5ಕೆಜಿ ಚಿನ್ನಕ್ಕಾಗಿ ಮಗಳನ್ನೇ ಕೊಂದು, ಅತ್ಯಾಚಾರ ಮಾಡಲು ಬಿಟ್ಟ ಹೆತ್ತವರು
ಐದು ಕೆಜಿ ಚಿನ್ನದ ಆಮಿಷಕ್ಕೊಳಗಾದ ದುಷ್ಟ ತಂದೆ ತಾಯಿಗಳು, 15ವರ್ಷದ ತನ್ನ ಮಗಳನ್ನೇ ಕೊಂದು, ಅತ್ಯಾಚಾರ ಮಾಡಲು ಬಿಟ್ಟ ಘಟನೆಯೊಂದು ಉತ್ತರಪ್ರದೇಶದಿಂದ ವರದಿಯಾಗಿದೆ.
ಲಕ್ನೋ, ಜೂ 9: ಹಣ, ಚಿನ್ನದಾಸೆಗಾಗಿ ಮನುಷ್ಯ ಯಾವ ಮಟ್ಟಕ್ಕಾದರೂ ಇಳಿಯುತ್ತಾನೆ ಎನ್ನುವುದಕ್ಕೆ ಇಲ್ಲೊಂದು ಉದಾಹರಣೆ ಇದೆ ನೋಡಿ. ಐದು ಕೆಜಿ ಚಿನ್ನದ ಆಮಿಷಕ್ಕೊಳಗಾದ ದುಷ್ಟ ತಂದೆ ತಾಯಿಗಳು, 15ವರ್ಷದ ತನ್ನ ಮಗಳನ್ನೇ ಕೊಂದು, ಅತ್ಯಾಚಾರ ಮಾಡಲು ಬಿಟ್ಟ ಘಟನೆಯೊಂದು ಉತ್ತರಪ್ರದೇಶದಿಂದ ವರದಿಯಾಗಿದೆ.
ರಾಜಧಾನಿ ಲಕ್ನೋದಿಂದ 122 ಕಿಲೋಮೀಟರ್ ದೂರದ ಕನೌಜ್ ನಲ್ಲಿ, ಸ್ವಯಂಘೋಷಿತ ಮಂತ್ರವಾದಿಯೊಬ್ಬನಿಂದ ಈ ಕೃತ್ಯ ನಡೆದಿದೆ. ಮಹಾವೀರ ಪ್ರಸಾದ್ ಮತ್ತು ಪುಷ್ಪಾ ದಂಪತಿಗಳೇ ಮಗಳನ್ನು ಕೊಂದು, ಅತ್ಯಾಚಾರ ಮಾಡಲು ಬಿಟ್ಟ ಪಾಪಿ ತಂದೆ, ತಾಯಿ.
ವೃತ್ತಿಯಲ್ಲಿ ಚಿನ್ನಾಭರಣ ಅಂಗಡಿ ಹೊಂದಿರುವ ಮಹಾವೀರ ಪ್ರಸಾದ್ ಬಹಳಷ್ಟು ನಷ್ಟವನ್ನು ಅನುಭವಿಸಿದ್ದ. ಈ ಹಿಂದೆ ಈತನ ಜೊತೆ ಕೆಲಸ ಮಾಡುತ್ತಿದ್ದ ಕೃಷ್ಣಪ್ರಸಾದ್ ಹೆಸರಿನ ಡ್ರೈವರ್ ಒಬ್ಬನ ಸಲಹೆಯಂತೆ ಹೆತ್ತವರು ಈ ಕೆಲಸವನ್ನು ಮಾಡಿದ್ದಾರೆ.

ಮಂತ್ರವಾದಿಯೆಂದು ಮಹಾವೀರ ಪ್ರಸಾದ್ ಮನೆಗೆ ಬಂದ ಕೃಷ್ಣಪ್ರಸಾದ್, ನಾನು ಹೇಳಿದಂತೆ ಕೇಳಿದರೆ ನಿಮಗೆ ಐದು ಕೆಜಿ ಚಿನ್ನ ಸಿಗುತ್ತದೆ. ನಾನು ನಂಬಿದ ದೈವೀಶಕ್ತಿಗೆ ನಿಮ್ಮ ಮಗಳನ್ನು ಬಲಿಕೊಟ್ಟರೆ, ಆಕೆಯ ಶವದ ಅಂತ್ಯಸಂಸ್ಕಾರ ಆದ ಕೂಡಲೇ ನಿಮಗೆ ಐದು ಕೆಜಿ ಚಿನ್ನ ಸಿಗಲಿದೆ ಎಂದು ಹೇಳಿದ್ದಾನೆ.
ಇವನನ್ನು ನಂಬಿದ ತಂದೆತಾಯಿಗಳು ಹದಿನೈದು ವರ್ಷದ ಮಗಳು ಕವಿತಾಳಿಗೆ ಅಮಲು ಪಾನೀಯ ಕುಡಿಸಿ, ಅವಳನ್ನು ತಡರಾತ್ರಿ ದೇವಾಲಯದ ಬಳಿಗೆ ಕರೆದುಕೊಂಡು ಬಂದಿದ್ದಾರೆ. ತಂದೆತಾಯಿಯ ಎದುರೇ ಕವಿತಾಳ ಬಟ್ಟೆಬಿಚ್ಚಿ, ಕತ್ತುಹಿಸುಕಿ ಬಾಲಕಿಯನ್ನು ಕೊಂದು ಹಾಕಿದ್ದಾನೆ.
ಬಳಿಕ ಬಾಲಕಿಯ ಶವವನ್ನು ಸಂಭೋಗಿಸಿದ ಕೃಷ್ಣಪ್ರಸಾದ್, ಅದಾದ ನಂತರ ಬಾಲಕಿಯ ನಾಲಿಗೆಯನ್ನು ಕತ್ತರಿಸಿ, ರಕ್ತವನ್ನು ದೇವಿಗೆ ಅರ್ಪಿಸಿ, ಬೆಂಕಿ ಹಚ್ಚಿದ್ದಾನೆ. ಈ ಪೈಶಾಚಿಕ ಕೃತ್ಯ ನಡೆದು ಎಷ್ಟು ಹೊತ್ತಾದರೂ ಮಂತ್ರವಾದಿ ಹೇಳಿದಂತೆ ಚಿನ್ನ ಸಿಗದ ಮೇಲೆ ತಂದೆ ತಾಯಿ ಪೊಲೀಸರ ಮೊರೆ ಹೋಗಿದ್ದಾರೆ.
ಕನೌಜ್ ಹೊರವಲಯದಲ್ಲಿ ಕೃಷ್ಣಶರ್ಮಾ ಮತ್ತು ಬಾಲಕಿಯ ತಂದೆ ತಾಯಿಯನ್ನು ಪೊಲೀಸರು ಬಂಧಿಸಿದ್ದಾರೆ. ಅರೆಬೆಂದ ಬಾಲಕಿಯ ಶವವನ್ನು ಪೋಸ್ಟ್ ಮಾರ್ಟಂಗೆ ಕಳುಹಿಸಲಾಗಿದೆ.
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications