ಕತುವಾ, ಉನ್ನಾವೋ ಅತ್ಯಾಚಾರದ ಬಗ್ಗೆ ಮೌನ ಮುರಿದ ಮೋದಿ
ನವದೆಹಲಿ,
ಏಪ್ರಿಲ್
13:
ದೇಶದೆಲ್ಲೆಡೆ
ಭಾರಿ
ಚರ್ಚೆಗೊಳಗಾಗಿ,
ಜನಾಕ್ರೋಶಕ್ಕೆ
ಈಡಾಗಿರುವ
ಉನ್ನಾವೋ
ಮತ್ತು
ಕಥುವಾ
ಅತ್ಯಾಚಾರ
ಪ್ರಕರಣಕ್ಕೆ
ಸಂಬಂಧಿಸಿದಂತೆ
ಕೊನೆಗೂ
ಪ್ರಧಾನಿ
ನರೇಂದ್ರ
ಮೋದಿ
ಮೌನ
ಮುರಿದಿದ್ದಾರೆ.
ಈ
ಬಗ್ಗೆ
ಮೋದಿ
ಅವರು
ಪ್ರತಿಕ್ರಿಯೆ
ನೀಡಿಲ್ಲವೆಂದು
ವಿಭಿನ್ನ
ರೀತಿಯಲ್ಲಿ
ಪ್ರತಿಭಟನೆ,
ಪ್ರತಿಕ್ರಿಯೆಗಳು
ಹರಿದು
ಬಂದಿತ್ತು.
ಇಂತಹ ಯಾವುದೇ ಅಪರಾಧ ಪ್ರಕರಣಗಳನ್ನು ನಾವು ಸಹಿಸುವುದಿಲ್ಲ. ಆರೋಪಿಗಳು ಇದರಿಂದ ತಪ್ಪಿಸಿಕೊಳ್ಳಲು ಬಿಡುವುದಿಲ್ಲ ಎಂದು ಅವರು ಹೇಳಿದ್ದಾರೆ.
ಕಳೆದ ಎರಡು ದಿನಗಳಿಂದ ಚರ್ಚೆಗೆ ಗ್ರಾಸವಾಗಿರುವ ಎರಡೂ ಘಟನೆಗಳು ನಾಗರಿಕ ಸಮಾಜ, ಈ ಘಟನೆಗಳಿಂದ ಒಂದು ರಾಷ್ಟ್ರವಾಗಿ, ಸಮಾಜವಾಗಿ ನಾವೆಲ್ಲ ತಲೆತಗ್ಗಿಸಬೇಕಾಗಿದೆ. ಇಡೀ ದೇಶವೇ ನಾಚಿಕೆ ಪಡುವಂತೆ ಮಾಡಿದೆ. ಯಾವುದೇ ಅಪರಾಧಿಯನ್ನು ಉಳಿಸುವುದಿಲ್ಲ ಎಂದು ನಾನು ಭರವಸೆ ನೀಡುತ್ತೇನೆ. ನಮ್ಮ ಹೆಣ್ಣುಮಕ್ಕಳಿಗೆ ನ್ಯಾಯ ದೊರಕಿಸಿಯೇ ಕೊಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಕಾಮುಕರಿಗೆ ಬಲಿಯಾದ ಮುಗ್ಧ ಬಾಲಕಿ ಪರ ಒಗ್ಗೂಡಿದ ಧ್ವನಿ
ಮಹಿಳೆಯರ ಮೇಲಿನ ಅತ್ಯಾಚಾರ, ದೌರ್ಜನ್ಯಗಳ ವಿರುದ್ಧ ಜನತೆ ಕೂಡ ಹೋರಾಟ ನಡೆಸಬೇಕಿದೆ ಮನೆಯಲ್ಲಿ ಹೆಣ್ಣು ಮಕ್ಕಳನ್ನು ಮಾತ್ರ ಪ್ರಶ್ನಿಸಬೇಡಿ. ಗಂಡು ಮಕ್ಕಳನ್ನೂ ಪ್ರಶ್ನಿಸಿ ಎಂದು ಕೆಂಪುಕೋಟೆಯ ಭಾಷಣದಲ್ಲಿ ಹೇಳಿದ್ದೆ.
देश के किसी भी राज्य में, किसी भी क्षेत्र में होने वाली ऐसी वारदातें, हमारी मानवीय संवेदनाओं को झकझोर देती हैं।
— PMO India (@PMOIndia) April 13, 2018
मैं देश को विश्वास दिलाना चाहता हूँ की कोई अपराधी बचेगा नहीं, न्याय होगा और पूरा होगा।
हमारे समाज की इस आंतरिक बुराई को खत्म करने का काम, हम सभी को मिलकर करना होगा: PM
ಅತ್ಯಾಚಾರದಂತಹ ಕೃತ್ಯಗಳ ವಿರುದ್ಧ ಹೋರಾಟ ನಡೆಸಲು ನಾವು ನಮ್ಮ ಕೌಟುಂಬಿಕ, ಸಾಮಾಜಿಕ ಮೌಲ್ಯಗಳು ಹಾಗೂ ಕಾನೂನು ಮತ್ತು ಸುವ್ಯವಸ್ಥೆಯನ್ನು ಬಲಗೊಳಿಸಬೇಕಿದೆ ಎಂದು ಕರೆ ನೀಡಿದರು.
ಇತ್ತ ಉನ್ನಾವೋ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್ ನನ್ನು ಬಂಧನವಾಗಿದೆ.