ದೇಶದ ಈ ನಗರದಲ್ಲಿ ಪ್ರಪಂಚದ ಅತಿ ದೊಡ್ಡ ಕಟ್ಟಡದ ಉದ್ಘಾಟನೆ, ಎಲ್ಲಿ?, ಇದಕ್ಕೆ ತಗುಲಿದ ವೆಚ್ಚ ಹಾಗೂ ವಿಶೇಷತೆಗಳನ್ನು ತಿಳಿಯಿರಿ
ಗುಜರಾಜ್, ಡಿಸೆಂಬರ್, 17: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಗುಜರಾತ್ನ ಸೂರತ್ನಲ್ಲಿ ಹೊಸದಾಗಿ ತಯಾರಿಸಿದ ಅತೀ ದೊಡ್ಡ ಕಟ್ಟವನ್ನು (ಸೂರತ್ ಡೈಮಂಡ್ ಬೋರ್ಸ್) ಅನ್ನು ಇಂದು (ಡಿಸೆಂಬರ್ 17) ರಂದು ಉದ್ಘಾಟನೆ ಮಾಡಿದ್ದಾರೆ. ಹಾಗಾದರೆ ಇದಕ್ಕೆ ತಗುಲಿದ ವೆಚ್ಚ ಎಷ್ಟು ಸಾವಿರ ಕೋಟಿ ರೂಪಾಯಿ ಎಂದು ಇಲ್ಲಿ ತಿಳಿಯಿರಿ

"ಇದು ಅಂತಾರಾಷ್ಟ್ರೀಯ ವಜ್ರ ಮತ್ತು ಆಭರಣ ವ್ಯಾಪಾರಕ್ಕಾಗಿ ವಿಶ್ವದ ಅತಿದೊಡ್ಡ ಮತ್ತು ಆಧುನಿಕ ಕೇಂದ್ರವಾಗಿದೆ. ಇದು ಒರಟು ಮತ್ತು ನಯಗೊಳಿಸಿದ ವಜ್ರಗಳು ಮತ್ತು ಆಭರಣಗಳ ವ್ಯಾಪಾರಕ್ಕಾಗಿ ಜಾಗತಿಕ ಕೇಂದ್ರವಾಗಿದೆ. ಆಮದು - ರಫ್ತುಗಾಗಿ ಬೋರ್ಸ್ ಅತ್ಯಾಧುನಿಕ 'ಕಸ್ಟಮ್ಸ್ ಕ್ಲಿಯರೆನ್ಸ್ ಹೌಸ್' ಅನ್ನು ಒಳಗೊಂಡಿರುತ್ತದೆ. ಚಿಲ್ಲರೆ ಆಭರಣ ವ್ಯಾಪಾರಕ್ಕಾಗಿ ಜ್ಯುವೆಲ್ಲರಿ ಮಾಲ್ ಮತ್ತು ಇಂಟರ್ನ್ಯಾಷನಲ್ ಬ್ಯಾಂಕಿಂಗ್ ಮತ್ತು ಸೇಫ್ ವಾಲ್ಟ್ಗಳ ಸೌಲಭ್ಯ," ಎಂದು ಪ್ರಧಾನಿ ಕಚೇರಿಯಿಂದ ತಿಳಿಸಲಾಗಿತ್ತು.
ಇದಕ್ಕೆ ತಗುಲಿದ ವೆಚ್ಚ ಎಷ್ಟು?
