ಉಕ್ಕಿ ಹರಿದ ಗಂಗಾ ನದಿ: ಹರಿದ್ವಾರದ ವಸತಿ ಪ್ರದೇಶಗಳಲ್ಲಿ ಮೊಸಳೆಗಳು ಪ್ರತ್ಯಕ್ಷ!
ಹರಿದ್ವಾರ, ಜುಲೈ 19: ಉತ್ತರಾಖಂಡ್ನ ಹರಿದ್ವಾರ ಜಿಲ್ಲೆಯಲ್ಲಿ ಗಂಗಾ ಮತ್ತು ಅದರ ಉಪನದಿಗಳಿಂದ ಪ್ರವಾಹ ಉಂಟಾಗಿ ಲಕ್ಸರ್ ಮತ್ತು ಖಾನ್ಪುರ್ ವಸತಿ ಪ್ರದೇಶಗಳಿಗೆ ಮೊಸಳೆಗಳು ಬರಲಾರಂಭಿಸಿವೆ.
ಉತ್ತರ ಭಾರತದಲ್ಲಿ ಭಾರೀ ಮಳೆಯಾಗುತ್ತಿದ್ದು, ಇದರಿಂದ ಗಂಗಾ ಮತ್ತು ಅದರ ಉಪನದಿಗಳಾದ ಬಾನ್ ಗಂಗಾ ಮತ್ತು ಸೋನಾಲಿ ನದಿಗಳು ಪ್ರವಾಹದಿಂದ ಉಕ್ಕುತ್ತಿವೆ. ಇದರಲ್ಲಿ ತೇಲಿ ಬರುವ ಮೊಸಳೆಗಳನ್ನು ಅರಣ್ಯ ಇಲಾಖೆ ಹಿಡಿದು ಮತ್ತೆ ನದಿಗಳಿಗೆ ಬಿಡುತ್ತಿದೆ.

ಮುಖ್ಯ ನದಿಗಳ ಉದ್ದಕ್ಕೂ ಇರುವ ಜನವಸತಿ ಪ್ರದೇಶಗಳಿಂದ ಇಲ್ಲಿಯವರೆಗೆ ಸುಮಾರು ಹನ್ನೆರಡು ಮೊಸಳೆಗಳನ್ನು ಸೆರೆಹಿಡಿಯಲಾಗಿದೆ. ಮೊಸಳೆಗಳನ್ನು ಹಿಡಿಯಲು ಇಲಾಖೆಯು 25 ಉದ್ಯೋಗಿಗಳ ತಂಡವನ್ನು ಲಕ್ಸಾರ್ ಮತ್ತು ಖಾನ್ಪುರ ಪ್ರದೇಶಗಳಲ್ಲಿ ನಿಯೋಜಿಸಿದೆ ಎಂದು ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
#Crocodile floating in #Ambala streets... 😳😳😳#Haryana #HARYANARAIN #Monsoon2023 #Heavyrainfall #Yamuna pic.twitter.com/huYqgmG5Ww
— Atul Chhabra (@AttiAtul) July 11, 2023
ಕಳೆದ ವಾರ ಸುರಿದ ಭಾರೀ ಮಳೆಯಿಂದಾಗಿ ಗಂಗಾನದಿಯ ನೀರಿನ ಮಟ್ಟ ಏರಿಕೆಯಾಗಿದ್ದು, ಲಕ್ಸಾರ್ ಮತ್ತು ಖಾನ್ಪುರ ಪ್ರದೇಶಗಳಿಗೆ ನೀರು ನುಗ್ಗಿದ್ದು, ಸೋನಾಲಿ ನದಿಯ ಅಣೆಕಟ್ಟಿನ ಒಡೆದು ಪ್ರವಾಹ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿದೆ. ಕಳೆದ ವಾರ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಸಂತ್ರಸ್ತ ಗ್ರಾಮಗಳನ್ನು ಪರಿಶೀಲಿಸಿದ್ದರು. ಸೋಮವಾರ, ಲಕ್ಸಾರ್ನ ಕೆಲವು ಪ್ರದೇಶಗಳಲ್ಲಿ ನೀರಿನ ಮಟ್ಟ ಕಡಿಮೆಯಾಗಿದೆ, ಆದರೆ ಮಂಗಳವಾರ ಭಾರಿ ಮಳೆಯಿಂದಾಗಿ ನೀರು ಮತ್ತೆ ಏರಿತ್ತು.
ಖಾನಪುರದ ಖೇಡಿಕಲನ್ ಗ್ರಾಮದ ಸ್ನಾನಗೃಹದಲ್ಲಿ ದೊಡ್ಡ ಮೊಸಳೆ ಸೇರಿಕೊಂಡಿದ್ದ ಮೊಸಳೆಯನ್ನು ಅರಣ್ಯ ಇಲಾಖೆ ತಂಡ ಅದನ್ನು ಸೆರೆಹಿಡಿದು ಮರಳಿ ನದಿಗೆ ಬಿಟ್ಟಿದೆ ಎಂದು ಸ್ಥಳೀಯರಾದ ಅಮಿತ್ ಗಿರಿ ತಿಳಿಸಿದ್ದಾರೆ. ಹರಿದ್ವಾರದ ವಿಭಾಗೀಯ ಅರಣ್ಯಾಧಿಕಾರಿ ನೀರಜ್ ಶರ್ಮಾ, ಬಾನ್ ಗಂಗಾ ಮತ್ತು ಸೋನಾಲಿ ನದಿಗಳಲ್ಲಿ ಗಮನಾರ್ಹ ಸಂಖ್ಯೆಯ ಮೊಸಳೆಗಳು ಕಂಡುಬರುತ್ತವೆ, ಅವು ಪ್ರವಾಹದ ಜೊತೆಗೆ ಜನನಿಬಿಡ ಪ್ರದೇಶಗಳನ್ನು ತಲುಪಿವೆ ಎಂದು ಪಿಟಿಐಗೆ ತಿಳಿಸಿದ್ದಾರೆ.
ಗಂಗಾ ನದಿ ನೀರಿನ ಮಟ್ಟ ಸ್ವಲ್ಪ ಕಡಿಮೆಯಾದಾಗ, ಹೆಚ್ಚಿನ ಮೊಸಳೆಗಳು ನದಿಗಳಿಗೆ ವಾಪಸ್ಸಾದವು. ಆದರೆ ಕೆಲವು ಜನವಸತಿ ಪ್ರದೇಶಗಳ ದಾರಿ ಹಿಡಿದು ಒಳ ಬಂದಿದ್ದವು. ಸೊನಾಲಿ ಮತ್ತು ಬಾನ್ ಗಂಗಾ ನದಿಗಳ ಮೂಲಕ ಮೊಸಳೆಗಳು ಹೆಚ್ಚಾಗಿ ಗ್ರಾಮೀಣ ಪ್ರದೇಶದ ಚರಂಡಿ ಮತ್ತು ಕೊಳಗಳಿಗೆ ಸೇರುತ್ತಿದ್ದವು. ಆದರೆ ಈ ಬಾರಿ ಮೊಸಳೆಗಳು ಜನವಸತಿ ಪ್ರದೇಶಗಳಿಗೆ ನುಗ್ಗಿರುವ ಘಟನೆಗಳು ವರದಿಯಾಗಿವೆ ಎಂದು ಲಕ್ಸಾರ್ ಪುರಸಭೆಯ ಅಧ್ಯಕ್ಷ ಅಂಬರೀಶ್ ಗಾರ್ಗ್ ಹೇಳಿದರು.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications