ಚಿತ್ರಗಳಲ್ಲಿ: ಒಬಾಮಾ ಭೇಟಿಯ ಅಪರೂಪದ ಕ್ಷಣಗಳು
ನವದೆಹಲಿ, ಜ. 27: ಒಬಾಮಾ ಭಾರತದ ಮೂರು ದಿನಗಳ ಪ್ರವಾಸ ಮುಗಿಸಿ ಸೌದಿಗೆ ತೆರಳಲು ವಿಮಾನ ಏರಿದ್ದಾರೆ. ಭಾರತದಲ್ಲಿ ಇದ್ದ ಮೂರು ದಿನಗಳ ಕಾಲ ಒಬಾಮಾ ಸದಾ ಓಡಾಟದಲ್ಲೇ ನಿರತರಾಗಿದ್ದರು.
ರಾಷ್ಟ್ರಪತಿ ಭವನದಲ್ಲಿ ಗೌರವ ವಂದನೆ ಸ್ವೀಕರಿಸಿದರು. ಹೈದ್ರಾಬಾದ್ ಹೌಸನ ಔತಣಕೂಟದಲ್ಲಿ ಪಾಲ್ಗೊಂಡರು. ರಾಜಪಥದ ಗಣರಾಜ್ಯೋತ್ಯವ ಕಾರ್ಯಕ್ರಮದಲ್ಲಿ ಭಾಗಹಿಸಿದರು. ಹೀಗೆ ಹೋದ ಕಡೆಯಲ್ಲೆಲ್ಲಾ ಪ್ರಧಾನಿ ನರೇಂದ್ರ ಮೋದಿ ಜತೆ ಸಂಚಲನ ಮೂಡಿಸಿದರು.[ಪಿಟಿಐ ಚಿತ್ರಗಳು]
ಒಬಾಮಾ ಭೇಟಿಯ ಎಲ್ಲ ಕ್ಷಣಗಳನ್ನು ನಿಮ್ಮ ಮುಂದೆ ಇಡಲು ಸಾಧ್ಯವಾಗದಿದ್ದರೂ, ಅದರಲ್ಲಿಯ ಕೆಲ ಅಪರೂಪದ ಕ್ಷಣಗಳನ್ನು ಕಟ್ಟಿಕೊಡುವ ಪ್ರಯತ್ನ ಮಾಡಿದ್ದೇವೆ...[ಒಬಾಮಾ ಉಡುಗೊರೆ ನೀಡಿದ್ದ ಶಾಲೆಗೆ ಬೀಗ ಬಿದ್ದಿದೆ!]

ಬಿಗಿ ಅಪ್ಪುಗೆ
ಭಾರತಕ್ಕೆ ಆಗಮಿಸಿದ ಒಬಾಮಾಗೆ ಪ್ರಧಾನಿಯಿಂದ ಆಲಿಂಗನದ ಸ್ವಾಗತ.

ನಮಸ್ಕಾರ ಹೀಗೆ ಮಾಡಬೇಕು
ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಬಳಿ ನಮಸ್ಕಾರ ಮಾಡುವುದನ್ನು ಕಲಿತುಕೊಳ್ಳುತ್ತಿರುವ ಬರಾಕ್ ಒಬಾಮಾ.

ಬೀಸ್ಟ್ ಸವಾರಿ
ಬೀಸ್ಟ್ ಕಾರಿನಲ್ಲಿಯೇ ಅಮೆರಿಕದ ಅಧ್ಯಕ್ಷರ ಸಂಚಾರ.

ಭಾಷೆ ಯಾವುದು?
ಪ್ರಧಾನಿ ಮೋದಿ ಮತ್ತು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಒಬಾಮಾಗೆ ತಿಳಿಯದಂತೆ ಹಿಂದಿಯಲ್ಲಿ ಏನಾದರೂ ಮಾತನಾಡಿಕೊಂಡರೇ?

