Budget Session PM Modi Speech Live: ರಾಷ್ಟ್ರಪತಿಗಳ ವಂದನಾ ನಿರ್ಣಯಕ್ಕೆ ಮೋದಿ ಉತ್ತರ
ನವದೆಹಲಿ, ಫೆಬ್ರವರಿ 7: ಸಂಸತ್ತಿನ ನಡೆಯುತ್ತಿರುವ ಬಜೆಟ್ ಅಧಿವೇಶನದಲ್ಲಿ ಲೋಕಸಭೆಯಲ್ಲಿ ಆರಂಭ ದಿನ ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಉತ್ತರಿಸಲಿದ್ದಾರೆ.
ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲಿನ ಚರ್ಚೆ ಸುಮಾರು 12 ಗಂಟೆಗಳ ಕಾಲ ನಡೆಯಿತು. ಈ ಮಧ್ಯೆ, ಕಳೆದ ವಾರ ರಾಜ್ಯಸಭೆಯು ಬಜೆಟ್ ಅಧಿವೇಶನ ಚರ್ಚೆಯಲ್ಲಿ ಶೇಕಡಾ 100 ರಷ್ಟು ಫಲವನ್ನು ಸಾಧಿಸಿದೆ. ಮೇಲ್ಮನೆ ಕಲಾಪ ಮುಂದೂಡಿಕೆಯಾಗದೇ, ಯಾವುದೇ ಗದ್ದಲ, ಕೋಲಾಹಲ ನಡೆಯದೆ ಸದ್ಭಳಕೆಯಾಗಿದೆ.
ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಕಳೆದ ಜನವರಿ 31ರಂದು ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡುತ್ತಾ, ಪ್ರಸಕ್ತ ಹಣಕಾಸು ವರ್ಷದ ಮೊದಲ ಏಳು ತಿಂಗಳಲ್ಲಿ 48 ಶತಕೋಟಿ ಡಾಲರ್ ಹೂಡಿಕೆಯ ಒಳಹರಿವು ಭಾರತದ ಬೆಳವಣಿಗೆಯಲ್ಲಿ ಜಾಗತಿಕ ಹೂಡಿಕೆದಾರ ಸಮುದಾಯವು ಹೊಂದಿರುವ ನಂಬಿಕೆಗೆ ಸಾಕ್ಷಿಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದರು.
ದೇಶದ ಹೆಚ್ಚುತ್ತಿರುವ ರಫ್ತುಗಳ ಕುರಿತು ಭಾಷಣದಲ್ಲಿ ಪ್ರಸ್ತಾಪಿಸಿದ್ದ ರಾಷ್ಟ್ರಪತಿಗಳು, ''ಭಾರತದ ವಿದೇಶಿ ವಿನಿಮಯ ಮೀಸಲು ಇಂದು 630 ಶತಕೋಟಿ ಡಾಲರ್ಗಳನ್ನು ಮೀರಿದೆ. ನಮ್ಮ ರಫ್ತು ಕೂಡ ವೇಗವಾಗಿ ಬೆಳೆದಿದೆ, ಹಲವಾರು ಹಿಂದಿನ ದಾಖಲೆಗಳನ್ನು ಮುರಿದಿದೆ. ಕಳೆದ ವರ್ಷ 2021 ಏಪ್ರಿಲ್ನಿಂದ ಡಿಸೆಂಬರ್ ಅವಧಿಯಲ್ಲಿ ನಮ್ಮ ಸರಕು-ರಫ್ತು 300 ಶತಕೋಟಿ ಡಾಲರ್ಗಳಷ್ಟಿದೆ. ಅಂದರೆ 22 ಲಕ್ಷ ಕೋಟಿ ರೂಪಾಯಿಗಿಂತ ಹೆಚ್ಚಾಗಿದೆ, ಇದು 2020ರ ಅವಧಿಗಿಂತ ಒಂದೂವರೆ ಪಟ್ಟು ಹೆಚ್ಚಾಗಿದೆ ಎಂದಿದ್ದರು.
ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಸಂಜೆ ಲೋಕಸಭೆಯಲ್ಲಿ ಭಾಷಣ ಮಾಡಲಿದ್ದಾರೆ. ಈ ಮೂಲಕ ರಾಷ್ಟ್ರಪತಿಗಳ ವಂದನಾ ನಿರ್ಣಯಕ್ಕೆ ಉತ್ತರ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಈ ಹಿಂದಿನ ಭಾಷಣಕ್ಕೂ ಪ್ರತ್ಯುತ್ತರ ಕೊಡುವ ಸಾಧ್ಯತೆ ಇದೆ. ರಾಷ್ಟ್ರಪತಿಗಳ ವಂದನಾ ನಿರ್ಣಯದ ಮೇಲೆ ವೀರಾವೇಶದಿಂದ ಮಾತಾಡಿದ್ದ ರಾಹುಲ್ ... ಗಾಂಧಿ, 'ಕೇಂದ್ರ ಸರ್ಕಾರ ರಾಜ್ಯಗಳ ಒಕ್ಕೂಟ ಧ್ವನಿಯನ್ನು ಹತ್ತಿಕ್ಕುತ್ತಿದೆ. ದೇಶದಲ್ಲಿ ಬಿಜೆಪಿ ಆಳ್ವಿಕೆಯಲ್ಲಿ ರಾಜನ ಪರಿಕಲ್ಪನೆ ಮರುಕಳಿಸುತ್ತಿದೆ' ಎಂದು ಗಂಭೀರ ಆರೋಪ ಮಾಡಿದ್ದರು.
ಬಜೆಟ್ ಅಧಿವೇಶನ ಹಿನ್ನೆಲೆಯಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಸಂಸತ್ತಿನ ಜಂಟಿ ಸದನವನ್ನು ಉದ್ದೇಶಿಸಿ ಕಳೆದ ಜ.31ರಂದು ಭಾಷಣ ಮಾಡಿದ್ದರು. ರಾಷ್ಟ್ರಪತಿ ವಂದನಾ ನಿರ್ಣಯ ಚರ್ಚೆಯಲ್ಲಿ ರಾಹುಲ್ ಸೃಷ್ಟಿಸಿದ ವಿವಾದಕ್ಕೂ ಮೋದಿ ತಿರುಗೇಟು ನೀಡುವ ಸಾಧ್ಯತೆ ಇದೆ.
The opposition has raised the issue of inflation here, it would've been better if they have raised that matter while their govt was in power. In pandemic also our govt tried to tackle inflation. During 2014-2020 the inflation rate was below 5%: PM Modi in Lok Sabha pic.twitter.com/nlrWloDfzb
— ANI (@ANI) February 7, 2022
We need to strengthen our small farmers. Our focus is on them. But those who don't know the pain of small farmers don't have any right to do politics in the name of the farmers: PM Modi in Lok Sabha pic.twitter.com/uPppeNlO6k
— ANI (@ANI) February 7, 2022
ಕರ್ನಾಟಕ ರಾಜ್ಯಕ್ಕೆ ಶೂನ್ಯ ಕೊಡುಗೆ: ಡಿ.ಕೆ. ಶಿವಕುಮಾರ್
ಜನಸಾಮಾನ್ಯರನ್ನ ನಿರ್ಲಕ್ಷಿಸಿದ ಬಜೆಟ್: ಪೃಥ್ವಿ ರೆಡ್ಡಿ
ಜನರ ನಿರೀಕ್ಷೆ ಹುಸಿಯಾಗಿದೆ: ಸಿದ್ದರಾಮಯ್ಯ
ಪ್ರಸ್ತುತ ಕಾಲಕ್ಕೆ ಸರ್ಕಾರದ ಗಮನವಿಲ್ಲ ಎಂದು ಸರ್ಕಾರ ನಂಬಿರುವಂತಿದೆ!
ಬಂಡವಾಳಶಾಹಿ ಬಜೆಟ್ ಆಗಿದೆ: ಪಿ. ಚಿದಂಬರಂ
Today's budget speech was the most capitalist speech to be ever read by an FM. The word 'poor' occurs only twice in para 6 & we thank FM for remembering that there are poor people in this country; people will reject this capitalist budget: Former FM &Congress leader P Chidambaram pic.twitter.com/NHBTlO46Pv
— ANI (@ANI) February 1, 2022