Get Updates
Get notified of breaking news, exclusive insights, and must-see stories!

ಅಯ್ಯೋ ದುರ್ವಿದಿಯೇ...! ಗಾಯಕ್ಕೆ ಹೊಲಿಗೆ ಹಾಕುವ ಬದಲು ಫೆವಿಕ್ವಿಕ್ ಹಚ್ಚಿದ ವೈದ್ಯ!

ಹೈದರಾಬಾದ್ ಮೇ 7: ಸಾಮಾನ್ಯವಾಗಿ ಗಾಯಗಳಾದರೆ ಅದಕ್ಕೆ ತಕ್ಕಂತೆ ಚಿಕಿತ್ಸೆ ನೀಡುವುದು ವೈದ್ಯರ ಪ್ರಥಮ ಕೆಲಸ. ಅದಾದ ಬಳಿಕ ಗಾಯದ ಸ್ವರೂಪದ ಆಧಾರದ ಮೇಲೆ ಹೊಲಿಗೆ ಹಾಕುವ ಬಗ್ಗೆ ನಿರ್ಧಾರ ಮಾಡಬೇಕು. ಹೀಗೆ ಯಾವುದೇ ಒಂದು ಕಾಯಿಲೆಗೆ ಹಂತ ಹಂತವಾಗಿ ಚಿಕಿತ್ಸೆ ನೀಡುವ ಪರಿ ಇರುತ್ತದೆ. ಆದರೆ ಇಲ್ಲೊಬ್ಬ ವೈದ್ಯ ಗಾಯಕ್ಕೆ ಚಿಕಿತ್ಸೆ ನೀಡಿದ ರೀತಿ ಕಂಡು ಘೋಷಕರು ಬೆಚ್ಚಿಬಿದ್ದಿದ್ದಾರೆ.

ಆಟವಾಡುತ್ತಿದ್ದ ಬಾಲಕ ಕೆಳಗೆ ಬಿದ್ದು ತಲೆಗೆ ಪೆಟ್ಟು ಮಾಡಿಕೊಂಡಿದ್ದರಿಂದ ಪೋಷಕರು ತಕ್ಷಣ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಈ ವೇಳೆ ವೈದ್ಯರು ಬಾಲಕನನ್ನು ಪರೀಕ್ಷಿಸಿ ಫೆವಿಕ್ವಿಕ್ ತರಲು ಹೇಳಿದ್ದಾರೆ. ಇದರಿಂದ ಗಾಬರಿಯಾದ ಪೋಷಕರು ಅದನ್ನು ತಂದು ಕೂಡ ನೀಡಿದ್ದಾರೆ. ಬಳಿಕ ವೈದ್ಯ ಬಾಲಕಿನ ಗಾಯಕ್ಕೆ ಫೆವಿಕ್ವಿಕ್ ಹಚ್ಚಿದ್ದಾನೆ. ಈ ದೃಶ್ಯವನ್ನು ಕಂಡು ಪೋಷಕರು ಶಾಕ್ ಆಗಿದ್ದಾರೆ. ಮಗುವಿನ ತಂದೆ ಬೆಚ್ಚಿಬಿದ್ದು ಇದನ್ನು ನಿರಾಕರಿಸಿದ್ದಾರೆ. ಈ ಬಗ್ಗೆ ಪೋಷಕರು ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

 OMG: Instead of suturing the wound, the doctor applied Feviquik

ತೆಲಂಗಾಣದಲ್ಲಿ ಈ ಘಟನೆ ನಡೆದಿದೆ. ಗಾಯಕ್ಕೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ತೆರಳಿದ್ದ 7 ವರ್ಷದ ಬಾಲಕನಿಗೆ ಅಲ್ಲಿ ಕರ್ತವ್ಯ ನಿರತ ವೈದ್ಯರು ಪ್ಲಾಸ್ಟಿಕ್ ಮತ್ತಿತರ ವಸ್ತುಗಳನ್ನು ಅಂಟಿಸಲು ಬಳಸುವ ಫೆವಿಕ್ವಿಕ್ ಅನ್ನು ಹಚ್ಚಿದಾಗ ಬೆಚ್ಚಿಬಿದ್ದಿದ್ದಾರೆ. ತೆಲಂಗಾಣದ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ವೈದ್ಯರು ನಡೆದುಕೊಂಡ ರೀತಿ ಅನೇಕರನ್ನು ಬೆಚ್ಚಿ ಬೀಳಿಸಿದೆ. ಅವನು ನಿಜವಾಗಿಯೂ ವೈದ್ಯರೇ? ಎಂಬ ಪ್ರಶ್ನೆಯನ್ನು ಹುಟ್ಟು ಹಾಕಿದೆ.