ಪರಿಸರ ಪ್ರೇಮ
ರಾಜ್ ಘಾಟ್ ಬಳಿ ಅಶ್ವತ್ಥ ಸಸಿ ನೆಟ್ಟ ಒಬಾಮಾ.

ಶ್ವಾನ ಪ್ರವೇಶ
ರಾಷ್ಟ್ರಪತಿ ಬಳಿ ಒಬಾಮಾ ಗೌರವ ವಂದನೆ ಸ್ವೀಕರಿಸುತ್ತಿದ್ದಾಗ ಭದ್ರತಾ ಸಿಬ್ಬಂದಿ ಕಣ್ಣು ತಪ್ಪಿಸಿ ಆಗಮಿಸಿದ ಶ್ವಾನ.

ಹೇಗಿದೆ ಚಹಾ?
ಹೈದ್ರಾಬಾದ್ ಹೌಸ್ ನ ಉದ್ಯಾನದಲ್ಲಿ ದಿಗ್ಗಜ ನಾಯಕರ ಮಾತುಕತೆ.

ರಾಜಕೀಯವಿಲ್ಲ
ಔತಣಕೂಟದಲ್ಲಿ ಭಾಗವಹಿಸಿದ್ದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಜತೆ ಪ್ರಧಾನಿ ಹರಟೆ.

ಅಯ್ಯೋ ಚಳಿ
ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿದ ಒಬಾಮಾ ಕೋಟ್ ಧರಿಸುತ್ತಿರುವಾಗ ಕ್ಯಾಮಾರಾಕ್ಕೆ ಸೆರೆ ಸಿಕ್ಕ ಬಗೆ.

ಇದೇನಿದು?
ರಾಷ್ಟ್ರಪತಿ ಭವನದಲ್ಲಿ ಸನ್ಮಾನ ಸ್ವೀಕರಿಸಿದ ನಂತರ ನೀಡಿದ್ದ ಶಾಲನ್ನು ಕೂತುಹಲದಿಂದ ವೀಕ್ಷಿಸಿದ ಒಬಾಮಾ.

ಗಾಂಧಿಗೆ ನಮನ
ರಾಜ್ ಘಾಟ್ ಗೆ ತೆರಳಿ ಮಹಾತ್ಮ ಗಾಂಧೀಜಿ ಸಮಾಧಿಗೆ ನಮಿಸಿದ ಒಬಾಮಾ.

ಸತ್ಯಾರ್ಥಿ ಭೇಟಿ
ಶಾಂತಿ ನೊಬೆಲ್ ಪುರಸ್ಕೃತ ಕೈಲಾಶ್ ಸತ್ಯಾರ್ಥಿ ಅವರನ್ನು ಭೇಟಿಯಾದ ಒಬಾಮಾ.

ವಿಮಾನ ನೋಟ
ಗಣರಾಜ್ಯೋತ್ಸವ ಸಂದರ್ಭ ವಾಯುಸೇನೆಯ ಪ್ರದರ್ಶನ ಜತೆಯಾಗಿ ವೀಕ್ಷಿಸಿದ ಒಮಾಮಾ ಮತ್ತು ಮೋದಿ.

ವಂದನೆ
ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಪತ್ನಿಗೆ ನಮಿಸಿದ ಅಮೆರಿಕದ ಅಧ್ಯಕ್ಷ

ಚಾಯ್ ಪೇ ಚರ್ಚಾ
ಒಬಾಮಾಗೆ ಸ್ವತಃ ಟೀ ತಯಾರಿಸಿ ನೀಡುತ್ತಿರುವ ಪ್ರಧಾನಿ ಮೋದಿ.

ಶುಭ ವಿದಾಯ
ಸೌದಿಗೆ ತೆರಳಲು ವಿಮಾನ ಏರಿದ ಒಬಾಮಾ ದಂಪತಿ ಭಾರತೀಯರಿಗೆ ವಿದಾಯ ಕೋರಿದ ಬಗೆ.
-
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ












Click it and Unblock the Notifications