Ratan Tata: ಜನ ರತನ್ ಟಾಟಾ ಮರೆಯದೇ ಇರೋದಕ್ಕೆ ಇದೇ ಕಾರಣ
ಭಾರತದ ಬಡ ಹಾಗೂ ಮಧ್ಯಮ ವರ್ಗದವರು ಎಂದಿಗೂ ರತನ್ಟಾಟಾ ಅವರನ್ನು ಮರೆಯಲು ಸಾಧ್ಯವೇ ಇಲ್ಲ. ಬಡ ಹಾಗೂ ಮಧ್ಯಮ ವರ್ಗದವರ ಆಸೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ರತನ್ ಟಾಟಾ ಅವರು ಅಪಾರ ಶ್ರಮ ಹಾಕಿದ್ದರು. ರತನ್ಟಾಟಾ ಅವರ ನಿಧನದ ಸುದ್ದಿ ಅವರ ಅಭಿಮಾನಿಗಳಲ್ಲಿ ಆಘಾತವನ್ನೇ ಉಂಟು ಮಾಡಿದೆ. ಹಲವು ದಶಕಗಳಿಂದ ರತನ್ಟಾಟಾ ಅವರು ಉದ್ಯಮ ವಲಯದಲ್ಲಿ ಇದ್ದಾರೆ. ಆದರೆ, ಅವರು ಕೇವಲ ಒಬ್ಬ ಉದ್ಯಮಿಯಾಗಿ ಮಾತ್ರ ಗುರುತಿಸಿಕೊಂಡಿಲ್ಲ. ಅವರು ಬಡ ಹಾಗೂ ಮಧ್ಯಮ ವರ್ಗದ ಕನಸುಗಳನ್ನು ಸಾಕಾರಗೊಳಿಸಿದ್ದಾರೆ.
ಕಾರು ಖರೀದಿ ಎನ್ನುವುದು ಕೇವಲ ಶ್ರೀಮಂತರಿಗಷ್ಟೇ ಸೀಮಿತ ಎನ್ನುವ ಕಾಲವಿತ್ತು. ಆದರೆ, ಯಾರೂ ಬೇಕಾದರೂ ಕಾರು ಖರೀದಿ ಮಾಡಬಹುದು ಎನ್ನುವ ಹಂತಕ್ಕೆ ತಂದವರು ರತನ್ಟಾಟಾ. ಈ ವಿಷಯ ಕೇವಲ ಕಾರಿಗೆ ಮಾತ್ರ ಸೀಮಿತವಾಗಲಿಲ್ಲ. ಅವರು ಲಕ್ಷಾಂತರ ಬಡವರಿಗೆ ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಸಹಾಯವಾಗಲು ದಾರಿ ಮಾಡಿಕೊಟ್ಟಿದ್ದರು. ಇದೇ ಕಾರಣಕ್ಕೆ ಭಾರತದಲ್ಲಿ ಯಾವುದೇ ಉದ್ಯಮಿಗಳಿಗೂ ಇಲ್ಲದಷ್ಟು ಅಭಿಮಾನಿ ಬಳಗವನ್ನು ರತನ್ ಟಾಟಾ ಅವರು ಹೊಂದಿದ್ದಾರೆ. ಇದಕ್ಕೆಲ್ಲ ಕಾರಣ ಅವರು ಕೇವಲ ಉದ್ಯಮಿಯಾಗಿ ಮಾತ್ರ ಇರಲಿಲ್ಲ. ಟಾಟಾ ಅವರು ಉದ್ಯಮಕ್ಕೆ ಭಾವನಾತ್ಮಕ ಸ್ಪರ್ಶವನ್ನು ನೀಡಿದ್ದರು.

