ಸೈನಿಕರ ಸಾವು: ಪಾಕ್ ಕೈವಾಡ ಸಾಬೀತು ಮಾಡುವ ಸಾಕ್ಷ್ಯ ಲಭ್ಯ
ಅಮೆರಿಕಾ ಸರಕಾರದ ಮುದ್ರೆಯಿರುವ ಒಂದು ಜೊತೆ ರಾತ್ರಿ ಬಳಸುವ ಕನ್ನಡಕ, ಮತ್ತೊಂದು ವಸ್ತುವಿನಲ್ಲಿ ಪಾಕಿಸ್ತಾನದ ಗುರುತಿದೆ. ಆ ಫೋಟೋಗಳನ್ನು ಸೇನೆಯು ಟ್ವಿಟ್ಟರ್ ನಲ್ಲಿ ಹಾಕಿದೆ
ಜಮ್ಮು-ಕಾಶ್ಮೀರ, ನವೆಂಬರ್ 29: ಮೂವರು ಭಾರತೀಯ ಯೋಧರ ಸಾವಿನಲ್ಲಿ ಪಾಕ್ ಕೈವಾಡ ಇರುವುದನ್ನು ರುಜುವಾತು ಪಡಿಸುವಂಥ ಸಾಕ್ಷ್ಯಗಳು ದೊರೆತಿವೆ. ಜಮ್ಮು-ಕಾಶ್ಮೀರದ ಮಚಿಲ್ ವಲಯದ ಮೂವರು ಭಾರತೀಯ ಸೈನಿಕರನ್ನು ಕೊಲ್ಲಲಾಗಿತ್ತು. ಅದರಲ್ಲಿ ಒಬ್ಬ ಸೈನಿಕನ ದೇಹವನ್ನು ಹೇಗೆಂದರೆ ಹಾಗೆ ಕಡಿಯಲಾಗಿತ್ತು.
ಪಾಕ್ ನ ಇಂಥ ಹೇಡಿ ಕೃತ್ಯಕ್ಕೆ ತಕ್ಕ ಪ್ರತ್ಯುತ್ತರ ನೀಡುತ್ತೇವೆ ಎಂದು ಭಾರತೀಯ ಸೇನೆ ಕೂಡ ಟ್ವಿಟ್ಟರ್ ನಲ್ಲಿ ಹೇಳಿತ್ತು. ಇದರ ಜತೆಗೆ ಶೋಧದ ವೇಳೆ ದಾಳಿಯಲ್ಲಿ ಪಾಕ್ ಕೈವಾಡ ಇರುವುದನ್ನು ಖಚಿತಪಡಿಸುವಂಥ ಸಾಕ್ಷ್ಯಗಳು ದೊರೆತಿದ್ದರಿಂದ ಅದರ ಎರಡು ಫೋಟೋಗಳನ್ನು ಪೋಸ್ಟ್ ಮಾಡಲಾಗಿತ್ತು.[ಭಾರತೀಯ ಯೋಧನ ರುಂಡ ಕತ್ತರಿಸಿ ಬಿಸಾಕಿದ ಪಾಕ್ ಉಗ್ರರು]
ಅಮೆರಿಕಾ ಸರಕಾರದ ಮುದ್ರೆಯಿರುವ ಒಂದು ಜೊತೆ ರಾತ್ರಿ ಬಳಸುವ ಕನ್ನಡಕ, ಮತ್ತೊಂದು ವಸ್ತುವಿನಲ್ಲಿ ಪಾಕಿಸ್ತಾನದ ಗುರುತಿದೆ. ಆ ಫೋಟೋಗಳನ್ನು ಸೇನೆಯು ಟ್ವಿಟ್ಟರ್ ನಲ್ಲಿ ಹಾಕಿದೆ.

ಪಾಕಿಸ್ತಾನಕ್ಕೆ ತಕ್ಕ ಪ್ರತ್ಯುತ್ತರ ನೀಡುವಂಥ ದಾಳಿ ಭಾರತೀಯ ಸೇನೆಯಿಂದ ನವೆಂಬರ್ 22ರಂದು ನಡೆಯಿತು. ಇದರಿಂದ ಉದ್ವಿಗ್ನ ಸ್ಥಿತಿ ನಿರ್ಮಾಣವಾಯಿತು. ಭಾರತೀಯ ಸೇನೆಯ ಭಾರಿ ಗುಂಡಿನ ದಾಳಿಯಲ್ಲಿ ಹನ್ನೊಂದು ನಾಗರಿಕರು, ಮೂವರು ಸೈನಿಕರು ಮೃತಪಟ್ಟಿದ್ದಾರೆ ಎಂದು ಪಾಕ್ ಹೇಳಿತ್ತು.[ಪಾಕ್ ಕ್ರೌರ್ಯಕ್ಕೆ ಸಾಕ್ಷಿಯಾದ ಮಚಿಲ್ ನಲ್ಲಿ ಪಹರೆ ಸುಲಭವಲ್ಲ!]
ಆ ನಂತರ ಪಾಕ್ ನ ಡಿಜಿಎಂಒ ಸ್ವತಃ ಕರೆ ಮಾಡಿ ಗಡಿಯ ಉದ್ವಿಗ್ನ ಸ್ಥಿತಿ ಕಡಿಮೆ ಮಾಡುವಂತೆ ಕೇಳಿದ್ದರು. ಆ ನಂತರ ಎರಡೂ ದೇಶಗಳ ಡಿಜಿಎಂಒ ಮಧ್ಯೆ ನಡೆದ ಮಾತುಕತೆ ವೇಳೆ, ಭಾರತ ಸ್ಪಷ್ಟವಾಗಿ ಹೇಳಿತ್ತು: ಪಾಕಿಸ್ತಾನ ಸರಿಯಾಗಿ ವರ್ತಿಸಬೇಕು. ಅಪ್ರಚೋದಿತ ಗುಂಡಿನ ದಾಳಿಯನ್ನು ನಿಲ್ಲಿಸಬೇಕು ಎಂದು ಎಚ್ಚರಿಸಿತ್ತು.
-
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ












Click it and Unblock the Notifications