ಜಮ್ಮು & ಕಾಶ್ಮೀರ ಚೀನಾದ ಭಾಗ ಎಂದು ತೋರಿಸಿದ ಟ್ವಿಟ್ಟರ್ ವಿರುದ್ಧ ಆಕ್ರೋಶ
ನವದೆಹಲಿ, ಅಕ್ಟೋಬರ್ 19: ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವು ಚೀನಾದ ಭಾಗ ಎಂದು ತೋರಿಸುವ ಮೂಲಕ ಯಡವಟ್ಟು ಮಾಡಿದ ಟ್ವಿಟ್ಟರ್ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಇದು ತಾಂತ್ರಿಕ ಸಮಸ್ಯೆಯಿಂದ ಆದ ಲೋಪ ಎಂದು ಟ್ವಿಟ್ಟರ್ ಸ್ಪಷ್ಟೀಕರಣ ನೀಡಿದೆ.
ಲಡಾಖ್ ರಾಜಧಾನಿ ಲೇಹ್ನಲ್ಲಿ ಯುದ್ಧ ಸ್ಮಾರಕವೊಂದರಲ್ಲಿ ಪತ್ರಕರ್ತರೊಬ್ಬರು ನೇರ ಪ್ರಸಾರ ಆರಂಭಿಸಿದಾಗ ಆ ಪ್ರದೇಶವು ಚೀನಾದಲ್ಲಿದೆ ಎಂದು ಟ್ವಿಟ್ಟರ್ ತೋರಿಸಿತ್ತು. ದೇಶಕ್ಕಾಗಿ ಹೋರಾಡಿ ಪ್ರಾಣತ್ಯಾಗ ಮಾಡಿದ ಹುತಾತ್ಮರ ಸ್ಮರಣಾರ್ಥ ಸ್ಥಾಪಿಸಲಾಗಿರುವ 'ಹಾಲ್ ಆಫ್ ಫೇಮ್' ಸ್ಮಾರಕದಲ್ಲಿ ಲೇಖಕ ಹಾಗೂ ರಾಷ್ಟ್ರೀಯ ಭದ್ರತಾ ವಿಶ್ಲೇಷಕ ನಿತಿನ್ ಗೋಖಲೆ ಟ್ವಿಟ್ಟರ್ನಲ್ಲಿ ಲೈವ್ ಪ್ರಸಾರ ನಡೆಸಿದ್ದರು. ಆ ವಿಡಿಯೋದ ಟ್ಯಾಗ್ನಲ್ಲಿ 'ಜಮ್ಮು ಮತ್ತು ಕಾಶ್ಮೀರ, ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ' ಎಂದು ತೋರಿಸಿದೆ.
ಕೂಡಲೇ ಇದನ್ನು ಗಮನಿಸಿದ ನಿತಿನ್ ಹಾಗೂ ಇತರೆ ಬಳಕೆದಾರರು ಟ್ವಿಟ್ಟರ್ ಸಂಸ್ಥೆ ಹಾಗೂ ಟ್ವಿಟ್ಟರ್ ಇಂಡಿಯಾವನ್ನು ಟ್ಯಾಗ್ ಮಾಡಿ ತಪ್ಪನ್ನು ತೋರಿಸಿದ್ದಾರೆ. ಈ ಘಟನೆ ಭಾರತದ ಟ್ವಿಟ್ಟರ್ ಬಳಕೆದಾರರ ಆಕ್ರೋಶಕ್ಕೆ ಕಾರಣವಾಗಿದೆ.

ಇತರೆ ಟ್ವಿಟ್ಟರ್ ಬಳಕೆದಾರರು ಇದೇ ಸಂದರ್ಭದಲ್ಲಿ ಫೋಟೊಗಳನ್ನು ಅಪ್ಲೋಡ್ ಮಾಡುವ ಹಾಗೂ ಲೈವ್ ಪ್ರಸಾರ ಮಾಡುವ ಮೂಲಕ ಲೇಹ್ ಅನ್ನು ಟ್ಯಾಗ್ ಮಾಡಲು ಪ್ರಯತ್ನಿಸಿದಾಗಲೂ ಅದು ಚೀನಾದ ಪ್ರದೇಶವೆಂದೇ ತೋರಿಸಿದೆ. ಹಾಲ್ ಆಫ್ ಫೇಮ್ ಸ್ಥಳವು ಚೀನಾದ ಭಾಗವೆಂದು ಟ್ವಿಟ್ಟರ್ ಪ್ರದರ್ಶಿಸಿದೆ.
ಇದಕ್ಕೆ ತಡವಾಗಿ ಪ್ರತಿಕ್ರಿಯೆ ನೀಡಿರುವ ಟ್ವಿಟ್ಟರ್, ಈ ಸಮಸ್ಯೆ ತಾಂತ್ರಿಕ ದೋಷದಿಂದ ಸಂಭವಿಸಿದೆ. ನಮ್ಮ ತಂಡ ಇದರ ಬಗ್ಗೆ ತನಿಖೆ ನಡೆಸುತ್ತಿದೆ. ಈ ಸಮಸ್ಯೆ ಬಗ್ಗೆ ನಮಗೆ ಭಾನುವಾರವೇ ಗೊತ್ತಾಗಿರುವುದು ಎಂದು ಹೇಳಿದೆ. ಆದರೆ ಟ್ವಿಟ್ಟರ್ ವಿರುದ್ಧ ಕೇಂದ್ರ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ.

ಕೆಲವು ದಿನಗಳ ಹಿಂದೆ ಕ್ಸಿಯೋಮಿ ಫೋನ್ಗಳಲ್ಲಿ ಅರುಣಾಚಲ ಪ್ರದೇಶದ ಹವಾಮಾನ ವರದಿ ತೋರಿಸದೆ ಇರುವುದು ಅಸಮಾಧಾನಕ್ಕೆ ಕಾರಣವಾಗಿತ್ತು. ಅರುಣಾಚಲ ಪ್ರದೇಶದ ಹೆಸರನ್ನು ಕ್ಸಿಯೋಮಿ ಮೊಬೈಲ್ ಪ್ರದರ್ಶಿಸುತ್ತಿರಲಿಲ್ಲ.
-
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video












Click it and Unblock the Notifications