ಭಾರತೀಯರ ಕನಸಿನ ಕಾರು ಪರಿಚಯಿಸಿದ್ದ ಟಾಟಾ
ರತನ್ಟಾಟಾ ಅವರು ಭಾರತೀಯರ ಕನಸಿನ ಕಾರನ್ನು ಪರಿಚಯಿಸಿದ್ದರು. ರತನ್ಟಾಟಾ ಅವರು ಮಧ್ಯಮವರ್ಗದ ಕನಸಿನ ಕಾರನ್ನು ಪರಿಚಯಿಸಿದ ಮೇಲೆ ಜನ ಸಾಮಾನ್ಯರು ಕಾರು ಖರೀದಿ ಮಾಡುವ ಪ್ರಮಾಣ ಹೆಚ್ಚಳವಾಯಿತು. ಭಾರತದ ಆರ್ಥಿಕ ಉದಾರೀಕರಣದ ವೇಳೆ ಅವರು ತೆಗೆದುಕೊಂಡ ನಿರ್ಧಾರಗಳು ಭಾರೀ ಮೆಚ್ಚುಗೆಗೆ ಪಾತ್ರವಾಗಿದ್ದವು. ರತನ್ಟಾಟಾ ಹಾಗೂ ಟಾಟಾ ಸಮೂಹ ಪರಿಚಯಿಸಿದ್ದ ಕಡಿಮೆ ವೆಚ್ಚದ ಕಾರು ಮಾರುಕಟ್ಟೆಯಲ್ಲಿ ತನ್ನದೇ ಖ್ಯಾತಿಯನ್ನು ಗಳಿಸಿದೆ. ಅಲ್ಲದೇ ಅವರು ಕಡಿಮೆ ಬೆಲೆಗೆ ಕಾರು ತಯಾರಿಸಿ ಮಾರುಕಟ್ಟೆಗೆ ಬಿಟ್ಟಿದ್ದರು. ತಯಾರಿಕ ವೆಚ್ಚ ಕಡಿಮೆಯಾಗಿದ್ದರಿಂದ ಸಹಜವಾಗಿಯೇ ಅದರ ಬೆಲಯೂ ಕಡಿಮೆಯಾಗಿತ್ತು. ಇನ್ನು ರತನ್ಟಾಟಾ ಅವರು ಪರಿಚಯಿಸಿದ್ದ ಟಾಟಾ ನ್ಯಾನೋ ಹಾಗೂ ಟಾಟಾ ಇಂಡಿಕಾ ಕಾರು ಇಂದಿಗೂ ಬಡ ಹಾಗೂ ಮಧ್ಯಮರ್ಗದ ಕನಸಿನ ಕಾರು.
ಕಾರು ಕೇವಲ ಶ್ರೀಮಂತಿಕೆಯ ಸಂಕೇತ ಎನ್ನುವ ಮಾತನ್ನು ಸುಳ್ಳಾಗಿಸಿದ್ದೇ ರತನ್ಟಾಟಾ ಅವರು. ಶ್ರೀಮಂತರೂ ಮಾತ್ರ ಕಾರಿನಲ್ಲಿ ಹೋಗಬೇಕಿಲ್ಲ. ಬಡವರು ಹಾಗೂ ಮಧ್ಯಮ ವರ್ಗದವರು ಸಹ ಸ್ವಂತ ಕಾರು ಖರೀದಿ ಮಾಡಬಹುದು. ಅದರಲ್ಲಿ ತಮ್ಮ ಕುಟುಂಬದವರೊಂದಿಗೆ ಸಂತೋಷದ ಕ್ಷಣಗಳನ್ನು ಕಳೆಯಬಹುದು ಎಂದು ರುಜುವಾತು ಮಾಡಿದ್ದರು. ರತನ್ಟಾಟಾ ಅವರು ಬುಧವಾರ ನಿಧನರಾದ ಮೇಲೆ ಅವರ ಸಾಹಸ ಕಥೆಗಳು, ಅವರ ಸಾಧನೆಯ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿದೆ. ಮಹಾ ಮಾನವತಾವದಿಯಾಗಿದ್ದ ಟಾಟಾ ಅವರ ಸಾವು ಕೋಟ್ಯಾಂತರ ಅಭಿಮಾನಿಗಳಲ್ಲಿ ದುಃಖವನ್ನು ಮೂಡಿಸಿದೆ. ಟಾಟಾ ಅವರು ಬಡವರು ಹಾಗೂ ಮಧ್ಯಮವರ್ಗದ ಮನಸ್ಸಿನಲ್ಲಿ ಸದಾ ಉಳಿಯಲಿದ್ದಾರೆ.
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ












Click it and Unblock the Notifications