮತ್ತು ವಿಶೇಷವಾಗಿ ಮಹಿಳಾ ವಿಜ್ಞಾನಿಗಳ ಬಗ್ಗೆ ಹೆಮ್ಮೆಪಡುತ್ತೀರಿ ಎಂದು ನನಗೆ ಭರವಸೆ ಇದೆ.
* ನಾಟು ನಾಟು ಆಸ್ಕರ್ ಪ್ರಶಸ್ತಿಯನ್ನು ಗೆದ್ದಾಗ, ಇಡೀ ದೇಶವು ಉತ್ಸಾಹದಿಂದ ಸಂಭ್ರಮಿಸಿತು. ದಿ ಎಲಿಫೆಂಟ್ ವಿಸ್ಪರರ್ಸ್ಗೆ ನೀಡಿದ ಗೌರವದ ಬಗ್ಗೆ ಕೇಳಿದಾಗ ಯಾರಿಗೆ ಸಂತೋಷವಾಗುವುದಿಲ್ಲ?. ಅವರ ಮೂಲಕ ಜಗತ್ತು ಭಾರತದ ಸೃಜನಶೀಲತೆಯನ್ನು ನೋಡಿತು ಮತ್ತು ಪರಿಸರದೊಂದಿಗಿನ ನಮ್ಮ ಬಾಂಧವ್ಯವನ್ನು ಅರ್ಥಮಾಡಿಕೊಂಡಿತು.
* ಈ ವರ್ಷ ನಮ್ಮ ಕ್ರೀಡಾಪಟುಗಳು ಕ್ರೀಡೆಯಲ್ಲೂ ಅದ್ಭುತ ಪ್ರದರ್ಶನ ನೀಡಿದ್ದಾರೆ. ನಮ್ಮ ಆಟಗಾರರು ಏಷ್ಯನ್ ಗೇಮ್ಸ್ನಲ್ಲಿ 107 ಪದಕಗಳನ್ನು ಮತ್ತು ಏಷ್ಯನ್ ಪ್ಯಾರಾ ಗೇಮ್ಸ್ನಲ್ಲಿ 111 ಪದಕಗಳನ್ನು ಗೆದ್ದಿದ್ದಾರೆ. ಕ್ರಿಕೆಟ್ ವಿಶ್ವಕಪ್ನಲ್ಲಿ ಭಾರತೀಯ ಆಟಗಾರರು ತಮ್ಮ ಪ್ರದರ್ಶನದಿಂದ ಎಲ್ಲರ ಹೃದಯ ಗೆದ್ದಿದ್ದಾರೆ. ಅಂಡರ್-19, ಟಿ-20 ವಿಶ್ವಕಪ್ನಲ್ಲಿ ನಮ್ಮ ಮಹಿಳಾ ಕ್ರಿಕೆಟ್ ತಂಡದ ಗೆಲುವು ಅತ್ಯಂತ ಸ್ಪೂರ್ತಿದಾಯಕವಾಗಿದೆ.
* ಭಾರತವು ಇನ್ನೋವೇಶನ್ ಹಬ್ ಆಗುತ್ತಿದೆ. 2015ರಲ್ಲಿ ನಾವು ಗ್ಲೋಬಲ್ ಇನ್ನೋವೇಶನ್ ಇಂಡೆಕ್ಸ್ನಲ್ಲಿ 81ನೇ ಸ್ಥಾನ ಪಡೆದಿದ್ದೆವು. ಇಂದು ನಮ್ಮ ಶ್ರೇಣಿ 40ನೇ ಸ್ಥಾನದಲ್ಲಿದೆ. ಈ ವರ್ಷ, ಭಾರತದಲ್ಲಿ ಸಲ್ಲಿಸಿದ ಪೇಟೆಂಟ್ಗಳ ಸಂಖ್ಯೆಯು ಅಧಿಕವಾಗಿತ್ತು, ಅದರಲ್ಲಿ ಸುಮಾರು ಶೇ 60 ದೇಶೀಯ ನಿಧಿಗಳಿಂದ. ಹೊಸ ಸಂಕಲ್ಪಗಳನ್ನು ಮಾಡಿ ಹೊಸ ವರ್ಷ ಪ್ರಾರಂಭಿಸಿ.
* ಇತ್ತೀಚಿನ ದಿನಗಳಲ್ಲಿ ಜೀವನಶೈಲಿ ಸಂಬಂಧಿತ ಕಾಯಿಲೆಗಳ ಬಗ್ಗೆ ಎಷ್ಟು ಚರ್ಚೆಯಾಗುತ್ತಿದೆ ಎಂಬುದನ್ನು ನಾವು ನೋಡುತ್ತೇವೆ. ಇದು ನಮಗೆಲ್ಲರಿಗೂ ವಿಶೇಷವಾಗಿ ಯುವಜನರಿಗೆ ಬಹಳ ಕಾಳಜಿಯ ವಿಷಯವಾಗಿದೆ. ಭಾರತದ ಪ್ರಯತ್ನಗಳ ಮೂಲಕ 2023 ಅನ್ನು ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷವನ್ನಾಗಿ ಆಚರಿಸಲಾಯಿತು. ಇದು ಈ ಕ್ಷೇತ್ರದಲ್ಲಿ ಕೆಲಸ ಮಾಡುವ ಸ್ಟಾರ್ಟಪ್ಗಳಿಗೆ ಸಾಕಷ್ಟು ಅವಕಾಶಗಳನ್ನು ನೀಡಿದೆ.
* ದೆಹಲಿಯ ಹಜ್ ಸಮಿತಿ ಅಧ್ಯಕ್ಷ ಕೌಸರ್ ಜಹಾನ್ ಮಾತನಾಡಿ, "ಪ್ರಧಾನಿ ನರೇಂದ್ರ ಮೋದಿ ಅವರ ಮಾತುಗಳನ್ನು ಕೇಳುವುದು ನನಗೆ ಸದಾ ಹೆಮ್ಮೆ ತರುತ್ತದೆ. ಜಾಮಾ ಮಸೀದಿಯಲ್ಲಿ ಪ್ರತಿ ತಿಂಗಳು ಪ್ರಧಾನಿಗಳ ಮನ್ ಕೀ ಬಾತ್ ಕಾರ್ಯಕ್ರಮವನ್ನು ಜನರು ಕೇಳುತ್ತಾರೆ. ಪುರುಷರು ಮಾತ್ರವಲ್ಲ ಹಲವಾರು ಮಹಿಳೆಯರು ಸಹ ಮನ್ ಕೀ ಬಾತ್ ಕೇಳುತ್ತಾರೆ" ಎಂದರು.
-
ಅಪ್ಪನ ಸಕ್ಕರೆ ಚಟ ಬಿಡಿಸಲು ಮೋದಿ ಮೊರೆ ಹೋದ ಯುವಕ: ವಿಡಿಯೋ Viral, ಪ್ರಧಾನಿಯಿಂದ ಬಂತು ಅಚ್ಚರಿಯ ರಿಪ್ಲೈ -
Viral Video: ಲಂಡನ್ ರಸ್ತೆಯಲ್ಲಿ ರಾರಾಜಿಸಿದ ಭಾರತದ ಆಟೋ ರಿಕ್ಷಾ: ವಿಡಿಯೋ ನೋಡಿ ದೆಹಲಿ ಎಂದ ನೆಟ್ಟಿಗರು -
ವಿಶ್ವಮಾತೆ ಎನ್ನುತ್ತಾ ಶ್ರೀಚಾಮುಂಡೇಶ್ವರಿಯ ಕನ್ನಡ ಹಾಡು ಹಂಚಿಕೊಂಡ ಪ್ರಧಾನಿ ಮೋದಿ -
ಇರಾನ್ ಅಧ್ಯಕ್ಷರ ಜೊತೆ ಪ್ರಧಾನಿ ಮೋದಿ ಮಾತುಕತೆ: ಜಾಗತಿಕ ಪೂರೈಕೆ ವ್ಯತ್ಯಯದ ಬಗ್ಗೆ ಆತಂಕ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
Power Cut: ನಾಳೆ ಮಾ.22 ರಿಂದ 25ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ಬೆಸ್ಕಾಂ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ












Click it and Unblock the Notifications