ಈ ಬಗ್ಗೆ ವಿವರಗಳು ಹೀಗಿವೆ:-

ಬಾಲಕನ ತಂದೆ ವಂಶಿಕೃಷ್ಣ ಅವರು ಕರ್ನಾಟಕ ರಾಜ್ಯದ ರಾಯಚೂರು ಜಿಲ್ಲೆಯ ಲಿಂಗಸೂರು ಪ್ರದೇಶಕ್ಕೆ ಸೇರಿದವರು. ವಂಶಿ ಕೃಷ್ಣ ಅವರು ತೆಲಂಗಾಣದ ಕಥವ್ವಾಲ್ ಜಿಲ್ಲೆಯ ಐಸಾ ಪ್ರದೇಶಕ್ಕೆ ಪತ್ನಿ ಹಾಗೂ 7 ವರ್ಷದ ಪುತ್ರ ಪ್ರವೀಣ್ ಚೌಧರಿ ಜತೆ ಸಂಬಂಧಿಕರ ಮದುವೆಗೆ ತೆರಳಿದ್ದರು. ಅಲ್ಲಿಗೆ ಹೋದ ನಂತರ ಹುಡುಗ ಓಡಿ ಬಂದು ತನ್ನ ವಯಸ್ಸಿನ ಚೇಷ್ಟೆಯೊಂದಿಗೆ ಆಟವಾಡುತ್ತಿದ್ದನು.

ಆಗ ಅನಿರೀಕ್ಷಿತವಾಗಿ ಬಾಲಕ ಕೆಳಗೆ ಬಿದ್ದನು. ಆತನ ತಲೆಗೆ ಪೆಟ್ಟು ಬಿದ್ದಿತ್ತು. ಎಡಗಣ್ಣಿನ ಭಾಗಕ್ಕೆ ಪೆಟ್ಟು ಬಿದ್ದಿದೆ. ಗಾಯವು ಸಾಕಷ್ಟು ಆಳವಾಗಿತ್ತು ಮತ್ತು ಹುಡುಗ ನೋವಿನಿಂದ ಕಿರುಚಾಡತೊಡಗಿದ್ದಾನೆ. ಇದರಿಂದ ಗಾಬರಿಗೊಂಡ ಬಾಲಕನ ಪೋಷಕರು ಕೂಡಲೇ ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ಕೆಲಸ ಮಾಡುತ್ತಿದ್ದ ವೈದ್ಯರು ಬಾಲಕನ ತಲೆಗೆ ಚಿಕಿತ್ಸೆ ನೀಡುವ ಹೆಸರಲ್ಲಿ ಫೆವಿಕ್ವಿಕ್ ತರಲು ಹೇಳಿದ್ದಾರೆ.

ಇದರಿಂದ ಗಾಬರಿಗೊಂಡ ಪೋಷಕರು ಈ ಬಗ್ಗೆ ವೈದ್ಯರ ಬಳಿ ವಿಚಾರಿಸಿ ವಾಗ್ವಾದ ನಡೆಸಿದ್ದಾರೆ. ಆದರೆ, ಆಸ್ಪತ್ರೆ ಆಡಳಿತ ವಂಶಿಕೃಷ್ಣನ್ ಅವರನ್ನು ನೆಪ ಹೇಳಿ ಡೀಲ್ ಮಾಡಲು ಯತ್ನಿಸಿವೆ. ಆದರೆ, ಸೂಕ್ತ ಚಿಕಿತ್ಸೆ ನೀಡದ ಆಸ್ಪತ್ರೆ ವಿರುದ್ಧ ಬಾಲಕನ ತಂದೆ ವಂಶಿಕೃಷ್ಣ ದೂರು ನೀಡಲು ನಿರ್ಧರಿಸಿದ್ದಾರೆ. ಅಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಆಸ್ಪತ್ರೆಗೆ ಬಂದು ಪರಿಶೀಲನೆ ನಡೆಸಿದ ಆರೋಗ್ಯ ಇಲಾಖೆ ಅಧಿಕಾರಿಗಳು ಆಸ್ಪತ್ರೆಯನ್ನು ಸೀಲ್ ಮಾಡಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+