35.54 ಹೆಕ್ಟೇರ್ ಪ್ರದೇಶದಲ್ಲಿ ಈ ಕಟ್ಟಡವನ್ನು ನಿರ್ಮಿಸಲಾಗಿದೆ. ಈ ಕಟ್ಟಡಕ್ಕೆ 3,400 ಕೋಟಿ ವೆಚ್ಚವಾಗಿದ್ದು, ವಿಶ್ವದ ಅತಿದೊಡ್ಡ ಕಾರ್ಪೊರೇಟ್ ಕಚೇರಿ ಕೇಂದ್ರ ಇದಾಗಿದೆ. ಡೈಮಂಡ್ ಬೋರ್ಸ್(ಹಬ್) ವಿಶ್ವದ ಅತಿದೊಡ್ಡ ಅಂತರ್ಸಂಪರ್ಕಿತ ಕಟ್ಟಡವಾಗಿದೆ, ಇದರಲ್ಲಿ 4,500 ಅಂತರ್ಸಂಪರ್ಕಿತ ಕಚೇರಿಗಳು ಇರಲಿವೆ. ಕಚೇರಿ ಕಟ್ಟಡವು ಪೆಂಟಗನ್ಗಿಂತಲೂ ದೊಡ್ಡದಾಗಿದೆ. ಮತ್ತು ಇದು ದೇಶದ ಅತಿದೊಡ್ಡ ಕಸ್ಟಮ್ಸ್ ಕ್ಲಿಯರೆನ್ಸ್ ಹೌಸ್ ಸಹ ಆಗಿರುತ್ತದೆ.
ಕಟ್ಟಡ ಲೋಕಾರ್ಪಣೆ ಬಳಿಕ ದೇಶ ವಿದೇಶಗಳಿಂದ ಪಾಲಿಶ್ ಮಾಡಿದ ವಜ್ರಗಳನ್ನು ಖರೀದಿಸಲು ಸೂರತ್ಗೆ ಬರುತ್ತಾರೆ. ಸುಮಾರು 1.5 ಲಕ್ಷ ಜನರು ವ್ಯಾಪಾರ ಮತ್ತಿತರ ಕೆಲಸಗಳಿಂದ ಉದ್ಯೋಗ ಪಡೆಯುತ್ತಾರೆ, ಏಕೆಂದರೆ ಪ್ರಪಂಚದ ಎಲ್ಲಾ ಮೂಲೆಗಳಿಂದ ವಜ್ರ ಖರೀದಿದಾರರು ಸೂರತ್ಗೆ ಬರುವ ಮೂಲಕ ಜಾಗತಿಕ ವೇದಿಕೆಯನ್ನು ಪಡೆಯುತ್ತಾರೆ.
ಎಷ್ಟು ಮಹಡಿಗಳಿಗೆ ಗೊತ್ತಾ?
ಮೆಗಾಸ್ಟ್ರಕ್ಚರ್ 300 ಚದರ ಅಡಿಯಿಂದ 1 ಲಕ್ಷ ಚದರ ಅಡಿವರೆಗಿನ ಕಚೇರಿ ಸ್ಥಳದೊಂದಿಗೆ 9 ನೆಲದ ಗೋಪುರಗಳ ಜೊತೆಗೆ 15 ಮಹಡಿಗಳನ್ನು ಹೊಂದಿದೆ. ಕಿರಣ್ ಜೆಮ್ಸ್ನ ನಿರ್ದೇಶಕ ಮತ್ತು ಬಿಲಿಯನೇರ್ ವಜ್ರದ ವ್ಯಾಪಾರಿ ವಲ್ಲಭಭಾಯಿ ಲಖಾನಿ ಅವರು ತಮ್ಮ ರೂ 17,000-ಕೋಟಿ ಕಂಪನಿಯನ್ನು ಡೈಮಂಡ್ ಬೋರ್ಸ್ಗೆ ಸ್ಥಳಾಂತರಿಸಿದರು. ಮತ್ತು ತಮ್ಮ ಸಿಬ್ಬಂದಿಗೆ ವಸತಿ ಸೌಕರ್ಯಗಳನ್ನು ಒದಗಿಸಲು ಮಿನಿ-ಟೌನ್ಶಿಪ್ ಅನ್ನು ನಿರ್ಮಿಸುತ್ತಿದ್ದಾರೆ.
-
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video












Click it and Unblock the Notifications