ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುನಾವಣೆ ಆಯೋಗವು ಹಲ್ಲಿಲ್ಲದ ಹುಲಿ, ವರುಣ್ ಗಾಂಧಿ ವ್ಯಂಗ್ಯ

By ವಿಕಾಸ್ ನಂಜಪ್ಪ
|
Google Oneindia Kannada News

"ಚುನಾವಣೆ ಆಯೋಗ ಹಲ್ಲಿಲ್ಲದ ಹುಲಿ. ಆಯೋಗದಿಂದ ಏನು ಉಪಯೋಗ?" ಎಂದು ವ್ಯಂಗ್ಯವಾಡಲಾಗಿದೆ. ಇದು ವಿಪಕ್ಷಗಳ ಟೀಕೆಯಲ್ಲ್. ಬಿಜೆಪಿ ನಾಯಕ ವರಣ್ ಗಾಂಧಿ ಅವರ ಮಾತು. ಗುಜರಾತ್ ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆ ಮಾಡದ ಚುನಾವಣೆ ಆಯೋಗದ ವಿರುದ್ಧ ಪ್ರತಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿದ ಒಂದು ದಿನದ ನಂತರ ವರುಣ್ ಮಾತನಾಡಿದ್ದಾರೆ.

ಚುನಾವಣಾ ಆಯೋಗದ ಮೇಲೆ ಬಿಜೆಪಿ ಒತ್ತಡ - ಕಾಂಗ್ರೆಸ್ ಟೀಕೆಚುನಾವಣಾ ಆಯೋಗದ ಮೇಲೆ ಬಿಜೆಪಿ ಒತ್ತಡ - ಕಾಂಗ್ರೆಸ್ ಟೀಕೆ

ವರುಣ್ ಗಾಂಧಿ ಶುಕ್ರವಾರ ಚುನಾವಣೆ ಆಯೋಗವನ್ನು ಹಲ್ಲಿಲ್ಲದ ಹುಲಿ ಎಂದು ವ್ಯಂಗ್ಯವಾಡಿದ್ದಷ್ಟೇ ಅಲ್ಲದೆ, ಚುನಾವಣೆ ಖರ್ಚಿನ ಲೆಕ್ಕಾಚಾರವನ್ನು ನಿಗದಿತ ಅವಧಿಯೊಳಗೆ ಸಲ್ಲಿಸದ ಯಾವ ರಾಜಕೀಯ ಪಕ್ಷದ ಮಾನ್ಯತೆ ರದ್ದು ಮಾಡಲಾಗಿದೆ? ಚುನಾವಣೆ ಪ್ರಚಾರಕ್ಕಾಗಿ ರಾಜಕೀಯ ಪಕ್ಷಗಳು ಸಿಕ್ಕಾಪಟ್ಟೆ ಖರ್ಚು ಮಾಡುತ್ತವೆ. ಆ ಮೂಲಕ ಸಜ್ಜನರು ಚುನಾವಣೆಗೆ ಸ್ಪರ್ಧಿಸುವುದಕ್ಕೆ ಸಾಧ್ಯವಿಲ್ಲದಂತಾಗಿದೆ ಎಂದಿದ್ದಾರೆ.

Now Varun Gandhi calls Election Commission a ‘toothless tiger’

ಚುನಾವಣೆ ಆಯೋಗಕ್ಕೆ ಸಂವಿಧಾನದಲ್ಲಿ ನೀಡಿದ ಹಕ್ಕು-ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸುತ್ತಿದೆಯಾ? ಚುನಾವಣೆ ಮುಗಿದ ನಂತರ ಪ್ರಕರಣ ದಾಖಲಿಸುವ ಶಕ್ತಿ ಕೂಡ ಕಳೆದುಕೊಂಡು ಬಿಡುತ್ತದೆ. ಆ ರೀತಿ ಪ್ರಕರಣ ದಾಖಲಿಸಲೇಬೇಕು ಅಂದರೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಬೇಕು ಎಂದು ಕಾನೂನು ಕಾಲೇಜಿನಲ್ಲಿ ರಾಜಕೀಯ ಸುಧಾರಣೆ ಬಗ್ಗೆ ಉಪನ್ಯಾಸ ನೀಡುವ ಸಂದರ್ಭದಲ್ಲಿ ಹೇಳಿದ್ದಾರೆ.

ಹಿಮಾಚಲ ಪ್ರದೇಶ ಚುನಾವಣೆ ದಿನಾಂಕ ಪ್ರಕಟಹಿಮಾಚಲ ಪ್ರದೇಶ ಚುನಾವಣೆ ದಿನಾಂಕ ಪ್ರಕಟ

ದಾಖಲೆಗಳನ್ನು ಸಲ್ಲಿಸುವುದು ತಡವಾಯಿತು ಅನ್ನೋ ಕಾರಣಕ್ಕೆ ದಿವಂಗತ ಪಿ.ಎ.ಸಂಗ್ಮಾ (ಎನ್ ಪಿಪಿ) ಅವರ ಪಕ್ಷದ ಮಾನ್ಯತೆ ರದ್ದುಪಡಿಸಿ, ಖರ್ಚು-ವೆಚ್ಚದ ದಾಖಲೆ ಸಲ್ಲಿಸಿದ ಮರು ದಿನವೇ ಆದೇಶವನ್ನು ಹಿಂಪಡೆದಿತ್ತು ಎಂದು ವರುಣ್ ಗಾಂಧಿ ಹೇಳಿದ್ದಾರೆ.

English summary
BJP leader Varun Gandhi has questioned the usefulness of the Election Commission while terming the poll body as a toothless tiger. The comments came a day after the opposition attacked the EC for not declaring the poll dates for Gujarat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X